AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ

Adani Group may enter Airlines business in India: ಏರ್ಪೋರ್ಟ್, ಸೀಪೋರ್ಟ್ ಬ್ಯುಸಿನೆಸ್​ನಲ್ಲಿ ಪಳಗಿರುವ ಅದಾನಿ ಗ್ರೂಪ್ ಈಗ ನೇರ ವಿಮಾನ ಹಾರಾಟ ಉದ್ಯಮಕ್ಕೆ ಕೈಹಾಕಲು ಹೊರಟಿದ್ದಾರೆ. ಅದಾನಿ ಗ್ರೂಪ್ ಹೊಸ ಏರ್ಲೈನ್ಸ್ ವಿಮಾನ ಸಂಸ್ಥೆ ಸ್ಥಾಪಿಸಬಹುದು. ಅಥವಾ ಈಗಿರುವ ಏರ್ಲೈನ್ಸ್ ಕಂಪನಿಯಲ್ಲಿ ಪ್ರಮುಖ ಪಾಲನ್ನು ಖರೀದಿಸಬಹುದು ಎನ್ನಲಾಗಿದೆ.

ಹೊಸ ಏರ್ಲೈನ್ಸ್ ಕಟ್ಟಲಿರುವ ಅದಾನಿ; ಎರಡೇ ಕಂಪನಿಗಳ ಪ್ರಾಬಲ್ಯದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಸಾಧ್ಯತೆ
ಗೌತಮ್ ಅದಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 23, 2026 | 5:56 PM

Share

ಮುಖ್ಯಾಂಶಗಳು

  • ಅದಾನಿ ಗ್ರೂಪ್ ಈಗ ನೇರ ವಿಮಾನ ಹಾರಾಟ ಉದ್ಯಮಕ್ಕೆ ಕೈಹಾಕಲು ಹೊರಟಿದ್ದಾರೆ.
  • ಅದಾನಿ ಗ್ರೂಪ್ ಹೊಸ ಏರ್ಲೈನ್ಸ್ ವಿಮಾನ ಸಂಸ್ಥೆ ಸ್ಥಾಪಿಸಬಹುದು.
  • ಅಥವಾ ಈಗಿರುವ ಏರ್ಲೈನ್ಸ್ ಕಂಪನಿಯಲ್ಲಿ ಪ್ರಮುಖ ಪಾಲನ್ನು ಖರೀದಿಸಬಹುದು ಎನ್ನಲಾಗಿದೆ.

ನವದೆಹಲಿ, ಜುಲೈ 23: ಭಾರತದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ವೈಮಾನಿಕ ಕ್ಷೇತ್ರಕ್ಕೆ ಲಗ್ಗೆ ಇಡಲು ಯೋಚಿಸುತ್ತಿದ್ದಾರೆ. ಈಗಾಗಲೇ ಪೋರ್ಟ್, ಏರ್​ಪೋರ್ಟ್​ಗಳ ನಿರ್ಮಾಣ ಮತ್ತು ನಿರ್ವಹಣೆಯ ಬ್ಯುಸಿನೆಸ್​ನಲ್ಲಿರುವ ಅದಾನಿ ಗ್ರೂಪ್ ಈಗ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರಕ್ಕೆ (Airlines Business) ಅಡಿ ಇಟ್ಟರೆ ಅಚ್ಚರಿ ಇಲ್ಲ. ಏರ್ಪೋರ್ಟ್​ಗಳನ್ನು ನಿರ್ವಹಿಸುತ್ತಿದ್ದರೂ ಏರ್ಲೈನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಇಲ್ಲ ಎಂದು ಅದಾನಿ ಹೇಳಿದ್ದರಾದರೂ ಮಾಧ್ಯಮಗಳ ವರದಿ ಪ್ರಕಾರ ಅವರು ಆ ಹೆಜ್ಜೆಯನ್ನೂ ಇರಿಸಬಹುದು ಎನ್ನಲಾಗಿದೆ.

ವರದಿಗಳ ಪ್ರಕಾರ, ಅದಾನಿ ಗ್ರೂಪ್ ಹೊಸ ಏರ್​ಲೈನ್ಸ್ ಸಂಸ್ಥೆಯನ್ನೇ ಹುಟ್ಟುಹಾಕಬಹುದು, ಅಥವಾ ಈಗಿರುವ ಒಂದು ಏರ್ಲೈನ್ಸ್ ಕಂಪನಿಯನ್ನೇ ಖರೀದಿಸಬಹುದು. ಭಾರತದಲ್ಲಿ ಏರ್ಲೈನ್ಸ್ ಉದ್ಯಮ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿ ದೊಡ್ಡ ಲಾಭ ಮಾಡಿದ ಕಂಪನಿಗಳಿಲ್ಲ. ಹಲವು ಕಂಪನಿಗಳು ಸರಿಯಾದ ನಿರ್ವಹಣೆ ಇಲ್ಲದೆ ಪತನಗೊಂಡಿರುವುದುಂಟು. ಸದ್ಯ ಇಂಡಿಗೋ ಮತ್ತು ಏರ್ ಇಂಡಿಯಾ ಮಾತ್ರವೇ ಇರುವ ಪ್ರಮುಖ ದೊಡ್ಡ ಏರ್ಲೈನ್ಸ್ ಸಂಸ್ಥೆಗಳು. ಸಣ್ಣ ಪುಟ್ಟ ವೈಮಾನಿಕ ಕಂಪನಿಗಳು ಈಗೀಗ ಶುರುವಾಗುತ್ತಿವೆ. ಅದಾನಿ ಗ್ರೂಪ್ ಈ ಬ್ಯುಸಿನೆಸ್​ಗೆ ಇಳಿದರೆ ಉದ್ಯಮಕ್ಕೆ ಹೊಸ ಬಲ ಸಿಕ್ಕಂತಾಗಬಹುದು.

ಈ ಉದ್ಯಮದಲ್ಲಿನ ಸಾಧಕ ಮತ್ತು ಬಾಧಕಗಳನ್ನು ಅದಾನಿ ಗ್ರೂಪ್ ಅವಲೋಕಿಸುತ್ತಿದೆ. ವಿಮಾನಗಳ ಆಪರೇಟಿಂಗ್ ವೆಚ್ಚ ಬಹಳ ಅಧಿಕ ಇದೆ. ಫ್ಲೈಟ್ ನಿಲುಗಡೆ, ಪೈಲಟ್​ಗಳು ಹಾಗೂ ಅಗತ್ಯ ಸಿಬ್ಬಂದಿ ಕೊರತೆ ಇತ್ಯಾದಿ ಸಮಸ್ಯೆಗಳು ಈ ಉದ್ಯಮವನ್ನು ಕಾಡುತ್ತಿದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಗೌತಮ್ ಅದಾನಿ ಉದ್ಯಮ ಪ್ರಪಂಚ ಇದು

ಅದಾನಿ ಗ್ರೂಪ್ ಬಹಳ ಹಾರ್ಡ್​ಕೋರ್ ಬ್ಯುಸಿನೆಸ್​ಗಳಲ್ಲಿ ಇದೆ. ಏರ್ಪೋರ್ಟ್, ಬಂದರು, ಸಿಮೆಂಟ್, ರಿಯಲ್ ಎಸ್ಟೇಟ್, ಇನ್​ಫ್ರಾಸ್ಟ್ರಕ್ಚರ್ ಇತ್ಯಾದಿ ಹಲವು ಕ್ಷೇತ್ರದಲ್ಲಿ ಉಪಸ್ಥಿತಿ ಇದೆ. ಅದರ ಪ್ರಾಬಲ್ಯ ಇರುವ ಕೆಲ ಪ್ರಮುಖ ಕ್ಷೇತ್ರಗಳ ಪರಿಚಯ ಇಲ್ಲಿದೆ:

