AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಕೈಗೆ ಗಾಯ, ನಡೆಯಲೂ ಆಗುತ್ತಿಲ್ಲ! ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ತೆರಳಿದ ರಾಹುಲ್

KL Rahul Injury Update: ಶ್ರೀಲಂಕಾ ವಿರುದ್ಧದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಸ್ನಾಯು ಸೆಳೆತದಿಂದ ನಿವೃತ್ತಿ ಹೊಂದಿದರು. 77 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ರಾಹುಲ್, ನೋವು ತೀವ್ರಗೊಂಡಿದ್ದರಿಂದ ಆಟ ಮುಂದುವರಿಸಲಾಗದೆ ಪೆವಿಲಿಯನ್‌ಗೆ ಮರಳಿದರು. ಇದು ಟೀಂ ಇಂಡಿಯಾ ಮತ್ತು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಅವರ ಗಾಯದ ಸ್ವರೂಪ ಮತ್ತು ಮೈದಾನಕ್ಕೆ ಮರಳುವಿಕೆ ಬಗ್ಗೆ ಸ್ಪಷ್ಟತೆ ನಿರೀಕ್ಷಿಸಲಾಗಿದೆ.

IND vs SL: ಕೈಗೆ ಗಾಯ, ನಡೆಯಲೂ ಆಗುತ್ತಿಲ್ಲ! ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ತೆರಳಿದ ರಾಹುಲ್
Kl Rahul
ಪೃಥ್ವಿಶಂಕರ
|

Updated on:Aug 15, 2026 | 5:51 PM

Share

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Sri Lanka) ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಪರ ಬ್ಯಾಟರ್​ಗಳು ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಆದರೆ ಮೊದಲ ದಿನದಾಟದ ಎರಡನೇ ಸೆಷನ್ ಅಂದರೆ ಚಹಾ ವಿರಾಮ ಮುಗಿದ ಬಳಿಕ ಕಂಡುಬಂದ ದೃಶ್ಯ ಟೀಂ ಇಂಡಿಯಾವನ್ನು ಹಾಗೂ ಅದರ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ತಂಡದ ಅನುಭವಿ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ರಾಹುಲ್​ಗೆ ಈ ಸ್ನಾಯು ಸೆಳೆತ ಗಂಭೀರವಾಗಿದ್ದು, ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ರಾಹುಲ್ ಮೈದಾನದಿಂದ ಹೊರನಡೆದರು. ರಾಹುಲ್ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮುನ್ನ 162 ಎಸೆತಗಳಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಾಹುಲ್​ಗೆ ಸ್ನಾಯು ಸೆಳೆತ

ದಿನದಾಟದ ಎರಡನೇ ಸೆಷನ್​ನ ಅಂತಿಮ ಓವರ್‌ನಲ್ಲಿಯೇ ಕೆ.ಎಲ್. ರಾಹುಲ್​ಗೆ ಸ್ನಾಯು ಸೆಳೆತ ಸಾಕಷ್ಟು ತೊಂದರೆ ನೀಡುತ್ತಿರುವುದು ಸ್ಪಷ್ಟವಾಗಿತ್ತು. ಇದಾದ ಬಳಿಕ ಎರಡನೇ ಸೆಷನ್ ಮುಗಿದಿದ್ದರಿಂದ ಡಗೌಟ್​ಗೆ ತೆರಳಿದ ರಾಹುಲ್​ಗೆ ತಂಡದ ಫಿಸಿಯೋ ಡ್ರೆಸ್ಸಿಂಗ್ ಕೋಣೆಯಲ್ಲಿ ಚಿಕಿತ್ಸೆ ನೀಡಿದರು. ಹೀಗಾಗಿ ಮೂರನೇ ಸೆಷನ್ ಆರಂಭಿಸುವುದಕ್ಕೆ ರಾಹುಲ್ ಸ್ವಲ್ಪ ತಡವಾಗಿ ಕ್ರೀಸ್‌ಗೆ ಬಂದರು. ಆದರೆ ರಾಹುಲ್​ಗೆ ಮೂರನೇ ಸೆಷನ್​ನಲ್ಲಿ ಒಂದೇ ಒಂದು ಎಸೆತವನ್ನು ಎದುರಿಸಲು ಸಾಧ್ಯವಾಗಲಿಲ್ಲ.

ನಡೆಯುವುದು ಕಷ್ಟಕರವಾಯಿತು

ಮೊದಲಿಗೆ ತನ್ನ ಬಲಗೈ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ರಾಹುಲ್ ತನಗಾಗುತ್ತಿರುವ ನೋವನ್ನು ಅಂಪೈರ್ ಬಳಿ ಹೇಳಿಕೊಂಡರು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಆಗಮನಿಸಿ ರಾಹುಲ್​ಗೆ ಚಿಕಿತ್ಸೆ ನೀಡಲು ಶುರು ಮಾಡಿದರು. ಬಲಗೈ ಜೊತೆಗೆ ರಾಹುಲ್​ಗೆ ತಮ್ಮ ಎಡಗೈ ಹಾಗೂ ಎಡಗಾಲಿನಲ್ಲೂ ಸ್ನಾಯು ಸೆಳೆತದ ಸಮಸ್ಯೆ ಕಾಡಲಾರಂಭಿಸಿತು. ಫಿಸಿಯೋ ಚಿಕಿತ್ಸೆ ಮುಂದುವರೆಸಿದರಾದರೂ ರಾಹುಲ್​ಗೆ ನೋವು ಕಡಿಮೆಯಾಗಲಿಲ್ಲ. ಇದರಿಂದಾಗಿ ರಾಹುಲ್​ಗೆ ನಡೆಯುವುದು ಕಷ್ಟಕರವಾಯಿತು.

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ

ರಾಹುಲ್ ಮತ್ತೆ ಬ್ಯಾಟಿಂಗ್​ಗೆ ಬರಬಹುದು

ಕೊನೆಗೆ ತಮ್ಮ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಹುಲ್, ಬ್ಯಾಟಿಂಗ್ ಮುಂದುವರಿಸದಿರಲು ನಿರ್ಧರಿಸಿ, ಫಿಸಿಯೋ ಸಹಾಯದಿಂದ ಕುಂಟುತ್ತಾ ಪೆವಿಲಿಯನ್‌ಗೆ ಮರಳಿದರು. ರಾಹುಲ್ 77 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಆದಾಗ್ಯೂ ರಾಹುಲ್ ಡ್ರೆಸ್ಸಿಂಗ್ ಕೋಣೆಗೆ ನಡೆಯುವಾಗ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ ಅವರು ಮೆಟ್ಟಿಲುಗಳನ್ನು ಹತ್ತುವುದಕ್ಕೂ ಬೇರಯವರ ಸಹಾಯ ಪಡೆಯಬೇಕಾಯಿತು. ಇದೀಗ ಗಾಯದಿಂದ ನಿವೃತ್ತಗೊಂಡಿರುವ ರಾಹುಲ್ ಮತ್ತೆ ಬ್ಯಾಟಿಂಗ್‌ ಮಾಡುವ ಅವಕಾಶ ಹೊಂದಿದ್ದಾರೆ. ತಂಡಕ್ಕೆ ಅವರ ಅವಶ್ಯಕತೆ ಇದ್ದರೆ ರಾಹುಲ್ ಮತ್ತೆ ಬ್ಯಾಟಿಂಗ್​ಗೆ ಬರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Sat, 15 August 26

Follow Us
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು