AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!

Community Shield: ಕಮ್ಯುನಿಟಿ ಶೀಲ್ಡ್ ಎಂಬುದು ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಸೀಸನ್ ಆರಂಭವಾಗುವ ಮುಂಚಿತವಾಗಿ ನಡೆಯುವ ಅತ್ಯಂತ ಸಾಂಪ್ರದಾಯಿಕ ಸೂಪರ್ ಕಪ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಕಳೆದ ಬಾರಿಯ ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಹಾಗೂ ಎಫ್​ಎ ಕಪ್ ವಿಜೇತರು ಮುಖಾಮುಖಿಯಾಗುತ್ತಾರೆ.

23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!
Riccardo Calafiori - ArsenalImage Credit source: Arsenal
ಝಾಹಿರ್ ಯೂಸುಫ್
|

Updated on:Aug 17, 2026 | 9:53 AM

Share

ಕೇವಲ 23 ಸೆಕೆಂಡುಗಳಲ್ಲಿ ದಾಖಲಾದ ಮಿಂಚಿನ ಗೋಲು ಮತ್ತು 3-0 ಅಂತರದ ಭರ್ಜರಿ ಜಯ! ಕಾರ್ಡಿಫ್‌ನ ಪ್ರಿನ್ಸಿಪಾಲಿಟಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಧೂಳೀಪಟ ಮಾಡಿದ ಅರ್ಸೆನಲ್ ಪಡೆ, ಐತಿಹಾಸಿಕ ಜಯದೊಂದಿಗೆ ಕಮ್ಯುನಿಟಿ ಶೀಲ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಪಂದ್ಯವು ಕೇವಲ ಅರ್ಸೆನಲ್‌ನ ಗೆಲುವಿಗೆ ಮಾತ್ರವಲ್ಲದೆ, ಇಂಗ್ಲೆಂಡ್ ಫುಟ್​ಬಾಲ್ ಇತಿಹಾಸದ ಸಾರ್ವಕಾಲಿಕ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು.

23 ಸೆಕೆಂಡುಗಳ ಹೊಸ ಇತಿಹಾಸ!

ಪಂದ್ಯದ ಆರಂಭದ ವಿಸಿಲ್ ಮೊಳಗಿದ ಕೆಲವೇ ಕ್ಷಣಗಳಲ್ಲಿ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಇನ್ನೂ ತಮ್ಮ ಆಸನಗಳಲ್ಲಿ ಸರಿಯಾಗಿ ಕುಳಿತುಕೊಳ್ಳುವ ಮುನ್ನವೇ ಅರ್ಸೆನಲ್ ಇತಿಹಾಸ ಬರೆಯಿತು. ತಂಡದ ಯುವ ಆಟಗಾರ ಮೈಲ್ಸ್ ಲೂಯಿಸ್-ಸ್ಕೆಲ್ಲಿ ನೀಡಿದ ಅತ್ಯದ್ಭುತ ರಿವರ್ಸ್ ಪಾಸ್ ಅನ್ನು ಬಳಸಿಕೊಂಡ ಇಟಲಿಯ ಸ್ಟಾರ್ ಡಿಫೆಂಡರ್ ರಿಕಾರ್ಡೊ ಕಲಾಫಿಯೋರಿ, ಮ್ಯಾಂಚೆಸ್ಟರ್ ಸಿಟಿಯ ರಕ್ಷಣಾ ಕೋಟೆಯನ್ನು ಭೇದಿಸಿ ಕೇವಲ 23 ಸೆಕೆಂಡುಗಳಲ್ಲಿ ಚೆಂಡನ್ನು ನೆಟ್‌ಗೆ ತಳ್ಳಿದರು.

ಈ ಮಿಂಚಿನ ಗೋಲಿನೊಂದಿಗೆ ಕಲಾಫಿಯೋರಿ, ಕಮ್ಯುನಿಟಿ ಶೀಲ್ಡ್ ಟೂರ್ನಮೆಂಟ್‌ನ 118 ವರ್ಷಗಳ ಇತಿಹಾಸದಲ್ಲೇ ‘ಅತ್ಯಂತ ವೇಗದ ಗೋಲು’ ಬಾರಿಸಿದ ಅಪರೂಪದ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಇದಕ್ಕೂ ಮುನ್ನ 1968 ರಲ್ಲಿ ಬಾಬಿ ಓವನ್ ಬಾರಿಸಿದ್ದ 35 ಸೆಕೆಂಡುಗಳ ಗೋಲಿನ ದಾಖಲೆ ಈಗ ಇತಿಹಾಸ ಪುಟ ಸೇರಿದೆ.

ಸಿಟಿಯನ್ನು ಕಟ್ಟಿಹಾಕಿದ ಗನ್ನರ್ಸ್!

ಮೊದಲ ಗೋಲಿನ ಆಘಾತದಿಂದ ಮ್ಯಾಂಚೆಸ್ಟರ್ ಸಿಟಿ ಚೇತರಿಸಿಕೊಳ್ಳುವ ಮುನ್ನವೇ ಅರ್ಸೆನಲ್ ತನ್ನ ಆಕ್ರಮಣವನ್ನು ತೀವ್ರಗೊಳಿಸಿತು. ಪಂದ್ಯದ 28ನೇ ನಿಮಿಷದಲ್ಲಿ ಅರ್ಸೆನಲ್ ಪರ ಪದಾರ್ಪಣೆ ಮಾಡಿದ ಕ್ರಿಸ್ಟೋಸ್ ಟ್ಜೋಲಿಸ್ ನೀಡಿದ ಆಕರ್ಷಕ ಕ್ರಾಸ್ ಅನ್ನು ಕೈ ಹ್ಯಾವರ್ಟ್ಜ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

ದ್ವಿತೀಯಾರ್ಧದ ಆರಂಭದಲ್ಲೂ ಅರ್ಸೆನಲ್ ಜಾದೂ ಮುಂದುವರಿಯಿತು. 48ನೇ ನಿಮಿಷದಲ್ಲಿ ಮತ್ತೊಮ್ಮೆ ಕ್ರಿಸ್ಟೋಸ್ ಟ್ಜೋಲಿಸ್ ನೀಡಿದ ಅಸಿಸ್ಟ್ ನೆರವಿನಿಂದ ನಾಯಕ ಮಾರ್ಟಿನ್ ಒಡೆಗಾರ್ಡ್ ಅದ್ಭುತ ಗೋಲು ಬಾರಿಸಿ ಅರ್ಸೆನಲ್‌ನ 3-0 ಭರ್ಜರಿ ಜಯವನ್ನು ಅಧಿಕೃತಗೊಳಿಸಿದರು.

ಮಾರೆಸ್ಕಾಗೆ ಆರಂಭಿಕ ಹಿನ್ನಡೆ!

ಮ್ಯಾಂಚೆಸ್ಟರ್ ಸಿಟಿ ತಂಡದ ನೂತನ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಎಂಜೊ ಮಾರೆಸ್ಕಾ ಅವರಿಗೆ ಇದು ಮೊದಲ ಅಧಿಕೃತ ಪಂದ್ಯವಾಗಿದ್ದು, ಅರ್ಸೆನಲ್ ನೀಡಿದ ಈ ಆಘಾತಕಾರಿ ಸೋಲು ಅವರ ಮುಂದಿನ ಹಾದಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಇತ್ತ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಆದ ಅರ್ಸೆನಲ್, ಈ ಭರ್ಜರಿ ಜಯದೊಂದಿಗೆ ಮತ್ತೊಮ್ಮೆ ಲೀಗ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ತಾನೇ ಎಂಬುದನ್ನು ಜಗತ್ತಿಗೆ ಸಾರಿದೆ.

ಏನಿದು ಕಮ್ಯುನಿಟಿ ಶೀಲ್ಡ್ ಪಂದ್ಯ?

ಕಮ್ಯುನಿಟಿ ಶೀಲ್ಡ್ ಎಂಬುದು ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಸೀಸನ್ ಆರಂಭವಾಗುವ ಮುಂಚಿತವಾಗಿ ನಡೆಯುವ ಅಧಿಕೃತ ಮತ್ತು ಅತ್ಯಂತ ಸಾಂಪ್ರದಾಯಿಕ ಸೂಪರ್ ಕಪ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಹಿಂದಿನ ಸೀಸನ್‌ನ ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್‌ನ ಪ್ರಮುಖ ನಾಕೌಟ್ ಟೂರ್ನಿ ಆದ FA ಕಪ್ ವಿಜೇತರು ಮುಖಾಮುಖಿಯಾಗುತ್ತಾರೆ. ಒಂದು ವೇಳೆ ಒಂದೇ ಕ್ಲಬ್ ಪ್ರೀಮಿಯರ್ ಲೀಗ್ ಮತ್ತು FA ಕಪ್ ಎರಡನ್ನೂ ಗೆದ್ದರೆ, ಆಗ ಆ ತಂಡವು ಪ್ರೀಮಿಯರ್ ಲೀಗ್‌ನಲ್ಲಿ ರನ್ನರ್ಸ್-ಅಪ್ (2ನೇ ಸ್ಥಾನ) ಪಡೆದ ತಂಡದ ವಿರುದ್ಧ ಈ ಪಂದ್ಯವನ್ನು ಆಡುತ್ತದೆ.

ಇದನ್ನೂ ಓದಿ: ಸಾಮಾನ್ಯ ಬುದ್ಧಿ ಇಲ್ವಾ? ಪಂತ್ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ

ಈ ಟೂರ್ನಮೆಂಟ್‌ನಲ್ಲಿ ವಿಜೇತರಾದ ತಂಡಕ್ಕೆ ಸಾಂಪ್ರದಾಯಿಕ ಕಪ್ ಅಥವಾ ಟ್ರೋಫಿ ನೀಡುವ ಬದಲಾಗಿ, ಅತ್ಯಂತ ಆಕರ್ಷಕವಾದ ದೊಡ್ಡ ಬೆಳ್ಳಿಯ ಶೀಲ್ಡ್​ ಅನ್ನು ಪ್ರಶಸ್ತಿಯಾಗಿ ಹಸ್ತಾಂತರಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ‘ಕಮ್ಯುನಿಟಿ ಶೀಲ್ಡ್ ಪ್ರಶಸ್ತಿ’ ಎಂದು ಕರೆಯಲಾಗುತ್ತದೆ.

Published On - 9:52 am, Mon, 17 August 26

Follow Us
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