  • ಏರ್​ಪೋರ್ಟ್ ಬ್ಯುಸಿನೆಸ್: ಅದಾನಿ ಗ್ರೂಪ್ 2019ರಲ್ಲಿ ಏರ್ಪೋರ್ಟ್ ನಿರ್ವಹಣೆಯ ಬ್ಯುಸಿನೆಸ್​ಗೆ ಇಳಿದಿದೆ. ಮುಂಬೈ, ಜೈಪುರ್, ತಿರುವನಂತಪುರಂ ಸೇರಿದಂತೆ ಎಂಟು ಏರ್ಪೋರ್ಟ್​ಗಳನ್ನು ಇದು ನಿರ್ವಹಿಸುತ್ತಿದೆ.
  • ಬಂದರುಗಳು: ಪೋರ್ಟ್ಸ್ ಬ್ಯುಸಿನೆಸ್​ನಲ್ಲಿ ಅದಾನಿ ಗ್ರೂಪ್ ಬಹಳ ಗಟ್ಟಿ ಇದೆ. ಭಾರತದೊಳಗೆ 15 ಪೋರ್ಟ್​ಗಳನ್ನು ಅದು ನಿರ್ವಹಿಸುತ್ತದೆ. ಭಾರತದ ಅತ್ಯಂತ ಬ್ಯುಸಿ ಇರುವ ಖಾಸಗಿ ಪೋರ್ಟ್ ಆದ ಮುಂದ್ರಾ ಕೂಡ ಅದಾನಿ ಸುಪರ್ದಿಯಲ್ಲಿದೆ. ಭಾರತದಲ್ಲಷ್ಟೇ ಅಲ್ಲ, ಆಸ್ಟ್ರೇಲಿಯಾ, ಶ್ರೀಲಂಕಾ, ಇಸ್ರೇಲ್ ಮತ್ತು ತಾಂಜಾನಿಯಾದಲ್ಲೂ ಪೋರ್ಟ್ ನಿರ್ವಹಣೆಯ ಬ್ಯುಸಿನೆಸ್ ಅನ್ನು ಅದಾನಿ ಗ್ರೂಪ್ ಹೊಂದಿದೆ.
  • ಸಿಮೆಂಟ್ ಉದ್ಯಮ: ಮೂರ್ನಾಲ್ಕು ವರ್ಷದ ಹಿಂದಷ್ಟೇ ಸಿಮೆಂಟ್ ಉದ್ಯಮಕ್ಕೆ ಕಾಲಿಟ್ಟ ಅದಾನಿ ಗ್ರೂಪ್ ಈಗ ಪ್ರಮುಖ ಸಿಮೆಂಟ್ ಕಂಪನಿಗಳನ್ನು ಖರೀದಿಸುತ್ತಿದೆ. ಅಂಬುಜಾ ಸಿಮೆಂಟ್ಸ್​ನಲ್ಲಿ ಪ್ರಮುಖ ಪಾಲನ್ನು ಹೊಂದಿರುವ ಸಂಸ್ಥೆ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಖರೀದಿಗೂ ಮುಂದಾಗಿದೆ.
  • ಇಂಧನ ಉದ್ಯಮ: ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗಳ ಮೂಲಕ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಪ್ರಬಲ ಉಪಸ್ಥಿತಿ ಹೊಂದಿದೆ. ಪಿಎನ್​ಜಿ ವಿತರಣೆ ಕೂಡ ಮಾಡುತ್ತದೆ.
  • ಡಾಟಾ ಸೆಂಟರ್ಸ್: ಭಾರತದಲ್ಲಿ ಡೇಟಾ ಸೆಂಟರ್ ನಿರ್ಮಾಣಕ್ಕೂ ಅದಾನಿ ಗ್ರೂಪ್ ಎಂಟ್ರಿ ಕೊಟ್ಟಿದೆ. ಕೆಲ ತಿಂಗಳ ಹಿಂದಷ್ಟೇ ಊಬರ್​ಗೆ ಭಾರತದಲ್ಲಿ ಮೊದಲ ಡೇಟಾ ಸೆಂಟರ್ ನಿರ್ಮಾಣ ಮಾಡಿಕೊಡಲಿದೆ. ತನ್ನ ನವೀಕರಣ ಇಂಧನ ಉತ್ಪಾದನೆಯ ಶಕ್ತಿಯನ್ನು ಡೇಟಾ ಸೆಂಟರ್​ಗೆ ಉಪಯೋಗಿಸಿ, ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಅದಾನಿ ಮುಂದಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Thu, 23 July 26

Follow Us
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