Kargil Vijay Diwas 2023: ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು

1999ನೇ ಇಸವಿ ಜು.26ರಂದು ಭಾರತದ ಸೈನೀಕರು ಅಪರೇಷನ್​​ ವಿಜಯ್​​ ಮೂಲಕ ಕಾರ್ಗಿಲ್​​ -ಡ್ರಾಸ್​​ ಭಾಗದದಲ್ಲಿ ಸೈನ್ಯ ಶೌರ್ಯವನ್ನು ಪ್ರದರ್ಶಿಸಿದರು.

Kargil Vijay Diwas 2023: ಕಾರ್ಗಿಲ್ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು
Follow us
|

Updated on:Jul 24, 2023 | 10:56 AM

ಜು.26 ದೇಶದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ, ನಮ್ಮ ಸೈನಿಕ ಸಾಹಸಕ್ಕೆ ಮತ್ತು ಶ್ರಮಕ್ಕೆ ಸಿಕ್ಕ ಮಹತ್ವ ವಿಜಯ ದಿನ. ಜು.26ರಂದು ದೇಶದ್ಯಾಂತ ಕಾರ್ಗಿಲ್​​ ವಿಜಯ ದಿವಸ್​​ (Kargil Vijay Diwas) ಅಥವಾ ಕಾರ್ಗಿಲ್​​ ವಿಜಯ ದಿನವನ್ನು ಆಚರಿಸಲಾಗುತ್ತದೆ. ಪಾಕಿಸ್ತಾನದ ಕುತಂತ್ರ ತಂತ್ರವನ್ನು ಸದೆಬಡಿದು , ಮತ್ತೆ ಭಾರತದ ಭಾಗವನ್ನು ಪಡೆದ ದಿನ. ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್​​ ವಿಜಯ್​​ ದಿವಸ್​​ ಎಂದು ದೇಶದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.

1999ನೇ ಇಸವಿ ಜು.26ರಂದು ಭಾರತದ ಸೈನೀಕರು ಅಪರೇಷನ್​​ ವಿಜಯ್​​ ಮೂಲಕ ಕಾರ್ಗಿಲ್​​ -ಡ್ರಾಸ್​​ ಭಾಗದದಲ್ಲಿ ಸೈನ್ಯ ಶೌರ್ಯವನ್ನು ಪ್ರದರ್ಶಿಸಿದರು. ಈ ನೆನಪಿಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಕಾರ್ಗಿಲ್ ಯುದ್ಧದ ಮೇಲೆ ಬೆಳಕು ಚೆಲ್ಲುವ 10 ಸಂಗತಿಗಳು:

1. ಕಾರ್ಗಿಲ್ ಸಂಘರ್ಷವು ಮೇ ಮತ್ತು ಜುಲೈ 1999ರ ನಡುವೆ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು.

2. ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಒಳನುಸುಳಲು ಪ್ರಯತ್ನಸಿದಕ್ಕೆ ಈ ಯುದ್ಧವು ಸಂಭವಿಸಿತ್ತು.

3. “ಆಪರೇಷನ್ ವಿಜಯ್” ಮೂಲಕ ಆಕ್ರಮಿತ ಕಾರ್ಗಿಲ್ ಎತ್ತರದ ಶಿಖರವನ್ನು ಮರಳಿ ವಶಪಡಿಸಿಕೊಳ್ಳಲು ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ನಡೆಸಿತ್ತು.

4. ಕಾರ್ಗಿಲ್ ಯುದ್ಧವು ತುಂಬಾ ಭೀಕರ ಮತ್ತು ಅತ್ಯಂತ ಗಂಭೀರವಾಗಿತ್ತು. ದೇಶದ ಸೈನಿಕರು ಪಾಕಿಸ್ತಾನ ಸೈನಿಕರ ವಿರೋಧ ಹೋರಾಡಲು ಎತ್ತರ ಶಿಖರವನ್ನು ಹತ್ತಬೇಕಿತ್ತು, ಭಾರತದ ಕೆಲವು ಚೆಕ್​​ಪೋಸ್ಟ್‌ಗಳು 18,000 ಅಡಿಗಳಲ್ಲಿ ನೆಲೆಗೊಳಿಸಬೇಕಿತ್ತು. ಇದು ಯುದ್ಧಕ್ಕೆ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ.

