ಲೋಕಸಭಾ ಚುನಾವಣೆ: ಟಿಡಿಪಿ ಹಾಗೂ ಬಿಜೆಪಿ ಮತ್ತೆ ಒಂದಾಗಲಿದೆ ಎಂದ ವೈಎಸ್​ಆರ್​ಸಿಪಿ ಸಂಸದ

ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ. ಜೂನ್ 2014 ರಿಂದ ಮೇ 2019 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಚಂದ್ರಬಾಬು ನಾಯ್ಡು ಅವರು ಮೊದಲು NDA ಯ ಭಾಗವಾಗಿದ್ದರು. ಈಗ ಮತ್ತೆ ಎನ್​ಡಿಎಗೆ ಸೇರುವ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ: ಟಿಡಿಪಿ ಹಾಗೂ ಬಿಜೆಪಿ ಮತ್ತೆ ಒಂದಾಗಲಿದೆ ಎಂದ ವೈಎಸ್​ಆರ್​ಸಿಪಿ ಸಂಸದ
ನರೇಂದ್ರ ಮೋದಿImage Credit source: Business Today
Follow us
| Updated By: Digi Tech Desk

Updated on:Feb 14, 2024 | 3:16 PM

ಲೋಕಸಭೆ ಚುನಾವಣೆ(Lok Sabha Election) ಸಮೀಪಿಸುತ್ತಿದ್ದಂತೆ ರಾಜಕೀಯ ಸಮೀಕರಣಗಳು ಬದಲಾಗುತ್ತಿವೆ. ಟಿಡಿಪಿ(TDP) ಹಾಗೂ ಬಿಜೆಪಿ(BJP) ಮೈತ್ರಿ ಯಾವುದೇ ಕ್ಷಣದಲ್ಲಿ ಸಂಭವಿಸಬಹುದು ಎಂದು ವೈಎಸ್​ಆರ್​ಸಿಪಿ ಸಂಸದ ಕೆ ರಘುರಾಮ ಕೃಷ್ಣರಾಜು ಹೇಳಿದ್ದಾರೆ. 1995 ರಿಂದ 2004 ರವರೆಗೆ ಮತ್ತು ನಂತರ ಜೂನ್ 2014 ರಿಂದ ಮೇ 2019 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚಂದ್ರಬಾಬು ನಾಯ್ಡು(Chandrababu Naidu) ಅವರು ಮೊದಲು NDA ಯ ಭಾಗವಾಗಿದ್ದರು ಆದರೆ ಅವರು ಆಂಧ್ರ ಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನದ ಬಗ್ಗೆ 2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮೈತ್ರಿಯನ್ನು ತೊರೆದರು.

ಕೆಲವೆಡೆ ಪಕ್ಷಗಳು ಒಡೆಯುತ್ತಿವೆ, ಇನ್ನೂ ಕೆಲವೆಡೆ ಪಕ್ಷಗಳು ಮತ್ತೊಂದು ಪಕ್ಷದ ಜತೆ ಸೇರುತ್ತಿದೆ. ಎನ್‌ಡಿಎಯನ್ನು ಮೂಲೆಗುಂಪು ಮಾಡಲು ರೂಪುಗೊಂಡಿದ್ದ ಇಂಡಿಯಾ ವಿರೋಧ ಪಕ್ಷಗಳ ಮೈತ್ರಿಕೂಟ ಈಗ ಒಡೆಯಲು ಶುರುವಾಗಿದೆ. ಆಂಧ್ರದಲ್ಲೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಎಎನ್‌ಐ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಚಂದ್ರಬಾಬು ನಾಯ್ಡು ಅಮಿತ್ ಶಾ ಅವರ ನಿವಾಸದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ ಮತ್ತು ನಂತರ ಮೈತ್ರಿ ಘೋಷಿಸಬಹುದು. ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಯ ನಂತರ ಈಗ ಅಲ್ಲಿ ಒಟ್ಟು 25 ಲೋಕಸಭಾ ಸ್ಥಾನಗಳಿವೆ.

ಇಲ್ಲಿ ಬಿಜೆಪಿ 10 ಸ್ಥಾನ ಕೇಳಿದೆ ಎಂಬ ನಂಬಿಕೆ ಇದೆ. ಆದರೆ, ಟಿಡಿಪಿ ಈಗಾಗಲೇ ನಟ ಮತ್ತು ನಾಯಕ ಪವನ್ ಕಲ್ಯಾಣ್ ಅವರ ಜನಸೇನಾ ಜೊತೆ ಮೈತ್ರಿ ಮಾಡಿಕೊಂಡಿದೆ. 3 ಲೋಕಸಭಾ ಸ್ಥಾನಗಳನ್ನು ಜನಸೇನೆಗೆ ಬಿಟ್ಟುಕೊಡುವುದಾಗಿ ಟಿಡಿಪಿ ಘೋಷಿಸಿದೆ. ಹೀಗಿರುವಾಗ ಬಿಜೆಪಿಗೆ 10 ಸ್ಥಾನ ನೀಡುವುದು ಟಿಡಿಪಿಗೆ ಕಷ್ಟ ಎನಿಸುತ್ತಿದೆ.

