AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದು ಮಗು ಓದು: ಅರೆಬೆಳಕಿನೊಂದಿಗೆ ಈ ಸರಣಿ ಮುಕ್ತಾಯ

‘ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಇಣುಕಿ ನೋಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಬಿಡುತ್ತದೆ. ಒಟ್ಟಾರೆಯಾಗಿ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.‘ ಶ್ರೀದೇವಿ ಕಳಸದ

ಓದು ಮಗು ಓದು: ಅರೆಬೆಳಕಿನೊಂದಿಗೆ ಈ ಸರಣಿ ಮುಕ್ತಾಯ
ಸಾಂದರ್ಭಿಕ ಚಿತ್ರ
ಶ್ರೀದೇವಿ ಕಳಸದ
|

Updated on: Jan 17, 2021 | 9:07 PM

Share

ಕೊರೊನಾ! ಹೇಳಬೇಕೆ, ಕೇಳಬೇಕೆ ನಮ್ಮೆಲ್ಲರ ಮನೆ-ಮನಸ್ಸುಗಳ ಪರಿಸ್ಥಿತಿ ಮತ್ತು ಮಕ್ಕಳನ್ನು ನಿಭಾಯಿಸುವಿಕೆಯ ಬಗ್ಗೆ. ಆದರೂ ಸುಮ್ಮನಿರುವುದು ಹೇಗೆ? ನಮ್ಮ ಮಕ್ಕಳು ಓದಬೇಕು. ಆದಷ್ಟು ಪಠ್ಯದ ಹೊರತಾಗಿ ಓದಬೇಕು. ಭವಿಷ್ಯದ ರೋಬೋಟ್​ಗಳಾಗುವುದನ್ನು ತಪ್ಪಿಸಲಾದರೂ ಒಂದು ಸಣ್ಣ ಪ್ರಯತ್ನ ಮಾಡಬೇಕು ಎಂಬ ಕಾಳಜಿಯ ಹಿನ್ನೆಲೆಯಲ್ಲಿ ಒಂದು ವಾರದ ತನಕ ಟಿವಿ9 ಕನ್ನಡ ಡಿಜಿಟಲ್- ಓದು ಮಗು ಓದು ಸರಣಿಯನ್ನು ಪ್ರಕಟಿಸಲಾಯಿತು. ಸಾಕಷ್ಟು ಮಕ್ಕಳು ತಮಗಿಷ್ಟವಾದ ಪುಸ್ತಕಗಳ ಬಗ್ಗೆ ‘ಪೋಷಕರ ಸಹಾಯ ಪಡೆದುಕೊಂಡೇ’ ಬರೆದು ಕಳಿಸಿದರು. ಹಾಗೆ ಹೇಳಲು ಕಾರಣವಿತ್ತು, ನಗರದ ಮಕ್ಕಳಿಗೆ ಕನ್ನಡ ಸ್ವಲ್ಪ ದುಬಾರಿಯೇ. ಆದರೂ ಭಾಷೆಗಿಂತ ಅವರ ಓದಿನ ಆಯ್ಕೆ, ಆಲೋಚನಾ ವಿಧಾನ ಇನ್ನಿತರ ಮಕ್ಕಳಿಗೂ ತಲುಪಲಿ ಎನ್ನುವ ಉದ್ದೇಶ ಮುಖ್ಯವಾಗಿತ್ತು.

ಇದರೊಂದಿಗೆ ಓದುತ್ತ ಓದುತ್ತ ಬರೆಯುವುದನ್ನೂ ಹೇಗೆ ಕಲಿತೆವು ಎಂದು ಕೆಲ ದೊಡ್ಡಮಕ್ಕಳೂ ಬರೆದರು. ಓದುವುದರಿಂದ ಏನೇನು ಅವಕಾಶಗಳು ದೊರೆತವು ಎಂದೂ ಹಂಚಿಕೊಂಡರು. ಹಾಗೇ ಓದುಬರಹದಿಂದ ಮೊಳೆತ ಸೂಕ್ಷ್ಮತನ, ರೂಢಿಸಿಕೊಂಡ ಸಾಮಾಜಿಕ ಪ್ರಜ್ಞೆಯ ಬಗ್ಗೆಯೂ ಹಂಚಿಕೊಂಡರು. ಇದೆಲ್ಲದಕ್ಕೆ ಪೂರಕವಾಗಿ ಮಕ್ಕಳ ಬಗ್ಗೆ ಪ್ರೀತಿ ಮತ್ತು ಸಾಮಾಜಿಕ ಕಾಳಜಿಯುಳ್ಳ ಲೇಖಕರು, ಬರಹಗಾರರು, ಪೋಷಕರು, ಶಿಕ್ಷಕರು ಉತ್ಸಾಹದಿಂದ ತಮ್ಮ ವಿಚಾರಗಳನ್ನು ಲೇಖನಗಳ ಮೂಲಕ ಕಟ್ಟಿಕೊಟ್ಟರು.