5. ಈ ಸಂಘರ್ಷದಿಂದ ಎರಡೂ ಕಡೆಗಳಲ್ಲಿ ಹಲವಾರು ಸಾವು ನೋವುಗಳು ಸಂಭವಿಸಿತ್ತು. ಸುಮಾರು 500 ಭಾರತೀಯ ಮತ್ತು 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡರು.

6. ಈ ಯುದ್ಧದಲ್ಲಿ ಫಿರಂಗಿ, ವಾಯು ಶಕ್ತಿ ಮತ್ತು ಪದಾತಿ ದಳದ ಕಾರ್ಯಾಚರಣೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು.

7. ಭಾರತೀಯ ವಾಯುಪಡೆಯು ಸಂಘರ್ಷದ ಸಮಯದಲ್ಲಿ ವೈಮಾನಿಕ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು, ಶತ್ರುಗಳನ್ನು ವ್ಯೂಹಾತ್ಮಕ ಸ್ಥಾನಗಳಿಂದ ಹೊರಹಾಕಲು ನಿರ್ಣಾಯಕ ವಾಯುದಾಳಿಗಳನ್ನು ನಡೆಸಿತು.

8. ಭಾರತೀಯ ಸೇನಾ ಅಧಿಕಾರಿಯಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರು “ಯೇ ದಿಲ್ ಮಾಂಗೆ ಮೋರ್” ಎಂಬ ಈ ಸಾಲುಗಳು ಸೈನ್ಯದಲ್ಲಿ ಮತ್ತಷ್ಟು ಯುದ್ಧಕ್ಕೆ ಶಕ್ತಿಯನ್ನು ನೀಡಿತ್ತು. ನಂತರ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಗಾಗಿ ಈ ಸಾಲುಗಳ ಮೂಲಕ ಗೌರವಿಸಲಾಗಿತ್ತು.

9. ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875ರ ಆಯಕಟ್ಟಿನ ಶಿಖರಗಳನ್ನು ಮತ್ತೆ ವಶಪಡಿಸಿಕೊಂಡಿತು.

10. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಎರಡು ದೇಶಗಳ ಸೈನ್ಯ ಕಾರ್ಗಿಲ್ ಯುದ್ಧದಲ್ಲಿ ನೇರ ಮಿಲಿಟರಿ ಸಂಘರ್ಷದಲ್ಲಿ ತೊಡಗಿಕೊಂಡಿತ್ತು.

11. ಈ ಸಂಘರ್ಷವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆಯಿತು, ಈ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿವಿಧ ದೇಶಗಳು ಪಾಕಿಸ್ತಾನವನ್ನು ಒತ್ತಾಯಿಸಿದವು.

ಇದನ್ನೂ ಓದಿ: ಕಾರ್ಗಿಲ್​ ಯುದ್ಧದ ನೆನಪು;​ ಈ ಸಿನಿಮಾಗಳನ್ನು ಮಿಸ್​ ಮಾಡಿಕೊಳ್ಳಬೇಡಿ

ಕಾರ್ಗಿಲ್​​ ಯುದ್ಧದ ಹಂತಗಳು

ಮೇ 3, 1999- ಕಾರ್ಗಿಲ್‌ನಲ್ಲಿ ಸ್ಥಳೀಯ ಕುರುಬರಿಂದ ಈ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಉಗ್ರಗಾಮಿಗಳ ಒಳನುಸುಳುವಿಕೆ ಬಗ್ಗೆ ಭಾರತೀಯ ಸೇನೆಗೆ ಎಚ್ಚರಿಕೆ ನೀಡಿತು.

ಮೇ 5, 1999- ಪಾಕಿಸ್ತಾನಿ ಪಡೆಗಳು 5 ಭಾರತೀಯ ಸೇನಾ ಯೋಧರನ್ನು ಕೊಂದರು.

ಮೇ 10, 1999- ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿತು. ಕಾರ್ಗಿಲ್‌ನಲ್ಲಿ ಭಾರತೀಯ ಸೇನೆಯ ಮದ್ದುಗುಂಡು ನಿಕ್ಷೇಪಗಳ ಮೇಲೆ ಪಾಕಿಸ್ತಾನಿ ಸೇನೆಯು ದಾಳಿ ನಡೆಸಿತು.

ಮೇ 26, 1999- ಭಾರತೀಯ ಸೇನೆಯು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು.

ಮೇ 27, 1999- IAF, MiG-27 ಪತನ. 4 ವಾಯುಪಡೆ ಸಿಬ್ಬಂದಿ ಸಾವು. ಪಾಕಿಸ್ತಾನವು ಪೈಲಟ್​​ಗಳನ್ನು ಯುದ್ಧ ಕೈದಿ ಎಂದು ಸೆರೆಹಿಡಿಯುತ್ತದೆ.

