AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು

ಮೈಸೂರಿನಲ್ಲಿ ಅನಧಿಕೃತ ದೇಗುಲಗಳನ್ನು ತೆರವು ಮಾಡಬೇಕೆಂಬ ವಿಚಾರ ಈಗ ವಿವಾದವಾಗಿದೆ. ತೆರವುಗೊಳಿಸಬೇಕಾದ ಕಟ್ಟಡಗಳ ಪಟ್ಟಿಯಲ್ಲಿ ಮೈಸೂರು ನಗರದ ಕೆಲ ಪ್ರಮುಖ ಧಾರ್ಮಿಕ ಕೇಂದ್ರಗಳೂ ಸೇರ್ಪಡೆಗೊಂಡಿದ್ದು ಅವುಗಳ ಚಿತ್ರಮಾಲಿಕೆ ಇಲ್ಲಿದೆ.

TV9 Web
| Updated By: Skanda|

Updated on:Sep 14, 2021 | 9:53 AM

Share
ಮೈಸೂರು ಪಂಚಮುಖಿ ಗಣಪತಿ ದೇವಾಲಯ

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲಿರುವ  ಪಂಚಮುಖಿ ದೇವಸ್ಥಾನ ಮೂರು ರಸ್ತೆ ಕೂಡುವ ಸ್ಥಳದಲ್ಲಿದೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡಿ ಸುಮಾರು 25 ವರ್ಷಗಳಾಗಿವೆ. ಇಲ್ಲಿ ಗಣಪತಿ ಪಂಚಮುಖಿಯಾಗಿರುವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗಣೇಶ ಚತುರ್ಥಿಯಂದು ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಬ್ಬದ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತದೆ. ಈ ದೇವಸ್ಥಾನದ ತೆರವಿಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Mysuru temples facing the order of demolishing here are some photos

1 / 9
ಅಗ್ರಹಾರದಲ್ಲಿರುವ 101 ಗಣಪತಿ ದೇಗುಲ

ಈ ದೇಗುಲವು ಬಹಳ ಪ್ರಸಿದ್ಧಿಯನ್ನು ಹೊಂದಿದ್ದು, ಹಳೆಯ ದೇಗುಲವಾಗಿದೆ. ಇದನ್ನು ತೆರವುಗೊಳಿಸುವುದು ಸಾಂಸ್ಕೃತಿಕ ನಗರಿಯ ಇತಿಹಾಸಕ್ಕೆ ಕುಂದು ತಂದಂತೆ ಎಂದು ಭಕ್ತರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಗ್ರಹಾರದಲ್ಲಿರುವ 101 ಗಣಪತಿ ದೇಗುಲ ಈ ದೇಗುಲವು ಬಹಳ ಪ್ರಸಿದ್ಧಿಯನ್ನು ಹೊಂದಿದ್ದು, ಹಳೆಯ ದೇಗುಲವಾಗಿದೆ. ಇದನ್ನು ತೆರವುಗೊಳಿಸುವುದು ಸಾಂಸ್ಕೃತಿಕ ನಗರಿಯ ಇತಿಹಾಸಕ್ಕೆ ಕುಂದು ತಂದಂತೆ ಎಂದು ಭಕ್ತರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

