AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನದಂದು ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಪರೇಡ್​; ಈ ಬಾರಿ ಮಹಿಳೆಯರ ನೇತೃತ್ವ

Tractor Parade: ನಾವು ಆಗಸ್ಟ್​ 15ರಂದು ಬೆಳಗ್ಗೆ 11ಗಂಟೆಗೆ ಟ್ರ್ಯಾಕ್ಟರ್ ಪರೇಡ್​ ಆರಂಭ ಮಾಡುತ್ತೇವೆ. ಉಚನಾ ಕಲನ್ ಮೂಲಕ ನಮ್ಮ ಟ್ರ್ಯಾಕ್ಟರ್​ ಪರೇಡ್​ ಹಾದುಹೋಗಲಿದೆ ಎಂದು ಜಿಂದ್​ ಜಿಲ್ಲೆಯ ಬಿಕೆಯು (Bharatiya Kisan Union) ಅಧ್ಯಕ್ಷ ಆಜಾದ್​ ಸಿಂಗ್​ ಪಲ್ವಾನ್​ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಪರೇಡ್​; ಈ ಬಾರಿ ಮಹಿಳೆಯರ ನೇತೃತ್ವ
ಟ್ರ್ಯಾಕ್ಟರ್ ಪರೇಡ್​ ರಿಹರ್ಸಲ್​
TV9 Web
| Edited By: |

Updated on:Aug 14, 2021 | 1:10 PM

Share

ದೆಹಲಿ: ಕೇಂದ್ರ ಸರ್ಕಾರ (Central Government)ದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿದೆ. ಗಾಳಿ..ಮಳೆ, ಕೊವಿಡ್​ 19 ಮತ್ತದರ ರೂಪಾಂತರಿ ವೈರಸ್​​ಗಳ ಪ್ರಸರಣದ ನಡುವೆಯೂ ರೈತರು ಮಾತ್ರ ತಮ್ಮ ಪ್ರತಿಭಟನೆ ಹಿಂಪಡೆದಿಲ್ಲ. ಕಳೆದ ಗಣರಾಜ್ಯೋತ್ಸವದಂದು ರೈತರು ದೆಹಲಿಯ ಕೆಂಪುಕೋಟೆ ಬಳಿ, ಟ್ರ್ಯಾಕ್ಟರ್​ ಪರೇಡ್ (Tractor Parade)​ ಹೆಸರಲ್ಲಿ ಗಲಭೆ ಸೃಷ್ಟಿಸಿದ್ದರು. ಶಿಸ್ತಿನ ಪ್ರತಿಭಟನೆ ನಡೆಸುವುದಾಗಿ ರೈತರ ಮುಖಂಡರು ಹೇಳಿದ್ದರೂ, ನಂತರ ಅವರ ಕೈಮೀರಿ ಹೋಗಿ ಹಿಂಸಾಚಾರಕ್ಕೆ ತಲುಪಿತ್ತು. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದೊಟ್ಟಿಗೆ ಸಿಖ್​​ರ ಧ್ವಜವನ್ನು ಹಾರಿಸಿದ್ದರು. ಇದೀಗ ಸ್ವಾತಂತ್ರ್ಯ ದಿನಾಚರಣೆ(Independence Day) ನಿಮಿತ್ತ ಕೂಡ ರೈತರು ಟ್ರ್ಯಾಕ್ಟರ್​ ಪರೇಡ್​ ನಡೆಸಲು ನಿರ್ಧರಿಸಿದ್ದಾರೆ. ಆದರೆ ಈ ಬಾರಿ ಹರ್ಯಾಣದ ಜಿಂದ್​ ಜಿಲ್ಲೆಯಲ್ಲಿ ಟ್ರ್ಯಾಕ್ಟರ್​ ಪರೇಡ್​ ನಡೆಯಲಿದೆ ಮತ್ತು ಇದಕ್ಕೆ ರೈತ ಮಹಿಳೆಯರು ನೇತೃತ್ವ ವಹಿಸಲಿದ್ದಾರೆ.

ನಾಳೆ ಸ್ವಾತಂತ್ರ್ಯೋತ್ಸವದಂದು ನಡೆಸಲಿರುವ ಟ್ರ್ಯಾಕ್ಟರ್​ ಪರೇಡ್​ಗಾಗಿ ಇಂದು ಜಿಂದ್​ ಜಿಲ್ಲೆಯ ಉಚನಾ ಕಲನ್​​ನಲ್ಲಿ ರೈತರು ಪೂರ್ವಾಭ್ಯಾಸ ನಡೆಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡರು, ಟ್ರ್ಯಾಕ್ಟರ್​ ಪರೇಡ್​ನಲ್ಲಿ 20 ಸಾವಿರ ರೈತರು ಪಾಲ್ಗೊಳ್ಳಲಿದ್ದು, 5000 ವಾಹನಗಳು ಇರಲಿವೆ ಎಂದು ತಿಳಿಸಿದ್ದಾರೆ. ಇನ್ನು ಪ್ರತಿಭಟನಾ ರೈತರು ಈ ಬಾರಿಯ 75ನೇ ಸ್ವಾತಂತ್ರ್ಯ ದಿನವನ್ನು ಕಿಸಾನ್​ ಮಜ್​ದೂರ್​ ಆಜಾದಿ ಸಂಗ್ರಾಮ ದಿವಸ್​ ( Kisan Mazdoor Azaadi Sangram Diwas) ಎಂದು ಆಚರಿಸುತ್ತಿದ್ದಾರೆ.

ನಾವು ಆಗಸ್ಟ್​ 15ರಂದು ಬೆಳಗ್ಗೆ 11ಗಂಟೆಗೆ ಟ್ರ್ಯಾಕ್ಟರ್ ಪರೇಡ್​ ಆರಂಭ ಮಾಡುತ್ತೇವೆ. ಉಚನಾ ಕಲನ್ ಮೂಲಕ ನಮ್ಮ ಟ್ರ್ಯಾಕ್ಟರ್​ ಪರೇಡ್​ ಹಾದುಹೋಗಲಿದೆ ಎಂದು ಜಿಂದ್​ ಜಿಲ್ಲೆಯ ಬಿಕೆಯು (Bharatiya Kisan Union) ಅಧ್ಯಕ್ಷ ಆಜಾದ್​ ಸಿಂಗ್​ ಪಲ್ವಾನ್​ ತಿಳಿಸಿದ್ದಾರೆ. ಹಾಗೇ, ಟ್ರ್ಯಾಕ್ಟರ್​ ಪರೇಡ್​​ನ್ನು ಮಹಿಳೆಯರು ಮುನ್ನಡೆಸಲಿದ್ದಾರೆ. ಅವರು ತಮ್ಮ ಸಾಂಸ್ಕೃತಿಕ ಉಡುಗೆಯನ್ನು ಧರಿಸಿ, ಟ್ರ್ಯಾಕ್ಟರ್​ ಪರೇಡ್​ನಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಮಹಿಳಾ ಶಕ್ತಿ ಪ್ರದರ್ಶನ ಆಗಲಿದೆ ಎಂದೂ ಆಜಾದ್​ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ

New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’

Published On - 12:57 pm, Sat, 14 August 21

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!