AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿ: ಗಣಪತಿಯನ್ನು ಮನೆಗೆ ತರುವ ಮೊದಲು ಮಾಡಬೇಕಾದ ಪ್ರಮುಖ ಸಿದ್ಧತೆಗಳಿವು

ಗಣೇಶ ಚತುರ್ಥಿ ಆಚರಣೆಗೆ ಭಕ್ತರು ಸಿದ್ಧರಾಗಿದ್ದು, ವಿಘ್ನನಿವಾರಕ ಗಣಪತಿಯನ್ನು ಸ್ವಾಗತಿಸಲು ಮನೆಯನ್ನು ಸ್ವಚ್ಛಗೊಳಿಸಿ, ಅಲಂಕರಿಸಬೇಕು. ಪೂಜೆಗೆ ಅಗತ್ಯ ಸಾಮಗ್ರಿಗಳು, ಮೋದಕ ಸೇರಿದಂತೆ ನೈವೇದ್ಯ ಸಿದ್ಧಪಡಿಸಿ. ಪರಿಸರ ಸ್ನೇಹಿ ಗಣಪತಿ ಮೂರ್ತಿ ಆಯ್ಕೆ ಮಾಡಿ. ಸೆಪ್ಟೆಂಬರ್ 14ರಂದು ಶುಭ ಮುಹೂರ್ತದಲ್ಲಿ ಪೂಜಿಸಿ. ಚಂದ್ರ ದರ್ಶನ ನಿಷಿದ್ಧ ಮತ್ತು ವಿಸರ್ಜನೆಗೆ ಪರಿಸರ ಸ್ನೇಹಿ ವಿಧಾನಗಳನ್ನು ಅನುಸರಿಸಿ.

ಗಣೇಶ ಚತುರ್ಥಿ: ಗಣಪತಿಯನ್ನು ಮನೆಗೆ ತರುವ ಮೊದಲು ಮಾಡಬೇಕಾದ ಪ್ರಮುಖ ಸಿದ್ಧತೆಗಳಿವು
ಗಣೇಶ ಚತುರ್ಥಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 12, 2026 | 11:58 AM

Share

ಗಣೇಶ ಚತುರ್ಥಿಯ ಸಂಭ್ರಮ ದೇಶಾದ್ಯಂತ ಮನೆಮಾಡಿದೆ. ವಿಘ್ನನಿವಾರಕನಾದ ಗಣಪತಿಯನ್ನು ಮನೆಗೆ ತರಲು ಭಕ್ತರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗಣೇಶನ ಆಗಮನವು ಮನೆಗೆ ಜ್ಞಾನ, ಶುಭ, ಸಂಪತ್ತು ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎಂಬುದು ದೃಢ ನಂಬಿಕೆ. ಆದರೆ, ಗಣಪನನ್ನು ಮನೆಗೆ ಕರೆತರುವ ಮೊದಲು ಕೆಲವು ಮುಖ್ಯ ಕಾರ್ಯಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯ. ಗಣೇಶ ಪ್ರತಿಷ್ಠಾಪನೆಗೆ ಮುನ್ನ ಕೈಗೊಳ್ಳಬೇಕಾದ ಸಿದ್ಧತೆಗಳು, ಪೂಜಾ ಮುಹೂರ್ತ ಮತ್ತು ಚಂದ್ರ ದರ್ಶನದ ಸಮಯದ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಪೂಜಾ ಸ್ಥಳದ ಸ್ವಚ್ಛತೆ ಮತ್ತು ಮಂಟಪ ಅಲಂಕಾರ:

ಗಣೇಶನನ್ನು ಆಹ್ವಾನಿಸುವ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ವಿಗ್ರಹ ಪ್ರತಿಷ್ಠಾಪಿಸುವ ಸ್ಥಳ ಹಾಗೂ ಪೂಜಾ ಕೋಣೆಯನ್ನು ಅನಗತ್ಯ ವಸ್ತುಗಳಿಂದ ತೆರವುಗೊಳಿಸಿ ಅತ್ಯಂತ ಪವಿತ್ರವಾಗಿ ಸಿದ್ಧಪಡಿಸುವುದು ಪ್ರಥಮ ಆದ್ಯತೆಯಾಗಿದೆ. ಪೂಜಾ ಸ್ಥಳದಲ್ಲಿ ಶುದ್ಧವಾದ ಚೌಕಿಯನ್ನಿಟ್ಟು, ಕೆಂಪು ಅಥವಾ ಹಳದಿ ಬಟ್ಟೆ ಹರಡಿ. ಮಂಟಪವನ್ನು ಹೂವುಗಳು, ಮಾವಿನ ಎಲೆ, ರಂಗೋಲಿ ಮತ್ತು ದೀಪಗಳಿಂದ ಸುಂದರವಾಗಿ ಅಲಂಕರಿಸಿ.

ಪೂಜಾ ಸಾಮಗ್ರಿಗಳು ಮತ್ತು ನೈವೇದ್ಯ:

ದೀಪ, ಧೂಪ, ಅಕ್ಷತೆ, ಗರಿಕೆ ಹುಲ್ಲು, ಕಲಶ, ತೆಂಗಿನಕಾಯಿ ಹಾಗೂ ಪಂಚಾಮೃತ ಸಾಮಗ್ರಿಗಳನ್ನು ಮುಂಚಿತವಾಗಿ ಜೋಡಿಸಿ. ಗಣೇಶನಿಗೆ ಪ್ರಿಯವಾದ ಮೋದಕ ಮತ್ತು ಹಣ್ಣುಗಳನ್ನು ಪೂಜೆಗೆ ಸಿದ್ಧವಾಗಿಟ್ಟುಕೊಳ್ಳಿ. ಇದಲ್ಲದೇ ನೈಸರ್ಗಿಕ ಜೇಡಿಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಆಯ್ಕೆ ಮಾಡುವುದು ಶ್ರೇಷ್ಠ. ಮೂರ್ತಿಯನ್ನು ಅತ್ಯಂತ ಭಕ್ತಿ ಮತ್ತು ಜಾಗರೂಕತೆಯಿಂದ ಮನೆಗೆ ಕರೆತನ್ನಿ.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಪೂಜಾ ಮುಹೂರ್ತ:

ಸೆಪ್ಟೆಂಬರ್ 14 ರಂದು ಗಣೇಶ ಚತುರ್ಥಿ ಇದ್ದು, ಮಧ್ಯಾಹ್ನದ ಪೂಜಾ ಶುಭ ಮುಹೂರ್ತವು ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 01:21 ರವರೆಗೆ ಇರಲಿದೆ.

ಚಂದ್ರ ದರ್ಶನ ನಿಷೇಧ:

ಚೌತಿಯಂದು ಚಂದ್ರನನ್ನು ನೋಡಿದರೆ ‘ಮಿಥ್ಯಾ ದೋಷ’ (ಅಪವಾದ) ಉಂಟಾಗುತ್ತದೆ. ಆದ್ದರಿಂದ ಚಂದ್ರನನ್ನು ನೋಡದಂತೆ ಎಚ್ಚರ ವಹಿಸಿ.

ವಿಸರ್ಜನೆ ಯೋಜನೆ:

ಹಬ್ಬದ ಆಚರಣೆಯಷ್ಟೇ ಗಣೇಶನ ವಿಸರ್ಜನೆಯೂ ಪ್ರಮುಖವಾದದ್ದು. ವಿಸರ್ಜನೆಯನ್ನು ಮನೆಯಲ್ಲೇ ಸರಳವಾಗಿ ಮಾಡುತ್ತೀರೋ ಅಥವಾ ಸ್ಥಳೀಯಾಡಳಿತ ಸೂಚಿಸಿದ ಸ್ಥಳದಲ್ಲಿ ಮಾಡುತ್ತೀರೋ ಎಂಬುದನ್ನು ಮುಂಚಿತವಾಗಿಯೇ ನಿರ್ಧರಿಸಿ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯಾಗಿದ್ದರೆ ಮನೆಯಲ್ಲಿಯೇ ಕುಂಡದಲ್ಲಿ ವಿಸರ್ಜಿಸಿ, ಆ ಮಣ್ಣನ್ನು ಗಿಡಗಳಿಗೆ ಬಳಸುವುದು ಅತ್ಯಂತ ಶ್ರೇಷ್ಠ ವಿಧಾನ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us