2 / 9
ರೋಟರಿ ಬಳಿಯ ಇಮಾಮ್​ ಶಾ ದರ್ಗಾ

ರೋಟರಿ ಬಳಿಯ ಇಮಾಮ್​ ಶಾ ದರ್ಗಾ

3 / 9
ಮೈಸೂರು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ


ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಗೋರಿಯು ದೇವರಾಜ ಅರಸು ರಸ್ತೆಯ ಪುಟ್‌ಪಾತ್‌ನಲ್ಲಿದೆ. ಮೊದಲು 50 ವರ್ಷಗಳ ಹಿಂದೆ ಇಲ್ಲಿ ಕೇವಲ ಗೋರಿ ಮಾತ್ರ ಇತ್ತು. ನಂತರ ಇಲ್ಲಿ ಈ ಗೋರಿಗೆ ಕಟ್ಟಡವನ್ನು ಕಟ್ಟಲಾಗಿತ್ತು. 2011ರಲ್ಲಿ ಗೋರಿಯ ಮೂಲ ಸ್ವರೂಪವನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ  ಮೂಲ ಸ್ವರೂಪ ತೆರವುಗೊಳಿಸದಂತೆ 2012ರಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದಿನಾಂಕ: 25.09.2013 ರಂದು ಮೈಸೂರು ಪಾಲಿಕೆ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಯವರು ಜಂಟಿಯಾಗಿ ಪರಿಶೀಲಿಸಿ ಸದರಿ ಗೋರಿಯು ರಸ್ತೆ ಅಥವಾ ಫುಟ್​ಪಾತ್ ಮೇಲೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಇದ್ದರೆ ತೆರವುಗೊಳಿಸಲು ಮುಕ್ತವಾಗಿರುತ್ತದೆ ಎಂದು ಆದೇಶಿಸಿದ್ದಾರೆ. ಆದರೂ ಗೋರಿ ತೆರವು ಕಾರ್ಯ ಸಾಧ್ಯವಾಗಿಲ್ಲ. ಇದು ಸಂಸದ ಪ್ರತಾಪಸಿಂಹ ಹಾಗೂ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮೈಸೂರು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಗೋರಿಯು ದೇವರಾಜ ಅರಸು ರಸ್ತೆಯ ಪುಟ್‌ಪಾತ್‌ನಲ್ಲಿದೆ. ಮೊದಲು 50 ವರ್ಷಗಳ ಹಿಂದೆ ಇಲ್ಲಿ ಕೇವಲ ಗೋರಿ ಮಾತ್ರ ಇತ್ತು. ನಂತರ ಇಲ್ಲಿ ಈ ಗೋರಿಗೆ ಕಟ್ಟಡವನ್ನು ಕಟ್ಟಲಾಗಿತ್ತು. 2011ರಲ್ಲಿ ಗೋರಿಯ ಮೂಲ ಸ್ವರೂಪವನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ ಮೂಲ ಸ್ವರೂಪ ತೆರವುಗೊಳಿಸದಂತೆ 2012ರಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದಿನಾಂಕ: 25.09.2013 ರಂದು ಮೈಸೂರು ಪಾಲಿಕೆ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಯವರು ಜಂಟಿಯಾಗಿ ಪರಿಶೀಲಿಸಿ ಸದರಿ ಗೋರಿಯು ರಸ್ತೆ ಅಥವಾ ಫುಟ್​ಪಾತ್ ಮೇಲೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಇದ್ದರೆ ತೆರವುಗೊಳಿಸಲು ಮುಕ್ತವಾಗಿರುತ್ತದೆ ಎಂದು ಆದೇಶಿಸಿದ್ದಾರೆ. ಆದರೂ ಗೋರಿ ತೆರವು ಕಾರ್ಯ ಸಾಧ್ಯವಾಗಿಲ್ಲ. ಇದು ಸಂಸದ ಪ್ರತಾಪಸಿಂಹ ಹಾಗೂ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

4 / 9
ದುರ್ಗಾ ಪರಮೇಶ್ವರಿ ದೇಗುಲ.

ಮೈಸೂರಿನ ಇಟ್ಟಿಗೆಗೂಡಿನ ಪಾರ್ಕ್​ನಲ್ಲಿರುವ ದೇವಾಲಯ. ಪಾರ್ಕ್​ನಲ್ಲಿರುವ ಕಾರಣಕ್ಕೆ ತೆರವುಗೊಳಿಸಲು ಪಟ್ಟಿ‌ಮಾಡಲಾಗಿದೆ. ಮೊದಲು ಪಾರ್ಕಿನ ಅರಳಿ ಕಟ್ಟೆಯ ಬಳಿ ಮೂಲ ವಿಗ್ರಹ ವಿತ್ತು. ಭಕ್ತರು ಹೆಚ್ಚಾದ ನಂತರ ದೇಗುಲ ನಿರ್ಮಿಸಲಾಗಿದೆ. ಸುಮಾರು ಮೂವತ್ತು ವರ್ಷದ ಹಿಂದೆ ಬೃಹತ್ ದೇವಾಲಯ ಹಾಗೂ ಗೋಪುರ ನಿರ್ಮಾಣ ಮಾಡಲಾಯ್ತು. ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಇದರ ತೆರವಿಗೆ ಸ್ಥಳೀಯರು ಭಕ್ತರ ವಿರೋಧವಿದೆ.

ದುರ್ಗಾ ಪರಮೇಶ್ವರಿ ದೇಗುಲ. ಮೈಸೂರಿನ ಇಟ್ಟಿಗೆಗೂಡಿನ ಪಾರ್ಕ್​ನಲ್ಲಿರುವ ದೇವಾಲಯ. ಪಾರ್ಕ್​ನಲ್ಲಿರುವ ಕಾರಣಕ್ಕೆ ತೆರವುಗೊಳಿಸಲು ಪಟ್ಟಿ‌ಮಾಡಲಾಗಿದೆ. ಮೊದಲು ಪಾರ್ಕಿನ ಅರಳಿ ಕಟ್ಟೆಯ ಬಳಿ ಮೂಲ ವಿಗ್ರಹ ವಿತ್ತು. ಭಕ್ತರು ಹೆಚ್ಚಾದ ನಂತರ ದೇಗುಲ ನಿರ್ಮಿಸಲಾಗಿದೆ. ಸುಮಾರು ಮೂವತ್ತು ವರ್ಷದ ಹಿಂದೆ ಬೃಹತ್ ದೇವಾಲಯ ಹಾಗೂ ಗೋಪುರ ನಿರ್ಮಾಣ ಮಾಡಲಾಯ್ತು. ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಇದರ ತೆರವಿಗೆ ಸ್ಥಳೀಯರು ಭಕ್ತರ ವಿರೋಧವಿದೆ.

