AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರಿಗೆ ಹೆಂಡತಿ ಎಂದರೆ ವೈಸ್ ಇನ್ವೆಸ್ಟ್ಮೆಂಟ್ ಫಾರೆವರ್: ಕೇರಳ ಹೈಕೋರ್ಟ್

ಇಂದಿನ ಯುವ ಪೀಳಿಗೆಯು ಮದುವೆಯನ್ನು ಕೆಟ್ಟ ಸಂಸ್ಕೃತಿ ಎಂದು ಹೇಳುತ್ತದೆ. ನಮ್ಮ ದೇಶದಲ್ಲಿ ಲಿವ್-ಇನ್ ಸಂಬಂಧಗಳು ಹೆಚ್ಚುತ್ತಿವೆ, ಈಗ ನಾವು ಸಮಾಜದ ದ ಆತ್ಮಸಾಕ್ಷಿಯ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದೆ.

ಯುವಕರಿಗೆ ಹೆಂಡತಿ ಎಂದರೆ ವೈಸ್ ಇನ್ವೆಸ್ಟ್ಮೆಂಟ್ ಫಾರೆವರ್: ಕೇರಳ ಹೈಕೋರ್ಟ್
Kerala High Court
TV9 Web
| Edited By: |

Updated on: Sep 01, 2022 | 1:53 PM

Share

ಕೊಚ್ಚಿ: ಒಂದು ವಸ್ತುವನ್ನು ಬಳಕೆ ಮಾಡಿ ಅದನ್ನು ಎಸೆಯುವುದು ಒಬ್ಬ ಗ್ರಾಹಕನ ಸಂಸ್ಕೃತಿ, ಆದರೆ ಇದು ನಿಮ್ಮ ವೈವಾಹಿಕ ಜೀವನದಲ್ಲಿ ಅಳವಡಿಸಿಕೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಕೇರಳ ವಿಚ್ಛೇದನ ಕೇಸ್ ಒಂದನ್ನು ಇತ್ಯಾರ್ಥ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದೆ. ಕೇರಳ ಹೈಕೋರ್ಟ್ 51 ವರ್ಷ ವಯಸ್ಸಿನ ವ್ಯಕ್ತಿಯ ವಿಚ್ಛೇದನದ ಮನವಿಯನ್ನು ತಿರಸ್ಕರಿಸಿದಾಗ, ಕೆಲವೊಂದು ವಿಚಾರಗಳ ಅವಲೋಕವನ್ನು ಮಾಡಿದೆ.

ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರ ವಿಭಾಗೀಯ ಪೀಠವು ಆಗಸ್ಟ್ 24 ರಂದು ತೀರ್ಪು ನೀಡಿತು, ಆದರೆ ವೈವಾಹಿಕ ಕ್ರೌರ್ಯ ಆರೋಪದ ಮೇಲೆ ವಿಚ್ಛೇದನಕ್ಕಾಗಿ ವ್ಯಕ್ತಿಯ ಮನವಿಯನ್ನು ತಿರಸ್ಕರಿಸಿತು. ಅವರು 2017 ರಿಂದ ಇವರು ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ, ಆದರೆ ಇವರ ನಡುವೆ ಹೊಂದಾಣಿಕೆಯ ಸಂಬಂಧಗಳು ಶಾಶ್ವತವಾಗಿ ಮುಚ್ಚಿಹೋಗಿವೆ, ಆದರೆ ಒಬ್ಬ ಪತ್ನಿಗೆ ಗಂಡಬೇಕು ಎಂದು ಹೈಕೋರ್ಟ್ ಆದೇಶವು ಹೇಳುತ್ತದೆ. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಯುವ ಪೀಳಿಗೆಯು ಯಾವುದೇ ಹೊಣೆಗಾರಿಕೆ ಅಥವಾ ಕಟ್ಟುಪಾಡುಗಳಿಲ್ಲದೆ ಮುಕ್ತ ಜೀವನವನ್ನು ಪಡೆಯಲು ಮದುವೆಯೊಂದು ಕೆಟ್ಟ ಆಚರಣೆ ಎಂದು ಭಾವಿಸಿದ್ದಾರೆ. ಯುವಕರು WIFE ಪದವನ್ನು ‘Worry Invited For Ever‘ ಎಂದು ವಿಸ್ತರಿಸುತ್ತಾರೆ ಎಂದು ತಮ್ಮ ಆದೇಶದಲ್ಲಿ ಹೈಕೋರ್ಟ್ ಹೇಳಿದೆ.

