AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈ ರಸ್ತೆ ಅಪಘಾತ: ಸಂತ್ರಸ್ತ ಕುಟುಂಬಗಳ ಕಣ್ಣೀರು ಒರೆಸಿದ ಉದ್ಯಮಿ ಡಾ. ಶಮ್ಶೀರ್, 2.6 ಕೋಟಿ ರೂ. ಪರಿಹಾರ

ಯುಎಇ ಉದ್ಯಮಿ ಡಾ. ಶಮ್ಶೀರ್ ವಯಲಿಲ್ ದುಬೈ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ 2.6 ಕೋಟಿ ರೂ. ಆರ್ಥಿಕ ನೆರವು ನೀಡಿದ್ದಾರೆ. ಭಾರತೀಯ ಹಾಗೂ ಶ್ರೀಲಂಕಾದ ಕಾರ್ಮಿಕರ ಕುಟುಂಬಗಳಿಗೆ ತಲಾ 26 ಲಕ್ಷ ರೂ. ಹಸ್ತಾಂತರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸಾ ನೆರವು ಹಾಗೂ ಓರ್ವ ಬಾಲಕಿಗೆ ಉನ್ನತ ಶಿಕ್ಷಣದ ಭರವಸೆ ನೀಡಿ, ಡಾ. ಶಮ್ಶೀರ್ ಮಾನವೀಯತೆ ಮೆರೆದಿದ್ದಾರೆ. ಈ ನೆರವು ಸಂತ್ರಸ್ತ ಕುಟುಂಬಗಳಿಗೆ ಆಸರೆಯಾಗಿದೆ.

ದುಬೈ ರಸ್ತೆ ಅಪಘಾತ: ಸಂತ್ರಸ್ತ ಕುಟುಂಬಗಳ ಕಣ್ಣೀರು ಒರೆಸಿದ ಉದ್ಯಮಿ ಡಾ. ಶಮ್ಶೀರ್, 2.6 ಕೋಟಿ ರೂ. ಪರಿಹಾರ
ಹಣ
ನಯನಾ ರಾಜೀವ್
|

Updated on: Jul 06, 2026 | 10:36 AM

Share

ದುಬೈ, ಜುಲೈ 06: ಯುಎಇಯಲ್ಲಿರುವ ಭಾರತೀಯ ಉದ್ಯಮಿ ಮತ್ತು ವಿಪಿಎಸ್ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಡಾ. ಶಮ್ಶೀರ್ ವಯಲಿಲ್ ಅವರು ದುಬೈ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಘೋಷಿಸಿದ್ದ 2.6 ಕೋಟಿ ರೂ. ಆರ್ಥಿಕ ನೆರವು ಅಂತಿಮವಾಗಿ ಸಂತ್ರಸ್ತರ ಕೈಸೇರಿದೆ. ಡಾ. ಶಮ್ಶೀರ್ ಅವರ ಪ್ರತಿನಿಧಿಗಳು ತೆಲಂಗಾಣ ಮತ್ತು ಉತ್ತರ ಪ್ರದೇಶದ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ, ತಲಾ 26 ಲಕ್ಷ ರೂ. ಹಣದ ನೆರವು ನೀಡಿದ್ದಾರೆ. ಭಾರತದ ಕಾರ್ಮಿಕರಲ್ಲದೆ, ಶ್ರೀಲಂಕಾದ ಒಬ್ಬರು ಹಾಗೂ ಗಾಯಗೊಂಡ ನೇಪಾಳದ ಕಾರ್ಮಿಕರಿಗೂ ಈ ಪ್ಯಾಕೇಜ್ ಮೂಲಕ ಸಹಾಯ ಹಸ್ತ ಚಾಚಲಾಗಿದೆ.

ಕನಸುಗಳ ಬೆನ್ನಟ್ಟಿ ಹೋಗಿ ಮರಳಿ ಬಾರದಾದ ಜೀವಗಳು

ಈ ಅಪಘಾತ ಕೇವಲ ಅಂಕಿ-ಅಂಶಗಳಲ್ಲ, ಇದರ ಹಿಂದೆ ಬಡತನ ಗೆದ್ದು ಕುಟುಂಬವನ್ನು ಸಾಕಲು ಮರುಭೂಮಿಗೆ ಹೋದ ನತದೃಷ್ಟರ ಕಣ್ಣೀರಿನ ಕಥೆಗಳಿವೆ.

ಕೊನೆಯ ಪ್ರಯಾಣ ಎಂದಿದ್ದ ಅಬ್ದುಲ್: ಉತ್ತರ ಪ್ರದೇಶದ ಅಬ್ದುಲ್ ರಶೀದ್ ದುಬೈಗೆ ಹೊರಡುವಾಗ, ಇದೇ ನನ್ನ ಕೊನೆಯ ವಿದೇಶ ಪ್ರಯಾಣ, ಮರಳಿ ಬಂದ ಮೇಲೆ ಮತ್ತೆ ಹೋಗಲ್ಲ ಎಂದು ಹೆಂಡತಿ, ಮೂವರು ಹೆಣ್ಣುಮಕ್ಕಳಿಗೆ ಮಾತು ಕೊಟ್ಟು ಹೋಗಿದ್ದರು. ಆದರೆ ಕೇವಲ 2 ತಿಂಗಳಲ್ಲೇ ಅವರು ಶವವಾಗಿ ಮರಳಿದ್ದಾರೆ.

