AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2024 Day 8: ನವರಾತ್ರಿಯ 8ನೇ ದಿನದ ಸ್ವರೂಪ ಮಹಾಗೌರಿಯ ಕಥೆ ಹಾಗೂ ಪೂಜಾ ವಿಧಾನ

ಮಹಾಗೌರೀ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ. ಅಷ್ಟೇ ಅಲ್ಲ, ಆಕೆಯ ಆಭರಣಗಳೂ ಬಿಳಿಯೇ. ಇನ್ನು ಅವಳ ವಾಹನ ವೃಷಭ ಹಾಗೂ ಅದು ಕೂಡ ಬೆಳ್ಳಗಿದೆ. ಆ ತಾಯಿಯ ಬಲಕೈ ಮೇಲು ಭಾಗವು ಅಭಯ ಮುದ್ರೆಯನ್ನು ಪ್ರದರ್ಶಿಸುತ್ತಿದ್ದು, ಕೆಳಗಿನ ಬಲಕೈಯಲ್ಲಿ ತ್ರಿಶೂಲ ಇದೆ. ಅದೇ ರೀತಿ ಎಡಭಾಗದ ಮೇಲು ಕೈನಲ್ಲಿ ಡಮರು ಹಾಗೂ ಕೆಳಗಿನ ಎಡಕೈನಲ್ಲಿ ವರದ ಮುದ್ರೆಯಿದೆ.

Navratri 2024 Day 8: ನವರಾತ್ರಿಯ 8ನೇ ದಿನದ ಸ್ವರೂಪ ಮಹಾಗೌರಿಯ ಕಥೆ ಹಾಗೂ ಪೂಜಾ ವಿಧಾನ
Maha Gowri
Follow us
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ

Updated on:Oct 03, 2024 | 2:37 PM

ನವರಾತ್ರಿ ಎಂಟನೇ ದಿನ ಸ್ವರೂಪ ಮಹಾಗೌರೀ ಎಂದಾಗಿರುತ್ತದೆ. ಆಕೆಯ ಬಣ್ಣ ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಇನ್ನು ಆ ಬಿಳಿಯ ಬಣ್ಣಕ್ಕೆ ಉಪಮೆಯಂತೆ ಶಂಖ, ಚಂದ್ರ ಮತ್ತು ಕುಂದ ಪುಷ್ಪಗಳನ್ನು ಉಲ್ಲೇಖಿಸಲಾಗಿದೆ. ಇನ್ನು ಆ ತಾಯಿಯ ವಯಸ್ಸು ಎಂಟು ವರ್ಷಗಳು ಮಾತ್ರ. “ಅಷ್ಟ ವರ್ಷಾ ಭವೇದ್ ಗೌರೀ” ಎನ್ನಲಾಗುತ್ತದೆ. ಆಕೆ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ. ಅಷ್ಟೇ ಅಲ್ಲ, ಆಕೆಯ ಆಭರಣಗಳೂ ಬಿಳಿಯೇ. ಆಕೆಗೆ ನಾಲ್ಕು ಭುಜಗಳು. ಇನ್ನು ಅವಳ ವಾಹನ ವೃಷಭ ಹಾಗೂ ಅದು ಕೂಡ ಬೆಳ್ಳಗಿದೆ. ಆ ತಾಯಿಯ ಬಲಕೈ ಮೇಲು ಭಾಗವು ಅಭಯ ಮುದ್ರೆಯನ್ನು ಪ್ರದರ್ಶಿಸುತ್ತಿದ್ದು, ಕೆಳಗಿನ ಬಲಕೈಯಲ್ಲಿ ತ್ರಿಶೂಲ ಇದೆ. ಅದೇ ರೀತಿ ಎಡಭಾಗದ ಮೇಲು ಕೈನಲ್ಲಿ ಡಮರು ಹಾಗೂ ಕೆಳಗಿನ ಎಡಕೈನಲ್ಲಿ ವರದ ಮುದ್ರೆಯಿದೆ. ಆ ತಾಯಿಯ ಮುದ್ರೆಯು ಶಾಂತವಾಗಿದೆ.