ಮೇ 31, 1999- ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್‌ನಲ್ಲಿ “ಯುದ್ಧದಂತಹ ಪರಿಸ್ಥಿತಿ” ಎಂದು ಘೋಷಿಸಿದರು.

ಜೂನ್ 1, 1999- USA ಮತ್ತು ಫ್ರಾನ್ಸ್ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿತು.

ಜೂನ್ 5, 1999- ಭಾರತೀಯ ಸೇನೆಯು ಪಾಕಿಸ್ತಾನದ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸುವ ದಾಖಲೆಗಳನ್ನು ಬಿಡುಗಡೆ ಮಾಡಿತು.

ಜೂನ್ 9, 1999- ಭಾರತೀಯ ಸೇನೆಯು ಬಟಾಲಿಕ್ ಸೆಕ್ಟರ್‌ನಲ್ಲಿ ಎರಡು ಪ್ರಮುಖ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಂಡಿತು.

ಜೂನ್ 10, 1999- ಪಾಕಿಸ್ತಾನವು ಜಾಟ್ ರೆಜಿಮೆಂಟ್‌ನ 6 ಭಾರತೀಯ ಸೈನಿಕರ ವಿರೂಪಗೊಂಡ ದೇಹಗಳನ್ನು ಹಿಂದಿರುಗಿಸುತ್ತದೆ.

ಜೂನ್ 13, 1999- ಸಂಘರ್ಷದ ದಿಕ್ಕನ್ನು ಬದಲಾಯಿಸುವ ನಿರ್ಣಾಯಕ ಟೊಲೊಲಿಂಗ್ ಶಿಖರವನ್ನು ಭಾರತವು ಮತ್ತೆ ಪಡೆದುಕೊಂಡಿತು. ಕಾರ್ಗಿಲ್‌ಗೆ ಪ್ರಧಾನಿ ವಾಜಪೇಯಿ ಭೇಟಿ ನೀಡಿದ್ದು ಈ ಸಮಯದಲ್ಲೇ

ಜೂನ್ 15, 1999- ಯುಎಸ್ ಅಧ್ಯಕ್ಷರು ಬಿಲ್ ಕ್ಲಿಂಟನ್, ಪಾಕಿಸ್ತಾನಿ ಪಡೆಗಳನ್ನು ಹಿಂಪಡೆಯಲು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಒತ್ತಾಯಿಸಿದರು.

ಜೂನ್ 20, 1999- ಭಾರತೀಯ ಸೇನೆಯು 11 ಗಂಟೆಗಳ ಯುದ್ಧದ ನಂತರ ಟೈಗರ್ ಹಿಲ್ ಬಳಿ ಪಾಯಿಂಟ್ 5060 ಮತ್ತು ಪಾಯಿಂಟ್ 5100 ಅನ್ನು ವಶಪಡಿಸಿಕೊಂಡಿತು. ಜುಲೈ 5ರ ತನಕ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು.

ಜುಲೈ 5, 1999- ಯುಎಸ್​​​ ಅಧ್ಯಕ್ಷ ಬಿಲ್ ಕ್ಲಿಂಟನ್​​ ನವಾಜ್ ಷರೀಫ್ ಅವರನ್ನು ಭೇಟಿಯಾದರು. ಕಾರ್ಗಿಲ್‌ನಿಂದ ಪಾಕ್ ಪಡೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪಾಕ್ ಪ್ರಧಾನಿ ಷರೀಫ್ ಘೋಷಿಸಿದ್ದಾರೆ.

ಜುಲೈ 11, 1999- ಪಾಕಿಸ್ತಾನಿ ಪಡೆಗಳು ಹಿಂದೆ ಸರಿಯಲು ಪ್ರಾರಂಭಿಸಿದವು. ಭಾರತೀಯ ಸೇನೆಯು ಬಟಾಲಿಕ್‌ನಲ್ಲಿ ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡವು.

ಜುಲೈ 14, 1999- ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಯಶಸ್ಸನ್ನು ಘೋಷಿಸಿತು.

ಜುಲೈ 26, 1999 – ಕಾರ್ಗಿಲ್ ಯುದ್ಧವು ಕೊನೆಗೊಳ್ಳುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:54 am, Mon, 24 July 23

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್