AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayodhya Ram Mandir: ಅಯೋಧ್ಯೆಯಲ್ಲಿ ಇಂದು ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ

ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿರುವ ರಾಮ ಮಂದಿರದಲ್ಲಿ ಶ್ರೀರಾಮನ ಎರಡನೇ ಪ್ರಾಣ ಪ್ರತಿಷ್ಠಾ ಸಮಾರಂಭವು ಇಂದು ನಡೆಯಲಿದೆ. ಈ ಪವಿತ್ರ ಸಮಾರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ಸಂಕೀರ್ಣದೊಳಗೆ ರಾಜಾ ರಾಮ ಮತ್ತು ಇತರ ದೇವತೆಗಳ ಪ್ರತಿಷ್ಠಾಪನೆ ನಡೆಯಲಿದೆ. ಈ ಸಮಾರಂಭದಲ್ಲಿ ರಾಮ ಜನ್ಮಭೂಮಿಯ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನ ಎಂಟು ದೇವಾಲಯಗಳು, ಪಾರ್ಕೋಟಾ, ಶಿವಲಿಂಗ, ಗಣಪತಿ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ಆರು ದೇವಾಲಯಗಳು ಮತ್ತು ಶೇಷಾವತಾರ ದೇವಾಲಯದಲ್ಲಿರುವ ದೇವತೆಗಳ ವಿಗ್ರಹಗಳ ಪ್ರಾಣ ಪ್ರತಿಷ್ಠಾನ ನಡೆಯಲಿದೆ. ರಾಮ ದೇವಾಲಯವನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗಿದೆ.

Ayodhya Ram Mandir: ಅಯೋಧ್ಯೆಯಲ್ಲಿ ಇಂದು ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ
ಅಯೋಧ್ಯೆ
Follow us
ನಯನಾ ರಾಜೀವ್
|

Updated on:Jun 05, 2025 | 10:59 AM

ಅಯೋಧ್ಯೆ, ಜೂನ್ 05: ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿರುವ ರಾಮ ಮಂದಿರದಲ್ಲಿ ಶ್ರೀರಾಮನ ಎರಡನೇ ಪ್ರಾಣ ಪ್ರತಿಷ್ಠಾ ಸಮಾರಂಭವು ಇಂದು ನಡೆಯಲಿದೆ. ಈ ಪವಿತ್ರ ಸಮಾರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ಸಂಕೀರ್ಣದೊಳಗೆ ರಾಜಾ ರಾಮ ಮತ್ತು ಇತರ ದೇವತೆಗಳ ಪ್ರತಿಷ್ಠಾಪನೆ ನಡೆಯಲಿದೆ. ಈ ಸಮಾರಂಭದಲ್ಲಿ ರಾಮ ಜನ್ಮಭೂಮಿಯ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನ ಎಂಟು ದೇವಾಲಯಗಳು, ಪಾರ್ಕೋಟಾ, ಶಿವಲಿಂಗ, ಗಣಪತಿ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ಆರು ದೇವಾಲಯಗಳು ಮತ್ತು ಶೇಷಾವತಾರ ದೇವಾಲಯದಲ್ಲಿರುವ ದೇವತೆಗಳ ವಿಗ್ರಹಗಳ ಪ್ರಾಣ ಪ್ರತಿಷ್ಠಾನ ನಡೆಯಲಿದೆ. ರಾಮ ದೇವಾಲಯವನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗಿದೆ.

ಕಳೆದ ವರ್ಷ ಜನವರಿಯಲ್ಲಿ ನಡೆದ ಮೊದಲ ಪ್ರಾಣ ಪ್ರತಿಷ್ಠಾನದ ನಂತರ ಇದು ಎರಡನೇ  ಕಾರ್ಯಕ್ರಮವಾಗಿದೆ. ಮೂರು ದಿನಗಳ ಈ ಆಚರಣೆ ಜೂನ್ 3 ರಂದು ಪ್ರಾರಂಭವಾಗಿತ್ತು ಮತ್ತು ಅಂತಿಮ ಸಮಾರಂಭವು ಇಂದು ರಂದು ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಆಂಜನೇಯ ಸೇವಾ ಟ್ರಸ್ಟ್ ಆಯೋಜಿಸಲಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಆಚರಣೆಗಳು ಪ್ರಾರಂಭವಾಗಲಿವೆ.

ರಾಮ ಮಂದಿರದ ಮೊದಲ ಮಹಡಿಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಲಿದೆ. ಮೂರು ದಿನಗಳ ಆಚರಣೆಗಳಿಗಾಗಿ ಅಯೋಧ್ಯೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ , ಭಕ್ತರಿಗೆ ರಾಮಲಲ್ಲಾ ದರ್ಶನಕ್ಕೆ ನಿಷೇಧವಿಲ್ಲ. ಸಿಆರ್‌ಪಿಎಫ್, ಎಸ್‌ಎಸ್‌ಎಫ್ ಮತ್ತು ಪಿಎಸಿ ಸಿಬ್ಬಂದಿ ಕೂಡ ಹಾಜರಿದ್ದಾರೆ.ಆಚರಣೆಗಳು ವೇದ ಪಠಣ ಮತ್ತು ಹವನದೊಂದಿಗೆ ಪ್ರಾರಂಭವಾಗುತ್ತವೆ.

ಪ್ರಾಣ ಪ್ರತಿಷ್ಠೆಗಾಗಿ 62,000 ಪ್ರಸಾದ ಪೆಟ್ಟಿಗೆಗಳನ್ನು ಲಕ್ನೋದಿಂದ ತರಿಸಲಾಗಿದೆ. ಛಪ್ಪನ್ ಭೋಗ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಕ್ಷಿತಿಜ್ ಗುಪ್ತಾ ಅವರು ಕಡಲೆ ಮತ್ತು ಮೂಂಗ್‌ಡಾಲ್ ಮಿಶ್ರಣದಿಂದ ಬರ್ಫಿಯನ್ನು ತಯಾರಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ಓದಿ: Ram Mandir: ಶ್ರೀರಾಮ ಮಂದಿರ ದರ್ಬಾರ್ ಪ್ರಾಣ ಪ್ರತಿಷ್ಠೆ, 3 ದಿನಗಳ ಕಾರ್ಯಕ್ರಮ ಕಣ್ತುಂಬಿಕೊಳ್ಳಿ

ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ, ದೇವಾಲಯದ ಗೋಡೆಗಳು ಹಿಂದೂ ದೇವತೆಗಳ ಸಂಕೀರ್ಣವಾದ ಕೆತ್ತಿದ ಚಿತ್ರಣಗಳನ್ನು ಪ್ರದರ್ಶಿಸುತ್ತವೆ. ರಾಮ ದರ್ಬಾರ್ 4.5 ಅಡಿ ಎತ್ತರವಿದೆ.

ದೇವಾಲಯದ ಮೊದಲ ಮಹಡಿಯಿಂದ 161 ಅಡಿ ಎತ್ತರದ ಶಿಖರದವರೆಗೆ ದೇವಾಲಯದ ಭವ್ಯತೆ ಮತ್ತು ಅದ್ಭುತ ನೋಟವನ್ನು ಈ ಕಲಶ ಬಿಂಬಿಸುತ್ತದೆ. ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ದೇವಾಲಯದ ಶಿಖರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ.ರಾಮ ದರ್ಬಾರ್ ಸೇರಿದಂತೆ ಮಂದಿರದ ಆವರಣದಲ್ಲಿ ನಿರ್ಮಿಸಲಾಗಿರುವ ಇತರ ದೇವಾಲಯಗಳಲ್ಲಿ ದೇವರುಗಳ ವಿಗ್ರಹಗಳ ಪ್ರಾಣ ಪ್ರತಿಷ್ಠೆಯಾಗಲಿದೆ. ಇದಕ್ಕಾಗಿ ವೇದ ವಿದ್ವಾಂಸರು ಈಗಾಗಲೇ ಅಯೋಧ್ಯೆಯನ್ನು ತಲುಪಿದ್ದಾರೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಅವರು ಎಂದು ತಿಳಿಸಿದ್ದಾರೆ.

ಮಂದಿರದಲ್ಲಿ ರಾಮ ದರ್ಬಾರ್ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವವು ಜೂನ್ 2ರಂದು ಕಲಶ ಯಾತ್ರೆಯೊಂದಿಗೆ ಪ್ರಾರಂಭವಾಗಿದೆ. 108 ಕಲಶಗಳೊಂದಿಗೆ ಸರಯೂ ನದಿಯಿಂದ ಪವಿತ್ರ ನೀರನ್ನು ಹೊತ್ತ ಮಹಿಳೆಯರು ದೇವಾಲಯದ ಆವರಣ ಪ್ರವೇಶಿಸಿ ಬಳಿಕ ಪೂಜೆ ನೆರವೇರಿಸಲಾಗಿದೆ. ರಾಮ ದರ್ಬಾರ್‌ನಲ್ಲಿರುವ ದೇವತೆಗಳ ವಿಗ್ರಹಗಳನ್ನು ಜೂನ್ 5ರಂದು 101 ವೇದ ವಿಧ್ವಾಂಸರ ಮಂತ್ರ ಘೋಷಗಳೊಂದಿಗೆ ಪ್ರತಿಷ್ಠಾಪನೆಯಾಗಲಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Thu, 5 June 25

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!