5 / 9
ಬನಶಂಕರಿ ದೇವಸ್ಥಾನ

ಬನಶಂಕರಿ ದೇವಸ್ಥಾನ

6 / 9
ಮೈಸೂರು ಪೀಪಲ್ಸ್ ಪಾರ್ಕ್​ ದರ್ಗಾ

ಮೈಸೂರಿನ‌ ಹೃದಯಭಾಗದಲ್ಲಿರುವ ಪೀಪಲ್ಸ್ ಪಾರ್ಕ್​ನಲ್ಲಿ ಈ ದರ್ಗಾ ಇದೆ.  ಗ್ರಂಥಾಲಯದ ಹಿಂಭಾಗದಲ್ಲಿರುವ ದರ್ಗಾ ಸದ್ಯ ಗಿಡಗಂಟೆಗಳಿಂದ ಕೂಡಿದೆ. ದರ್ಗಾ
ಯಾರ ನಿರ್ವಹಣೆಯೂ ಇಲ್ಲದೆ ಪಾಳು ಬಿದ್ದಿದೆ. ಇದರ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಪಾರ್ಕ್​ನಲ್ಲಿದೆ‌ ಎಂಬ ಕಾರಣಕ್ಕೆ ತೆರವು ಮಾಡಲು ಪಟ್ಟಿ ಮಾಡಲಾಗಿದೆ.

ಮೈಸೂರು ಪೀಪಲ್ಸ್ ಪಾರ್ಕ್​ ದರ್ಗಾ ಮೈಸೂರಿನ‌ ಹೃದಯಭಾಗದಲ್ಲಿರುವ ಪೀಪಲ್ಸ್ ಪಾರ್ಕ್​ನಲ್ಲಿ ಈ ದರ್ಗಾ ಇದೆ. ಗ್ರಂಥಾಲಯದ ಹಿಂಭಾಗದಲ್ಲಿರುವ ದರ್ಗಾ ಸದ್ಯ ಗಿಡಗಂಟೆಗಳಿಂದ ಕೂಡಿದೆ. ದರ್ಗಾ ಯಾರ ನಿರ್ವಹಣೆಯೂ ಇಲ್ಲದೆ ಪಾಳು ಬಿದ್ದಿದೆ. ಇದರ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಪಾರ್ಕ್​ನಲ್ಲಿದೆ‌ ಎಂಬ ಕಾರಣಕ್ಕೆ ತೆರವು ಮಾಡಲು ಪಟ್ಟಿ ಮಾಡಲಾಗಿದೆ.

7 / 9
ರಾಮಲಿಂಗೇಶ್ವರ ದೇವಸ್ಥಾನ

ಮೈಸೂರಿನ ಚಾಮುಂಡಿಪುರಂ ದೇವಸ್ಥಾನ. ರಸ್ತೆಗೆ ಹೊಂದುಕೊಂಡಿದೆ ಅನ್ನೋ ಕಾರಣಕ್ಕೆ ಇದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಆದರೆ ದಶಕಗಳ ಹಿಂದೆಯೇ ಈ ದೇಗುಲ ನಿರ್ಮಾಣ ಮಾಡಲಾಗಿತ್ತು. ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಜೆಪಿ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈಶ್ವರ ರಾಮಲಿಂಗೇಶ್ವರನಾಗಿ ಇಲ್ಲಿ ನೆಲೆಸಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಈ ದೇವಸ್ಥಾನ ತೆರವಿಗೂ ವಿರೋಧ ವ್ಯಕ್ತವಾಗಿದೆ.

ರಾಮಲಿಂಗೇಶ್ವರ ದೇವಸ್ಥಾನ ಮೈಸೂರಿನ ಚಾಮುಂಡಿಪುರಂ ದೇವಸ್ಥಾನ. ರಸ್ತೆಗೆ ಹೊಂದುಕೊಂಡಿದೆ ಅನ್ನೋ ಕಾರಣಕ್ಕೆ ಇದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಆದರೆ ದಶಕಗಳ ಹಿಂದೆಯೇ ಈ ದೇಗುಲ ನಿರ್ಮಾಣ ಮಾಡಲಾಗಿತ್ತು. ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಜೆಪಿ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈಶ್ವರ ರಾಮಲಿಂಗೇಶ್ವರನಾಗಿ ಇಲ್ಲಿ ನೆಲೆಸಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಈ ದೇವಸ್ಥಾನ ತೆರವಿಗೂ ವಿರೋಧ ವ್ಯಕ್ತವಾಗಿದೆ.

8 / 9
ಇಮಾಮ್​ ಹಜರತ್​ ದರ್ಗಾ

ಇಮಾಮ್​ ಹಜರತ್​ ದರ್ಗಾ

9 / 9

Published On - 9:40 am, Tue, 14 September 21

‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