AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

ಅರ್ಜುನಿ ಮೊರ್ಗನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್ ಅನ್ನು ಪ್ರಶ್ನಿಸಿ ಕಿಶೋರ್ ಚಿಂತಾಮನ್ ತರೋನೆ (33) ಹೆಸರಿನ ವ್ಯಕ್ತಿಯು ತನ್ನ ವಕೀಲ ರಾಜೇಂದ್ರ ಎಮ್ ಡಾಗಾ ಅವರ ಮೂಲಕ ಸಲ್ಲಿಸಿದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಡ್​ ಆ ಹಕ್ ಮತ್ತು ನ್ಯಾಯಮೂರ್ತಿ ಅಮಿತ್ ಎ ಬೊರ್ಕರ್ ಅವರನ್ನೊಳಗೊಂಡ ಪೀಠವು ಸದರಿ ಚಾರ್ಜ್​ಶೀಟ್​ ರದ್ದುಪಡಿಸಿತು

ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Apr 26, 2021 | 5:33 PM

Share

ಮುಂಬೈ: ವಾಟ್ಸ್ಯಾಪ್ ಗ್ರೂಪ್​ ಒಂದರ ಸದಸ್ಯನೊಬ್ಬ ಆಕ್ಷೇಪಾರ್ಹ ವಿಷಯದ ಪೋಸ್ಟ್ ಹಾಕಿದರೆ ಅದಕ್ಕೆ ಗ್ರೂಪ್ ಅಡ್ಮಿನ್ ಹೊಣೆಗಾರನಾಗುವುದಿಲ್ಲವಾದರೂ, ಅಡ್ಮಿನ್ ಮತ್ತು ಅಂಥ ಸದಸ್ಯನ ನಡುವೆ ‘ಸಮಾನ ಉದ್ದೇಶ’ ಇದ್ದರೆ ಅಥವಾ ಅದು ‘ಅವರಿಬ್ಬರ ನಡುವೆ ಪೂರ್ವ ನಿಯೋಜಿತವಾಗಿದ್ದರೆ’ ಅಡ್ಮಿನ್​ ಹೊಣೆಗಾರನಾಗುತ್ತಾನೆ ಎಂದು ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ಇತ್ತೀಚಿಗೆ ಹೇಳಿದೆ. ಜುಲೈ 2016ರಲ್ಲಿ, ಒಂದು ವಾಟ್ಸ್ಯಾಪ್ ಗ್ರೂಪ್​ನ ಅಡ್ಮಿನ್ ಆಗಿದ್ದ 33 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಗುಂಪಿನ ಸದಸ್ಯನೊಬ್ಬ ಅದೇ ಗುಂಪಿನ ಮಹಿಳೆಯೊಬ್ಬರನ್ನು ಕುರಿತು ಅಶ್ಲೀಲ ಪೋಸ್ಟ್​ಗಳನ್ನೂ ಮಾಡಿದಾಗ್ಯೂ ಅವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಒಂದು ಎಫ್​ಐಆರ್ ಮತ್ತು ಗೊಂಡಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಸಲ್ಲಿಸಲಾಗಿದ್ದ ಚಾರ್ಜ್​ಶೀಟನ್ನು ನಾಗ್ಪುರ ಪೀಠವು ತಳ್ಳಿಹಾಕಿತು.

ತನ್ನ ವಿರುದ್ಧ ಅರ್ಜುನಿ ಮೊರ್ಗನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್ ಅನ್ನು ಪ್ರಶ್ನಿಸಿ ಕಿಶೋರ್ ಚಿಂತಾಮನ್ ತರೋನೆ (33) ಹೆಸರಿನ ವ್ಯಕ್ತಿಯು ತನ್ನ ವಕೀಲ ರಾಜೇಂದ್ರ ಎಂ.ಡಾಗಾ ಅವರ ಮೂಲಕ ಸಲ್ಲಿಸಿದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಡ್​ ಆ ಹಕ್ ಮತ್ತು ನ್ಯಾಯಮೂರ್ತಿ ಅಮಿತ್ ಎ ಬೊರ್ಕರ್ ಅವರನ್ನೊಳಗೊಂಡ ಪೀಠವು ಸದರಿ ಚಾರ್ಜ್​ಶೀಟ್​ ರದ್ದುಪಡಿಸಿತು.

ವಾಟ್ಸ್ಯಾಪ್ ಗ್ರೂಪ್​ನ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಗ್ರಹಿಕೆಗೆ ತಂದುಕೊಂಡ ಪೀಠವು ಗ್ರೂಪ್ ಅಡ್ಮಿನ್ ಪಾತ್ರದ ಬಗ್ಗೆ ಈ ಆಭಿಪ್ರಾಯ ತಳೆಯಿತು: ‘ಒಂದು ಗ್ರೂಪನ್ನು ರಚಿಸಿದ ನಂತರ ಗ್ರೂಪಿನ ಅಡ್ಮಿನ್​ನ ಕೆಲಸ ಗುಂಪಿಗೆ ಹೊಸ ಸದಸ್ಯರನ್ನು ಸೇರಿಸುವ ಮತ್ತು ಗುಂಪಿನಿಂದ ಯಾವುದಾದರೂ ಸದಸ್ಯನನ್ನು ತೆಗೆಯುವುದನ್ನು ಬಿಟ್ಟರೆ ಉಳಿದ ಸದಸ್ಯರಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅಡ್ಮಿನ್​ಗೆ ಯಾವುದೇ ಸದಸ್ಯನ ಸಂದೇಶವನ್ನು ಪೋಸ್ಟ್ ಮಾಡುವ ಮೊದಲು ಅದನ್ನು ನಿಯಂತ್ರಿಸುವ, ತಿದ್ದುವ ಅಥವಾ ಸೆನ್ಸಾರ್ ಮಾಡುವ ಅಧಿಕಾರ ಇರುವುದಿಲ್ಲ. ಆದರೆ ಗ್ರೂಪಿನ ಸದಸ್ಯನೊಬ್ಬ ಆಕ್ಷೇಪಣಾರ್ಹ ಪೋಸ್ಟ್​ಗಳನ್ನು ಮಾಡಿದರೆ ಅಂಥ ಸದಸ್ಯನ ವಿರುದ್ದ ಸಂಬಂಧಪಟ್ಟ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಬಹದಾಗಿದೆ’.

‘ಗ್ರೂಪ್ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಅಡ್ಮಿನ್​ನ ಹೊಣೆಗಾರಿಕೆ ಕುರಿತು ಮತ್ತಷ್ಟು ವಿವರವಾಗಿ ತನ್ನ ತೀರ್ಪಿನಲ್ಲಿ ತಿಳಿಸಿರುವ ಪೀಠವು, ‘ಅಡ್ಮಿನ್​ನನ್ನು ತಪ್ಪಿತಸ್ಥ ಎಂದು ಪರಿಗಣಿಸಲಿ ಕಾನೂನಿನಲ್ಲಿ ಯಾವುದೇ ಆಸ್ಪದವಿಲ್ಲದಿರುವ ಹಿನ್ನೆಲೆಯಲ್ಲಿ ಅವನನ್ನು ಬೇರೆ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಹೊಣೆಗಾರನಾಗಿ ಮಾಡಲಾಗದು. ಒಂದು ಪಕ್ಷ ಅಂಥ ಸದಸ್ಯ ಮತ್ತು ಅಡ್ಮಿನ್ ಒಂದೇ ಉದ್ದೇಶ ಹೊಂದಿದವರಾಗಿದ್ದರೆ, ಅಥವಾ ಅವರ ನಡವೆ ಪೂರ್ವ ನಿಯೋಜಿತ ಒಡಂಬಡಿಕೆಯಾಗಿದ್ದರೆ, ಆಗ ಅವರಿಬ್ಬರೂ ಹೊಣೆಗಾರರಾಗುತ್ತಾರೆ ಮತ್ತು ಇಬ್ಬರ ವಿರುದ್ಧವೂ ಕ್ರಮ ಜರುಗಿಸಬಹುದಾಗಿದೆ’ ಎಂದು ಹೇಳಿದೆ.

‘ಗ್ರೂಪ್ ಅಡ್ಮಿನ್ ಅಂದ ಮಾತ್ರಕ್ಕೆ ತಪ್ಪಿತಸ್ಥ ಸದಸ್ಯನೊಂದಿಗೆ ಅವನ ಸಮಾನ ಉದ್ದೇಶ ಹೊಂದಿದ್ದಾನೆ ಎಂದು ಹೇಳಲಾಗದು. ಒಬ್ಬ ವ್ಯಕ್ತಿ ವಾಟ್ಸ್ಯಾಪ್​ನಲ್ಲಿ ಗ್ರೂಪ್​ ರಚಿಸುವಾಗ ಸದಸ್ಯನನ್ನಾಗಿ ಮಾಡಿಕೊಳ್ಳುವ ವ್ಯಕ್ತಿಯೊಬ್ಬನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜ್ಞಾನ ಹೊಂದಿರುವುದಿಲ್ಲ’ ಎಂದು ಪೀಠವು ಹೇಳಿದೆ.

ಸದರಿ ಪ್ರಕರಣದ ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಬೊರ್ಕರ್ ಅವರು, ‘ಈ ಪ್ರಕರಣದಲ್ಲಿ ಲಭ್ಯವಾಗಿರುವ ಸತ್ಯಾಂಶಗಳ ಆಧಾರದಲ್ಲಿ ನಮ್ಮ ಅಭಿಪ್ರಾಯವೇನೆಂದರೆ, ಸದಸ್ಯನೊಬ್ಬ ಲೈಂಗಿಕ ಲೇಪದ ಕಾಮೆಂಟ್​ಗಳನ್ನು ಮಾಡಿದಾಗ್ಯೂ ಆವನನ್ನು ಗುಂಪಿನಿಂದ ತೆಗೆದುಹಾಕದಿರುವುದು ಇಲ್ಲವೇ ಅವನಿಂದ ಕ್ಷಮಾಪಣೆ ಕೇಳದಿರುವುದು ಅಡ್ಮಿನ್​ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್​ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಹಾರಾಷ್ಟ್ರ

ಇದನ್ನೂ ಓದಿ: Explainer: ಬಯೋ ಬಬಲ್‌ನಲ್ಲಿ ಇದ್ದರೂ ಐಪಿಎಲ್ ಕ್ರಿಕೆಟಿಗರನ್ನು ಕಾಡುತ್ತಿದೆ ಕೊವಿಡ್19 ಆತಂಕ! ಕಾರಣವೇನು?

Published On - 5:33 pm, Mon, 26 April 21

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