AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM-CARES Fund ಪಿಎಂ-ಕೇರ್ಸ್ ಫಂಡ್ ಭಾರತ ಸರ್ಕಾರದ ನಿಧಿಯಲ್ಲ: ಕೇಂದ್ರ ಸರ್ಕಾರ

ಟ್ರಸ್ಟ್ ಆನ್‌ಲೈನ್ ಪಾವತಿಗಳು, ಚೆಕ್‌ಗಳು ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಎಲ್ಲಾ ದೇಣಿಗೆಗಳನ್ನು ಸ್ವೀಕರಿಸುತ್ತದೆ. ಸ್ವೀಕರಿಸಿದ ಮೊತ್ತವನ್ನು ಲೆಕ್ಕ ಪರಿಶೋಧಿಸಲಾಗುತ್ತದೆ ಮತ್ತು ಟ್ರಸ್ಟ್ ಫಂಡ್‌ನ ವೆಚ್ಚವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಅದು ಹೇಳಿದೆ.

PM-CARES Fund ಪಿಎಂ-ಕೇರ್ಸ್ ಫಂಡ್ ಭಾರತ ಸರ್ಕಾರದ ನಿಧಿಯಲ್ಲ: ಕೇಂದ್ರ ಸರ್ಕಾರ
ನರೇಂದ್ರ ಮೋದಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Sep 23, 2021 | 3:07 PM

Share

ದೆಹಲಿ: ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ ನಿಧಿಯಲ್ಲಿ ಪರಿಹಾರ (PM-CARES Fund), ಕಾನೂನಿನ ಅಡಿಯಲ್ಲಿ ಒಂದು ಚಾರಿಟಬಲ್ ಟ್ರಸ್ಟ್, ಈ ಟ್ರಸ್ಟ್ ನ ಫಂಡ್ ಭಾರತ ಸರ್ಕಾರದ ಫಂಡ್ ಅಲ್ಲ. ಅದರ ಮೊತ್ತವು ಭಾರತದ ಏಕೀಕೃತ ನಿಧಿಗೆ (Consolidated Fund of India) ಹೋಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಟ್ರಸ್ಟ್ ಒಂದು ರಾಜ್ಯದ ವ್ಯಾಖ್ಯೆಯಲ್ಲಿ ಅಥವಾ ಭಾರತದ ಸಂವಿಧಾನದ 12 ನೇ ಪರಿಚ್ಛೇದದ ಅರ್ಥದಲ್ಲಿ ಅಥವಾ ಇತರ ಪ್ರಾಧಿಕಾರವೇ ಆಗಿರಲಿ ಅಥವಾ ಅದು ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2 [h] ನ ಅರ್ಥದಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಆಗಿರಲಿ, ಸಾಮಾನ್ಯವಾಗಿ ಸೆಕ್ಷನ್ 8 ಮತ್ತು ಉಪವಿಭಾಗ [e] ಮತ್ತು [j] ನಲ್ಲಿರುವ ನಿಬಂಧನೆಗಳು, ನಿರ್ದಿಷ್ಟವಾಗಿ, ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮೂರನೇ ವ್ಯಕ್ತಿಯ ಮಾಹಿತಿಯನ್ನು ಬಹಿರಂಗಪಡಿಸಲು ಅನುಮತಿ ಇಲ್ಲ ಎಂದು ಪ್ರಧಾನ ಕಚೇರಿಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ಪಿಎಂ-ಕೇರ್ಸ್ ಫಂಡ್ ಅನ್ನು ‘ದಿ ಸ್ಟೇಟ್’ ಎಂದು ಘೋಷಿಸಬೇಕೆಂಬ ಕೋರಿಕೆಗೆ ಪ್ರತಿಕ್ರಿಯೆಯಾಗಿ ಈ ಮನವಿ ಮಾಡಲಾಗಿದೆ. ಪ್ರಧಾನ ಮಂತ್ರಿ, ಗೃಹ ಮತ್ತು ರಕ್ಷಣಾ ಮತ್ತು ಹಣಕಾಸು ಸಚಿವರು ಮೊದಲಾದ ಟ್ರಸ್ಟಿಗಳಿಂದ ಸ್ಥಾಪಿಸಲ್ಪಟ್ಟ ನಿಧಿಯನ್ನು ಸರ್ಕಾರದ ನಿಯಂತ್ರಣವಿಲ್ಲದ ನಿಧಿಯಾಗಿ ಘೋಷಿಸಲಾಗಿದೆ ಎಂದು ದೇಶದ ನಾಗರಿಕರು ಅಸಮಾಧಾನ ಹೊಂದಿದ್ದಾರೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು.

