Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in West Bengal: ಟಿಎಂಸಿ ಎಂದರೆ ‘ತು, ಮೇ ಔರ್ ಕರಪ್ಶನ್’; ಬಂಗಾಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಮಾ, ಮಾಟಿ, ಮಾನುಷ್' ಎಂಬ ಘೋಷಣೆಯನ್ನು ಬಳಸಿ, ಟಿಎಂಸಿ ಸರ್ಕಾರವು ಬಂಗಾಳದ ಮಹಿಳೆಯರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಇಂದು ಮಾ, ಮಾಟಿ ಹಾಗೆಯೇ ಮಾನುಷ್ ಎಲ್ಲರೂ ಟಿಎಂಸಿಯ ಆಡಳಿತ ವಿಧಾನದಿಂದ ಅಸಮಾಧಾನಗೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳದಲ್ಲಿ ಬಿಜಯ್ ಸಂಕಲ್ಪ ಸಭಾ'ದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ.

PM Modi in West Bengal: ಟಿಎಂಸಿ ಎಂದರೆ ‘ತು, ಮೇ ಔರ್ ಕರಪ್ಶನ್’; ಬಂಗಾಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Mar 02, 2024 | 2:30 PM

ಕೊಲ್ಕತ್ತಾ ಮಾರ್ಚ್ 02: ಭ್ರಷ್ಟಾಚಾರದ ಬಗ್ಗೆ ಆಡಳಿತಾರೂಢ ಟಿಎಂಸಿ (TMC) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕಿದೆ ಎಂದು ಹೇಳಿದ್ದಾರೆ. ಇಂದು (ಶನಿವಾರ) ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಎಂದರೆ ‘ತು, ಮೈನ್ ಔರ್ ಕರಪ್ಶನ್’ (ನೀನು, ನಾನು ಮತ್ತು ಭ್ರಷ್ಟಾಚಾರ) ಎಂದು ಆರೋಪಿಸಿದರು. ‘ಬಿಜಯ್ ಸಂಕಲ್ಪ ಸಭಾ’ದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿರುವುದು ನೋಡಿ ‘ಎನ್‌ಡಿಎ ಸರ್ಕಾರ್, 400 ಪಾರ್’ ಎಂದು ಹೇಳುವ ವಿಶ್ವಾಸವನ್ನು ನೀಡುತ್ತಿದೆ” ಎಂದಿದ್ದಾರೆ.

“ಟಿಎಂಸಿ ದೌರ್ಜನ್ಯ, ಕುಟುಂಬ ರಾಜಕೀಯ ಮತ್ತು ದ್ರೋಹಕ್ಕೆ ಸಮಾನಾರ್ಥಕವಾಗಿದೆ. ಪಶ್ಚಿಮ ಬಂಗಾಳದ ಜನರು ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ನಿರಾಶೆಗೊಂಡಿದ್ದಾರೆ ಎಂದಿದ್ದಾರೆ ಮೋದಿ. ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಟಿಎಂಸಿ ನಾಯಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಘಟನೆಗಳನ್ನು ಉಲ್ಲೇಖಿಸಿದ ಮೋದಿ, ಆ ಪ್ರದೇಶದ “ಸಂಕಷ್ಟದಲ್ಲಿರುವ ತಾಯಂದಿರು ಮತ್ತು ಸಹೋದರಿಯರನ್ನು” ಬೆಂಬಲಿಸುವ ಬದಲು ರಾಜ್ಯ ಸರ್ಕಾರ ಆರೋಪಿಗಳ ಪರ ನಿಂತಿದೆ.

ಮೋದಿ ಭಾಷಣ

“ತಾಯಂದಿರು ಮತ್ತು ಸಹೋದರಿಯರು ನ್ಯಾಯಕ್ಕಾಗಿ ಮನವಿ ಮಾಡುತ್ತಲೇ ಇದ್ದರು. ಆದರೆ ಟಿಎಂಸಿ ಸರ್ಕಾರ ಅವರ ಮಾತನ್ನು ಕೇಳಲಿಲ್ಲ, ಅವರು ‘ಮಾ ಮಾಟಿ ಮಾನುಷ್’ ಹೆಸರಿನಲ್ಲಿ ಮತ ಪಡೆದರು.ಆದರೆ ಈಗ ಪಶ್ಚಿಮ ಬಂಗಾಳದಲ್ಲಿ ತಾಯಂದಿರು ಮತ್ತು ಸಹೋದರಿಯರು ಅಳುತ್ತಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಇಲ್ಲಿ ಅಪರಾಧಿಗಳೇ ತಮ್ಮನ್ನು ಯಾವಾಗ ಬಂಧಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.

