Puja Khedkar: ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾ ಮಾಡಿದ ಕೇಂದ್ರ

ಪೂಜಾ ಖೇಡ್ಕರ್ ಅವರು ಇತರ ಹಿಂದುಳಿದ ವರ್ಗಗಳು ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ವಂಚನೆ ಮತ್ತು ತಪ್ಪಾಗಿ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.ಯುಪಿಎಸ್‌ಸಿ ಸರ್ಕಾರಿ ಸೇವೆಯ ಆಯ್ಕೆಯನ್ನು ರದ್ದುಗೊಳಿಸಿದ ಒಂದು ತಿಂಗಳ ನಂತರ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಪೂಜಾ ಖೇಡ್ಕರ್ ಅವರನ್ನು ಐಎಎಸ್ ನಿಂದ ವಜಾಗೊಳಿಸಿದೆ.

Puja Khedkar: ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾ ಮಾಡಿದ ಕೇಂದ್ರ
ಪೂಜಾ ಖೇಡ್ಕರ್
Follow us
|

Updated on:Sep 07, 2024 | 6:42 PM

ದೆಹಲಿ ಸೆಪ್ಟೆಂಬರ್ 07 : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸರ್ಕಾರಿ ಸೇವೆಯ ಆಯ್ಕೆಯನ್ನು ರದ್ದುಗೊಳಿಸಿದ ಒಂದು ತಿಂಗಳ ನಂತರ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಪೂಜಾ ಖೇಡ್ಕರ್ (Puja Khedkar) ಅವರನ್ನು ಭಾರತೀಯ ಆಡಳಿತ ಸೇವೆಯಿಂದ (IAS) ವಜಾಗೊಳಿಸಿದೆ. ಪೂಜಾ ಖೇಡ್ಕರ್ ಅವರು ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ವಂಚನೆ ಮತ್ತು ತಪ್ಪಾಗಿ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿದ ನಂತರ, ಯುಪಿಎಸ್‌ಸಿ ಆಕೆಯನ್ನು ಜೀವನ ಪರ್ಯಂತ ಪ್ರವೇಶ ಪರೀಕ್ಷೆ ತೆಗೆದುಕೊಳ್ಳದಂತೆ ನಿರ್ಬಂಧಿಸಿತ್ತು.

ಹಲವು ಬಾರಿ ಪರೀಕ್ಷೆಗೆ ಹಾಜರಾಗಲು ತನ್ನ ಗುರುತನ್ನು ನಕಲಿ ಮಾಡಿದ್ದಕ್ಕಾಗಿ ಯುಪಿಎಸ್​​ಸಿ ಆಕೆಯನ್ನು ತಪ್ಪಿತಸ್ಥರೆಂದು ಕಂಡುಹಿಡಿದಿದೆ.

ವಿವಾದದ ನಂತರ, UPSC 2009 ಮತ್ತು 2023 ರ ನಡುವೆ IAS ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಪಾಸ್ ಮಾಡಿದ 15,000 ಕ್ಕೂ ಹೆಚ್ಚು ಅಭ್ಯರ್ಥಿಗಳ ಡೇಟಾವನ್ನು ಪರಿಶೀಲಿಸಿದೆ. “ಈ ವಿವರವಾದ ಪ್ರಕ್ರಿಯೆ ನಂತರ, ಶ್ರೀಮತಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಪ್ರಕರಣವನ್ನು ಹೊರತುಪಡಿಸಿ, CSE ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಪ್ರಯತ್ನಗಳಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯತ್ನಗಳನ್ನು ಪಡೆದಿರುವ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲ ”ಎಂದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷಾ ನಿಯಮಗಳನ್ನು ಉಲ್ಲೇಖಿಸಿ ಹೇಳಿದೆ.

ಖೇಡ್ಕರ್ ಅವರು ಸೇವೆಯಲ್ಲಿ ತನ್ನ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ವಂಚನೆ ಮತ್ತು ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವಿಕಲ ಕೋಟಾ ಪ್ರಯೋಜನಗಳನ್ನು ತಪ್ಪಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ ಆಕೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಇದೀಗ ಕೇಂದ್ರವು, ಸೆಪ್ಟೆಂಬರ್ 6, 2024 ರ ಆದೇಶದ ಪ್ರಕಾರ, IAS (ಪ್ರೊಬೇಷನ್) ನಿಯಮಗಳು, 1954 ರ ನಿಯಮ 12 ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ. ಯುಪಿಎಸ್‌ಸಿ ಜುಲೈ 31 ರಂದು ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿ ಮುಂದಿನ ಪರೀಕ್ಷೆಗಳಿಂದ ಆಕೆಯನ್ನು ಡಿಬಾರ್ ಮಾಡಿದೆ.

