- Kannada News Photo gallery AI images show how Sandalwood celebrities would look like in Mahabharata movie
Sandalwood: ಕನ್ನಡದ ಜನಪ್ರಿಯ ನಟರು ‘ಮಹಾಭಾರತ’ ಚಿತ್ರದಲ್ಲಿ ನಟಿಸಿದರೆ ಹೇಗಿರುತ್ತೆ? ವೈರಲ್ ಆಗಿವೆ ಎಐ ಫೋಟೋಗಳು
Mahabharata Movie: ಕೃತಕ ಬುದ್ಧಿಮತ್ತೆ ಬಳಸಿ ಜನಪ್ರಿಯ ಕಲಾವಿದರ ಪೋಸ್ಟರ್ಗಳನ್ನು ವಿನ್ಯಾಸ ಮಾಡುವ ಟ್ರೆಂಡ್ ಜೋರಾಗಿದೆ. ಕನ್ನಡದಲ್ಲಿ ನಟರು ‘ಮಹಾಭಾರತ’ ಸಿನಿಮಾದಲ್ಲಿ ನಟಿಸಿದರೆ ಹೇಗಿರುತ್ತೆ ಎಂಬ ಕಲ್ಪನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Updated on: Jul 27, 2023 | 12:58 PM

ಕರ್ಣನ ಪಾತ್ರಕ್ಕೆ ಯಶ್ ಸೂಕ್ತವಾಗುತ್ತಾರೆ. ಅವರು ಈ ಗೆಟಪ್ನಲ್ಲಿ ಇರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಬಲ ಭೀಮನಂತೆ ಕಾಣುತ್ತಿದ್ದಾರೆ ನಟ ಧ್ರುವ ಸರ್ಜಾ. ಅವರ ಕಟ್ಟುಮಸ್ತಾದ ದೇಹವು ಈ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆ.

ಕೃಷ್ಣನ ಗೆಟಪ್ನಲ್ಲಿ ಕಿಚ್ಚ ಸುದೀಪ್ ಅವರ ಫೋಟೋ ಹೀಗಿದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಅವರು ಕೃಷ್ಣನಾಗಿ ನಟಿಸಿದ್ದರು.

ಅರ್ಜುನನ ಪಾತ್ರದಲ್ಲಿ ಪುನೀತ್ ನಟಿಸಿದರೆ ಹೀಗಿರುತ್ತದೆ. ಬಿಲ್ಲು ಹಿಡಿದು ನಿಂತಿರುವ ಗೆಟಪ್ನಲ್ಲಿ ಈ ಫೋಟೋ ಮೂಡಿಬಂದಿದೆ.

ರಿಷಬ್ ಶೆಟ್ಟಿ ಅವರು ಭೀಷ್ಮನ ಪಾತ್ರ ಮಾಡಿದರೆ ಈ ರೀತಿ ಕಾಣಬಹುದು. ಮಹಾಭಾರತದಲ್ಲಿ ಇದು ಕೂಡ ಬಹಳ ಮುಖ್ಯವಾದ ಪಾತ್ರ.

ಶಿವರಾಜ್ಕುಮಾರ್ ಅವರು ದ್ರೋಣಾಚಾರ್ಯರ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎನ್ನುತ್ತಿದೆ ಎಐ ಮೂಲಕ ವಿನ್ಯಾಸಗೊಂಡ ಈ ಫೋಟೋ.

ಶಕುನಿ ಪಾತ್ರವನ್ನು ನಟ ರಾಜ್ ಬಿ. ಶೆಟ್ಟಿ ಅವರು ನಿಭಾಯಿಸಿದರೆ ಹೇಗೆ ಕಾಣಬಹುದು ಎಂಬುದನ್ನು ಈ ಫೋಟೋ ವಿವರಿಸುತ್ತಿದೆ.

ರಚಿತಾ ರಾಮ್ ಅವರಿಗೆ ದ್ರೌಪದಿ ಪಾತ್ರ ನೀಡಿದರೆ ಈ ಗೆಟಪ್ನಲ್ಲಿ ಅವರು ಕಂಗೊಳಿಸಬಹುದು. ಈ ಫೋಟೋ ಕೂಡ ವೈರಲ್ ಆಗಿದೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




