Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದು ಮಗು ಓದು: ಅರೆಬೆಳಕಿನೊಂದಿಗೆ ಈ ಸರಣಿ ಮುಕ್ತಾಯ

‘ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಇಣುಕಿ ನೋಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಬಿಡುತ್ತದೆ. ಒಟ್ಟಾರೆಯಾಗಿ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.‘ ಶ್ರೀದೇವಿ ಕಳಸದ

ಓದು ಮಗು ಓದು: ಅರೆಬೆಳಕಿನೊಂದಿಗೆ ಈ ಸರಣಿ ಮುಕ್ತಾಯ
ಸಾಂದರ್ಭಿಕ ಚಿತ್ರ
Follow us
ಶ್ರೀದೇವಿ ಕಳಸದ
|

Updated on: Jan 17, 2021 | 9:07 PM

ಕೊರೊನಾ! ಹೇಳಬೇಕೆ, ಕೇಳಬೇಕೆ ನಮ್ಮೆಲ್ಲರ ಮನೆ-ಮನಸ್ಸುಗಳ ಪರಿಸ್ಥಿತಿ ಮತ್ತು ಮಕ್ಕಳನ್ನು ನಿಭಾಯಿಸುವಿಕೆಯ ಬಗ್ಗೆ. ಆದರೂ ಸುಮ್ಮನಿರುವುದು ಹೇಗೆ? ನಮ್ಮ ಮಕ್ಕಳು ಓದಬೇಕು. ಆದಷ್ಟು ಪಠ್ಯದ ಹೊರತಾಗಿ ಓದಬೇಕು. ಭವಿಷ್ಯದ ರೋಬೋಟ್​ಗಳಾಗುವುದನ್ನು ತಪ್ಪಿಸಲಾದರೂ ಒಂದು ಸಣ್ಣ ಪ್ರಯತ್ನ ಮಾಡಬೇಕು ಎಂಬ ಕಾಳಜಿಯ ಹಿನ್ನೆಲೆಯಲ್ಲಿ ಒಂದು ವಾರದ ತನಕ ಟಿವಿ9 ಕನ್ನಡ ಡಿಜಿಟಲ್- ಓದು ಮಗು ಓದು ಸರಣಿಯನ್ನು ಪ್ರಕಟಿಸಲಾಯಿತು. ಸಾಕಷ್ಟು ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ‘ಪೋಷಕರ ಸಹಾಯ ಪಡೆದುಕೊಂಡೇ’ ಬರೆದು ಕಳಿಸಿದರು. ಹಾಗೆ ಹೇಳಲು ಕಾರಣವಿತ್ತು, ನಗರದ ಮಕ್ಕಳಿಗೆ ಕನ್ನಡ ಸ್ವಲ್ಪ ದುಬಾರಿಯೇ. ಆದರೂ ಭಾಷೆಗಿಂತ ಅವರ ಓದಿನ ಆಯ್ಕೆ, ಆಲೋಚನಾ ವಿಧಾನ ಇನ್ನಿತರ ಮಕ್ಕಳಿಗೂ ತಲುಪಲಿ ಎನ್ನುವ ಉದ್ದೇಶ ಮುಖ್ಯವಾಗಿತ್ತು.

ಇದರೊಂದಿಗೆ ಓದುತ್ತ ಓದುತ್ತ ಬರೆಯುವುದನ್ನೂ ಹೇಗೆ ಕಲಿತೆವು ಎಂದು ಕೆಲ ದೊಡ್ಡಮಕ್ಕಳೂ ಬರೆದರು. ಓದುವುದರಿಂದ ಏನೇನು ಅವಕಾಶಗಳು ದೊರೆತವು ಎಂದೂ ಹಂಚಿಕೊಂಡರು. ಹಾಗೇ ಓದುಬರಹದಿಂದ ಮೊಳೆತ ಸೂಕ್ಷ್ಮತನ, ರೂಢಿಸಿಕೊಂಡ ಸಾಮಾಜಿಕ ಪ್ರಜ್ಞೆಯ ಬಗ್ಗೆಯೂ ಹಂಚಿಕೊಂಡರು. ಇದೆಲ್ಲದಕ್ಕೆ ಪೂರಕವಾಗಿ ಮಕ್ಕಳ ಬಗ್ಗೆ ಪ್ರೀತಿ ಮತ್ತು ಸಾಮಾಜಿಕ ಕಾಳಜಿಯುಳ್ಳ ಲೇಖಕರು, ಬರಹಗಾರರು, ಪೋಷಕರು, ಶಿಕ್ಷಕರು ಉತ್ಸಾಹದಿಂದ ತಮ್ಮ ವಿಚಾರಗಳನ್ನು ಲೇಖನಗಳ ಮೂಲಕ ಕಟ್ಟಿಕೊಟ್ಟರು.

ಮೇಲ್​ವರ್ಗದ ಮಕ್ಕಳಿಗೆ ಪಠ್ಯದ ಹೊರತಾಗಿಯೂ ಏನು ಓದಬೇಕು ಎಂಬ ನಿರ್ದೇಶನವಿರುತ್ತದೆ. ಮಧ್ಯಮ ವರ್ಗದ ಮಕ್ಕಳ ಮನೆಯಲ್ಲಿ ಪೂರಕ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಆದರೆ ಕೆಳಮಧ್ಯಮ ವರ್ಗದ ಮತ್ತು ಹಳ್ಳಿಗಳ ಮಕ್ಕಳಿಗೆ? ಪೋಷಕರಿಗೆ ಆಸೆ ಇದ್ದರೂ ಮಾರ್ಗದರ್ಶನ ಮತ್ತು ಸೌಲಭ್ಯದ ಕೊರತೆ, ಅಸಹಾಯಕತೆ. ಹೀಗಿರುವಾಗ ಹಳ್ಳಿಗಳಲ್ಲಿ ನಮ್ಮ ಮಕ್ಕಳು ಆನ್​ಲೈನ್​ ಶಿಕ್ಷಣ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ಪಠ್ಯೇತರ ಓದು ಹೇಗಿದೆ ಎಂದು ಯೋಚಿಸುವುದೇ ಅಸಮಂಜಸವೆನ್ನಿಸಿಬಿಟ್ಟಿತು. ಈ ಬಗ್ಗೆ ಕೆಲ ಶಿಕ್ಷಕರು ತಾವು ಇಷ್ಟು ವರ್ಷಗಳ ಕಾಲ ಶಾಲೆಗಳಲ್ಲಿ ಪಠ್ಯೇತರ ಓದಿಗಾಗಿ ಮಾಡಿದ ಪ್ರಯತ್ನಗಳನ್ನು ಹುರುಪಿನೊಂದಿಗೆ ಮಾತುಗಳಲ್ಲಿ ಮೆಲುಕು ಹಾಕಿದರೂ ಬರೆಯುವ ಉತ್ಸಾಹ ತೋರಲಿಲ್ಲ. ಈ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.

ಆದರೂ ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಪುಸ್ತಕದಂಗಡಿಗಳಿಗೆ ಭೇಟಿ ಕೊಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಕೊಳ್ಳುತ್ತದೆ.

ಸರಣಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://tv9kannada.com/tag/book-reading 

ಓದು ಮಗು ಓದು: ಹೀಗಿದೆ ಮಕ್ಕಳ ಪುಸ್ತಕಗಳ ವ್ಯಾಪಾರ ವಹಿವಾಟು…

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು