AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಹೆಚ್ಚು ಸಂಖ್ಯೆಯ ಅವಳಿ ಮಕ್ಕಳು ಹುಟ್ಟುವ ಭಾರತದ ಗ್ರಾಮ ಯಾವುದು ಗೊತ್ತಾ?! ಕುತೂಹಲಕಾರಿ ಮಾಹಿತಿ ಇಲ್ಲಿದೆ

Twins Village: ದೇಶದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವೂ ಇದೆ. ಕೇರಳದ ಮಣಪ್ಪಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಇದಕ್ಕೆ ಕಾರಣವೇನು ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಗಳು ಇಲ್ಲಿದೆ..

TV9 Web
| Edited By: |

Updated on:Feb 20, 2022 | 12:15 PM

Share
ದೇಶದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವುದು ಎಲ್ಲಿ? ಹೀಗೊಂದು ವಿಶೇಷವೂ ಇದೆಯಾ? ಹೌದು, ನಿಮಗೆ ಹೀಗೆ ಅನಿಸಬಹುದು. ಆದರೆ. ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವೂ ಇದೆ. ಕೇರಳದ ಮಣಪ್ಪಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಇಲ್ಲಿ ಏಕೆ ಅತಿ ಹೆಚ್ಚು ಅವಳಿ ಮಕ್ಕಳೇ ಜನಿಸುತ್ತಾರೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆರುವ ವಿಚಾರ. ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ 2000 ಕುಟುಂಬಗಳಿರುವ ಈ ಗ್ರಾಮದಲ್ಲಿ 400 ಜೋಡಿ ಅವಳಿ ಮಕ್ಕಳಿದ್ದಾರೆ! ಈ ಗ್ರಾಮವನ್ನು ಅವಳಿ ಗ್ರಾಮ ಎಂದೂ ಕರೆಯುತ್ತಾರೆ.

ದೇಶದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವುದು ಎಲ್ಲಿ? ಹೀಗೊಂದು ವಿಶೇಷವೂ ಇದೆಯಾ? ಹೌದು, ನಿಮಗೆ ಹೀಗೆ ಅನಿಸಬಹುದು. ಆದರೆ. ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಗ್ರಾಮವೂ ಇದೆ. ಕೇರಳದ ಮಣಪ್ಪಪುರಂ ಜಿಲ್ಲೆಯ ಕೊಡಿನಿ ಗ್ರಾಮದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಇಲ್ಲಿ ಏಕೆ ಅತಿ ಹೆಚ್ಚು ಅವಳಿ ಮಕ್ಕಳೇ ಜನಿಸುತ್ತಾರೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿದೆರುವ ವಿಚಾರ. ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ 2000 ಕುಟುಂಬಗಳಿರುವ ಈ ಗ್ರಾಮದಲ್ಲಿ 400 ಜೋಡಿ ಅವಳಿ ಮಕ್ಕಳಿದ್ದಾರೆ! ಈ ಗ್ರಾಮವನ್ನು ಅವಳಿ ಗ್ರಾಮ ಎಂದೂ ಕರೆಯುತ್ತಾರೆ.

1 / 5
ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಈ ಗ್ರಾಮದಲ್ಲಿ ವಾಸಿಸುವ 46 ವರ್ಷದ ಶಂಸಾದ್ ಬೇಗಂ ಅವರು 19 ವರ್ಷಗಳ ಹಿಂದೆ ಅವರಿಗೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದರು ಎಂದು ಹೇಳುತ್ತಾರೆ. ಅವರ ಹೆಸರನ್ನು ಶಹಜಾರ ಮತ್ತು ಇಶಾನ ಎಂದು ಇಡಲಾಯಿತು. ಆದರೆ ಅವರು ಹೇಳುವಂತೆ ಅವರ ಕೊನೆಯ ಐದು ತಲೆಮಾರುಗಳಲ್ಲಿ ಅವಳಿ ಮಕ್ಕಳು ಹುಟ್ಟಿರಲಿಲ್ಲ.

ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಈ ಗ್ರಾಮದಲ್ಲಿ ವಾಸಿಸುವ 46 ವರ್ಷದ ಶಂಸಾದ್ ಬೇಗಂ ಅವರು 19 ವರ್ಷಗಳ ಹಿಂದೆ ಅವರಿಗೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದರು ಎಂದು ಹೇಳುತ್ತಾರೆ. ಅವರ ಹೆಸರನ್ನು ಶಹಜಾರ ಮತ್ತು ಇಶಾನ ಎಂದು ಇಡಲಾಯಿತು. ಆದರೆ ಅವರು ಹೇಳುವಂತೆ ಅವರ ಕೊನೆಯ ಐದು ತಲೆಮಾರುಗಳಲ್ಲಿ ಅವಳಿ ಮಕ್ಕಳು ಹುಟ್ಟಿರಲಿಲ್ಲ.

