AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ಅಡುಗೆಮನೆ ಮತ್ತು ಸ್ನಾನಗೃಹ ಅಕ್ಕಪಕ್ಕದಲ್ಲಿರುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಮನೆ ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯ ಕೇಂದ್ರವಾಗಿದ್ದು, ವಾಸ್ತು ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಅಡುಗೆಮನೆ ('ಅಗ್ನಿ') ಮತ್ತು ಸ್ನಾನಗೃಹ ('ಜಲ') ಅಕ್ಕಪಕ್ಕದಲ್ಲಿದ್ದರೆ ವಾಸ್ತು ದೋಷ ಉಂಟಾಗಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಕುಟುಂಬದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಬಾಗಿಲು ಮುಚ್ಚುವುದು, ಶುಚಿತ್ವ ಕಾಪಾಡುವುದು, ಕರ್ಪೂರ ಅಥವಾ ಉಪ್ಪು ಬಳಸುವುದು ಮುಂತಾದ ಸರಳ ಪರಿಹಾರಗಳ ಮೂಲಕ ಈ ದೋಷವನ್ನು ನಿವಾರಿಸಬಹುದು.

Vasthu Tips: ಅಡುಗೆಮನೆ ಮತ್ತು ಸ್ನಾನಗೃಹ ಅಕ್ಕಪಕ್ಕದಲ್ಲಿರುವುದು ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ವಾಸ್ತು ದೋಷ ಪರಿಹಾರ
ಅಕ್ಷತಾ ವರ್ಕಾಡಿ
|

Updated on:Jul 23, 2026 | 7:32 AM

Share

ನಮ್ಮ ಜೀವನದಲ್ಲಿ ಮನೆ ಎಂಬುದು ಕೇವಲ ವಾಸಿಸುವ ಸ್ಥಳವಲ್ಲ, ಅದು ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯ ಕೇಂದ್ರ. ಹೀಗಾಗಿ, ಗೃಹ ನಿರ್ಮಾಣ ಮತ್ತು ಮನೆಯ ವಿನ್ಯಾಸದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಾಸ್ತು ತತ್ವಗಳನ್ನು ಸರಿಯಾಗಿ ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಆದರೆ, ಅರಿವಿಲ್ಲದೇ ಮಾಡುವ ಸಣ್ಣಪುಟ್ಟ ವಾಸ್ತು ತಪ್ಪುಗಳು ಕುಟುಂಬದ ಸದಸ್ಯರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.

ಅಡುಗೆಮನೆ ಮತ್ತು ಸ್ನಾನಗೃಹ ಅಕ್ಕಪಕ್ಕದಲ್ಲಿದ್ದರೆ ಏನಾಗುತ್ತದೆ?

ಸಾಮಾನ್ಯವಾಗಿ ಮಾರ್ಡನ್​​ ಮನೆಗಳ ನಿರ್ಮಾಣದಲ್ಲಿ ಜಾಗದ ಕೊರತೆಯಿಂದಾಗಿ ಅಡುಗೆಮನೆ ಮತ್ತು ಸ್ನಾನಗೃಹಗಳನ್ನು (Bathroom) ಅಕ್ಕಪಕ್ಕದಲ್ಲೇ ನಿರ್ಮಿಸುವುದನ್ನು ಕಾಣಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿ ಅಡುಗೆಮನೆ ಮತ್ತು ಬಾತ್‌ರೂಮ್‌ಗಳು ಒಂದಕ್ಕೊಂದು ತಾಕಿಕೊಂಡಿರುವುದು ದೊಡ್ಡ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯು ‘ಅಗ್ನಿ’ ತತ್ವವನ್ನು ಪ್ರತಿನಿಧಿಸಿದರೆ, ಸ್ನಾನಗೃಹವು ‘ಜಲ’ ಮತ್ತು ತ್ಯಾಜ್ಯ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇವೆರಡೂ ಪರಸ್ಪರ ವಿರುದ್ಧ ಶಕ್ತಿಗಳಾಗಿರುವುದರಿಂದ, ಈ ವಿನ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ವಾಸ್ತು ದೋಷ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ:

ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ಅಡುಗೆಮನೆ ಹಾಗೂ ಸ್ನಾನಗೃಹಗಳು ಅಕ್ಕಪಕ್ಕದಲ್ಲೇ ಇದ್ದು, ಅವುಗಳನ್ನು ತಕ್ಷಣವೇ ಕೆಡವಿ ಬದಲಾಯಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಕೆಲವು ಸರಳ ಹಾಗೂ ಪರಿಣಾಮಕಾರಿ ಪರಿಹಾರಗಳ ಮೂಲಕ ಈ ದೋಷದ ಪ್ರಭಾವವನ್ನು ಕಡಿಮೆ ಮಾಡಬಹುದು.

  • ಬಾಗಿಲನ್ನು ಸದಾ ಮುಚ್ಚಿಡಿ: ಸ್ನಾನಗೃಹವನ್ನು ಬಳಸಿದ ತಕ್ಷಣವೇ ಅದರ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಬಾತ್‌ರೂಮ್‌ನಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿ ಹಾಗೂ ದುರ್ವಾಸನೆಯು ಅಡುಗೆಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ.
  • ಶುಚಿತ್ವಕ್ಕೆ ಮೊದಲ ಆದ್ಯತೆ: ಸ್ನಾನಗೃಹವನ್ನು ಸದಾ ಸ್ವಚ್ಛ ಹಾಗೂ ಶುಷ್ಕವಾಗಿ (Dry) ಇಟ್ಟುಕೊಳ್ಳಿ. ತೇವಾಂಶ ಮತ್ತು ಕೊಳೆ ಹೆಚ್ಚಾದಷ್ಟು ನಕಾರಾತ್ಮಕ ಶಕ್ತಿಯ ಪ್ರಭಾವವೂ ಹೆಚ್ಚಾಗುತ್ತದೆ.
  • ಕರ್ಪೂರ ಅಥವಾ ವಾಸ್ತು ಉಪ್ಪು ಬಳಸಿ: ಸ್ನಾನಗೃಹದ ಒಂದು ಮೂಲೆಯಲ್ಲಿ ಗಾಜಿನ ಬೌಲ್‌ನಲ್ಲಿ ಕಲ್ಲು ಉಪ್ಪು (ಸಮುದ್ರದ ಉಪ್ಪು) ಅಥವಾ ಕರ್ಪೂರವನ್ನು ಇಡುವುದರಿಂದ ಅದು ವಾತಾವರಣದಲ್ಲಿರುವ ನಕಾರಾತ್ಮಕ ಅಲೆಗಳನ್ನು ಹೀರಿಕೊಳ್ಳುತ್ತದೆ.

ನಿಮ್ಮ ಮನೆಯ ವಾಸ್ತು ದೋಷಗಳನ್ನು ಸಕಾಲದಲ್ಲಿ ಗುರುತಿಸಿ ಈ ರೀತಿಯ ಸರಳ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ, ಮನೆಯಲ್ಲಿ ಮತ್ತೆ ಧನಾತ್ಮಕ ಶಕ್ತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 am, Thu, 23 July 26

Follow Us
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