ಆ ಮಹಾದೇವನನ್ನು ಹೊರತುಪಡಿಸಿ ಇನ್ಯಾರನ್ನೂ ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾಳೆ. ಆ ಶಿವನಿಗಾಗಿಯೇ ಕಠಿಣವಾದ ತಪಸ್ಸು ಮಾಡುತ್ತಾಳೆ. ಆ ತಪಸ್ಸಿನ ಕಾರಣಕ್ಕೆ ಆಕೆಯ ಮೈ ಬಣ್ಣ ಕಪ್ಪಾಗಿರುತ್ತದೆ. ಆದರೆ ತಪ್ಪಸ್ಸಿಗೆ ಒಲಿದ ಶಿವನು ಆಕೆಯ ದೇಹವನ್ನು ಗಂಗೆಯ ಪವಿತ್ರ ಜಲದಿಂದ ತೊಳೆಯುತ್ತಾನೆ. ಆಗ ದೇಹ ಪ್ರಕಾಶಮಾನವಾಗಿ ಹೊಳೆಯುತ್ತಾ ಬೆಳ್ಳಗಾಯಿತು. ಯಾವಾಗ ಈ ರೀತಿ ಆಕೆಯ ಮೈ ಬಣ್ಣವು ಬದಲಾಯಿತೋ ಆಗಿನಿಂದ ಅವಳ ಹೆಸರು ಗೌರಿ ಎಂದು ಬದಲಾಯಿತು. ಶರನ್ನವರಾತ್ರಿಯ ಎಂಟನೇ ದಿನದಂದು ಮಹಾಗೌರೀ ಆರಾಧನೆ ಮಾಡುವುದರಿಂದ ಸಕಲ ಸಂಚಿತ ಪಾಪಗಳು ನಿವಾರಣೆ ಆಗುತ್ತವೆ. ಅಷ್ಟೇ ಅಲ್ಲ, ಅಲ್ಲಿಂದ ಮುಂದೆ ಪಾಪ- ಸಂತಾಪ, ದುಃಖ ದೈನ್ಯಾದಿಗಳು ಬರುವುದಿಲ್ಲ. ಯಾರು ಆ ದೇವಿಯನ್ನು ಶ್ರದ್ಧಾ- ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಎಂದಿಗೂ ಕರಗದ ಪುಣ್ಯಕ್ಕೆ ಅಧಿಪತಿಗಳಾಗುತ್ತಾರೆ.

ಇದನ್ನೂ ಓದಿ: ನವರಾತ್ರಿ ಏಳನೇ ದಿನದ ಸ್ವರೂಪ ಕಾಲರಾತ್ರಿ; ದೇವಿಯ ಪೌರಾಣಿಕ ಹಿನ್ನೆಲೆ ಹಾಗೂ ಪೂಜಾ ವಿಧಾನ

ಆ ಮಹಾಗೌರೀ ವಿಶೇಷ ಏನೆಂದರೆ, ಯಾರೂ ಏಕಾಗ್ರತೆಯಿಂದ ಆಕೆಯನ್ನು ಧ್ಯಾನ ಮಾಡುತ್ತಾರೋ ಅಂಥವರಿಗೆ ಅಲೌಕಿಕ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಭಕ್ತರ ಅದೆಂಥದ್ದೇ ಕಷ್ಟಗಳಿದ್ದರೂ ಅವಳು ದೂರ ಮಾಡುತ್ತಾಳೆ. ಯಾವ ಕೆಲಸ ಆಗುವುದೇ ಇಲ್ಲ ಎಂದು ಭಕ್ತರು ಎಂದುಕೊಂಡಿರುತ್ತಾರೋ ಅಂಥವು ಸಹ ಸರಾಗವಾಗಿ ಆಗುತ್ತವೆ. ಪುರಾಣಗಳಲ್ಲಿ ಈ ದೇವಿಯ ಮಹಿಮೆಯನ್ನು ತುಂಬ ಚೆನ್ನಾಗಿ ವಿವರಿಸಲಾಗಿದೆ. ಮನುಷ್ಯರಲ್ಲಿ ಇರುವಂಥ ಪ್ರವೃತ್ತಿಯನ್ನು ಉತ್ತಮದ ಕಡೆಗೆ ಒಯ್ಯುವ ಹಾಗೂ ಸಾಗುವ ಕಡೆಗೆ ಮನಸ್ಸು ನೀಡುವವಳು ಅದೇ ಮಹಾಗೌರೀ. ಆದ್ದರಿಂದ ಆ ದೇವಿಯಲ್ಲಿ ಶರಣಾಗತರಾಗಬೇಕು. ಹೀಗೊಂದು ಶರಣಾಗತ ಭಾವ ಮೂಡುವುದರಿಂದ ಆ ದೇವಿಯೇ ನಮ್ಮನ್ನು ರಕ್ಷಿಸುತ್ತಾಳೆ, ಪೊರೆಯುತ್ತಾಳೆ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ಸಹ ನೀಡುತ್ತಾಳೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:00 am, Thu, 3 October 24

‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್