2 / 5
ಅವಳಿ ಮಕ್ಕಳು ಕೆಲವರಿಗೆ ಸಂತೋಷದ ಕಾರಣ ಆಗಿ ಕಂಡುಬಂದರೆ ಮತ್ತೆ ಕೆಲವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಅಭಿಲಾಷ್ ತನಗೆ ಇಬ್ಬರು ಅವಳಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಅಷ್ಟಾಗಿ ಸಬಲರಲ್ಲದ ಅವರಿಗೆ ಇದು ಸ್ವಲ್ಪ ಕಷ್ಟವೂ ಆಗಿದೆ. ಅಂತಹ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸದಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಈಗ 4 ಮಕ್ಕಳಿಂದಾಗಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅವಳಿ ಮಕ್ಕಳು ಕೆಲವರಿಗೆ ಸಂತೋಷದ ಕಾರಣ ಆಗಿ ಕಂಡುಬಂದರೆ ಮತ್ತೆ ಕೆಲವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಅಭಿಲಾಷ್ ತನಗೆ ಇಬ್ಬರು ಅವಳಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಅಷ್ಟಾಗಿ ಸಬಲರಲ್ಲದ ಅವರಿಗೆ ಇದು ಸ್ವಲ್ಪ ಕಷ್ಟವೂ ಆಗಿದೆ. ಅಂತಹ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸದಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಈಗ 4 ಮಕ್ಕಳಿಂದಾಗಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ.

3 / 5
ಈ ಗ್ರಾಮದಲ್ಲಿ ಏಕೆ ಇಷ್ಟೊಂದು ಅವಳಿ ಮಕ್ಕಳು ಹುಟ್ಟುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹಲವು ಪ್ರತಿಷ್ಠಿತ ಸಂಸ್ಥೆಗಳು ಸಂಶೋಧನೆ ನಡೆಸಿವೆ. ಇವುಗಳಲ್ಲಿ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ, ಲಂಡನ್ ವಿಶ್ವವಿದ್ಯಾಲಯ, ಹೈದರಾಬಾದ್, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ ಸೇರಿವೆ. ಈ ರಹಸ್ಯವನ್ನು ಪರಿಹರಿಸಲು ಸಂಶೋಧಕರು, ಲಾಲಾರಸ ಮತ್ತು ಕೂದಲಿನ ಮಾದರಿಗಳನ್ನು ತೆಗೆದುಕೊಂಡು ಮತ್ತು ಅವುಗಳ ಮೂಲಕ ಡಿಎನ್ಎ ಪರೀಕ್ಷೆ ಮಾಡಲಾಗಿದೆ.

ಈ ಗ್ರಾಮದಲ್ಲಿ ಏಕೆ ಇಷ್ಟೊಂದು ಅವಳಿ ಮಕ್ಕಳು ಹುಟ್ಟುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹಲವು ಪ್ರತಿಷ್ಠಿತ ಸಂಸ್ಥೆಗಳು ಸಂಶೋಧನೆ ನಡೆಸಿವೆ. ಇವುಗಳಲ್ಲಿ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ, ಲಂಡನ್ ವಿಶ್ವವಿದ್ಯಾಲಯ, ಹೈದರಾಬಾದ್, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ ಸೇರಿವೆ. ಈ ರಹಸ್ಯವನ್ನು ಪರಿಹರಿಸಲು ಸಂಶೋಧಕರು, ಲಾಲಾರಸ ಮತ್ತು ಕೂದಲಿನ ಮಾದರಿಗಳನ್ನು ತೆಗೆದುಕೊಂಡು ಮತ್ತು ಅವುಗಳ ಮೂಲಕ ಡಿಎನ್ಎ ಪರೀಕ್ಷೆ ಮಾಡಲಾಗಿದೆ.

4 / 5
ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್ ಇ ಪ್ರೀತಮ್ ಹೇಳುವಂತೆ, ಇದು ಆನುವಂಶಿಕ ಕಾರಣಗಳಿಂದ ನಡೆಯುತ್ತಿದೆ ಎಂದು ಅನೇಕ ವಿಜ್ಞಾನಿಗಳು ನಂಬಿದ್ದಾರೆ. ವಿವಿಧ ಸಂಸ್ಥೆಗಳು ನಡೆಸಿದ ಸಂಶೋಧನೆಯು ಸಮಸ್ಯಾತ್ಮಕವಾಗಿ ಇರುವ ಏನನ್ನೂ ಬಹಿರಂಗಪಡಿಸಿಲ್ಲ. ಈ ಗ್ರಾಮದಲ್ಲೇ ಏಕೆ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ ಎಂಬುದು ಇನ್ನೂ ಪರಿಪೂರ್ಣವಾಗಿ ಬಿಡಿಸಲಾಗದ ಗಂಟಾಗಿದೆ.

ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಸಂಶೋಧಕ ಪ್ರೊಫೆಸರ್ ಇ ಪ್ರೀತಮ್ ಹೇಳುವಂತೆ, ಇದು ಆನುವಂಶಿಕ ಕಾರಣಗಳಿಂದ ನಡೆಯುತ್ತಿದೆ ಎಂದು ಅನೇಕ ವಿಜ್ಞಾನಿಗಳು ನಂಬಿದ್ದಾರೆ. ವಿವಿಧ ಸಂಸ್ಥೆಗಳು ನಡೆಸಿದ ಸಂಶೋಧನೆಯು ಸಮಸ್ಯಾತ್ಮಕವಾಗಿ ಇರುವ ಏನನ್ನೂ ಬಹಿರಂಗಪಡಿಸಿಲ್ಲ. ಈ ಗ್ರಾಮದಲ್ಲೇ ಏಕೆ ಹೆಚ್ಚು ಅವಳಿ ಮಕ್ಕಳು ಜನಿಸುತ್ತಾರೆ ಎಂಬುದು ಇನ್ನೂ ಪರಿಪೂರ್ಣವಾಗಿ ಬಿಡಿಸಲಾಗದ ಗಂಟಾಗಿದೆ.

5 / 5

Published On - 12:14 pm, Sun, 20 February 22

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