Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024: ಇಂದು ಹೋಳಿ; ಈ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?

ಇಂದು ಹೋಳಿ ಹಬ್ಬ. ಈ ಹಬ್ಬವನ್ನು ಬಣ್ಣದ ಹಬ್ಬ ಎಂದೂ ಕರೆಯುತ್ತಾರೆ. ಇದನ್ನು ಫಾಲ್ಗುಣ ಮಾಸದಲ್ಲಿ (ಫೆಬ್ರವರಿ ಅಥವಾ ಮಾರ್ಚ್) ದೇಶಾದ್ಯಂತ ಆಚರಿಸಲಾಗುತ್ತದೆ. ಹೋಳಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ, ಈ ಹಬ್ಬದ ವಿಶೇಷತೆಯೇನು? ಇದರ ಇತಿಹಾಸವೇನು? ಈ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ? ಎಂಬ ಕುರಿತು ವಿವರ ಇಲ್ಲಿದೆ.

Holi 2024: ಇಂದು ಹೋಳಿ; ಈ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?
ಹೋಳಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 25, 2024 | 11:32 AM

ಹಿಂದೂಗಳ ಮುಖ್ಯ ಹಬ್ಬಗಳಲ್ಲಿ ಒಂದಾದ ಹೋಳಿಯನ್ನು (Holi) ಇಂದು ಭಾರತದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಥುರಾ (Mathura) ಮತ್ತು ವೃಂದಾವನ (Vrindavan) ದೇವಾಲಯಗಳಲ್ಲಿನ ಸಾಂಪ್ರದಾಯಿಕ ಪದ್ಧತಿಗಳಿಂದ ಹಿಡಿದು ಮೆಟ್ರೋಪಾಲಿಟನ್ ನಗರಗಳಲ್ಲಿನ ಆಧುನಿಕ ಪಾರ್ಟಿಗಳವರೆಗೆ ಅನೇಕ ರೀತಿಯಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ. ಭಾರತದ ಪ್ರತಿಯೊಂದು ಪ್ರದೇಶದಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಹೋಳಿ, ಬಣ್ಣಗಳ ಹಬ್ಬವು ಅನೇಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಹಿಂದೆ ಒಂದು ದೊಡ್ಡ ಇತಿಹಾಸವಿದೆ. ಹೋಳಿಯು ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಇದು ಪ್ರೀತಿ ಮತ್ತು ಬಣ್ಣಗಳ ಹಬ್ಬವೂ ಹೌದು.

ಈ ಹಬ್ಬವನ್ನು ಭಾರತದಲ್ಲಿ ವಸಂತ ಋತುವಿನಲ್ಲಿ ಆಚರಿಸಲಾಗುತ್ತದೆ. ಇದು ಸುಗ್ಗಿಯ ಕಾಲವೂ ಹೌದು. ಗ್ರೆಗೋರಿಯನ್ ಕ್ಯಾಲೆಂಡರ್​ನ ಮಾರ್ಚ್ ತಿಂಗಳಲ್ಲಿ ಬರುವ ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣಿಮೆಯ (ಹುಣ್ಣಿಮೆಯ ದಿನ) ದಿನ ಸಂಜೆ ಇದನ್ನು ಆಚರಿಸಲಾಗುತ್ತದೆ. ಪುರಾತನ ಭಾರತೀಯ ಪುರಾಣ ಮತ್ತು ಸಂಸ್ಕೃತಿಯು ಅದರ ಅಡಿಪಾಯವಾಗಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Holi 2024: ಹೋಳಿ ಹಬ್ಬವನ್ನು ಸಂಭ್ರಮಿಸಲು ವೀಕೆಂಡ್​ನಲ್ಲಿ ಈ ಸ್ಥಳಗಳಿಗೆ ಹೋಗಿ!

