ವೀಕೆಂಡ್​ ಟ್ರಿಪ್​ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ

ವೀಕೆಂಡ್​ನಲ್ಲಿ ಪ್ರವಾಸಕ್ಕಾಗಿ ಯೋಚಿಸುತ್ತಿದ್ದೀರಾ? ಬೆಂಗಳೂರಿನ ಸುತ್ತಮುತ್ತ ಹಲವು ವೈಶಿಷ್ಟ್ಯಪೂರ್ಣ ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಹೊಂದಿರುವ ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನೀವಿನ್ನೂ ಈ ಸ್ಥಳಗಳಿಗೆ ಭೇಟಿ ನೀಡಿಲ್ಲವಾದರೆ, ಖಂಡಿತಾ ಭೇಟಿ ನೀಡಿ.

ವೀಕೆಂಡ್​ ಟ್ರಿಪ್​ಗೆ ಪ್ಲಾನ್ ಮಾಡುತ್ತಿದ್ದೀರಾ? ; ಬೆಂಗಳೂರು ಸಮೀಪದ ಅದ್ಭುತ ಸ್ಥಳಗಳ ಪಟ್ಟಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
| Updated By: shivaprasad.hs

Updated on: Oct 16, 2021 | 12:33 PM

ನಗರವಾಸಿಗಳಿಗೆ ವೀಕೆಂಡ್ ಎನ್ನುವುದು ಹಬ್ಬವಿದ್ದಂತೆ. ವಾರವಿಡೀ‌ ದುಡಿದು ಸುಸ್ತಾಗಿರುವವರು, ಪ್ರವಾಸ ಕೈಗೊಂಡು ಮತ್ತೆ ಮರು ಉತ್ಸಾಹ ಪಡೆಯುವ ಸುಸಂದರ್ಭಕ್ಕೂ ವೀಕೆಂಡ್ ಸಾಕ್ಷಿಯಾಗುತ್ತದೆ. ಬೆಂಗಳೂರಿನಲ್ಲಿ ವಾಸಿಸುವವರಿಗೆ ಎರಡು ದಿನಗಳಲ್ಲಿ ಉತ್ತಮ ಅನುಭವ ನೀಡಬಲ್ಲ‌ ಪ್ರವಾಸಿ ಸ್ಥಳಗಳಾವುವು? ಈ ಗೊಂದಲ‌ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಟ್ರೆಕ್ಕಿಂಗ್, ಅಡ್ವೆಂಚರ್, ತೀರ್ಥ ಕ್ಷೇತ್ರಗಳು ಹೀಗೆ ಎಲ್ಲವನ್ನೂ ಒಳಗೊಂಡಿರುವ ಈ ಸ್ಥಳಗಳು ನಿಮ್ಮ ವೀಕೆಂಡ್ ಅನ್ನು ಮತ್ತಷ್ಟು ಸಂತಸಗೊಳಿಸಬಹುದು. ನೀವಿನ್ನೂ ಈ ಸ್ಥಳಗಳಿಗೆ ತೆರಳಿಲ್ಲವಾದರೆ ಪ್ಲಾನ್ ಮಾಡಿ.

