AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravi Shastri: ತನ್ನ ಅವಧಿಯಲ್ಲಿ ಈ ಮೂವರು ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಈಗ ಕಾರಣ ತಿಳಿಸಿದ ರವಿಶಾಸ್ತ್ರಿ

Ravi Shastri: ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ತಂಡದಿಂದ ಕೈಬಿಡಲಾಯಿತು, ಇದರಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು.

TV9 Web
| Edited By: |

Updated on: Dec 10, 2021 | 2:48 PM

Share
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ 4 ವರ್ಷಗಳ ಅವಧಿಯು ನವೆಂಬರ್ 2021 ರಲ್ಲಿ ಕೊನೆಗೊಂಡಿತು. ಈ ಸಮಯದಲ್ಲಿ, ಟೀಮ್ ಇಂಡಿಯಾ ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್‌ನಿಂದ ODI ವರೆಗೆ ಸಾಕಷ್ಟು ಯಶಸ್ಸನ್ನು ಗಳಿಸಿತು. ಆದರೆ, ಶಾಸ್ತ್ರಿ ಅವರ ಅವಧಿಯಲ್ಲಿ ಇಂತಹ ಕೆಲವು ನಿರ್ಧಾರಗಳು ನಡೆದಿದ್ದು, ಈ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು. ಅದರಲ್ಲೂ ತಂಡದ ಆಯ್ಕೆಗೆ ಸಂಬಂಧಿಸಿದಂತೆ. ಇಂತಹ ಕೆಲವು ವಿವಾದಾತ್ಮಕ ನಿರ್ಧಾರಗಳ ಬಗ್ಗೆ, ಭಾರತದ ಮಾಜಿ ಕೋಚ್ ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವರಣೆಯನ್ನು ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರ 4 ವರ್ಷಗಳ ಅವಧಿಯು ನವೆಂಬರ್ 2021 ರಲ್ಲಿ ಕೊನೆಗೊಂಡಿತು. ಈ ಸಮಯದಲ್ಲಿ, ಟೀಮ್ ಇಂಡಿಯಾ ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್‌ನಿಂದ ODI ವರೆಗೆ ಸಾಕಷ್ಟು ಯಶಸ್ಸನ್ನು ಗಳಿಸಿತು. ಆದರೆ, ಶಾಸ್ತ್ರಿ ಅವರ ಅವಧಿಯಲ್ಲಿ ಇಂತಹ ಕೆಲವು ನಿರ್ಧಾರಗಳು ನಡೆದಿದ್ದು, ಈ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು. ಅದರಲ್ಲೂ ತಂಡದ ಆಯ್ಕೆಗೆ ಸಂಬಂಧಿಸಿದಂತೆ. ಇಂತಹ ಕೆಲವು ವಿವಾದಾತ್ಮಕ ನಿರ್ಧಾರಗಳ ಬಗ್ಗೆ, ಭಾರತದ ಮಾಜಿ ಕೋಚ್ ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವರಣೆಯನ್ನು ನೀಡಿದ್ದಾರೆ.

1 / 4
ಅಜಿಂಕ್ಯ ರಹಾನೆ- ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ತಂಡದಿಂದ ಕೈಬಿಡಲಾಯಿತು, ಇದರಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಆ ನಿರ್ಧಾರವನ್ನು ವಿವರಿಸಿದ ಶಾಸ್ತ್ರಿ, “ಅಜಿಂಕ್ಯ ಮತ್ತು ರೋಹಿತ್ (ಶರ್ಮಾ) ನಡುವೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇಬ್ಬರಿಗೂ (ಆಡುವ XI ನಲ್ಲಿ) ಸ್ಥಾನ ಸಿಗುತ್ತಿರಲಿಲ್ಲ. ರೋಹಿತ್ ರನ್ ಗಳಿಸಿದ್ದರು ಮತ್ತು ಅವರಲ್ಲಿ ಟೆಸ್ಟ್ ಆಡುವ ಹಸಿವನ್ನು ನಾವು ನೋಡಿದ್ದೇವೆ. ಆದ್ದರಿಂದ ನಾವು ಫಾರ್ಮ್ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದ್ದೇವೆ." ರೋಹಿತ್ ಎರಡೂ ಟೆಸ್ಟ್‌ಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ನಂತರ ಕೊನೆಯ ಟೆಸ್ಟ್‌ನಲ್ಲಿ, ರಹಾನೆ ತಂಡಕ್ಕೆ ಮರಳಿ ಅರ್ಧಶತಕವನ್ನು ಆಡುವ ಮೂಲಕ ತಂಡ ಗೆಲ್ಲಲು ಸಹಾಯ ಮಾಡಿದರು.

