AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ರಕ್ಷಿಸಿದ ಸಾಹಸಿ ಬಾಲಕಿ

ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ಕಾಪಾಡಿ ಬಾಲಕಿಯೊಬ್ಬಳು ಇದೀಗ ಫೇಮಸ್ ಆಗಿದ್ದಾಳೆ. ಕೈಯಲ್ಲಿ ಬಂದೂಕು, ಕತ್ತಿ, ಕೊಡಲಿಗಳನ್ನು ಹಿಡಿದಿದ್ದ ಗುಂಪಿನಿಂದ ತಂದೆಯನ್ನು ರಕ್ಷಿಸಿಕೊಳ್ಳುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ.

ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ರಕ್ಷಿಸಿದ ಸಾಹಸಿ ಬಾಲಕಿ
ನಯನಾ ರಾಜೀವ್
|

Updated on: Aug 07, 2024 | 2:30 PM

Share

ಸುತ್ತುವರೆದಿದ್ದ ಶಸ್ತ್ರಧಾರಿಗಳಿಂದ ಬಾಲಕಿಯೊಬ್ಬಳು ತಂದೆಯನ್ನು ಕಾಪಾಡಿ ಸಾಹಸ ಮೆರೆದಿದ್ದಾಳೆ. ಛತ್ತೀಸ್​ಗಢದ ಬಸ್ತಾರ್ ಜಿಲ್ಲೆಯ ನಾರಾಯಣಪುರದ ಹಳ್ಳಿಯೊಂದರಲ್ಲಿ ಎಂಟು ಶಸ್ತ್ರಧಾರಿಗಳ ಗುಂಪು ವ್ಯಕ್ತಿಯೊಬ್ಬರನ್ನು ಸುತ್ತುವರೆದಿತ್ತು. ಗುಂಪೊಂದು ಸೋಮಧರ್ ಎಂಬುವವರ ಹುಡುಕಾಟ ನಡೆಸಿತ್ತು, ಮನೆಗೆ ನುಗ್ಗಿ ಕೊಡಲಿಯಿಂದ ಹಲ್ಲೆ ನಡೆಸಿದ್ದರು. ತಂದೆಗೆ ಊಟ ಬಡಿಸಲು ಹೊರಟಿದ್ದ ಬಾಲಕಿ ತಂದೆಯ ಎದುರು ನಿಂತಿದ್ದ ಗುಂಪು ನೋಡಿ ಬೆಚ್ಚಿಬಿದ್ದಿದ್ದಾಳೆ.

ನಾನು ಕಿಟಕಿಯಿಂದ ನೋಡಿದಾಗ ಮುಸುಕುಧಾರಿಗಳು ಕೊಡಲಿ ಹಿಡಿದುಕೊಂಡು ಹೋಗುತ್ತಿರುವುದು ಕಂಡಿದ್ದಳು ಅವರಲ್ಲಿ ಒಬ್ಬರ ಬಳಿ ಬಂದೂಕಿತ್ತು. ಕೊಡಲಿ ಹಿಡಿದ ದಾಳಿಕೋರನ ಕಡೆಗೆ ನುಗ್ಗಿ ಆಯುಧವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಆದರೆ ವ್ಯಕ್ತಿಯ ಮೇಲಿನ ದಾಳಿ ವಿಳಂಬವಾಯಿತು.

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಬಂದು ಗ್ಯಾಂಗ್​ನ ಹಿಡಿಯಲು ಪ್ರಯತ್ನಿಸಿದಾಗ ಅವರು ಓಡಿ ಹೋಗಿದ್ದಾರೆ. ಬಾಲಕಿಯ ತಂದೆಯ ಎದೆಗೆ ಗಾಯವಾಗಿದೆ, ಅವರ ಸ್ಥಿತಿ ಸ್ಥಿರವಾಗಿದೆ.

ಮತ್ತಷ್ಟು ಓದಿ: ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರಿಗೇ ಬ್ಲಾಕ್ ಮೇಲ್ ಮಾಡ್ತಿದ್ದ ಖತರ್ನಾಕ್ ಆಸಾಮಿ ಅಂದರ್​​

ನಾನು ಅವರ ಕಡೆ ಓಡಲಾರಂಭಿಸಿದೆ, ಒಬ್ಬ ವ್ಯಕ್ತಿ ತನ್ನ ಕೊಡಲಿಯನ್ನು ಎತ್ತಿ ತಂದೆಯ ಎದೆಯ ಮೇಲೆ ಇಳಿಸುತ್ತಿರುವುದನ್ನು ನೋಡಿದ್ದೆ. ನಾನು ಕೇವಲ ಒಂದು ಸೆಕೆಂಡ್ ತಡಮಾಡಿದ್ದರೂ ತಂದೆ ಬದುಕುತ್ತಿರಲಿಲ್ಲ. ನಾನು ಗಲಿಬಿಲಿಯಲ್ಲಿ ಅವರ ಮೇಲೆ ಹಾರಿ ಕೊಡಲಿಯನ್ನು ದೂರ ಎಸೆದೆ ಎಂದು ಬಾಲಕಿ ಹೇಳಿದ್ದಾಳೆ.

ಕೊಲೆ ಯತ್ನದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾರಾಯಣಪುರ ಪ್ರಭಾತ್ ಸಿಂಗ್ ಹೇಳಿದ್ದಾರೆ. ಕುಟುಂಬದವರು ಮಾವೋವಾದಿಗಳ ಕೈವಾಡವನ್ನು ಶಂಕಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