ಈ ವ್ಯಕ್ತಿ ತನ್ನ ಹೆಂಡತಿ – ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೋರ್ಟ್ ಮುಮದೆ ಹೇಳಿದ್ದಾರೆ. ಕ್ರಿಶ್ಚಿಯನ್ ವಿವಾಹಗಳಿಗೆ ಅನ್ವಯಿಸುವ ವಿಚ್ಛೇದನ ಕಾಯಿದೆ 1869 ರ ಅಡಿಯಲ್ಲಿ, ಪತಿ ಪತ್ನಿಯಿಂದ ಯಾವುದೇ ಕ್ರೌರ್ಯವನ್ನು ಸಾಬೀತುಪಡಿಸಲು ಸಾಧ್ಯವಾಗಲಿ ಎಂದು ನ್ಯಾಯಾಲಯ ಹೇಳಿದೆ. ಇವರು ಅಲಪ್ಪುಳ ಜಿಲ್ಲೆಯವರು, ಆದರೆ ಒಂದು ದಶಕದಿಂದ ಸೌದಿ ಅರೇಬಿಯಾದಲ್ಲಿ ನೆಲೆಸಿದರು. ಇವರಿಬ್ಬರು 2009ರಲ್ಲಿ ವಿವಾಹವಾಗಿದ್ದಾರೆ. 2018ರಲ್ಲಿ ಪತಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದ್ದಾರೆ.

ಕೇರಳ ರಾಜ್ಯವು ಒಂದು ಕಾಲದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ರಾಜ್ಯ ಎಂದು ನ್ಯಾಯಮೂರ್ತಿ ಸೋಫಿ ಥಾಮಸ್ ಅವರು ಬರೆದಿರುವ ನ್ಯಾಯಾಲಯದ ಆದೇಶವು ಹೇಳುತ್ತದೆ, ಆದರೆ ಪ್ರಸ್ತುತ ದಿನಗಳಲ್ಲಿ ಕೇರಳವು ದುರ್ಬಲ ಅಥವಾ ಸ್ವಾರ್ಥದ ಮೇಲೆ ಜನ ತಮ್ಮ ಸಂಬಂಧವನ್ನು ಮುರಿಯುತ್ತಿದ್ದರೆ, ಇದಕ್ಕೆ ಕಾರಣ ತಮ್ಮ ವೈವಾಹಿಕ ಜೀವನ ಬಗೆಗೆ ಇರುವ ನಿರಾಸೆ ಭಾವನೆ ಮತ್ತು ಮಕ್ಕಳ ಜವಾಬ್ದಾರಿಗಳು.

ತನ್ನ ಪತಿಯು ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಪರ್ಕವನ್ನು ಹೊಂದಿದ್ದಾನೆ ಎಂದು ತಿಳಿದಾಗ ಹೆಂಡತಿಯಿಂದ ನೀಡುವ ಪ್ರತಿಕ್ರಿಯೆ ಹೊಡೆಯುವುದು, ಅಥವಾ ಹಲ್ಲೇ ಮಾಡುವುದು ಸಾಮಾನ್ಯ ಮಾನವ ಪ್ರತಿಕ್ರಿಯೆಗಳು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹಲ್ಲೆಗಳನ್ನು ಮಾಡದೇ ನ್ಯಾಯಯುತವಾಗಿ ನಡೆದುಕೊಳ್ಳುವುದು ಸರಿಯಾದ ಮಾರ್ಗ ಎಂದಿದೆ.

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