ಪ್ರಹ್ಲಾದ ಮತ್ತು ಹೋಲಿಕಾ ಕಥೆಯು ಹೋಳಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ದಂತಕಥೆಗಳಲ್ಲಿ ಒಂದಾಗಿದೆ. ಪ್ರಹ್ಲಾದನ ತಂದೆಯಾದ ರಾಜ ಹಿರಣ್ಯಕಶಿಪು ಒಬ್ಬ ನಿರಂಕುಶಾಧಿಕಾರಿಯಾಗಿದ್ದು, ಅವನು ತನ್ನನ್ನು ದೇವರಂತೆ ಪೂಜಿಸಬೇಕೆಂದು ಒತ್ತಾಯಿಸಿದನು. ಆದರೆ, ಪ್ರಹ್ಲಾದನು ವಿಷ್ಣುವಿನ ಅನುಯಾಯಿಯಾಗಿದ್ದನು. ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ತನ್ನ ಸಹೋದರನನ್ನು ಪೂಜಿಸಲು ನಿರಾಕರಿಸಿದ ಮತ್ತು ಭಗವಾನ್ ವಿಷ್ಣುವಿಗೆ ನಿಷ್ಠರಾಗಿದ್ದ ಪ್ರಹ್ಲಾದನನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದಳು. ಆದರೆ, ವಿಷ್ಣುವಿನ ರಕ್ಷಣೆಯಿಂದ ಪ್ರಹ್ಲಾದನು ಪ್ರಾಣಾಪಾಯದಿಂದ ಪಾರಾಗುತ್ತಾನೆ ಮತ್ತು ಹೋಲಿಕಾ ಸುಟ್ಟುಹೋಗುತ್ತಾಳೆ. ಹೋಳಿ ಸಮಯದಲ್ಲಿ ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸಲು ಮತ್ತು ಹೋಲಿಕಾ ದಹನವನ್ನು ಪ್ರತಿನಿಧಿಸಲು ದೀಪಗಳನ್ನು ಬೆಳಗಿಸಲಾಗುತ್ತದೆ.

ತನ್ನ ಸಹೋದರನಿಗಾಗಿ ಹೋಲಿಕಾಳ ತ್ಯಾಗವನ್ನು ಗೌರವಿಸಲು, ಹೋಳಿ ಹಬ್ಬಕ್ಕೂ ಒಂದು ದಿನ ಮೊದಲು ದೀಪೋತ್ಸವವನ್ನು ಬೆಳಗಿಸಲಾಗುತ್ತದೆ, ಇದನ್ನು ‘ಹೋಲಿಕಾ ದಹನ್’ ಎಂದು ಕರೆಯಲಾಗುತ್ತದೆ. ಜನರು ಹಾಡಲು, ನೃತ್ಯ ಮಾಡಲು ದೀಪೋತ್ಸವದ ಸುತ್ತಲೂ ಸೇರುತ್ತಾರೆ.

ಇದನ್ನೂ ಓದಿ: Holi 2024: ಹೋಳಿ ಸಂಭ್ರಮಾಚರಣೆ: ಬಣ್ಣದ ವಿಶೇಷತೆ ಬಣ್ಣಿಸುವ ಹಾಡುಗಳಿವು..

ಮರುದಿನ, ಜನರು ಹಳೆಯ ಸಾಂಪ್ರದಾಯಿಕ ಆಚರಣೆಗಳನ್ನು ಅಭ್ಯಾಸ ಮಾಡುವ ಮೂಲಕ ಆಚರಣೆಯಲ್ಲಿ ಒಟ್ಟಾಗಿ ಸೇರಿ ಹೋಳಿಯನ್ನು ಆಚರಿಸುತ್ತಾರೆ. ಭಗವಾನ್ ವಿಷ್ಣು ಅಥವಾ ಅವನ ಅವತಾರವಾದ ಶ್ರೀಕೃಷ್ಣನ ಭಕ್ತರು ಹೋಳಿಯಂದು ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾರೆ.

ಕೃಷ್ಣನ ಮೋಜಿನ ಚಟುವಟಿಕೆಗಳು ಬಣ್ಣಗಳ ಹಬ್ಬಕ್ಕೆ ಸಂಬಂಧಿಸಿದ ಇತರ ಕಥೆಗಳಲ್ಲಿ ಸೇರಿವೆ. ದಂತಕಥೆಗಳ ಪ್ರಕಾರ, ವಸಂತಕಾಲದಲ್ಲಿ ಕೃಷ್ಣನು ಸ್ಥಳೀಯರು ಬಣ್ಣದ ನೀರಿನಲ್ಲಿ ಖುಷಿಯಿಂದ ಸ್ನಾನ ಮಾಡುವಾಗ ಬಣ್ಣದ ಪುಡಿಗಳನ್ನು ಎರಚಿದ್ದ. ಇಂದಿನ ಹೋಳಿ ಆಚರಣೆಗಳು ಈ ತಮಾಷೆಯ ಬಣ್ಣ ಎರಚುವ ಸಂಪ್ರದಾಯವನ್ನು ಮುಂದುವರೆಸುತ್ತಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