ಅಜಿಂಕ್ಯ ರಹಾನೆ- ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ತಂಡದಿಂದ ಕೈಬಿಡಲಾಯಿತು, ಇದರಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಆ ನಿರ್ಧಾರವನ್ನು ವಿವರಿಸಿದ ಶಾಸ್ತ್ರಿ, “ಅಜಿಂಕ್ಯ ಮತ್ತು ರೋಹಿತ್ (ಶರ್ಮಾ) ನಡುವೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇಬ್ಬರಿಗೂ (ಆಡುವ XI ನಲ್ಲಿ) ಸ್ಥಾನ ಸಿಗುತ್ತಿರಲಿಲ್ಲ. ರೋಹಿತ್ ರನ್ ಗಳಿಸಿದ್ದರು ಮತ್ತು ಅವರಲ್ಲಿ ಟೆಸ್ಟ್ ಆಡುವ ಹಸಿವನ್ನು ನಾವು ನೋಡಿದ್ದೇವೆ. ಆದ್ದರಿಂದ ನಾವು ಫಾರ್ಮ್ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದ್ದೇವೆ." ರೋಹಿತ್ ಎರಡೂ ಟೆಸ್ಟ್‌ಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ನಂತರ ಕೊನೆಯ ಟೆಸ್ಟ್‌ನಲ್ಲಿ, ರಹಾನೆ ತಂಡಕ್ಕೆ ಮರಳಿ ಅರ್ಧಶತಕವನ್ನು ಆಡುವ ಮೂಲಕ ತಂಡ ಗೆಲ್ಲಲು ಸಹಾಯ ಮಾಡಿದರು.

2 / 4
ಚೇತೇಶ್ವರ ಪೂಜಾರ- ರಹಾನೆ ನಂತರ ಮುಂದಿನ ಆಘಾತಕಾರಿ ನಿರ್ಧಾರ ಟೀಮ್ ಇಂಡಿಯಾದ ನಂಬರ್-3 ಬ್ಯಾಟರ್ ಚೇತೇಶ್ವರ ಪೂಜಾರ ಬಗ್ಗೆ. 2018 ರ ಇಂಗ್ಲೆಂಡ್ ಸರಣಿಯಲ್ಲಿ, ಪೂಜಾರ ಅವರನ್ನು ಮೊದಲ ಟೆಸ್ಟ್‌ನಲ್ಲಿ ಕೈಬಿಡಲಾಯಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತು. ಆ ನಿರ್ಧಾರದ ಕಾರಣವನ್ನು ವಿವರಿಸಿದ ಶಾಸ್ತ್ರಿ,  ಅವರು ಉತ್ತಮ ಫಾರ್ಮ್‌ನಲ್ಲಿರಲಿಲ್ಲ ಹೀಗಾಗಿ ನಾವು ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ಕೊಡಲಿಲ್ಲ. ನಂತರ ತಂಡಕ್ಕೆ ಮರಳಿದ ಪೂಜಾರ ಮುಂದಿನ 4 ಟೆಸ್ಟ್‌ಗಳನ್ನು ಆಡಿದರು, ಇದರಲ್ಲಿ ಶತಕ ಮತ್ತು ಅರ್ಧ ಶತಕ ಬಂದಿತು.

ಚೇತೇಶ್ವರ ಪೂಜಾರ- ರಹಾನೆ ನಂತರ ಮುಂದಿನ ಆಘಾತಕಾರಿ ನಿರ್ಧಾರ ಟೀಮ್ ಇಂಡಿಯಾದ ನಂಬರ್-3 ಬ್ಯಾಟರ್ ಚೇತೇಶ್ವರ ಪೂಜಾರ ಬಗ್ಗೆ. 2018 ರ ಇಂಗ್ಲೆಂಡ್ ಸರಣಿಯಲ್ಲಿ, ಪೂಜಾರ ಅವರನ್ನು ಮೊದಲ ಟೆಸ್ಟ್‌ನಲ್ಲಿ ಕೈಬಿಡಲಾಯಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತು. ಆ ನಿರ್ಧಾರದ ಕಾರಣವನ್ನು ವಿವರಿಸಿದ ಶಾಸ್ತ್ರಿ, ಅವರು ಉತ್ತಮ ಫಾರ್ಮ್‌ನಲ್ಲಿರಲಿಲ್ಲ ಹೀಗಾಗಿ ನಾವು ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ಕೊಡಲಿಲ್ಲ. ನಂತರ ತಂಡಕ್ಕೆ ಮರಳಿದ ಪೂಜಾರ ಮುಂದಿನ 4 ಟೆಸ್ಟ್‌ಗಳನ್ನು ಆಡಿದರು, ಇದರಲ್ಲಿ ಶತಕ ಮತ್ತು ಅರ್ಧ ಶತಕ ಬಂದಿತು.