ಮೂರನೇ ಮಗನನ್ನೂ ಕಳೆದುಕೊಂಡ ತಂದೆ: ತೆಲಂಗಾಣದ ಅಬ್ದುಲ್ ರಫೀಕ್ ಅವರ ತಂದೆ ತತ್ತರಿಸಿಹೋಗಿದ್ದಾರೆ. 2015 ರಲ್ಲಿ ಹಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲೇ ಅವರ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ಈಗ ದುಬೈ ಅಪಘಾತದಲ್ಲಿ ಕೊನೆಯ ಆಸರೆಯಾಗಿದ್ದ ರಫೀಕ್ ಕೂಡ ದೂರವಾಗಿದ್ದಾರೆ.

ಮಗಳ ಮದುವೆ, ಮಗನ ಕಾಯಿಲೆ: ತೆಲಂಗಾಣದ 51 ವರ್ಷದ ಸಲೀಂ ಸಯ್ಯದ್ ಕೇವಲ ಎರಡುವರೆ ತಿಂಗಳ ಹಿಂದಷ್ಟೇ ದುಬೈಗೆ ಹೋಗಿದ್ದರು. ಮಗಳ ಮದುವೆ ಮಾಡಬೇಕು, ಅನಾರೋಗ್ಯ ಪೀಡಿತ ಮಗನಿಗೆ ಚಿಕಿತ್ಸೆ ಕೊಡಿಸಬೇಕು ಎಂಬ ಅವರ ಕನಸುಗಳು ಅರ್ಧಕ್ಕೇ ನಿಂತಿವೆ.

ಮಗಳ ಭವಿಷ್ಯಕ್ಕೆ ಬೆಳಕಾದ ಒಂದು ವಿಡಿಯೋ ಕಾಲ್

ಈ ಕರುಣಾಜನಕ ಘಟನೆಯ ನಡುವೆ ಒಂದು ಭರವಸೆಯ ಕಿರಣ ಮೂಡಿದೆ. ಉತ್ತರ ಪ್ರದೇಶದ ಮೌ ಜಿಲ್ಲೆಯ ಮಾರ್ಕಂಡೇಯ ಚೌಹಾಣ್ ಎಂಬುವವರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ 17 ವರ್ಷದ ಮಗಳು ಅಂಕಿತಾ ಇತ್ತೀಚೆಗಷ್ಟೇ 12ನೇ ತರಗತಿ ಮುಗಿಸಿದ್ದಾಳೆ.

ಭೇಟಿಯ ವೇಳೆ ಡಾ. ಶಮ್ಶೀರ್ ಅವರು ವಿಡಿಯೋ ಕಾಲ್ ಮೂಲಕ ಅಂಕಿತಾಳೊಂದಿಗೆ ಮಾತನಾಡಿದರು. ತನಗೆ ಬಿಎಸ್‌ಸಿ ನರ್ಸಿಂಗ್ (B.Sc Nursing) ಓದುವ ಆಸೆಯಿದೆ ಎಂದು ಅಂಕಿತಾ ಕಣ್ಣೀರು ಹಾಕಿದಾಗ, ಡಾ. ಶಮ್ಶೀರ್ ಆಕೆಗೆ ಧೈರ್ಯ ತುಂಬಿದ್ದಾರೆ.

ನೀನು ಹಣದ ಚಿಂತೆ ಮಾಡದೆ ಧೈರ್ಯವಾಗಿ ಓದು. ನಿನ್ನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ನಾವೇ ಭರಿಸುತ್ತೇವೆ. ಓದು ಮುಗಿದ ನಂತರ ನಿನಗೆ ಯುಎಇನಲ್ಲೇ ಕೆಲಸದ ಅವಕಾಶವನ್ನೂ ಮಾಡಿಕೊಡುತ್ತೇವೆ. ನಿನ್ನ ಸಾಧನೆಯ ಮೂಲಕ ನಿಮ್ಮ ತಂದೆ ಪ್ರತಿದಿನ ಬದುಕಿರುತ್ತಾರೆ  ಎಂದು ಶಮ್ಶೀರ್ ಧೈರ್ಯ ತುಂಬಿದ್ದಾರೆ.

ಗಾಯಾಳುಗಳಿಗೂ ಚಿಕಿತ್ಸಾ ನೆರವು

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಕಾರ್ಮಿಕರಿಗೂ (8 ಭಾರತೀಯರು, 1 ನೇಪಾಳಿ) ಗಾಯದ ತೀವ್ರತೆಗೆ ಅನುಗುಣವಾಗಿ ಆರ್ಥಿಕ ನೆರವು ನೀಡಲಾಗಿದೆ. ಕೆಲವರಿಗೆ ಯುಎಇನಲ್ಲೇ ನಗದು ನೀಡಲಾಗಿದ್ದರೆ, ಭಾರತಕ್ಕೆ ಮರಳಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಹಣದಿಂದ ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಅನಾಥವಾದ ಬಡ ಕುಟುಂಬಗಳಿಗೆ ಈ ಮಾನವೀಯ ನೆರವು ಒಂದು ದೊಡ್ಡ ಆಸರೆಯಾಗಬಹುದು ಎಂದು ಅವರ ಅಭಿಪ್ರಾಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?