ಟ್ರಸ್ಟ್‌ನಲ್ಲಿ ತಾನು ಗೌರವಾನ್ವಿತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತದೆ. ಅದರ ನಿಧಿಯನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸಿದ್ಧಪಡಿಸಿದ ಸಮಿತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ನಿಂದ ಲೆಕ್ಕಪರಿಶೋಧನೆ ಮಾಡಲಾಗುತ್ತದೆ ಎಂದು ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು.

ಟ್ರಸ್ಟ್ ಆನ್‌ಲೈನ್ ಪಾವತಿಗಳು, ಚೆಕ್‌ಗಳು ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಎಲ್ಲಾ ದೇಣಿಗೆಗಳನ್ನು ಸ್ವೀಕರಿಸುತ್ತದೆ. ಸ್ವೀಕರಿಸಿದ ಮೊತ್ತವನ್ನು ಲೆಕ್ಕ ಪರಿಶೋಧಿಸಲಾಗುತ್ತದೆ ಮತ್ತು ಟ್ರಸ್ಟ್ ಫಂಡ್‌ನ ವೆಚ್ಚವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಅದು ಹೇಳಿದೆ.

“ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 8 ರ ನಿರ್ದಿಷ್ಟ ನಿಬಂಧನೆಗಳ ದೃಷ್ಟಿಯಿಂದ, 27.3.2020 ದಿನಾಂಕದ ಟ್ರಸ್ಟ್ ಡೀಡ್‌ನ ಪ್ಯಾರಾ 5.3 ರ ವಿರುದ್ಧದ ಪರಿಹಾರವು ಅತ್ಯಲ್ಪವಾಗಿದೆ” ಎಂದು ಟ್ರಸ್ಟ್ ಡೀಡ್‌ನಲ್ಲಿನ ಪ್ಯಾರಾಗ್ರಾಫ್ ವಿರುದ್ಧದ ಮನವಿಯನ್ನು ಉಲ್ಲೇಖಿಸಿ ಶ್ರೀವಾಸ್ತವ ಹೇಳಿದರು. ಇದನ್ನು ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತು ಅಥವಾ ರಾಜ್ಯ ವಿಧಾನಸಭೆಯಿಂದ ಮಾಡಿದ ಯಾವುದೇ ಕಾನೂನಿನಿಂದ ರಚಿಸಲಾಗಿಲ್ಲ ಎಂದು ಟ್ರಸ್ಟ್ ಡೀಡ್ ಹೇಳುತ್ತದೆ.

ಕೊವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಗರಿಕರಿಗೆ ನೆರವು ನೀಡುವ ಉದಾತ್ತ ಉದ್ದೇಶಕ್ಕಾಗಿ ಪಿಎಂ-ಕೇರ್ಸ್ ನಿಧಿಯನ್ನು ಪ್ರಧಾನ ಮಂತ್ರಿಯವರು ಮಾರ್ಚ್ 2020 ರಲ್ಲಿ ರಚಿಸಿದರು ಎಂದು ಸಮ್ಯಕ್ ಗಂಗ್ವಾಲ್ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದು  ಅದರಿಂದ ದೊಡ್ಡ ದೇಣಿಗೆಗಳನ್ನು ಸ್ವೀಕರಿಸಲಾಗಿದೆ ಎಂದಿದ್ದಾರೆ. ಆದಾಗ್ಯೂ, ಟ್ರಸ್ಟ್ ಡೀಡ್‌ನ ಪ್ರತಿಯನ್ನು PM-CARES ನಿಧಿಯು ತನ್ನ ವೆಬ್‌ಸೈಟ್‌ನಲ್ಲಿ ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಇದನ್ನು ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತಿನ ಮೂಲಕ ರಚಿಸಲಾಗಿಲ್ಲ.

ಇದನ್ನೂ ಓದಿ:Narendra Modi US visit: ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ತಲುಪಿದ ಪ್ರಧಾನಿ ಮೋದಿ! ವಿಶೇಷ ಏನು ಗೊತ್ತಾ?

(PM-CARES Fund is not a fund of the Government of India has told Delhi High Court)

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