AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನ್​ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್

"ಅಶ್ವಿನ್ ಭಾಯ್ ಕ್ಷಮಿಸಿ, ನಿಮಗೊಂದು ಪರ್ಸನಲ್ ಮೆಸೇಜ್ ಮಾಡ್ತೀನಿ!" – ಹೀಗಂದಿರುವುದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಾವು ಆಯ್ಕೆ ಮಾಡಿದ ಭಾರತದ 'ಟಾಪ್-5 ಅತ್ಯಂತ ಪ್ರತಿಭಾವಂತ ಬೌಲರ್‌ಗಳ' ಪಟ್ಟಿಯೇ ಈ ಕುತೂಹಲಕಾರಿ ಘಟನೆಯೇ ಈ ಕ್ಷಮಾಪಣೆಗೆ ಕಾರಣ!

ಅಶ್ವಿನ್​ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್
Arshadeep - Ashwin
ಝಾಹಿರ್ ಯೂಸುಫ್
|

Updated on:Aug 04, 2026 | 11:20 AM

Share

ಭಾರತ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ಅನುಭವಿ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮಾತನಾಡಿಸುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಹೆಸರಿಸಿದ ಟಾಪ್-5 ಬೌಲರ್​ಗಳು.

ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಭಾರತದ ಅತ್ಯಂತ ಪ್ರತಿಭಾವಂತ ಅಥವಾ ನೆಚ್ಚಿನ 5 ಬೌಲರ್‌ಗಳನ್ನು ಶ್ರೇಯಾಂಕದ  ಆಧಾರದಲ್ಲಿ ಹೆಸರಿಸಲು ಕೇಳಲಾಯಿತು. ವೇಗದ ಬೌಲರ್‌ಗಳ ಬಗ್ಗೆ ಕೊಂಚ ಹೆಚ್ಚು ಒಲವು ಹೊಂದಿದ್ದ ಅರ್ಷದೀಪ್ , ಆರಂಭದಲ್ಲೇ ಅಗ್ರ ಸ್ಥಾನಗಳನ್ನು ಭರ್ತಿ ಮಾಡಿದರು. ಕೊನೆಗೆ ಉಳಿದ ಏಕೈಕ ಸ್ಥಾನಕ್ಕೆ ಅಶ್ವಿನ್ ಅವರ ಹೆಸರನ್ನು ಇರಿಸಬೇಕಾಯಿತು.

ಅರ್ಷದೀಪ್ ಸಿಂಗ್​ರ ಟಾಪ್ 5 ಬೌಲರ್‌ಗಳು:

  1. ಭುವನೇಶ್ವರ್ ಕುಮಾರ್: ತಮ್ಮ ವೈಯಕ್ತಿಕ ನೆಚ್ಚಿನ ಬೌಲರ್ ಎಂದು ಮೊದಲ ಸ್ಥಾನ ನೀಡಿದರು.
  2. ಮೊಹಮ್ಮದ್ ಶಮಿ: ಚೆಂಡನ್ನು ಸೀಮ್ ಮಾಡುವ ಅದ್ಭುತ ಕಲೆಗಾಗಿ ಎರಡನೇ ಸ್ಥಾನ ನೀಡಿದರು.
  3.  ಕುಲ್ದೀಪ್ ಯಾದವ್: ವಿಶಿಷ್ಟ ಎಡಗೈ ಚೈನಾಮನ್ ಶೈಲಿಗಾಗಿ ಮೂರನೇ ಸ್ಥಾನದಲ್ಲಿರಿಸಿದರು.
  4. ಯುಜ್ವೇಂದ್ರ ಚಹಲ್: ಪಂಜಾಬ್ ದೇಶಿ ತಂಡದ ಆಟಗಾರ ಹಾಗೂ ವಿಕೆಟ್ ಟೇಕರ್ ಆಗಿರುವುದರಿಂದ ನಾಲ್ಕನೇ ಸ್ಥಾನ ನೀಡಿದರು.
  5. ರವಿಚಂದ್ರನ್ ಅಶ್ವಿನ್: ಕೊನೆಯಲ್ಲಿ ಬೇರೆ ಸ್ಥಾನಗಳಿಲ್ಲದ ಕಾರಣ ಅಶ್ವಿನ್ ಅವರಿಗೆ 5ನೇ ಸ್ಥಾನ ನೀಡಿದ್ದರು.

ಕ್ಷಮೆಯಾಚಿಸಲು ಮುಖ್ಯ ಕಾರಣವೇನು?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ದಿಗ್ಗಜ ಆಟಗಾರನನ್ನು ಕೊನೆಯ ಸ್ಥಾನದಲ್ಲಿ ಇರಿಸಿದ್ದನ್ನು ಅರಿತ ಅರ್ಷದೀಪ್ ಸಿಂಗ್ ತಕ್ಷಣವೇ ನಗುತ್ತಾ ಗೌರವಪೂರ್ವಕವಾಗಿ ಕ್ಷಮೆ ಕೇಳಿದರು.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಅಶ್ವಿನ್ ಅವರೊಂದಿಗೆ ತಮಗಿರುವ ವಿಶೇಷ ಬಾಂಧವ್ಯವನ್ನು ನೆನೆದ ಅರ್ಷದೀಪ್ ಸಿಂಗ್, “2019 ರಲ್ಲಿ ನಾನು ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಪಾದಾರ್ಪಣೆ ಮಾಡಿದಾಗ ಆರ್. ಅಶ್ವಿನ್ ಅವರೇ ನನ್ನ ಮೊದಲ ನಾಯಕರಾಗಿದ್ದರು. ಅಶ್ವಿನ್ ಭಾಯ್ ಅವರನ್ನು ಕೊನೆಯ ಸ್ಥಾನದಲ್ಲಿ ಇರಿಸಲು ನನಗೆ ಇಷ್ಟವಿರಲಿಲ್ಲ. ಆದರೆ ಬೇರೆ ಯಾವುದೇ ಸ್ಥಾನಗಳು ಬಾಕಿ ಇರಲಿಲ್ಲ. ಕ್ಷಮಿಸಿ ಅಶ್ವಿನ್ ಭಾಯ್, ನಾನು ನಿಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡುತ್ತೇನೆ,” ಎಂದು ಹಾಸ್ಯಭರಿತವಾಗಿ ಹೇಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Published On - 11:16 am, Tue, 4 August 26

Follow Us
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