AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samudrika Shastra: ಹೊಕ್ಕುಳ ಬಳಿ ಜನ್ಮ ಗುರುತು ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ?

ಭಾರತೀಯ ಸಮುದ್ರಿಕ ಶಾಸ್ತ್ರದ ಪ್ರಕಾರ, ಹೊಕ್ಕುಳಿನ ಸುತ್ತಲಿನ ಜನ್ಮ ಗುರುತುಗಳು ವ್ಯಕ್ತಿಯ ಭವಿಷ್ಯ, ವ್ಯಕ್ತಿತ್ವ ಮತ್ತು ಅದೃಷ್ಟವನ್ನು ಅನಾವರಣಗೊಳಿಸುತ್ತವೆ. ಹೊಕ್ಕುಳನ್ನು ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ, ಇದು ಹಿಂದಿನ ಕರ್ಮಗಳಿಗೂ ಸಂಬಂಧಿಸಿದೆ. ಹೊಕ್ಕುಳಿನ ಮೇಲೆ, ಸುತ್ತಮುತ್ತ ಅಥವಾ ಕೆಳಭಾಗದಲ್ಲಿರುವ ಮಚ್ಚೆಗಳು ಯಾವ ರೀತಿ ಪ್ರಭಾವ ಬೀರುತ್ತವೆ ಮತ್ತು ಮಸುಕಾದ ಗುರುತುಗಳು ಹೇಗೆ ವಿಶೇಷ ಅದೃಷ್ಟ ತರುತ್ತವೆ ಎಂಬ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Samudrika Shastra: ಹೊಕ್ಕುಳ ಬಳಿ ಜನ್ಮ ಗುರುತು ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ?
ಸಾಮುದ್ರಿಕ ಶಾಸ್ತ್ರImage Credit source: nextmedclinic
ಅಕ್ಷತಾ ವರ್ಕಾಡಿ
|

Updated on: Jul 23, 2026 | 11:28 AM

Share

ಭಾರತೀಯ ಸಾಂಪ್ರದಾಯಿಕ ಸಾಮುದ್ರಿಕ ಶಾಸ್ತ್ರದಲ್ಲಿ (Samudrika Shastra) ದೇಹದ ಮೇಲಿನ ಪ್ರತಿಯೊಂದು ಜನ್ಮ ಗುರುತು ಹಾಗೂ ಹುಟ್ಟುಮಚ್ಚೆಗೆ ತನ್ನದೇ ಆದ ಆಳವಾದ ಅರ್ಥವಿದೆ. ಇವುಗಳಲ್ಲಿ ಹೊಕ್ಕುಳಿನ (Navel) ಭಾಗವನ್ನು ಅತ್ಯಂತ ಮುಖ್ಯವಾದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಹೊಕ್ಕುಳು ವ್ಯಕ್ತಿಯ ಪ್ರಸ್ತುತ ಜೀವನಕ್ಕೆ ಮಾತ್ರವಲ್ಲದೆ, ಆತನ ಹಿಂದಿನ ಜನ್ಮದ ಕರ್ಮಗಳಿಗೂ ಸಂಬಂಧಿಸಿದೆ ಎಂಬ ನಂಬಿಕೆ ಇದೆ. ಈ ಶಕ್ತಿ ಕೇಂದ್ರದ ಸುತ್ತಮುತ್ತಲಿರುವ ಜನ್ಮ ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಅದೃಷ್ಟ ಮತ್ತು ಭವಿಷ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ? ವಿವರವಾದ ಮಾಹಿತಿ ಇಲ್ಲಿದೆ.

ಹೊಕ್ಕುಳಿನ ಮೇಲೆಯೇ ಜನ್ಮ ಗುರುತು ಇದೆಯೇ?

ನಿಮ್ಮ ಹೊಕ್ಕುಳಿನ ಮೇಲೆಯೇ ಹುಟ್ಟುಮಚ್ಚೆ ಅಥವಾ ಜನ್ಮ ಗುರುತು ಇದ್ದರೆ, ನೀವು ಎಲ್ಲರೊಂದಿಗೆ ಬೇಗನೇ ಬೆರೆಯುವ ಆಕರ್ಷಕ ವ್ಯಕ್ತಿತ್ವದವರಾಗಿರುತ್ತೀರಿ. ಸಮುದ್ರಿಕ ಶಾಸ್ತ್ರದ ಪ್ರಕಾರ, ಇಂತಹ ವ್ಯಕ್ತಿಗಳು ಜೀವನದಲ್ಲಿ ಉತ್ತಮ ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಆದರೆ, ಇಷ್ಟೆಲ್ಲಾ ಇದ್ದರೂ ಇವರಿಗೆ ತಕ್ಕಂತೆ ಸಮಯ ಕಳೆಯುವ ಮತ್ತು ಭಾವನಾತ್ಮಕವಾಗಿ ಅರ್ಥ ಮಾಡಿಕೊಳ್ಳುವ ಸೂಕ್ತ ಸಂಬಂಧಗಳು ಸಿಗುವುದು ತೀರ ವಿರಳ. ಹೀಗಾಗಿ, ಇವರು ಜೀವನದಲ್ಲಿ ಹಲವು ಬಾರಿ ತೀವ್ರ ಒಂಟಿತನವನ್ನು ಅನುಭವಿಸುವ ಸಾಧ್ಯತೆಯಿರುತ್ತದೆ.

