AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ಎಸ್ಎಲ್​​​ವಿ ಉಡ್ಡಯನ ಮಾಡಿದ ಉಪಗ್ರಹಗಳನ್ನು ಇನ್ನು ಬಳಸಲು ಸಾಧ್ಯವಿಲ್ಲ:ಇಸ್ರೋ

ಸಮಿತಿಯು ಈ ಬಗ್ಗೆ ಪರಿಶೀಲಿಸುತ್ತಿದ್ದು ಶಿಫಾರಸುಗಳನ್ನು ಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಶಿಫಾರಸುಗಳ ಅನುಷ್ಠಾನದೊಂದಿಗೆ "ಇಸ್ರೋ ಶೀಘ್ರದಲ್ಲೇ SSLV-D2 ನೊಂದಿಗೆ ಮರಳಲಿದೆ ಎಂದು ಹೇಳಿದೆ. 

ಎಸ್ಎಸ್ಎಲ್​​​ವಿ ಉಡ್ಡಯನ ಮಾಡಿದ ಉಪಗ್ರಹಗಳನ್ನು ಇನ್ನು ಬಳಸಲು ಸಾಧ್ಯವಿಲ್ಲ:ಇಸ್ರೋ
ಎಸ್ಎಸ್ಎಲ್​​ವಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 07, 2022 | 4:22 PM

Share

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹನ ಹೊತ್ತೊಯ್ದ ಉಪಗ್ರಹಗಳನ್ನು “ಇನ್ನು ಬಳಸಲಾಗುವುದಿಲ್ಲ” ಎಂದು ಹೇಳಿದೆ. ಎಸ್ಎಸ್ಎಲ್​​​ವಿ ಡಿ 1 ಈ ಉಪಗ್ರಹಗಳನ್ನು ವೃತ್ತಾಕಾರದ ಕಕ್ಷೆಯಲ್ಲಿರಿಸುವ ಬದಲು ದೀರ್ಘವೃತ್ತದ ಕಕ್ಷೆಯಲ್ಲಿರಿಸಿದೆ ಎಂದು ಹೇಳಿದೆ. ಸೆನ್ಸರ್ ವೈಫಲ್ಯವನ್ನು ಗುರುತಿಸಲು ಮತ್ತು ರಕ್ಷಣೆ ಕ್ರಮಕ್ಕೆ ಹೋಗಲು ಉಂಟಾದ ವೈಫಲ್ಯವು ವಿಚಲಿತವಾಗಲು ಕಾರಣವಾಯಿತು ಎಂದು ಇಸ್ರೋ ಹೇಳಿದೆ. ಸಮಿತಿಯು ಈ ಬಗ್ಗೆ ಪರಿಶೀಲಿಸುತ್ತಿದ್ದು ಶಿಫಾರಸುಗಳನ್ನು ಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಶಿಫಾರಸುಗಳ ಅನುಷ್ಠಾನದೊಂದಿಗೆ “ಇಸ್ರೋ ಶೀಘ್ರದಲ್ಲೇ SSLV-D2 ನೊಂದಿಗೆ ಮರಳಲಿದೆ ಎಂದು ಹೇಳಿದೆ.  ಎಸ್ಎಸ್​​ಎಲ್​​ವಿ ಡಿ-1 (SSLV-D1)ಉಪಗ್ರಹಗಳನ್ನು 356 ಕಿಮೀ ವೃತ್ತಾಕಾರದ ಕಕ್ಷೆಗೆ ಬದಲಾಗಿ 356 ಕಿಮೀ x 76 ಕಿಮೀ ದೀರ್ಘವೃತ್ತದ ಕಕ್ಷೆಗೆ ಇರಿಸಿತು. ಈ ಉಪಗ್ರಹಗಳನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಸಮಸ್ಯೆಯನ್ನು ಪತ್ತೆ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.

ಭಾನುವಾರ ಬೆಳಗ್ಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್ಎಸ್ಎಲ್​​​ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 75 ಶಾಲೆಗಳ ವಿದ್ಯಾರ್ಥಿಗಳು ರೂಪಿಸಿರುವ 50 ಗ್ರಾಂ ತೂಕದ 750 ಪೇಲೋಡ್​​ಗಳನ್ನು (ಸಣ್ಣ ಉಪಗ್ರಹಗಳು)ಹೊತ್ತ ಎಸ್ಎಸ್ಎಲ್​​​ವಿ ನಭಕ್ಕೆ ಚಿಮ್ಮಿತ್ತು. ಇದಾದ ನಂತರ ಎಸ್ಎಸ್ಎಲ್​​​ವಿ ಸಿಗ್ನಲ್ ಕಳೆದುಕೊಂಡಿದೆ ಎಂದು ಇಸ್ರೋ ಹೇಳಿತ್ತು.

ಶ್ರೀಹರಿಕೋಟಾದಲ್ಲಿರುವ ಭಾರತದ ಏಕೈಕ ಬಾಹ್ಯಾಕಾಶ ನಿಲ್ದಾಣದಿಂದ ಬೆಳಿಗ್ಗೆ 9:18 ಕ್ಕೆ ಉಪಗ್ರಹ ಉಡಾವಣೆ ಆಗಿದ್ದು, ಕೋಸ್ಟಿಂಗ್ ಹಂತದಲ್ಲಿ ಮ್ಯಾಪ್ ಮಾಡಲಾದ ಪಥದಿಂದ ಸ್ವಲ್ಪ ವಿಚಲನ ಕಂಡುಬಂದಿದೆ. ಮೂರನೇ ಹಂತದ ಪ್ರತ್ಯೇಕತೆ, VTM ಇಗ್ನಿಷನ್ ಮತ್ತು ಉಪಗ್ರಹ ಇಂಜೆಕ್ಷನ್ ಬಾಹ್ಯಾಕಾಶ ಸಂಸ್ಥೆಯ ಮಿಷನ್ ಬ್ರೋಷರ್‌ನಲ್ಲಿ ಉಲ್ಲೇಖಿಸಿದ್ದಕ್ಕಿಂತ ಸ್ವಲ್ಪ ವಿಳಂಬವಾಗಿದೆ.

ಲಿಫ್ಟ್-ಆಫ್ ಆದ ನಂತರ 738 ಮತ್ತು 788 ಸೆಕೆಂಡ್‌ಗಳಲ್ಲಿ ಉಪಗ್ರಹಗಳು ಬೇರ್ಪಟ್ಟ ಮೇಲೆ  ಮಿಷನ್ ಕಂಟ್ರೋಲ್ ರೂಂಗೆ ಯಾವುದೇ ಮಾಹಿತಿ ಸಿಗಲಿಲ್ಲ. ಎಲ್ಎಸ್ಎಲ್​​ವಿ ಡಿ1 ಮೊದಲ ಹಾರಾಟ ಇದೀಗ ಪೂರ್ಣಗೊಂಡಿದೆ. ಎಲ್ಲಾ ಹಂತಗಳು ನಿರೀಕ್ಷೆಯಂತೆ ಕಾರ್ಯವಹಿಸಿವೆ. ಸ್ಥಿರವಾದ ಕಕ್ಷೆಯನ್ನು ಸಾಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕಾರ್ಯಾಚರಣೆಯ ಫಲಿತಾಂಶವನ್ನು ತೀರ್ಮಾನಿಸಲು ನಾವು ಪ್ರಸ್ತುತ ಡೇಟಾವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸೋಮನಾಥ್ ಹೇಳಿದ್ದರು.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Sun, 7 August 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್