3 / 4
ಅಂಬಟಿ ರಾಯುಡು- ಈ ನಿರ್ಧಾರವು 2019 ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಮಾಡಲಾದ ಕಾರಣ ಹೆಚ್ಚು ಗದ್ದಲವನ್ನು ಸೃಷ್ಟಿಸಿತು. ರಾಯುಡು ಸುಮಾರು ಎರಡು ವರ್ಷಗಳ ಕಾಲ ತಂಡದಲ್ಲಿ 4 ನೇ ಸ್ಥಾನದಲ್ಲಿ ಆಡುತ್ತಿದ್ದರು, ಆದರೆ ಅವರು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಲಿಲ್ಲ. ಇದು ಟೀಕೆ ಮತ್ತು ವಿವಾದಕ್ಕೆ ಕಾರಣವಾಯಿತು. ಇದು ಆಯ್ಕೆಗಾರರ ​​ನಿರ್ಧಾರ ಎಂದು ಶಾಸ್ತ್ರಿ ಹೇಳಿದ್ದಾರೆ. ಮಾಜಿ ಕೋಚ್, “ಇದರಲ್ಲಿ ನನ್ನ ಪಾತ್ರವಿಲ್ಲ. ಆದರೆ 3 ವಿಶ್ವಕಪ್‌ಗಳಲ್ಲಿ 3 ವಿಕೆಟ್‌ಕೀಪರ್‌ಗಳನ್ನು ಹೊಂದುವ ನಿರ್ಧಾರದಿಂದ ನನಗೆ ಸಂತೋಷವಾಗಲಿಲ್ಲ. ಶ್ರೇಯಸ್ ಅಯ್ಯರ್ ಅಥವಾ ಅಂಬಾಟಿ ಬರಬಹುದಿತ್ತು. ಎಂಎಸ್ ಧೋನಿ, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಟ್ಟಿಗೆ ತಂಡದಲ್ಲಿ ಇರಿಸಲು ಕಾರಣವೇನು? ಎಂಬುದಕ್ಕೆ ಉತ್ತರಿಸಿದ ಶಾಸ್ತ್ರಿ, ಆಯ್ಕೆಗಾರರ ​​ಕೆಲಸದಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಲಿಲ್ಲ ಎಂದಿದ್ದಾರೆ.

ಅಂಬಟಿ ರಾಯುಡು- ಈ ನಿರ್ಧಾರವು 2019 ರ ವಿಶ್ವಕಪ್‌ಗೆ ಸ್ವಲ್ಪ ಮೊದಲು ಮಾಡಲಾದ ಕಾರಣ ಹೆಚ್ಚು ಗದ್ದಲವನ್ನು ಸೃಷ್ಟಿಸಿತು. ರಾಯುಡು ಸುಮಾರು ಎರಡು ವರ್ಷಗಳ ಕಾಲ ತಂಡದಲ್ಲಿ 4 ನೇ ಸ್ಥಾನದಲ್ಲಿ ಆಡುತ್ತಿದ್ದರು, ಆದರೆ ಅವರು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಲಿಲ್ಲ. ಇದು ಟೀಕೆ ಮತ್ತು ವಿವಾದಕ್ಕೆ ಕಾರಣವಾಯಿತು. ಇದು ಆಯ್ಕೆಗಾರರ ​​ನಿರ್ಧಾರ ಎಂದು ಶಾಸ್ತ್ರಿ ಹೇಳಿದ್ದಾರೆ. ಮಾಜಿ ಕೋಚ್, “ಇದರಲ್ಲಿ ನನ್ನ ಪಾತ್ರವಿಲ್ಲ. ಆದರೆ 3 ವಿಶ್ವಕಪ್‌ಗಳಲ್ಲಿ 3 ವಿಕೆಟ್‌ಕೀಪರ್‌ಗಳನ್ನು ಹೊಂದುವ ನಿರ್ಧಾರದಿಂದ ನನಗೆ ಸಂತೋಷವಾಗಲಿಲ್ಲ. ಶ್ರೇಯಸ್ ಅಯ್ಯರ್ ಅಥವಾ ಅಂಬಾಟಿ ಬರಬಹುದಿತ್ತು. ಎಂಎಸ್ ಧೋನಿ, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಟ್ಟಿಗೆ ತಂಡದಲ್ಲಿ ಇರಿಸಲು ಕಾರಣವೇನು? ಎಂಬುದಕ್ಕೆ ಉತ್ತರಿಸಿದ ಶಾಸ್ತ್ರಿ, ಆಯ್ಕೆಗಾರರ ​​ಕೆಲಸದಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಲಿಲ್ಲ ಎಂದಿದ್ದಾರೆ.

4 / 4
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