ಮೇಲ್​ವರ್ಗದ ಮಕ್ಕಳಿಗೆ ಪಠ್ಯದ ಹೊರತಾಗಿಯೂ ಏನು ಓದಬೇಕು ಎಂಬ ನಿರ್ದೇಶನವಿರುತ್ತದೆ. ಮಧ್ಯಮ ವರ್ಗದ ಮಕ್ಕಳ ಮನೆಯಲ್ಲಿ ಪೂರಕ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಆದರೆ ಕೆಳಮಧ್ಯಮ ವರ್ಗದ ಮತ್ತು ಹಳ್ಳಿಗಳ ಮಕ್ಕಳಿಗೆ? ಪೋಷಕರಿಗೆ ಆಸೆ ಇದ್ದರೂ ಮಾರ್ಗದರ್ಶನ ಮತ್ತು ಸೌಲಭ್ಯದ ಕೊರತೆ, ಅಸಹಾಯಕತೆ. ಹೀಗಿರುವಾಗ ಹಳ್ಳಿಗಳಲ್ಲಿ ನಮ್ಮ ಮಕ್ಕಳು ಆನ್​ಲೈನ್​ ಶಿಕ್ಷಣ ಪಡೆಯಲು ಪರದಾಡುತ್ತಿರುವ ಸಂದರ್ಭದಲ್ಲಿ ಪಠ್ಯೇತರ ಓದು ಹೇಗಿದೆ ಎಂದು ಯೋಚಿಸುವುದೇ ಅಸಮಂಜಸವೆನ್ನಿಸಿಬಿಟ್ಟಿತು. ಈ ಬಗ್ಗೆ ಕೆಲ ಶಿಕ್ಷಕರು ತಾವು ಇಷ್ಟು ವರ್ಷಗಳ ಕಾಲ ಶಾಲೆಗಳಲ್ಲಿ ಪಠ್ಯೇತರ ಓದಿಗಾಗಿ ಮಾಡಿದ ಪ್ರಯತ್ನಗಳನ್ನು ಹುರುಪಿನೊಂದಿಗೆ ಮಾತುಗಳಲ್ಲಿ ಮೆಲುಕು ಹಾಕಿದರೂ ಬರೆಯುವ ಉತ್ಸಾಹ ತೋರಲಿಲ್ಲ. ಈ ಸಾಮಾಜಿಕ ಅಂತರ ನಮ್ಮ ಎದೆಗಳನ್ನು ವಿಚಿತ್ರವಾಗಿ ಹೆಪ್ಪುಗಟ್ಟಿಸಿರುವುದಂತೂ ಸತ್ಯ.

ಆದರೂ ನಗರದ ಪುಸ್ತಕದಂಗಡಿಗಳು ಮೆಲ್ಲಗೆ ಉಸಿರಾಡುತ್ತಿವೆ. ಮಕ್ಕಳು ಪೋಷಕರ ಬೆರಳು ಹಿಡಿದುಕೊಂಡು ಪುಸ್ತಕದಂಗಡಿಗಳಿಗೆ ಭೇಟಿ ಕೊಡುತ್ತಿದ್ದಾರೆ ಎನ್ನುವುದು ಆಶಾಭಾವನೆ ಕೊಡುತ್ತದೆಯಾದರೂ ಹಳ್ಳಿಮಕ್ಕಳ ಹಾಡುಪಾಡು ಎದೆಯೊಳಗೇ ಉಳಿದುಕೊಳ್ಳುತ್ತದೆ.

ಸರಣಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://tv9kannada.com/tag/book-reading 

ಓದು ಮಗು ಓದು: ಹೀಗಿದೆ ಮಕ್ಕಳ ಪುಸ್ತಕಗಳ ವ್ಯಾಪಾರ ವಹಿವಾಟು…

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