ಖೇಡ್ಕರ್ ಅವರು ತಮ್ಮ ಕೇಡರ್ ರಾಜ್ಯ ಮಹಾರಾಷ್ಟ್ರದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮೊದಲು, ಕೇಂದ್ರ ಲೋಕಸೇವಾ ಆಯೋಗ ಮತ್ತು ದೆಹಲಿ ಪೊಲೀಸರು ಮಾಜಿ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿದರು. 2020 ರ ವೇಳೆಗೆ ಎಲ್ಲಾ ಪ್ರಯತ್ನಗಳನ್ನು ಮುಗಿಸಿ 2021 ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ (CSE) ಹಾಜರಾಗಲು ಅವಳು ಅನರ್ಹಳಾಗಿದ್ದರಿಂದ ಆಕೆ ಆಯೋಗಕ್ಕೆ ಮಾತ್ರವಲ್ಲದೆ ಸಾರ್ವಜನಿಕರಿಗೂ ವಂಚಿಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಖೇಡ್ಕರ್ ಸದ್ಯ ಮಧ್ಯಂತರ ಜಾಮೀನಿನ ಮೇಲೆ ಇದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ಕೊಲೆ ಪ್ರಕರಣ: ಪಾಲಿಗ್ರಾಫ್ ಪರೀಕ್ಷೆ ವೇಳೆ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದ ಆರೋಪಿ

ತಮ್ಮ ಪ್ರತಿಕ್ರಿಯೆಯಲ್ಲಿ, UPSC ಮತ್ತು ದೆಹಲಿ ಪೋಲೀಸ್ ಇಬ್ಬರೂ ಆಕೆಗೆ ಜಾಮೀನು “ಆಳವಾಗಿ ಬೇರೂರಿರುವ ಪಿತೂರಿ” ಯ ತನಿಖೆಗೆ ಅಡ್ಡಿಯಾಗುತ್ತದೆ. ಈ ಪ್ರಕರಣವು ಸಾರ್ವಜನಿಕ ನಂಬಿಕೆಯ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಎಂಬ ಕಾರಣಕ್ಕಾಗಿ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದ್ದರು.

ಏನಿದು ವಿವಾದ?

34 ವರ್ಷದ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿನಲ್ಲಿ ಅನಧಿಕೃತವಾಗಿ ಬೀಕನ್ ಅನ್ನು ಬಳಸುವುದರ ಜೊತೆಗೆ ಪ್ರತ್ಯೇಕ ಕಚೇರಿ ಮತ್ತು ಅಧಿಕೃತ ಕಾರಿಗೆ ಬೇಡಿಕೆಯ ಆರೋಪದ ನಂತರ ಮಾಧ್ಯಮ ಪರಿಶೀಲನೆಗೆ ಒಳಗಾಗಿದ್ದರು. ಆರಂಭದಲ್ಲಿ ಪುಣೆಯಲ್ಲಿ ಠಿಕಾಣಿ ಹೂಡಿದ್ದ ಖೇಡ್ಕರ್ ವಿವಾದದ ನಡುವೆಯೇ ಪುಣೆ ಜಿಲ್ಲಾಧಿಕಾರಿ ವಾಶಿಮ್ ಗೆ ವರ್ಗಾವಣೆಗೊಂಡಿದ್ದರು.

ಸರ್ಕಾರವು ತರುವಾಯ ಆಕೆಯ ‘ಜಿಲ್ಲಾ ತರಬೇತಿ ಕಾರ್ಯಕ್ರಮ’ವನ್ನು ತಡೆಹಿಡಿಯಿತು, “ಅಗತ್ಯ ಕ್ರಮಕ್ಕಾಗಿ” ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ಗೆ ಅವಳನ್ನು ಮರಳಿ ಕರೆಸಿತು. ತನ್ನ ಅಂಗವೈಕಲ್ಯ ಮತ್ತು ಒಬಿಸಿ ಪ್ರಮಾಣಪತ್ರಗಳ ಸತ್ಯಾಸತ್ಯತೆಗಾಗಿ ತನಿಖೆಗೆ ಒಳಪಟ್ಟಿರುವ ಖೇಡ್ಕರ್, ತಾನು ತಪ್ಪು ಮಾಹಿತಿ ಮತ್ತು “ನಕಲಿ ಸುದ್ದಿ” ಗೆ ಬಲಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Sat, 7 September 24