ವರ್ಚುವಲ್ ಭಾಷಣದ ವೇಳೆ ಬುಧವಾರ ಅವರು ಈ ವಿಚಾರ ಪ್ರಸ್ತಾವ ಮಾಡಿದರು. ಜಾಗತಿಕ ಆರ್ಥಿಕ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಆದರೆ ರಾಷ್ಟ್ರೀಯ ಹಣದುಬ್ಬರದ ಮೇಲೆ ಕೋವಿಡ್- 19 ಪರಿಣಾಮ ಮೊದಲ ಅಲೆಗಿಂತಲೂ ಕಡಿಮೆ ಇದೆ. ಭಾರತದ ಉತ್ಪಾದನಾ ವಲಯ ಅತ್ಯಂತ ಕಡಿಮೆ ಪರಿಣಾಮಕ್ಕೆ ಗುರಿಯಾದ ವಲಯ. ಒಂದು ಸಲ ಕೊರೊನಾ ಬಿಕ್ಕಟ್ಟು ಸ್ಥಿರತೆ ಕಾಣಿಸಿಕೊಂಡಲ್ಲಿ ಶೀಘ್ರವಾಗಿ ಚೇತರಿಕೆ ಕಂಡುಕೊಳ್ಳುತ್ತದೆ ಎಂದು ಅವರು ಹೇಳಿದರು.
ಇಂದಿನ ಭಾಷಣಕ್ಕೂ ಪೂರ್ವಭಾವಿಯಾಗಿ ಶಕ್ತಿಕಾಂತ ದಾಸ್ ಅವರು ವಿವಿಧ ಬ್ಯಾಂಕರ್ಗಳು ಮತ್ತು ಸಾಲ ನೀಡುವವರ ಜತೆಗೆ ಚರ್ಚೆ ನಡೆಸಿರುವ ಬಗ್ಗೆ ವರದಿ ಆಗಿದೆ. ಸದ್ಯದ ಆರ್ಥಿಕ ಪರಿಸ್ಥಿತಿ, ಬ್ಯಾಲೆನ್ಸ್ ಶೀಟ್ಗಳ ಮೇಲೆ ಇರುವ ಒತ್ತಡ, ಸಾಲದ ಹರಿವು ಮತ್ತು ನಗದು ಪ್ರಮಾಣ ಇತ್ಯಾದಿ ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ.
ಕೋವಿಡ್-19 ಎರಡನೇ ಅಲೆ ಭಾರತದಲ್ಲಿ ಬಹಳ ಗಂಭೀರವಾದ ಪರಿಣಾಮ ಬೀರಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಅವೆಲ್ಲಕ್ಕೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಕೊರೊನಾ ಪ್ರಕರಣಗಳು ಇನ್ನಷ್ಟು ಹರಡದಂತೆ ಲಾಕ್ಡೌನ್ ಹೇರಬೇಕು ಎಂಬ ಒತ್ತಾಯ ವಿವಿಧ ಕೈಗಾರಿಕೆ ಕ್ಷೇತ್ರಗಳಿಂದ ಬಂದಿದೆ. ದೇಶದಾದ್ಯಂತ ಲಾಕ್ಡೌನ್ ಮಾಡುವುದರಿಂದ ಎಲ್ಲಿ ಕಳೆದ ವರ್ಷದಂತೆಯೇ ಈ ಬಾರಿಯೂ ಆರ್ಥಿಕ ಹೊಡೆತ ಬೀಳುತ್ತದೋ ಎಂಬ ಕಾರಣಕ್ಕೆ ಆ ನಿರ್ಧಾರ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ.
ಅಂದ ಹಾಗೆ, ಈ ಯೋಜನೆಯ ಸಾಲದ ಮೊತ್ತವು ಲಸಿಕೆ ತಯಾರಕರಿಗೆ, ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಮಾಡಿಕೊಡುವ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ವಯ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶ. ಇದಕ್ಕಾಗಿಯೇ 50,000 ಕೋಟಿ ರೂಪಾಯಿಯನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.
(RBI governor Shaktikanta Das announced repo rate based loan to general in public to fight against covid- 19 situation)