ರಾಜ್ಯ ಮತ್ತು ಬಿಹಾರಕ್ಕೆ ಎರಡು ದಿನಗಳ ಪ್ರವಾಸದ ಭಾಗವಾಗಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ನಗರದಲ್ಲಿ 15,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ, ಟಿಎಂಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ

ಮೋದಿ ಭಾಷಣದ ಮುಖ್ಯಾಂಶಗಳು

  1. “ಇಲ್ಲಿ ಟಿಎಂಸಿ ಕಾರ್ಯನಿರ್ವಹಿಸುತ್ತಿರುವ ರೀತಿ, ಅವರು ಪಶ್ಚಿಮ ಬಂಗಾಳದ ಜನರನ್ನು ನಿರಾಶೆಗೊಳಿಸಿದ್ದಾರೆ. ಜನರು ನಿರಂತರವಾಗಿ ಟಿಎಂಸಿಗೆ ಮತ ಹಾಕಿದ್ದಾರೆ ಆದರೆ ಈ ಪಕ್ಷವು ದೌರ್ಜನ್ಯ ಮತ್ತು ದ್ರೋಹಕ್ಕೆ ಮತ್ತೊಂದು ಹೆಸರಾಗಿದೆ. ಟಿಎಂಸಿಗೆ, ಆದ್ಯತೆ ಬಂಗಾಳದ ಅಭಿವೃದ್ಧಿಯಲ್ಲ,ಅವರದ್ದೇನಿದ್ದರೂ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದ್ರೋಹ. ಅದು ಬಂಗಾಳದ ಜನರನ್ನು ಬಡವರನ್ನಾಗಿ ಮಾಡಲು ಬಯಸುತ್ತದೆ, ಇದರಿಂದಾಗಿ ತನ್ನ ರಾಜಕೀಯ ಮತ್ತು ಆಟ ಮುಂದುವರಿಯುತ್ತದೆ.
  2. “ಟಿಎಂಸಿ ಬಂಗಾಳದ ಚಿತ್ರಣವನ್ನು ಕಳಂಕಗೊಳಿಸಿದೆ. ಅದು ಪ್ರತಿ ಯೋಜನೆಯನ್ನು ಹಗರಣವನ್ನಾಗಿ ಪರಿವರ್ತಿಸುತ್ತದೆ. ಅವರು ನಮ್ಮ ಯೋಜನೆಗಳ ಮೇಲೆ ಸ್ಟಿಕ್ಕರ್ ಅನ್ನು ಹಾಕಿ ಅದೆಲ್ಲ ಅವರದ್ದು ಎಂದು ಹೇಳಿಕೊಳ್ಳುತ್ತಾರೆ. ಅವರು ಬಡವರಿಂದ ಕಸಿದುಕೊಳ್ಳಲು ಹಿಂಜರಿಯುವುದಿಲ್ಲ. ಮುಂಬರುವ ವರ್ಷಗಳಲ್ಲಿ ಬಿಜೆಪಿ ಇಲ್ಲಿ ಸರ್ಕಾರ ರಚಿಸುತ್ತದೆ. ಹೂಡಿಕೆ ಮತ್ತು ಉದ್ಯೋಗಕ್ಕೆ ಅಸಂಖ್ಯಾತ ಅವಕಾಶಗಳನ್ನು ನೀಡುತ್ತದೆ ಇದಕ್ಕಾಗಿ ನೀವು ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಕೊಡುಗೆಯನ್ನು ಗುರುತಿಸಬೇಕು. ಬಂಗಾಳದ ಎಲ್ಲಾ 42 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ.
  3.  “ಮಾ, ಮಾಟಿ, ಮಾನುಷ್’ ಎಂಬ ಘೋಷಣೆಯನ್ನು ಬಳಸಿ, ಟಿಎಂಸಿ ಸರ್ಕಾರವು ಬಂಗಾಳದ ಮಹಿಳೆಯರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಇಂದು ಮಾ, ಮಾಟಿ ಹಾಗೆಯೇ ಮಾನುಷ್ ಎಲ್ಲರೂ ಟಿಎಂಸಿಯ ಆಡಳಿತ ವಿಧಾನದಿಂದ ಅಸಮಾಧಾನಗೊಂಡಿದ್ದಾರೆ.  ಸಂದೇಶ್​​ಖಾಲಿ ಮಹಿಳೆಯರು ನ್ಯಾಯ ಕೇಳುತ್ತಲೇ ಇದ್ದರು, ಆದರೂ ಸರ್ಕಾರ ಗಮನ ಹರಿಸಲಿಲ್ಲ, ಬಂಗಾಳದಲ್ಲಿ, ಅಪರಾಧಿಯನ್ನು ಯಾವಾಗ ಬಂಧಿಸಬೇಕು ಎಂದು ಪೊಲೀಸರು ನಿರ್ಧರಿಸುವುದಿಲ್ಲ, ಅಪರಾಧಿಯೇ ಎಲ್ಲವನ್ನೂ ನಿರ್ಧರಿಸುತ್ತಾನೆ. ರಾಜ್ಯ ಸರ್ಕಾರ ಸಂದೇಶ್​​ಖಾಲಿ ಘಟನೆಯ ಆರೋಪಿಗಳನ್ನು ಬಂಧಿಸಲು ಬಯಸುವುದಿಲ್ಲ.
  4. “ಕೇಂದ್ರ ಸರ್ಕಾರವು ಬಡವರಿಗೆ 5 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ನೆರವು ನೀಡುತ್ತದೆ ಆದರೆ TMC ಸರ್ಕಾರವು ಈ ಉಪಕ್ರಮದಿಂದ ಬಂಗಾಳದ ಜನರಿಗೆ ಪ್ರಯೋಜನವನ್ನು ನೀಡುವುದಿಲ್ಲ. ನಾವು ಪಶ್ಚಿಮ ಬಂಗಾಳದ ವೈದ್ಯಕೀಯ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಿದ್ದೇವೆ. 2014 ರ ಮೊದಲು, ಬಂಗಾಳ ಕೇವಲ 14 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಕಳೆದ 10 ವರ್ಷಗಳಲ್ಲಿ, ಈ ಸಂಖ್ಯೆ 26 ಕ್ಕೆ ದ್ವಿಗುಣಗೊಂಡಿದೆ.
  5. “ಕೆಲವು ದಿನಗಳ ಹಿಂದೆ ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಏಮ್ಸ್ ಅನ್ನು ನಾನು ಉದ್ಘಾಟಿಸಿದ್ದೇನೆ, ಆದರೆ ಕಲ್ಯಾಣಿ ಏಮ್ಸ್ ನಿರ್ಮಾಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಮಸ್ಯೆ ಇದೆ. ಅವರು ಅನುಮತಿ ಏಕೆ ತೆಗೆದುಕೊಂಡಿಲ್ಲ ಎಂದು ಕೇಳುತ್ತಿದ್ದಾರೆ? ಪಶ್ಚಿಮ ಬಂಗಾಳದಲ್ಲಿ, ಟಿಎಂಸಿಯ ಗೂಂಡಾಗಳು ಮತ್ತು ಭೂ ಮಾಫಿಯಾಗಳಿಗೆ ಗೂಂಡಾಗಿರಿಗೆ ಮುಕ್ತ ಅನುಮತಿ ನೀಡಲಾಗಿದೆ ಆದರೆ ಟಿಎಂಸಿ ಸರ್ಕಾರವು ಪರಿಸರ ಸಂಬಂಧಿತ ಅನುಮತಿಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಗ್ಲೋಬಲ್ ಕನ್ನಡಿ’ಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
‘ಗ್ಲೋಬಲ್ ಕನ್ನಡಿ’ಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್