AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಸಮಸ್ಯೆಗಳನ್ನು ಪರಿಶೀಲಿಸುವ ಉದ್ದೇಶಿತ ಸಮಿತಿಯಲ್ಲಿ ಭಾಗವಹಿಸಲು ಸರ್ಕಾರ ನೀಡಿದ ಆಹ್ವಾನ ತಿರಸ್ಕರಿಸಿದ ರೈತ ಸಂಘಟನೆ

ಎಸ್​​ಕೆಎಂ ಪ್ರಕಾರ, ಮಾರ್ಚ್ 22 ರಂದು ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಕೃಷಿ ನಾಯಕ ಯುದ್ವೀರ್ ಸಿಂಗ್ ಅವರಿಗೆ ಫೋನ್ ಕರೆ ಮಾಡಿದರು, ಪ್ರಧಾನ ಮಂತ್ರಿಯವರ ಸೂಚನೆಯ ಮೇರೆಗೆ ರಚಿಸಲಾಗುವ ಸಮಿತಿಗೆ ಎರಡು-ಮೂರು ಹೆಸರುಗಳನ್ನು ಆಹ್ವಾನಿಸಿದರು.

ಕೃಷಿ ಸಮಸ್ಯೆಗಳನ್ನು ಪರಿಶೀಲಿಸುವ ಉದ್ದೇಶಿತ ಸಮಿತಿಯಲ್ಲಿ ಭಾಗವಹಿಸಲು ಸರ್ಕಾರ ನೀಡಿದ ಆಹ್ವಾನ ತಿರಸ್ಕರಿಸಿದ ರೈತ ಸಂಘಟನೆ
ರೈತರ ಪ್ರತಿಭಟನೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Apr 04, 2022 | 5:59 PM

Share

ಕಳೆದ ವರ್ಷ ಬೃಹತ್ ಮುಷ್ಕರದ ನೇತೃತ್ವ ವಹಿಸಿದ್ದ ರೈತರ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ (SKM), ಕೃಷಿ ಸಮಸ್ಯೆಗಳನ್ನು ಪರಿಶೀಲಿಸುವ ಉದ್ದೇಶಿತ ಸಮಿತಿಯಲ್ಲಿ ಭಾಗವಹಿಸುವ ಕೇಂದ್ರ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದೆ, ಸರ್ಕಾರದ ಆಹ್ವಾನವು “ಫೋನ್ ಕರೆ” ಮೂಲಕ ಬಂದಿದೆ, ಲಿಖಿತ ಕರೆ ಅಲ್ಲ ಎಂದು ರೈತ ಸಂಘಟನೆ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ವರ್ಷ ನವೆಂಬರ್ 19 ರಂದು ತಮ್ಮ ಸರ್ಕಾರವು ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದು ನಂತರ ಸಂಸತ್ತು ಅವುಗಳನ್ನು ರದ್ದುಗೊಳಿಸಿತ್ತು. ರೈತರ ಬೇಡಿಕೆಗಳ ಪರಿಶೀಲನೆಗೆ ಸಮಿತಿಯೊಂದನ್ನು ಅವರು ಪ್ರಸ್ತಾಪಿಸಿದ ನಂತರ ರೈತ ಸಂಘಗಳು 13 ತಿಂಗಳ ಸುದೀರ್ಘ ಆಂದೋಲನವನ್ನು ಹಿಂತೆಗೆದುಕೊಂಡಿತ್ತು. ಹಲವಾರು ರಾಜ್ಯಗಳಲ್ಲಿ ಹರಡಿದ ಆಂದೋಲನವು ಹತ್ತಾರು ಸಾವಿರ ರೈತರು ಬೀದಿಗಿಳಿದು ಹೋರಾಡುವಂತೆ ಮಾಡಿತು.  “ಲಿಖಿತ ರೂಪದಲ್ಲಿ ಏನೂ ನೀಡಿಲ್ಲ. ಇಬ್ಬರು ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ (ಸರ್ಕಾರದಿಂದ) ದೂರವಾಣಿ ಕರೆ ಬಂದಿತ್ತು. ಇದು ಉದಾಸೀನದ ಧೋರಣೆ’ ಎಂದು ಕೃಷಿ ಮುಖಂಡ ದರ್ಶನ್ ಪಾಲ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಎಸ್​​ಕೆಎಂ ಪ್ರಕಾರ, ಮಾರ್ಚ್ 22 ರಂದು ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಕೃಷಿ ನಾಯಕ ಯುದ್ವೀರ್ ಸಿಂಗ್ ಅವರಿಗೆ ಫೋನ್ ಕರೆ ಮಾಡಿದರು, ಪ್ರಧಾನ ಮಂತ್ರಿಯವರ ಸೂಚನೆಯ ಮೇರೆಗೆ ರಚಿಸಲಾಗುವ ಸಮಿತಿಗೆ ಎರಡು-ಮೂರು ಹೆಸರುಗಳನ್ನು ಆಹ್ವಾನಿಸಿದರು. “ಮೌಖಿಕ ಸಂವಹನವು ಸಮಿತಿಯ ವಿವರಗಳು, ಅದರ ಸದಸ್ಯರು, ಅದರ ಆದೇಶ ಮತ್ತು ಉಲ್ಲೇಖದ ನಿಯಮಗಳಂತಹ ಮೂಲಭೂತ ವಿವರಗಳನ್ನು ಸ್ಪಷ್ಟಪಡಿಸಲು ವಿಫಲವಾಗಿದೆ. ಲಿಖಿತ ನಿಯಮಗಳಿಲ್ಲದ ಯಾವುದೇ ಸಮಿತಿಯ ಬಗ್ಗೆ ನೀವು ಕೇಳಿದ್ದೀರಾ, ”ಎಂದು ಎಸ್‌ಕೆಎಂ ನಾಯಕ ಹನ್ನಾನ್ ಮೊಲ್ಲಾ ಹೇಳಿದರು.

ಈ ವಿಷಯ ಇನ್ನೂ ಪರಿಗಣನೆಯಲ್ಲಿರುವ ಕಾರಣ ಕೃಷಿ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಲು ನಿರಾಕರಿಸಿದರು. ಆದಾಗ್ಯೂ “ಇದು ಅಧಿಕೃತ ಬದ್ಧತೆ” ಎಂದು ಸಮಿತಿಯನ್ನು ರಚಿಸಲು ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಡಿಸೆಂಬರ್ 7 ರಂದು ಆಂದೋಲನವನ್ನು ಕೊನೆಗೊಳಿಸಲು ಕೇಂದ್ರವು ಕರಡು ಪ್ರಸ್ತಾವನೆಗಳನ್ನು ಕಳುಹಿಸಿತ್ತು. ಪತ್ರದಲ್ಲಿ “ಎಲ್ಲಾ ರೈತರು ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೇಗೆ ಪಡೆಯಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು” ಸಮಿತಿಯನ್ನು ರಚಿಸುವುದಾಗಿ ಕೇಂದ್ರವು ಹೇಳಿದೆ. ಎಮ್‌ಎಸ್‌ಪಿಗೆ ಕಾನೂನುಬದ್ಧ ಗ್ಯಾರಂಟಿ ರೈತ ಸಂಘಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ವಿದೇಶಕ್ಕೆ ಪ್ರಯಾಣಿಸಲು ಪತ್ರಕರ್ತೆ ರಾಣಾ ಅಯೂಬ್​​ಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್