AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಗೂ ಮುನ್ನವೇ ಮತ್ತೆ ಗ್ಯಾಸ್ ಛೇಂಬರ್ ಆಯ್ತು ದೆಹಲಿ!

ದೆಹಲಿ: ರಾಷ್ಟ್ರ ರಾಜಧಾನಿಗೆ ಮತ್ತೆ ಮಾಲಿನ್ಯ ಅನ್ನೋ ಭೂತ ವಕ್ಕರಿಸಿದೆ. ರೋಗಿಗಳು ಉಸಿರಾಡಲು ಪರದಾಡ್ತಿದ್ರೆ, ಉಳಿದವ್ರು ನಮಗೆ ರೋಗ ಬಾರದೇ ಇರಲಿ ಅಂತಾ ಊರು ಬಿಟ್ಟು ಹೋಗ್ತಿದ್ದಾರೆ. ಸಾಮಾನ್ಯವಾಗಿ ದೆಹಲಿ ಹೆಸರು ಎತ್ತಿದ್ರೆ ಸಾಕು ರಾಷ್ಟ್ರ ರಾಜಧಾನಿ ಅನ್ನೋದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನ ನಿತ್ಯ ವಾಯುಮಾಲಿನ್ಯದಿಂದ ಅನುಭವಿಸುವ ಸಮಸ್ಯೆಗಳೇ ಕಣ್ಣಮುಂದೆ ಬರುತ್ತೆ. ಅದ್ರಲ್ಲೂ ಚಳಿಗಾಲ ಬಂತು ಅಂದ್ರೆ ಸಾಕು, ದೆಹಲಿ ನಿವಾಸಿಗಳಲ್ಲಿ ಭಯ ಶುರುವಾಗುತ್ತೆ. ಯಾಕಂದ್ರೆ, ಅತಿಯಾದ ವಾಯುಮಾಲಿನ್ಯದಿಂದ ಇಲ್ಲಿನ ಮಂದಿ ತತ್ತರಿಸಿದ್ದಾರೆ. ಈ ಬಾರಿಯೂ ಕಳೆದ […]

ದೀಪಾವಳಿಗೂ ಮುನ್ನವೇ ಮತ್ತೆ ಗ್ಯಾಸ್ ಛೇಂಬರ್  ಆಯ್ತು ದೆಹಲಿ!
ಸಾಧು ಶ್ರೀನಾಥ್​
|

Updated on:Oct 26, 2019 | 5:22 PM

Share

ದೆಹಲಿ: ರಾಷ್ಟ್ರ ರಾಜಧಾನಿಗೆ ಮತ್ತೆ ಮಾಲಿನ್ಯ ಅನ್ನೋ ಭೂತ ವಕ್ಕರಿಸಿದೆ. ರೋಗಿಗಳು ಉಸಿರಾಡಲು ಪರದಾಡ್ತಿದ್ರೆ, ಉಳಿದವ್ರು ನಮಗೆ ರೋಗ ಬಾರದೇ ಇರಲಿ ಅಂತಾ ಊರು ಬಿಟ್ಟು ಹೋಗ್ತಿದ್ದಾರೆ.

ಸಾಮಾನ್ಯವಾಗಿ ದೆಹಲಿ ಹೆಸರು ಎತ್ತಿದ್ರೆ ಸಾಕು ರಾಷ್ಟ್ರ ರಾಜಧಾನಿ ಅನ್ನೋದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಜನ ನಿತ್ಯ ವಾಯುಮಾಲಿನ್ಯದಿಂದ ಅನುಭವಿಸುವ ಸಮಸ್ಯೆಗಳೇ ಕಣ್ಣಮುಂದೆ ಬರುತ್ತೆ. ಅದ್ರಲ್ಲೂ ಚಳಿಗಾಲ ಬಂತು ಅಂದ್ರೆ ಸಾಕು, ದೆಹಲಿ ನಿವಾಸಿಗಳಲ್ಲಿ ಭಯ ಶುರುವಾಗುತ್ತೆ. ಯಾಕಂದ್ರೆ, ಅತಿಯಾದ ವಾಯುಮಾಲಿನ್ಯದಿಂದ ಇಲ್ಲಿನ ಮಂದಿ ತತ್ತರಿಸಿದ್ದಾರೆ. ಈ ಬಾರಿಯೂ ಕಳೆದ ಬಾರಿಯ ಪರಿಸ್ಥಿತಿ ಉಂಟಾಗಿದ್ದು, ದೆಹಲಿಯನ್ನ ದಟ್ಟ ಹೊಗೆ ಆವರಿಸಿದೆ.

ಋತುಮಾನದಲ್ಲೇ ಕಳಪೆ ಗುಣಮಟ್ಟದ ವಾಯು..! ದೀಪಾವಳಿ ಆರಂಭಕ್ಕೂ ಮುನ್ನವೇ ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದೆ. ಹೊಗೆ ಕಾಟಕ್ಕೆ ಜನರೆಲ್ಲಾ ತತ್ತರಿಸಿ ಹೋಗಿದ್ದಾರೆ. ಶ್ವಾಸಕೋಸದ ಸಮಸ್ಯೆಗಳು, ಚರ್ಮರೋಗಗಳು ಜನರನ್ನ ಇನ್ನಿಲ್ಲದಂತೆ ಭಾದಿಸುತ್ತಿವೆ. ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಗೆ ಜನ ಹೈರಾಣಾಗಿದ್ದಾರೆ. ಅದ್ರಲ್ಲೂ, ದೆಹಲಿಯಲ್ಲಿ ಉಸಿರಾಡೋದೆ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಜೀವ ಉಳಿಸಿಕೊಳ್ಳಲು ಜನ ಊರು ಬಿಟ್ಟು ಹೋಗುತ್ತಿದ್ದಾರೆ. ಇದು ದೆಹಲಿಗೆ ಮಾತ್ರ ಸೀಮಿತವಾಗಿಲ್ಲ, ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಸೇರಿ ಪ್ರಧಾನಿ ಪ್ರತಿನಿಧಿಸುತ್ತಿರುವ ವಾರಣಾಸಿ ನಗರಗಳಲ್ಲೂ ಮಾಲಿನ್ಯ ಮಿತಿಮೀರಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಎಚ್ಚೆತ್ತ ಸರ್ಕಾರ..! ದೆಹಲಿಯಲ್ಲಿ ಪಟಾಕಿ ಹಾವಳಿಯಿಂದ ಮಾಲಿನ್ಯ ಇನ್ನಷ್ಟು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಚಾಟಿ ಬೀಸಿತ್ತು. ಹೀಗಾಗಿ, ಸ್ಥಳೀಯ ಆಡಳಿತಗಳು ಪಟಾಕಿ ಮೇಲೆ ನಿಗಾ ಇರಿಸಿವೆ. ಇದರ ಪರಿಣಾಮ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಗ್ರೀನ್ ಕ್ರ್ಯಾಕರ್ಸ್ ಅಥವಾ ಹಸಿರು ಪಟಾಕಿ ಉತ್ಪಾದನೆ ಮಾಡ್ತಿದ್ರೂ, ಶಿವಕಾಶಿಯಲ್ಲಿ ಪಟಾಕಿ ಉತ್ಪಾದನೆ ಜೋರಾಗಿಲ್ಲ. ಮತ್ತೊಂದ್ಕಡೆ ಆರೋಗ್ಯ ರಕ್ಷಣೆಗೆ ಒತ್ತು ನೀಡುತ್ತಿರುವ ಜನ, ಪಟಾಕಿಗಳಿಂದ ದೂರ ಉಳಿಯುತ್ತಿದ್ದಾರೆ.

Published On - 6:48 am, Sat, 26 October 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?