AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cape Verde: ಬಂದ್ರು… ನಡುಗಿಸಿದ್ರು… ಇತಿಹಾಸ ಬರೆದ್ರು… ಹೋದ್ರು..!

Cape Verde: ಭೂಪಟದಲ್ಲಿ ಕಣ್ಣಿಗೆ ಕಾಣದ ಪುಟ್ಟ ಚುಕ್ಕೆ... ಅಟ್ಲಾಂಟಿಕ್ ಮಹಾಸಾಗರದ ಒಡಲಲ್ಲಿ ಅಡಗಿರುವ ಕೇವಲ ಐದೂವರೆ ಲಕ್ಷ ಜನಸಂಖ್ಯೆಯ ಒಂದು ದ್ವೀಪ ರಾಷ್ಟ್ರ! ಹೌದು, ಯಾರೂ ಕಣ್ತೆರೆದೂ ನೋಡದ ಆ ಪುಟ್ಟ ಜಾಗದಿಂದ ಎದ್ದು ಬಂದ "ಬ್ಲೂ ಶಾರ್ಕ್ಸ್" ಪಡೆ, 2026ರ ಫಿಫಾ ವಿಶ್ವಕಪ್‌ನ ಮಹಾ ಅಖಾಡದಲ್ಲಿ ಸುನಾಮಿಯನ್ನೇ ಸೃಷ್ಟಿಸಿ ಹೊರಟು ಹೋಗಿದ್ದಾರೆ.

Cape Verde: ಬಂದ್ರು... ನಡುಗಿಸಿದ್ರು... ಇತಿಹಾಸ ಬರೆದ್ರು... ಹೋದ್ರು..!
Cape VerdeImage Credit source: FIFA
ಝಾಹಿರ್ ಯೂಸುಫ್
|

Updated on: Jul 04, 2026 | 4:20 PM

Share

ಕೇವಲ ಐದೂವರೆ ಲಕ್ಷ ಜನಸಂಖ್ಯೆ… ನಕ್ಷೆಯಲ್ಲೂ ಹುಡುಕಬೇಕಾದ ಒಂದು ಪುಟ್ಟ ದ್ವೀಪ ರಾಷ್ಟ್ರ! ಬಂದಿರುವುದು ಯಾರಿಗೂ ಗೊತ್ತೇ ಇರಲಿಲ್ಲ… ಆದರೆ ಹೋಗುವಾಗ ಇಡೀ ವಿಶ್ವಕ್ಕೆ ಪರಿಚಿತರಾಗಿದ್ದರು. ಹೌದು, ನಾವು ಹೇಳುತ್ತಿರುವುದು ಕೇಪ್ ವರ್ಡೆ (Cabo Verde) ಬಗ್ಗೆ. 2026ರ ಫಿಫಾ ವಿಶ್ವಕಪ್ ಆರಂಭವಾಗುವ ಮುನ್ನ ಈ ಹೆಸರನ್ನು ಯಾರೂ ಸಹ ಹೆಚ್ಚಾಗಿ ಕೇಳಿರಲಿಲ್ಲ. ಆದರೆ ಇಂದು ಇಡೀ ಜಗತ್ತೇ ಈ ‘ಬ್ಲೂ ಶಾರ್ಕ್ಸ್’ ಪಡೆಗೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದೆ! ಇದಕ್ಕೆ ಕಾರಣ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ ಕೇಪ್​ ವರ್ಡೆ ಪಡೆ ತೋರಿದ ಕೆಚ್ಚೆದೆಯ ಪ್ರದರ್ಶನ.

ಸದ್ದಿಲ್ಲದೆ ‘ಬಂದರು’!

ಅಟ್ಲಾಂಟಿಕ್ ಮಹಾಸಾಗರದ ಒಡಲಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ವಿಶ್ವಕಪ್‌ನ ಮಹಾ ವೇದಿಕೆಗೆ ಲಗ್ಗೆ ಇಡುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆಫ್ರಿಕನ್ ಅರ್ಹತಾ ಸುತ್ತಿನಲ್ಲಿ ಪ್ರಬಲ ಕ್ಯಾಮರೂನ್ ತಂಡಕ್ಕೇ ಶಾಕ್ ನೀಡಿ, ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದಲೇ ಎಲ್ಲರ ಕಣ್ಣು ಅತ್ತ ಕಡೆಯತ್ತ ಸಾಗಬೇಕಿತ್ತು. ಆದರೆ ಈ ಪುಟ್ಟ ದೇಶದ ಪ್ರದರ್ಶನಕ್ಕೆ ನಿರೀಕ್ಷಿತ ಮಹತ್ವ ಸಿಕ್ಕಿರಲಿಲ್ಲ. ಹೀಗಾಗಿಯೇ ಈ ಬಾರಿಯ ವಿಶ್ವಕಪ್​ಗೆ ಕೇಪ್ ವರ್ಡೆ ಪಡೆ ಸದ್ದಿಲ್ಲದೆ ಆಗಮಿಸಿದ್ದರು.

