AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಲೇಹ್‌ಗೆ ಆಗಮಿಸಿದ ರಾಜನಾಥ್ ಸಿಂಗ್

Rajnath singh in Rezang La ಯುದ್ಧ ಸ್ಮಾರಕದಲ್ಲಿ ಜೂನ್ 2020 ರ ಗಾಲ್ವಾನ್ ಕಣಿವೆಯಲ್ಲಿ  (June 2020 Galwan Valley clash) ಚೀನಾದ ಪಿಎಲ್‌ಎ ವಿರುದ್ಧ ನಡದ ಘರ್ಷಣೆಯಲ್ಲಿ ಮಡಿದ ಸೈನಿಕರ ಹೆಸರನ್ನು ಸಹ ಸೇರಿಸಲಾಗಿದೆ. ಗಡಿ ಪರಿಸ್ಥಿತಿಯನ್ನು ಅವಲೋಕಿಸಲು ಸಿಂಗ್ ಅವರು ಲೇಹ್‌ನಲ್ಲಿ ಸಶಸ್ತ್ರ ಪಡೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಲೇಹ್‌ಗೆ ಆಗಮಿಸಿದ ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ (ಕೃಪೆ: ಟ್ವಿಟರ್)
TV9 Web
| Edited By: |

Updated on: Nov 18, 2021 | 2:07 PM

Share

ಲೇಹ್: ಲಡಾಖ್‌ನ ರೆಜಾಂಗ್ ಲಾದಲ್ಲಿ (Rezang La)ಹೊಸದಾಗಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಗುರುವಾರ ಲೇಹ್‌ಗೆ ಆಗಮಿಸಿದ್ದಾರೆ. ಈ ಯುದ್ಧ ಸ್ಮಾರಕದಲ್ಲಿ ಜೂನ್ 2020 ರ ಗಾಲ್ವಾನ್ ಕಣಿವೆಯಲ್ಲಿ  (June 2020 Galwan Valley clash) ಚೀನಾದ ಪಿಎಲ್‌ಎ ವಿರುದ್ಧ ನಡದ ಘರ್ಷಣೆಯಲ್ಲಿ ಮಡಿದ ಸೈನಿಕರ ಹೆಸರನ್ನು ಸಹ ಸೇರಿಸಲಾಗಿದೆ. ಗಡಿ ಪರಿಸ್ಥಿತಿಯನ್ನು ಅವಲೋಕಿಸಲು ಸಿಂಗ್ ಅವರು ಲೇಹ್‌ನಲ್ಲಿ ಸಶಸ್ತ್ರ ಪಡೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಚೀನಾ ಗಡಿ ಮಾತುಕತೆಯಲ್ಲಿ ತನ್ನ ನಿಲುವನ್ನು ಕಠಿಣಗೊಳಿಸಿರುವಂತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಂಗ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಎರಡು ಕಡೆಯ ನಡುವಿನ ಕೊನೆಯ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯು ಪಡೆಗಳನ್ನು ಹೊರಹಾಕುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.  1962 ರ ಯುದ್ಧದ ಸಮಯದಲ್ಲಿ ರೆಜಾಂಗ್ ಲಾ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ಮೊದಲು ಲಡಾಖ್‌ನ ಚುಶುಲ್‌ನಲ್ಲಿ ಸ್ಥಾಪಿಸಲಾಯಿತು. ಈ ಯುದ್ಧದಲ್ಲಿ 13 ಕುಮಾನ್ ಬೆಟಾಲಿಯನ್‌ನ  (Kumaon battalion) ಕಂಪನಿಯು ಪಿಎಲ್ಎ (PLA) ಅನ್ನು ಚುಶುಲ್ ಕಣಿವೆ (Chushul Valley) ದಾಟದಂತೆ ತಡೆಯಲು ಹೋರಾಡಿತು. ಪೂರ್ವ ಲಡಾಖ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಲ್ಲಿ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತೀಯ ಪಡೆಗಳು ಚೀನೀ ಮಿಲಿಟರಿ ಪೋಸ್ಟ್‌ಗಳ ಮೇಲಿರುವ ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡಾಗ ರೆಜಾಂಗ್ ಲಾ ಮತ್ತೆ ಸುದ್ದಿಯಾಗಿತ್ತು.

ರೆಜಾಂಗ್ ಲಾ ಯುದ್ಧದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಐತಿಹಾಸಿಕ 1962 ರ ಚೀನಾ-ಭಾರತ ಯುದ್ಧದ (1962 Sino-Indian War) ಸಮಯದಲ್ಲಿ ಚೀನಾದ ಸೇನೆ ವಿರುದ್ಧ ಹೋರಾಡಿದ 13 ಕುಮಾನ್ ರೆಜಿಮೆಂಟ್ ಗೌರವಾರ್ಥವಾಗಿ ಹೊಸದಾಗಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಗುರುವಾರ ಲಡಾಖ್‌ಗೆ ಬಂದಿಳಿದರು. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿರುವ (LAC) ಮೌಂಟೇನ್ ಪಾಸ್ ಆಗಿರುವ ರೆಜಾಂಗ್ ಲಾ ಕೂಡ 18 ನವೆಂಬರ್ 1962 ರಂದು ವೀರೋಚಿತ ಯುದ್ಧದ ಸ್ಥಳವಾಗಿತ್ತು. ಈ ಘಟನೆಯ 59 ನೇ ವಾರ್ಷಿಕೋತ್ಸವದಂದು ಸ್ಮಾರಕವನ್ನು ಉದ್ಘಾಟಿಸಲಾಗುತ್ತಿದೆ.