ಕೊಡಗು: ಬೆಂಗಳೂರಿನಿಂದ ಸುಮಾರು 240 ಕಿಲೋ ಮೀಟರ್ ದೂರದಲ್ಲಿರುವ ಕೊಡಗು ಹಲವಾರು ಸುಂದರ ಪ್ರದೇಶಗಳನ್ನು ಹೊಂದಿದೆ. ‘ದಕ್ಷಿಣದ ಕಾಶ್ಮೀರ’, ‘ದಕ್ಷಿಣದ ಸ್ಕಾಟ್ ಲ್ಯಾಂಡ್’ ಮೊದಲಾದ ಖ್ಯಾತಿಯೂ ಮಂಜಿನ ಊರು ಕೊಡಗಿಗಿದೆ. ಪಶ್ಚಿನ ಘಟ್ಟಗಳ ಸಾಲಿನಲ್ಲಿರುವ ಕೂರ್ಗ್, ಗುಡ್ಡಗಳು, ಕೆರೆಗಳು, ನದಿಗಳನ್ನು ಒಳಗೊಂಡಿದ್ದು, ಸುತ್ತಾಡಲು ಉತ್ತಮ ಸ್ಥಳಗಳನ್ನು ಹೊಂದಿವೆ. ಅಡ್ವೆಂಚರ್ ಪ್ರಿಯರಿಗೆ ಪೇಂಟ್ ಬಾಲ್, ಡರ್ಟ್ ಬೈಕಿಂಗ್ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಡುವ ಅವಕಾಶವಿದ್ದು, ರಿವರ್ ರಾಫ್ಟಿಂಗ್ ಕೂಡ ಮಾಡಬಹುದು. ವಿಶೇಷವಾಗಿ ಕೂರ್ಗ್ ವೈನ್ ಅನ್ನು ಟೇಸ್ಟ್ ಮಾಡಲು ಮರೆಯದಿರಿ.

Kodagu

ಸಾಂದರ್ಭಿಕ ಚಿತ್ರ

ನಂದಿ ಬೆಟ್ಟ: ಬೆಂಗಳೂರಿನಿಂದ ಸುಮಾರು 60 ಕಿಲೋ ಮೀಟರ್ ದೂರವಿರುವ ಈ ಸ್ಥಳಕ್ಕೆ ಒಂದೂವರೆ ಗಂಟೆಯೊಳಗೆ ತಲುಪಬಹುದು. ನಂದಿ ಮಲಗಿರುವಂತೆ ಕಾಣುವ ಈ ಬೆಟ್ಟಕ್ಕೆ ನಂದಿ ಹಿಲ್ಸ್ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಇಲ್ಲಿ ಭೋಗನಂದೀಶ್ವರ ದೇವಸ್ಥಾನವಿದ್ದು, ರಾಜ್ಯದ ಹಳೆಯ ದೇವಸ್ಥಾನಗಳಲ್ಲಿ ಇದೂ ಒಂದು. ಬೆಟ್ಟದ ಮೇಲಿನಿಂದ ಬೆಂಗಳೂರು ನಗರದ ವಿಹಂಗಮ ನೋಟ ಕಾಣಿಸುತ್ತದೆ. ಅದನ್ನು‌ ಮಿಸ್ ಮಾಡಲೇಬೇಡಿ.

Nandi Hills

ನಂದಿ ಬೆಟ್ಟ

ಯೇಲಗಿರಿ: ಬಡವರ ಊಟಿ ಎಂದು ಕರೆಯಲ್ಪಡುವ ಈ ಊರು ತಮಿಳುನಾಡು ರಾಜ್ಯದ ವ್ಯಾಪ್ತಿಯಲ್ಲಿದೆ. ಟ್ರೆಕ್ಕಿಂಗ್ ಪದರಿಯರಿಗೆ ಉತ್ತಮವಾದ ಸ್ಥಳ ಇದಾಗಿದ್ದು, ದಕ್ಷಿಣ ಭಾರತದ ಉತ್ತಮ ಹಿಲ್ ಸ್ಟೇಷನ್‌ಗಳಲ್ಲಿ ಒಂದು ಎಂಬ ಖ್ಯಾತಿ‌ ಇದಕ್ಕಿದೆ.ಇದು ಬೆಂಗಳೂರಿನಿಂದ ಸುಮಾರು 160 ಕಿಮೀ ದೂರದಲ್ಲಿದೆ.

ಮೈಸೂರು: ಬೆಂಗಳೂರಿನಿಂದ ಅರಮನೆಗಳ‌ ನಗರಿ ಮೈಸೂರು 150ಕಿಮೀ ದೂರವಿದೆ. ಅರಮನೆಗಳು, ಉದ್ಯಾನವನಗಳು, ಕೆರೆಗಳು, ಗ್ಯಾಲರಿಗಳು, ದೇವಸ್ಥಾನಗಳು.. ಏನುಂಟು ಏನಿಲ್ಲ… ಮೈಸೂರಿನಲ್ಲಿ ಎಲ್ಲವೂ ಇದೆ. ಆದ್ದರಿಂದಲೇ ಬೆಂಗಳೂರಿಗರು ವೀಕೆಂಡ್ ನಲ್ಲಿ ಮೈಸೂರಿನೆಡೆಗೆ ಮುಖಮಾಡುತ್ತಾರೆ. ನೀವು‌ ಮೈಸೂರಿಗೆ ಹೊಸಬರು ಎಂದಾದರೆ ಚಾಮುಂಡಿ ಬೆಟ್ಟವನ್ನು‌ ಮಿಸ್ ಮಾಡಲೇಬೇಡಿ.

Mysore Palace

ಮೈಸೂರು ಅರಮನೆ

ರಾಮನಗರ: ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಈ ಜಾಗ ಕಂಡಿತಾ ಹೊಸದಲ್ಲ. ಕಾರಣ, ಅವರು ಶೋಲೆ ಚಿತ್ರದಲ್ಲಿ ಈ ಜಾಗದ ಸೌಂದರ್ಯ ಕಂಡು ಖಂಡಿತವಾಗಿ ಮಾರುಹೋಗಿರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 50ಕಿಮೀ ದೂರದಲ್ಲಿದ್ದು, 1 ಗಂಟೆ 40 ನಿಮಿಷದೊಳಗೆ ಸ್ಥಳವನ್ನು ತಲುಪಬಹುದು. ವೀಕೆಂಡ್ ನಲ್ಲಿ ಸಾಹಸಮಯ ಕ್ರೀಡೆಗಳನ್ನು ಆಡಿ ಸಮಯ ಕಳೆಯಲು ಯೋಚಿಸುವವರು ರಾಮನಗರದ ಸ್ಥಳಗಳಿಗೆ ಭೇಟಿ ನೀಡಬಹುದು. ರ್ಯಾಪ್ಲಿಂಗ್, ಟ್ರೆಕ್ಕಿಂಗ್, ಗುಹೆಗಳ ಹುಡುಕಾಟಕ್ಕೆ ಒಳ್ಳೆಯ ಸ್ಥಳಗಳಿವೆ.

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿಗೆ ಸೆಪ್ಟೆಂಬರ್​ನಿಂದ ಮೇವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ನದಿಗಳು, ದೇವಸ್ಥಾನಗಳು, ಟ್ರೆಕ್ಕಿಂಗ್, ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ ಈ ಎಲ್ಲವುಗಳಿಂದ ಚಿಕ್ಕಮಗಳೂರು ಬಹಳ ಗಮನ ಸೆಳೆಯುತ್ತದೆ. ಬೆಂಗಳೂರಿನಿಂದ 242 ಕಿಲೋ ಮೀಟರ್ ದೂರದಲ್ಲಿ ಚಿಕ್ಕಮಗಳೂರು ಇದ್ದು, ಸುಮಾರು 4.30 ಗಂಟೆಯಲ್ಲಿ ಪ್ರಯಾಣಿಸಬಹುದು.

Mullayyana giri

ಮುಳ್ಳಯ್ಯನ ಗಿರಿ

ಇದನ್ನೂ ಓದಿ:

ಒಂದು ದಿನದ ಟ್ರಿಪ್​ಗಾಗಿ ಪ್ಲಾನ್​ ಮಾಡುತ್ತಿದ್ದೀರಾ? ಬೆಂಗಳೂರಿನಿಂದ ಪ್ರಯಾಣಿಸಲು ಹತ್ತಿರದ ಪ್ರವಾಸಿ ತಾಣಗಳಿವು

ವೀಕೆಂಡ್​ ಟ್ರಿಪ್​ಗೆ ಯೋಚಿಸುತ್ತಿದ್ದೀರಾ? ; ಬೆಂಗಳೂರು ಸಮೀಪವೇ ಇರುವ 10 ಅತ್ಯುತ್ತಮ ಸ್ಥಳಗಳ ವಿವರ ಇಲ್ಲಿದೆ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್