ವಿಶ್ವಕಪ್ ಆಡುತ್ತಿರುವ ಅತ್ಯಂತ ಸಣ್ಣ ವಿಸ್ತೀರ್ಣದ ದೇಶ ಮತ್ತು ಅತಿ ಕಡಿಮೆ ಜನಸಂಖ್ಯೆಯ ಎರಡನೇ ದೇಶ ಎಂಬ ಹೆಗ್ಗಳಿಕೆಯೊಂದಿಗೆ ಅಖಾಡಕ್ಕಿಳಿದಾಗ ಕೇಪ್​ ವರ್ಡೆಯನ್ನು ಕೇವಲ ‘ಅಂಡರ್‌ಡಾಗ್ಸ್’ ಎಂದುಕೊಂಡಿದ್ದರು. ಆದರೆ, ನಿಜವಾದ ಆಟ ಶುರುವಾಗಿದ್ದೇ ಸ್ಪೇನ್ ವಿರುದ್ಧದ ಪಂದ್ಯದೊಂದಿಗೆ.

ಬಲಿಷ್ಠರನ್ನು ನಡುಗಿಸಿದರು!

ವಿಶ್ವಕಪ್‌ನ ಗ್ರೂಪ್ ‘H’ ನಲ್ಲಿ ಕಾಣಿಸಿಕೊಂಡ ಕೇಪ್ ವರ್ಡೆ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ್ದು, ಯುರೋಪಿನ ಬಲಿಷ್ಠ ಪಡೆ ಸ್ಪೇನ್, ಮಾಜಿ ವಿಶ್ವ ಚಾಂಪಿಯನ್ಸ್ ಉರುಗ್ವೆ ಮತ್ತು ಏಷ್ಯಾದ ಬಲಿಷ್ಠ ತಂಡ ಸೌದಿ ಅರೇಬಿಯಾ! ಹೀಗಾಗಿಯೇ ಕೇಪ್ ವರ್ಡೆ ನಾಲ್ಕನೇ ಸ್ಥಾನ ಅಲಂಕರಿಸಲಿದೆ ಎಂದೇ ಎಲ್ಲರೂ ಷರಾ ಬರೆದಿದ್ದರು.

  • ಸ್ಪೇನ್​ಗೆ ಬಿಗ್ ಶಾಕ್: ಮೊದಲ ಪಂದ್ಯದಲ್ಲೇ ವಿಶ್ವದ ಪ್ರಬಲ ಸ್ಟ್ರೈಕರ್‌ಗಳನ್ನು ಹೊಂದಿದ್ದ ಸ್ಪೇನ್ ತಂಡವನ್ನು 0-0 ಗೋಲುಗಳಿಂದ ಕಟ್ಟಿಹಾಕಿದಾಗ ಜಗತ್ತಿಗೆ ಕೇಪ್​ ವರ್ಡೆ ಪಡೆಯ ತಾಕತ್ತು ಏನೆಂದು ತಿಳಿಯಿತು.
  • ಉರುಗ್ವೆಗೆ ಸೆಡ್ಡೆ: ಮಾಜಿ ವಿಶ್ವ ಚಾಂಪಿಯನ್ಸ್ ಉರುಗ್ವೆ ವಿರುದ್ಧದ ಪಂದ್ಯವನ್ನು 2-2 ರ ಅಂತರದಿಂದ ಸಮಗೊಳಿಸಿ ಕೇಪ್ ವರ್ಡೆ ಹೊಸ ಸಂಚಲನ ಸೃಷ್ಟಿಸಿದರು.
  • ಸೌದಿಗೆ ಆಘಾತ: ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಕೂಡ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ ಡ್ರಾ ಸಾಧಿಸಿದಾಗ ಫುಟ್‌ಬಾಲ್ ಜಗತ್ತು ಬೆರಗಾಗಿ ನೋಡಿತು.

ಇತಿಹಾಸ ಬರೆದರು!