ರೆಜಾಂಗ್ ಲಾ ಯುದ್ಧದಲ್ಲಿ ಮೇಜರ್ ಶೈತಾನ್ ಸಿಂಗ್ ನೇತೃತ್ವದ 120 ಶಕ್ತಿಶಾಲಿ ಚಾರ್ಲಿ ಕಂಪನಿಯು ಚೀನಾದ ಬೃಹತ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿತು. ಹೆಚ್ಚಿನ ಸಂಖ್ಯೆಯಲ್ಲಿದ್ದರೂ ರೆಜಿಮೆಂಟ್‌ನ ಸೈನಿಕರು ಘನೀಕರಿಸುವ ತಾಪಮಾನದಲ್ಲಿ ಮತ್ತು ಸೀಮಿತ ಯುದ್ಧಸಾಮಗ್ರಿಗಳೊಂದಿಗೆ ನಿಂತಿರುವ ಕೊನೆಯ ವ್ಯಕ್ತಿಯವರೆಗೆ ಹೋರಾಡಿದರು. ಘರ್ಷಣೆಯ ಸಮಯದಲ್ಲಿ ರೆಜಿಮೆಂಟ್‌ನ 114 ಸದಸ್ಯರು ಕೊಲ್ಲಲ್ಪಟ್ಟರು.

ಇಂಡಿಯನ್ ಎಕ್ಸ್‌ಪ್ರೆಸ್ ಲೇಖನದ ಪ್ರಕಾರ ಉಳಿದಿರುವ ಆರು ಸೈನಿಕರಲ್ಲಿ ಇಬ್ಬರು – ರಾಮಚಂದರ್ ಯಾದವ್ ಮತ್ತು ನಿಹಾಲ್ ಸಿಂಗ್. ಫಿರಂಗಿ ಬೆಂಬಲದೊಂದಿಗೆ ಸುಮಾರು 5,000 ರಿಂದ 6,000 ಚೀನೀ ಸೈನಿಕರು ಇದ್ದರು. ಚೀನಿಯರ ದಾಳಿಯು ಸುಮಾರು 3:30 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಹೋರಾಟವು ತಡ ರಾತ್ರಿವರೆಗೂ ಮುಂದುವರೆಯಿತು.

ಸಿಂಗ್ ಸೇರಿದಂತೆ ಐವರು ಸೈನಿಕರು ಗಾಯಗೊಂಡ ನಂತರ ಸೆರೆಯಾಳಾಗಿದ್ದರು. ಆದರೆ  ಒಂದೇ ದಿನದಲ್ಲಿ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ದಿನ ಸುಮಾರು 1,300 ಚೀನೀ ಸೈನಿಕರು ಕೊಲ್ಲಲ್ಪಟ್ಟರು ಎಂದು ವರದಿಗಳು ಸೂಚಿಸುತ್ತವೆ.

ಯುದ್ಧದ ಪ್ರತ್ಯಕ್ಷದರ್ಶಿಗಳ ಪ್ರಕಾರ ವೀರ ಸೈನಿಕರು ತಮ್ಮ ಕೊನೆಯ ಉಸಿರಿನವರೆಗೂ ಹೋರಾಡುತ್ತಾ, ಪಾಸ್ ಅನ್ನು ಬಿಡಲು ನಿರಾಕರಿಸಿದರು. ಸಾವಿನಲ್ಲೂ ಸಹ, ಅವರು ಬಯೋನೆಟ್‌ಗಳು ಮತ್ತು ಗ್ರೆನೇಡ್‌ಗಳನ್ನು ಹಿಡಿದಿಟ್ಟುಕೊಂಡು ಶತ್ರುಗಳ ವಿರುದ್ಧ ಹೋರಾಟದ ನಿಲುವನ್ನು ತೆಗೆದುಕೊಳ್ಳುತ್ತಿದ್ದರು. ಮದ್ದುಗುಂಡುಗಳು ಖಾಲಿಯಾದಾಗ ಅನೇಕರು ಕೈಕೈ ಮಿಲಾಯಿಸಲು ತೊಡಗಿದ್ದರು.

ಮೂಲ ಸ್ಮಾರಕವು ಹತ್ಯೆಗೀಡಾದ ಸೈನಿಕರ ಹೆಸರನ್ನು ಹೊಂದಿದ್ದರೂ  ಅದನ್ನು ಈಗ ಮೇಜರ್ ಶೈತಾನ್ ಸಿಂಗ್ ಹೆಸರಿನ ಸ್ಮಾರಕ ಗ್ಯಾಲರಿ ಮತ್ತು ಸಭಾಂಗಣವನ್ನು ಸೇರಿಸಲು ವಿಸ್ತರಿಸಲಾಗಿದೆ. ಪ್ರವಾಸಿಗರಿಗೆ ಈಗ ಸ್ಮಾರಕ ಮತ್ತು ಗಡಿ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ.

ಉದ್ಘಾಟನೆಯು ಮೂರು ದಿನಗಳ ಕಾರ್ಯಕ್ರಮದ ಭಾಗವಾಗಿದ್ದು, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಹ ಭಾಗವಹಿಸಲಿದ್ದಾರೆ. LAC ಯ ಇನ್ನೊಂದು ಬದಿಯಿಂದ ಗೋಚರಿಸುವ ಪ್ರದೇಶದಲ್ಲಿ ಈ ಕ್ರಮವನ್ನು ಭಾರತದ ಶಕ್ತಿಯ ಪ್ರದರ್ಶನವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Sydney Dialogue: ಕ್ರಿಪ್ಟೋಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ; ದುರ್ಬಳಕೆ ತಡೆಯಲು ಒಗ್ಗಟ್ಟಾಗುವಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಕರೆ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