ಹೊಕ್ಕುಳಿನ ಸುತ್ತಮುತ್ತ ಜನ್ಮ ಗುರುತು:

ಹೊಕ್ಕುಳಿನ ಬಲ ಅಥವಾ ಎಡಭಾಗದ ಹತ್ತಿರದಲ್ಲೇ ಜನ್ಮ ಗುರುತು ಇದ್ದರೆ, ನೀವು ತಮಾಷೆಯ ಮತ್ತು ಉಲ್ಲಾಸದಾಯಕ ಸ್ವಭಾವದವರಾಗಿರುತ್ತೀರಿ. ಇಂತಹ ವ್ಯಕ್ತಿಗಳು ಹುಟ್ಟಿನಿಂದಲೇ ಬಲವಾದ ಅದೃಷ್ಟವನ್ನು ಹೊಂದಿರುತ್ತಾರೆ. ಜೀವನದ ಗುರಿಗಳನ್ನು ತಲುಪಲು ಇವರು ಕಷ್ಟಪಟ್ಟು ಶ್ರಮಿಸಬೇಕಾಗಿ ಬಂದರೂ, ತಮ್ಮ ಅದೃಷ್ಟದ ಬಲದಿಂದ ಅಂತಿಮವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಇವರಿಗೆ ಸದಾ ಹೆತ್ತವರ ಬೆಂಬಲವಿರುತ್ತದೆ ಹಾಗೂ ಪೂರ್ವಜರ ಆಸ್ತಿ ಹರಿದು ಬರುವುದರಿಂದ ಆರ್ಥಿಕ ಮುಕ್ಕಟ್ಟು ಎಂದಿಗೂ ಎದುರಾಗುವುದಿಲ್ಲ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಹೊಕ್ಕುಳಿನ ಕೆಳಭಾಗದಲ್ಲಿ ಜನ್ಮ ಗುರುತು:

ಹೊಕ್ಕುಳಿನ ಕೆಳಭಾಗದಲ್ಲಿ ಹುಟ್ಟುಮಚ್ಚೆ ಇರುವುದನ್ನು ಸಮುದ್ರಿಕ ಶಾಸ್ತ್ರದಲ್ಲಿ ಕೊಂಚ ಅಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಹಿಂದಿನ ಜನ್ಮದ ಕರ್ಮಗಳ ಪ್ರತಿಫಲವನ್ನು ಸೂಚಿಸುತ್ತದೆ. ಇವರು ಜೀವನದುದ್ದಕ್ಕೂ ಸಾಕಷ್ಟು ಸವಾಲುಗಳು ಮತ್ತು ಹೋರಾಟಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಈ ಗುರುತು ಇರುವ ಜನರು ತಮ್ಮ ವೃತ್ತಿಜೀವನದಲ್ಲಿಅತ್ಯುನ್ನತ ಎತ್ತರಕ್ಕೆ ಬೆಳೆಯುತ್ತಾರೆ ಮತ್ತು ಅದ್ಭುತ ಯಶಸ್ಸನ್ನು ಸಾಧಿಸುತ್ತಾರೆ.

ಮಸುಕಾದ ಜನ್ಮ ಗುರುತು:

ನಿಮ್ಮ ಹೊಕ್ಕುಳಿನ ಬಳಿ ಅತ್ಯಂತ ಮಸುಕಾದ (Faint) ಜನ್ಮ ಗುರುತು ಇದ್ದರೆ, ಸಮುದ್ರಿಕ ಶಾಸ್ತ್ರದ ಪ್ರಕಾರ ನೀವು ಜಗತ್ತಿನ ಅತ್ಯಂತ ಅದೃಷ್ಟವಂತರಲ್ಲಿ ಒಬ್ಬರು. ಇಂತಹ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅತ್ಯಂತ ಸುಲಭವಾಗಿ ಯಶಸ್ಸನ್ನು ಕಾಣುತ್ತಾರೆ. ಇವರ ದಾಂಪತ್ಯ ಜೀವನವು ಅತ್ಯಂತ ಪ್ರೀತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಅದ್ಭುತ ಮನೋನಿಗ್ರಹ ಮತ್ತು ಸಮತೋಲನ ಸ್ವಭಾವ ಹೊಂದಿರುವ ಇವರ ವ್ಯಕ್ತಿತ್ವವು ಇತರರನ್ನು ಸುಲಭವಾಗಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್