ವಿಶ್ವಕಪ್ ಇತಿಹಾಸ ಆರಂಭವಾಗಿ 96 ವರ್ಷಗಳೇ ಕಳೆದಿವೆ. ಆದರೆ ಇಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ದೇಶವೊಂದು ಗ್ರೂಪ್ ಹಂತವನ್ನು ದಾಟಿ ನಾಕೌಟ್ (ರೌಂಡ್ ಆಫ್ 32) ಹಂತ ತಲುಪಿದ್ದು ಇದೇ ಮೊದಲು! 40 ವರ್ಷದ ಹಿರಿಯ ಗೋಲ್‌ಕೀಪರ್ ‘ವೊಝಿನ್ಹಾ’ ಗೋಲು ಪೋಸ್ಟ್​ ಮುಂದೆ ನಿಂತರೆ ಸಾಕು, ಎದುರಾಳಿಗಳಿಗೆ ಹಿಮಾಲಯ ಪರ್ವತವೇ ಎದುರು ನಿಂತಂತಾಗುತ್ತಿತ್ತು. ಈ ಮೂಲಕ ಮೊದಲ ಹಂತದಲ್ಲಿ ಸೋಲು ಕಾಣದೇ ನಾಕೌಟ್ ಹಂತ ತಲುಪಿದ ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರ ಎಂಬ ಸಾರ್ವಕಾಲಿಕ ಇತಿಹಾಸವನ್ನು ಕೇಪ್ ವರ್ಡೆ ತನ್ನದಾಗಿಸಿಕೊಂಡಿತು.

ಹೃದಯ ಗೆದ್ದು ಹೋದರು!

ಮೊದಲ ಸುತ್ತಿನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಕೇಪ್ ವರ್ಡೆ ಪಡೆಗೆ ದ್ವಿತೀಯ ಸುತ್ತಿನಲ್ಲಿ ಎದುರಾಗಿದ್ದು ಹಾಲಿ ಚಾಂಪಿಯನ್ ಅರ್ಜೆಂಟೀನಾ. ಅದರಲ್ಲೂ ಫುಟ್​ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ. ಆದರೆ ಇದ್ಯಾವುದೂ ಕೇಪ್​ ವರ್ಡೆಗೆ ಲೆಕ್ಕಕ್ಕೇ ಇರಲಿಲ್ಲ. ವಿಶ್ವ ಚಾಂಪಿಯನ್ನರ ಮುಂದೆಯೇ ತಮ್ಮ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು.

ಬಲಿಷ್ಠ ಅರ್ಜೆಂಟೀನಾ ಗೋಲು ಹೊಡೆದಾಗಲೆಲ್ಲಾ ಕೇಪ್ ವರ್ಡೆ ಆಟಗಾರರು ತಿರುಗಿಬಿದ್ದು ಗೋಲು ಸಮಬಲಗೊಳಿಸುತ್ತಿದ್ದರು. ಎಲ್ಲಿಯವರೆಗೆ ಎಂದರೆ ಪಂದ್ಯ ಮುಗಿಯುವವರೆಗೂ ಅರ್ಜೆಂಟೀನಾದ ಆಟಗಾರರು ಉಸಿರು ಗಟ್ಟಿ ಹಿಡಿದು ಆಡಬೇಕಾಗಿ ಬಂತು. ಅಂತಿಮವಾಗಿ ಎಕ್ಸ್‌ಟ್ರಾ ಟೈಮ್‌ನಲ್ಲಿ 3-2 ಗೋಲುಗಳ ಅಂತರದಿಂದ ಕೇಪ್ ವರ್ಡೆ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.  ಈ ಸೋಲಿನ ಹೊರತಾಗಿಯೂ ಕೇಪ್​ ವರ್ಡೆ ತಂಡ ಇಡೀ ಫುಟ್​ಬಾಲ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಅದರಲ್ಲೂ ಅರ್ಜೆಂಟೀನಾ ಆಟಗಾರರೇ ಕೇಪ್ ವರ್ಡೆಯ ಕೆಚ್ಚೆದೆಯ ಹೋರಾಟಕ್ಕೆ ತಲೆಬಾಗಿದರು.

ಇದನ್ನೂ ಓದಿ: 32 ತಂಡಗಳು ಔಟ್: ಫಿಫಾ ವಿಶ್ವಕಪ್​ ಪ್ರಿ-ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ

ಈ ಬಾರಿಯ ವಿಶ್ವಕಪ್​ ಟ್ರೋಪಿಯನ್ನು ಯಾರಾದರೂ ಎತ್ತಿ ಹಿಡಿಯಬಹುದು, ಯಾವುದೇ ದೈತ್ಯ ರಾಷ್ಟ್ರ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಬಹುದು. ಆದರೆ, 2026ರ ವಿಶ್ವಕಪ್​ ಇತಿಹಾಸದ ಪುಟಗಳಲ್ಲಿ ಮತ್ತು ಜಗತ್ತಿನ ಕೋಟ್ಯಂತರ ಫುಟ್​ಬಾಲ್​ ಪ್ರೇಮಿಗಳ ಮನಸ್ಸಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವುದು ಮಾತ್ರ ಕೇಪ್ ವರ್ಡೆ ಎಂಬ ಪುಟ್ಟ ಪಡೆಯ ಅಪ್ರತಿಮ ಹೋರಾಟದ ಕಾರಣದಿಂದ ಎಂಬುದೇ ಅಪ್ಪಟ ಸತ್ಯ!

Follow Us
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ
Video: ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು!
Video: ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು!