AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದ ಮಹಿಳೆಯೊಬ್ಬಳ ಹೊಟ್ಟೆಯಿಂದ 14 ಪೆನ್ನು, 5 ಸ್ಪೂನ್, 1 ಮೇಣದ ಬತ್ತಿ ಹೊರತೆಗೆದ ವೈದ್ಯರು

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆಯ ಪೆಟ್ಲೂರಿವಾರಿಪಾಲೆಂನ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ನಾನಾ ವಸ್ತುಗಳಿದ್ದುದು ಪತ್ತೆಯಾಗಿದೆ. ನರಸರಾವ್ ಪೇಟೆಯ ಆಸ್ಪತ್ರೆಯೊಂದರ ವೈದ್ಯರು ಈಕೆಯ ಹೊಟ್ಟೆಯಿಂದ 14 ಪೆನ್ನು, 5 ಮರದ ಸ್ಪೂನು ಮತ್ತು 1 ಮೇಣದ ಬತ್ತಿಯನ್ನು ಹೊರತೆಗೆದಿದ್ದಾರೆ. ಮಾನಸಿಕ ಸಮಸ್ಯೆಯಲ್ಲಿದ್ದ ಈ ಮಹಿಳೆಯು ಖಿನ್ನತೆಯಲ್ಲಿದ್ದಾಗ ಈ ವಸ್ತುಗಳನ್ನು ನುಂಗಿರುವ ಶಂಕೆ ಇದೆ.Andhra woman, pens found in stomach, narasarao pet, ಆಂಧ್ರ ಮಹಿಳೆಯ ಹೊಟ್ಟೆಯಲ್ಲಿ ಪೆನ್ನುಗಳು, ನರಸರಾವ್ ಪೇಟೆ, ಹೊಟ್ಟೆಯಲ್ಲಿ ಪೆನ್ನು ಸ್ಪೂನು ಮೇಣದ ಬತ್ತಿ

ಆಂಧ್ರದ ಮಹಿಳೆಯೊಬ್ಬಳ ಹೊಟ್ಟೆಯಿಂದ 14 ಪೆನ್ನು, 5 ಸ್ಪೂನ್, 1 ಮೇಣದ ಬತ್ತಿ ಹೊರತೆಗೆದ ವೈದ್ಯರು
ಹೊಟ್ಟೆಯಿಂದ 14 ಪೆನ್ನು, 5 ಸ್ಪೂನ್, 1 ಮೇಣದ ಬತ್ತಿ ಹೊರತೆಗೆದ ವೈದ್ಯರುImage Credit source: TV9 Telugu
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2026 | 2:43 PM

Share

ವಿಜಯನಗರಂ, ಸೆಪ್ಟೆಂಬರ್ 7: ವಿಚಿತ್ರ ವೈದ್ಯಕೀಯ ಘಟನೆಯೊಂದರಲ್ಲಿ, 33 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ 14 ಪೆನ್ನುಗಳು, 5 ಮರದ ಚಮಚಗಳು (ಸ್ಪೂನ್) ಮತ್ತು ಒಂದು ಮೇಣದಬತ್ತಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆಯಲ್ಲಿ ಈ ಘಟನೆ ನಡೆದಿದೆ.

ಪೆಟ್ಲೂರಿವಾರಿಪಾಲೆಂ ಗ್ರಾಮದ ಈ ಮಹಿಳೆಗೆ ತೀವ್ರ ಎದೆ ನೋವು ಮತ್ತು ಹೊಟ್ಟೆ ನೋವು ಬಂದಿರುತ್ತದೆ. ಈಕೆಯನ್ನು ಕುಟುಂಬಸ್ಥರು ನರಸರಾವ್ ಪೇಟೆಯ ‘ಮಾತಾಶ್ರೀ ಆಸ್ಪತ್ರೆ’ಗೆ ದಾಖಲಿಸಿದರು. ಎಕ್ಸ್‌ರೇ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವರದಿಗಳನ್ನು ನೋಡಿದಾಗ ಆಕೆಯ ಜೀರ್ಣಾಶಯದಲ್ಲಿ ಅಸಾಧಾರಣ ವಸ್ತುಗಳಿರುವುದು ಪತ್ತೆಯಾಯಿತು.

ಇದನ್ನೂ ಓದಿ: ವಿಮಾನ ಹಾರುವಾಗ ಎಂಜಿನ್ ಆಯಿಲ್ ದಿಢೀರ್ ಕುಸಿತ; ಕೊಚ್ಚಿಗೆ ವಾಪಸ್ಸಾದ ಏರ್ ಇಂಡಿಯಾ ವಿಮಾನ; ತಪ್ಪಿದ ದೊಡ್ಡ ಅನಾಹುತ

ವೈದ್ಯರು ತಕ್ಷಣ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ (Laparoscopic surgery) ನಡೆಸಿ, 14 ಪ್ಲಾಸ್ಟಿಕ್ ಪೆನ್ನುಗಳು, 5 ಮರದ ಚಮಚಗಳು ಹಾಗೂ 1 ಮೇಣದಬತ್ತಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ನೋವಿಗೆ ಕಾರಣ: ಹೊಟ್ಟೆಯಲ್ಲಿದ್ದ ಒಂದು ಪೆನ್ನಿನ ಕ್ಯಾಪ್ ತೆಗೆದಿದ್ದರಿಂದ ಅದು ಒಳಭಾಗದಲ್ಲಿ ಚುಚ್ಚಿ ತೀವ್ರವಾದ ನೋವು ಕಾಣಿಸಿಕೊಂಡಿರಬಹುದು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

ಮಾನಸಿಕ ಸ್ಥಿತಿ: ಮಹಿಳೆಯ ತಂದೆ ನೋಮುಲ ಹನುಮಂತರಾವ್ ಅವರ ಪ್ರಕಾರ, ಆಕೆ ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾಳೆ. ಎರಡು ತಿಂಗಳ ಹಿಂದೆಯಷ್ಟೇ ಪತಿ ಆಕೆಗೆ ವಿಚ್ಛೇದನ ನೀಡಿರುತ್ತಾನೆ. ಇದೇ ಮಾನಸಿಕ ಖಿನ್ನತೆ ಮತ್ತು ಒತ್ತಡದಿಂದ ಆಕೆ ಈ ವಸ್ತುಗಳನ್ನು ನುಂಗಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ ಎಸಗುವ ರಾಜಕಾರಣಿಗಳನ್ನು ಸುಮ್ಮನೆ ಬಿಡಬಾರದು, ಕಸ್ಟಡಿಗೆ ತೆಗೆದುಕೊಳ್ಳಬೇಕು: ಸುಪ್ರೀಂಕೋರ್ಟ್

ಪ್ರಸ್ತುತ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us