ಮತ್ತಷ್ಟು ಓದಿ: 11 ಪ್ರಬಲ ಸ್ಥಾನಗಳೊಂದಿಗೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಉತ್ತಮ ಆರಂಭ: ಅಖಿಲೇಶ್ ಯಾದವ್

ನಿತೀಶ್​ ಕುಮಾರ್ ಮೋದಿ ಭೇಟಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಜನವರಿ 28 ರಂದು ಮಹಾಮೈತ್ರಿಕೂಟವನ್ನು ತೊರೆದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮರಳಿದ ನಂತರ ನಿತೀಶ್ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮೊದಲ ಬಾರಿಗೆ ಸಭೆ ನಡೆಸಿದರು. ಫೆಬ್ರವರಿ 12 ರಂದು ನಿತೀಶ್ ಸರ್ಕಾರ ವಿಶ್ವಾಸ ಮತವನ್ನು ಎದುರಿಸಬೇಕಾಗಿದೆ.

ಒಂದೆಡೆ ಎಐಎಡಿಎಂಕೆ ನಾಯಕರು ಬಿಜೆಪಿ ಸೇರಿದ್ದಾರೆ, ಇನ್ನೊಂದೆಡೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ, ಇತ್ತ ಅರವಿಂದ್ ಕೇಜ್ರಿವಾಲ್ ಕೂಡ ನಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಇಂಡಿಯಾ ಒಕ್ಕೂಟವನ್ನು ಕಟ್ಟಿ ಮುನ್ನಡೆಸಿದ್ದ ನಿತೀಶ್​ ಕುಮಾರ್ ಕೂಡ ಅಲ್ಲಿಂದ ಹೊರನಡೆದಿದ್ದಾರೆ. ಹಾಗೆಯೇ ಆರ್​ಎಲ್​ಡಿ ಕೂಡ ಶೀಘ್ರ ಎನ್​ಡಿಎಗೆ ಸೇರ್ಪಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಂಎನ್​ಎಸ್ ಮಹಾರಾಷ್ಟ್ರದಲ್ಲಿ ಎನ್​ಡಿಎ ಸೇರಲು ಪ್ರಯತ್ನಿಸುತ್ತಿದೆ ಇನ್ನು ಮಹಾರಾಷ್ಟ್ರದಲ್ಲಿ ನೋಡಿದರೆ ಅಲ್ಲಿಯೂ ಬಿಜೆಪಿ ತನ್ನ ಪ್ರಬಲ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ. ಮೊದಲು ಶಿವಸೇನೆ ಒಡೆದು ಏಕನಾಥ್ ಶಿಂದೆ ಪಾಳಯ ಎನ್​ಡಿಎಗೆ ಸೇರಿತು. ರಾಜ್ಯದಲ್ಲಿ ಸರ್ಕಾರ ರಚನೆಯಾಯಿತು.

ಮತ್ತಷ್ಟು ಓದಿ: ಬಿಹಾರ ರಾಜಕೀಯ ಬಿಕ್ಕಟ್ಟು; ಲಾಲು ಪ್ರಸಾದ್ ಯಾದವ್ ಲೆಕ್ಕಾಚಾರ ಏನಿದೆ?

ಎನ್​ಸಿಪಿ ಪಾಳಯದಿಂದ ಅಜಿತ್ ಪವಾರ್ ಕೂಡ 30ಕ್ಕೂ ಅಧಿಕ ಶಾಸಕರೊಂದಿಗೆ ಎನ್​ಡಿಎ ಸೇರಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ನಡುವಿನ ಒಡಕು ಬಿಜೆಪಿಗೆ ನೇರ ಲಾಭವಾಗಿದೆ.

ರಾಜ್ ಠಾಕ್ರೆ ಅವರ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕೂಡ ಎನ್​ಡಿಎ ಜತೆ ಕೈಜೋಡಿಸಬಹುದು ಎನ್ನಲಾಗಿದೆ. ಮಂಗಳವಾರ ಎಂಎನ್​ಎಸ್ ನಾಯಕರು ಬಿಜೆಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾದರು.

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಎಂಎನ್​ಎಸ್​ ನಾಯಕರು ಫಡ್ನವಿಸ್ ಅವರೊಂದಿಗೆ ಚರ್ಚಿಸಿದ್ದಾರೆ. ರಾಜ್ ಠಾಕ್ರೆ ಸೀಟು ಹಂಚಿಕೆ ಜವಾಬ್ದಾರಿಯನ್ನು ಮೂವರು ನಂಬಿಕಸ್ಥ ನಾಯಕರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಪ್ರಧಾನಿ ಮೋದಿ-ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ

ಬಿಜೆಪಿ ಮತ್ತು ಎಂಎನ್​ಎಸ್ ಜತೆ ಮೈತ್ರಿಯಾದರೆ ಎಂಎನ್​ಎಸ್​ಗೆ ಹೆಚ್ಚಿನ ಲಾಭವಾಗಲಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಎಂಎನ್​ಎಸ್ ಕೆಲವೇ ಸ್ಥಾನಗಳಿಗೆ ಸೀಮಿತವಾಗಿದೆ. ಸಂಘಟನೆಯೂ ದುರ್ಬಲವಾಗಿದೆ. ಇನ್ನೊಂದೆಡೆ ಉದ್ಧವ್ ಠಾಕ್ರೆ ಕೂಡ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಸೇರಲು ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:24 am, Thu, 8 February 24

Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