AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಿಯೂ ಇಂತಹ ಫೋಟೋಗಳನ್ನು ನಿಮ್ಮ ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಹಾಕ್ಬೇಡಿ; ಯಾಕೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಾವು ಇಡೀ ದಿನ ಫೋನ್‌ಗಳನ್ನು ನೋಡುತ್ತಿರುತ್ತೇವೆ. ಈ ಫೋನ್‌ ನಮ್ಮ ಆರೋಗ್ಯ ಮೇಲೆ ಯಾವ ರೀತಿ ಪರಿಣಾಮಗಳನ್ನು ಬೀರುತ್ತದೆಯೋ ಅದೇ ರೀತಿ ನಾವು ಮೊಬೈಲ್‌ ವಾಲ್‌ಪೇಪರ್‌ಗೆ ಹಾಕುವ ಫೋಟೋಗಳು ಸಹ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಈ ಕೆಲವು ವಾಲ್‌ಪೇಪರ್‌ಗಳನ್ನು ಮೊಬೈಲ್‌ನಲ್ಲಿ ಹಾಕಲೇಬಾರದು ಎಂದು ತಜ್ಞರು ಸಲಹೆಯನ್ನು ನೀಡಿದ್ದಾರೆ.

ತಪ್ಪಿಯೂ ಇಂತಹ ಫೋಟೋಗಳನ್ನು ನಿಮ್ಮ ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಹಾಕ್ಬೇಡಿ; ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: vecteezy
ಮಾಲಾಶ್ರೀ ಅಂಚನ್​
|

Updated on: Jul 23, 2026 | 6:29 PM

Share

ಮುಖ್ಯಾಂಶಗಳು

  • ಮೊಬೈಲ್‌ನಲ್ಲಿ ವಾಲ್‌ಪೇಪರ್‌ನಲ್ಲಿ ಕೆಲವು ಫೋಟೋಗಳನ್ನು ಹಾಕುವುದು ಸೂಕ್ತವಲ್ಲ
  • ಮೊಬೈಲ್‌ ವಾಲ್‌ಪೇಪರ್‌ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ
  • ಮಾನಸಿಕ ನೆಮ್ಮದಿಗಾಗಿ ಈ ರೀತಿಯ ಫೋಟೋಗಳನ್ನು ವಾಲ್‌ಪೇಪರ್‌ ಹಾಕುವುದನ್ನು ತಪ್ಪಿಸಿ

ಈ ಡಿಜಿಟಲ್‌ ಯುಗದಲ್ಲಿ ಸ್ಮಾರ್ಟ್‌ಫೋನ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನದ ಅವಿಭಾಜ್ಯ ಅಂಗದಂತಿರುವ ಈ ಫೋನ್‌ಗಳನ್ನು ಪ್ರತಿಯೊಬ್ಬರೂ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಅದಕ್ಕೆ ಸ್ಕ್ರೀನ್‌ ಗಾರ್ಡ್‌, ಚೆಂದ ಚೆಂದದ ಕವರ್‌ಗಳನ್ನು ಹಾಕುತ್ತಾರೆ. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಮೊಬೈಲ್‌ ವಾಲ್‌ಪೇಪರ್‌ಗೆ (mobile wallpaper) ತಮ್ಮಿಷ್ಟದ ಫೋಟೋವನ್ನು ಹಾಕಿಕೊಳ್ಳುತ್ತಾರೆ. ಆದರೆ ಹೀಗೆ ಎಲ್ಲಾ ರೀತಿಯ ಫೋಟೋಗಳನ್ನು ವಾಲ್‌ಪೇಪರ್‌ ಹಾಕುವುದು ತರವಲ್ಲ ಎನ್ನುತ್ತಾರೆ ತಜ್ಞರು. ಹೌದು ನಾವು ದಿನದ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವ ಕಾರಣ ಪದೇ ಪದೇ ಮೊಬೈಲ್‌ ವಾಲ್‌ಪೇಪರ್‌ ನೋಡುತ್ತೇವೆ. ಈ ಫೋಟೋಗಳು  ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಕೆಲವು ವಾಲ್‌ಪೇಪರ್‌ಗಳು ನಕಾರಾತ್ಮಕ ಭಾವನೆಗಳು, ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಆದ್ದರಿಂದ ಮಾನಸಿಕ ನೆಮ್ಮದಿಗಾಗಿ ಈ ಕೆಲವೊಂದು ಫೋಟೋಗಳನ್ನು ಮೊಬೈಲ್‌ ವಾಲ್‌ಪೇಪರ್‌ಗೆ ಹಾಕುವುದನ್ನು ತಪ್ಪಿಸಿ.

ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಈ ಫೋಟೋಗಳನ್ನು ಹಾಕುವುದು ಸೂಕ್ತವಲ್ಲ:

ಗಾಢ ಬಣ್ಣ ಮತ್ತು ಋಣಾತ್ಮಕ ಚಿತ್ರಗಳು: ಗಾಢ ಬಣ್ಣದ ಮತ್ತು ಭಯಾನಕತೆಯನ್ನು ಉಂಟು ಮಾಡುವ ಖಾಲಿ ರಸ್ತೆ, ದೆವ್ವವನ್ನು ಹೋಲುವ ಚಿತ್ರಗಳನ್ನು ಮೊಬೈಲ್‌ ವಾಲ್‌ಪೇಪರ್‌ಗೆ ಹಾಕಬಾರದು. ಈ ನಕಾರಾತ್ಮಕ ವಾಲ್‌ಪೇಪರ್‌ಗಳು ಮೆದುಳಿನಲ್ಲಿ ನಕಾರಾತ್ಮಕ ಹಾರ್ಮೋನುಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಆಯಾಸ, ಆತಂಕ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಯಾವಾಗಲೂ ಶಾಂತವಾಗಿರುವ ವಾಲ್‌ಪೇಪರ್‌ಗಳನ್ನು ಹಾಕುವುದು ಉತ್ತಮ.

ಹಾರ್ಟ್‌ಬ್ರೇಕ್‌ ಫೋಟೋಗಳು: ಕೆಲವರು ಯುವಕನೊಬ್ಬ ಒಬ್ಬಂಟಿಯಅಗಿ ನೋವಿನಲ್ಲಿ ನಿಂತಿರುವ, ಬ್ರೇಕಪ್‌ಗೆ ಸಂಬಂಧಿಸಿದ ಉಲ್ಲೇಖಗಳಿರುವ, ಒಬ್ಬಂಟಿ ಭಾವನೆಯನ್ನು ಉಂಟುಮಾಡುವ ನಕಾರಾತ್ಮಕ ಫೋಟೋಗಳನ್ನು ವಾಲ್‌ಪೇಪರ್‌ಗೆ ಹಾಕಿಕೊಳ್ಳುತ್ತಾರೆ. ಮನಸ್ಸಿಗೆ ನೋವನ್ನು ಉಂಟು ಮಾಡುವ ಇಂತಹ ಫೋಟೋಗಳನ್ನು ಪದೇ ಪದೇ ನೋಡಿದಾಗ, ಅದು ಮಾನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮನಸ್ಸಿನ ದುಃಖವನ್ನು ಹೆಚ್ಚು ಮಾಡುತ್ತದೆ.

ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಫೋಟೋಗಳು:‌ ಆಯುಧಗಳು, ಕೋಪಗೊಂಡ ಮುಖದ ಚಿತ್ರ, ಫೈಟಿಂಗ್‌ ಸೀನ್‌ ಇಂತಹ ಹಿಂಸಾತ್ಮಕ ಅಂಶಗಳನ್ನು ಬಿಂಬಿಸುವ ಫೋಟೋಗಳನ್ನು ವಾಲ್‌ಪೇಪರ್‌ನಲ್ಲಿ ಹಾಕಬಾರದು. ಇದು ನಮ್ಮ ನರ ಮಂಡಲದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಿ ಒತ್ತಡವನ್ನು ಮತ್ತು ಆಯಾಸವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಸುಖ ನಿದ್ರೆಗಾಗಿ ಗಿಡಮೂಲಿಕೆಗಳು ಸಹಕಾರಿ ಎನ್ನುತ್ತಾರೆ ಡೈಸಿ ಬೋಪಣ್ಣ

ಹಲವು ಬಣ್ಣಗಳು ಮತ್ತು ಬರವಣಿಗೆಗಳಿರುವ ಫೋಟೋ: ಕೆಲವರು ಅನೇಕಾರು ಬಣ್ಣಗಳನ್ನು ಹೊಂದಿರುವ ಹಾಗೂ ಅನೇಕ ಬರವಣಿಗೆಗಳಿರುವ ಪೋಟೋಗಳನ್ನು ಮೊಬೈಲ್‌ ವಾಲ್‌ಪೇಪರ್‌ನಲ್ಲಿ ಹಾಕುತ್ತಾರೆ. ಇಂತಹ ಓವರ್‌ ಕ್ರೌಡ್‌ ಪೋಟೋಗಳು ಕಣ್ಣಿಗೆ ಒತ್ತಡವನ್ನು ಉಂಟುಮಾಡುತ್ತವೆ.

ಹಾಗಾಗಿ ಯಾವಾಗಲೂ ಸಕಾರಾತ್ಮಕ ಅಂಶಗಳನ್ನು ಒಳಗೊಂಡ ಫೋಟೋಗಳನ್ನು ವಾಲ್‌ಪೇಪರ್‌ ಹಾಕುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!