Virat Kohli: ಬಾಂಗ್ಲಾ ಆಟಗಾರರ ಓವರ್ ರಿಯಾಕ್ಷನ್; ಜಗಳಕ್ಕಿಳಿದ ಕಿಂಗ್ ಕೊಹ್ಲಿ! ವಿಡಿಯೋ ಸಖತ್ ವೈರಲ್

IND vs BAN: ಚಟ್ಟೋಗ್ರಾಮ್ ಟೆಸ್ಟ್‌ನಲ್ಲಿ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದ ಕೊಹ್ಲಿ ಢಾಕಾ ಟೆಸ್ಟ್‌ನಲ್ಲೂ ವಿಶೇಷವಾಗಿ ಏನನ್ನು ಮಾಡಲಿಲ್ಲ. ಅಲ್ಲದೆ ಫೀಲ್ಡಂಗ್​ನಲ್ಲಿ ಕಳಪೆ ಆಟ ಪ್ರದರ್ಶಿಸಿದ ಭಾರತದ ಮಾಜಿ ನಾಯಕ ಸ್ಲಿಪ್‌ನಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ 3 ಕ್ಯಾಚ್‌ಗಳನ್ನು ಕೈಬಿಟ್ಟರು.

Virat Kohli: ಬಾಂಗ್ಲಾ ಆಟಗಾರರ ಓವರ್ ರಿಯಾಕ್ಷನ್; ಜಗಳಕ್ಕಿಳಿದ ಕಿಂಗ್ ಕೊಹ್ಲಿ! ವಿಡಿಯೋ ಸಖತ್ ವೈರಲ್
ಬಾಂಗ್ಲಾ ಆಟಗಾರರ ವಿರುದ್ಧ ಕೋಪಗೊಂಡ ಕೊಹ್ಲಿ
Follow us
| Updated By: ಪೃಥ್ವಿಶಂಕರ

Updated on:Dec 25, 2022 | 10:39 AM

ಢಾಕಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಿರುವ ಟೀಂ ಇಂಡಿಯಾ (India Vs Bangladesh) ಗೆಲುವಿಗೆ 145 ರನ್‌ಗಳ ಗುರಿ ಪಡೆದಿದೆ. ಆದರೆ ಗೆಲುವಿನ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಈ ಸುದ್ದಿ ಬರೆಯುವಾಗ 78 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಟಾಪ್ ಆರ್ಡರ್ ಅಟ್ಟರ್ ಫ್ಲಾಪ್ ಆಗಿದೆ. ಅದರಲ್ಲೂ ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) (1) ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ 22 ಎಸೆತಗಳನ್ನು ಎದುರಿಸಿದ ಕೊಹ್ಲಿ ಕೇವಲ ಒಂದು ರನ್ ಬಾರಿಸಿ, ಮಿರಾಜ್ ಬೌಲಿಂಗ್‌ನಲ್ಲಿ ಮೊಮಿನುಲ್ ಹಕ್​ಗೆ ಕ್ಯಾಚಿತ್ತು ಔಟಾದರು. ವಾಡಿಕೆಯಂತೆ ಯಾವುದೇ ತಂಡ ಪ್ರಮುಖ ವಿಕೆಟ್ ಪಡೆದಾಗ ಮೈದಾನದಲ್ಲಿ ಸಂಭ್ರಮಿಸುವುದನ್ನು ನಾವು ನೋಡುತ್ತೇವೆ. ಆದರೆ ಕೊಹ್ಲಿ ವಿಕೆಟ್ ಪಡೆದ ಬಳಿಕ ಬಾಂಗ್ಲಾ ತಂಡದ ಸಂಭ್ರಮಾಚರಣೆ ಕೊಂಚ ಅತಿರೇಕಕ್ಕೆ ಹೊದಂತೆ ಕಾಣುತ್ತಿತ್ತು. ಇದನ್ನು ನೋಡಿದ ಕೊಹ್ಲಿಯೇ ಮೈದಾನದಲ್ಲಿ ಬಾಂಗ್ಲಾ ಆಟಗಾರರ ವಿರುದ್ಧ ಗುಟುರು ಹಾಕಿದ ಘಟನೆ ನಡೆದಿದೆ. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಅಂಪೈರ್ ಕೊಹ್ಲಿಯನ್ನು ಸಮಾದಾನ ಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಇದೀಗ ಕೊಹ್ಲಿಯ ಈ ಆ್ಯಂಗ್ರಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಕಳೆದ 3 ವರ್ಷಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ವಿರಾಟ್ ಕೊಹ್ಲಿ, ಏಷ್ಯಾಕಪ್ ಟಿ20 ಮತ್ತು ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದರು. ಹೀಗಾಗಿ ಕೊಹ್ಲಿ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊಹ್ಲಿ ಟೆಸ್ಟ್ ಸ್ವರೂಪದಲ್ಲಿ ಇನ್ನೂ ತಮ್ಮ ಲಯ ಕಂಡುಕೊಂಡಿಲ್ಲ. ಇದು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮುಂದುವರೆದಿದೆ.

ಫೀಲ್ಡಿಂಗ್‌ನಲ್ಲಿ ಫ್ಲಾಪ್, ಬ್ಯಾಟಿಂಗ್‌ನಲ್ಲಿಯೂ ವಿಫಲ

ಚಟ್ಟೋಗ್ರಾಮ್ ಟೆಸ್ಟ್‌ನಲ್ಲಿ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದ ಕೊಹ್ಲಿ ಢಾಕಾ ಟೆಸ್ಟ್‌ನಲ್ಲೂ ವಿಶೇಷವಾಗಿ ಏನನ್ನು ಮಾಡಲಿಲ್ಲ. ಅಲ್ಲದೆ ಫೀಲ್ಡಂಗ್​ನಲ್ಲಿ ಕಳಪೆ ಆಟ ಪ್ರದರ್ಶಿಸಿದ ಭಾರತದ ಮಾಜಿ ನಾಯಕ ಸ್ಲಿಪ್‌ನಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳ 3 ಕ್ಯಾಚ್‌ಗಳನ್ನು ಕೈಬಿಟ್ಟರು. ಅದರ ಲಾಭವನ್ನು ಪಡೆದ ಬಾಂಗ್ಲಾದೇಶ ಭಾರತದ ಮುಂದೆ 145 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ನಂತರ ಬ್ಯಾಟಿಂಗ್​ಗೆ ಇಳಿದ ಕೊಹ್ಲಿ ಇಲ್ಲಿಯೂ ಫ್ಲಾಪ್ ಆದರು. ಎರಡನೇ ಇನ್ನಿಂಗ್ಸ್​ನಲ್ಲಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿದ್ದರೂ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾಗಿ ತಂಡವನ್ನು ಸಂಕಷ್ಟಕ್ಕೆ ದೂಡಿದರು.

ಬಾಂಗ್ಲಾ ಆಟಗಾರರತ್ತ ಬೊಟ್ಟು ಮಾಡಿ ಆಕ್ರೋಶ ವ್ಯಕ್ತಪಡಿಸಿದರು

ಹೀಗಾಗಿ ಸತತ ವೈಫಲ್ಯಗಳಿಂದ ಬಳಲುತ್ತಿರುವ ಕೊಹ್ಲಿಗೆ ಬಾಂಗ್ಲಾ ಆಟಗಾರರ ಸಂಭ್ರಮಾಚರಣೆ ಕೊಂಚ ಇರಿಸು ಮುರಿಸು ತಂದಂತ್ತೆ ತೋರುತ್ತಿದೆ. ಮೈದಾನದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ನಂತರ ಸ್ವತಃ ಕೊಹ್ಲಿಯೇ ಜೋರಾಗಿ ಮತ್ತು ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ತಾನು ಔಟದಾಗ ಬಾಂಗ್ಲಾ ಆಟಗಾರರು ತನ್ನನ್ನು ಈ ರೀತಿ ನಡೆಸಿಕೊಳ್ಳುವುದನ್ನು ನೋಡಿ ಕೊಹ್ಲಿಗೆ ಸಹಿಸಲಾಗಲಿಲ್ಲ ಎಂದು ಕಾಣುತ್ತದೆ. ಮೆಹಿದಿ ಹಸನ್ ಮಿರಾಜ್ ಅವರ ಎಸೆತದಲ್ಲಿ ಕೊಹ್ಲಿ ಔಟಾದ ತಕ್ಷಣ, ಬಾಂಗ್ಲಾ ಆಟಗಾರರು ಸಂಭ್ರಮಾಚರಣೆಯಲ್ಲಿ ಮುಳುಗಿದರು. ಬಳಿಕ ಬಾಂಗ್ಲಾ ತಂಡದ ಸ್ಪಿನ್ನರ್ ತೈಜುಲ್ ಇಸ್ಲಾಂ ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿಗೆ ಏನೋ ಹೇಳಿದರು. ಇದನ್ನು ಕೇಳಿಸಿಕೊಂಡ ಕೊಹ್ಲಿಗೆ ಸಹಿಸಲಾಗಲಿಲ್ಲ.

Mayank Dagar: ಫಿಟ್ನೆಸ್ ಪರೀಕ್ಷೆಯಲ್ಲಿ ಕೊಹ್ಲಿಯನ್ನೇ ಮೀರಿಸಿದ್ದ ಸೆಹ್ವಾಗ್ ಸೋದರಳಿಯನಿಗೆ ಜಾಕ್​ಪಾಟ್!

ಬಳಿಕ ಕೆಲಕಾಲ ಕ್ರೀಸ್‌ನಲ್ಲಿದ್ದ ಕೊಹ್ಲಿ, ಬಾಂಗ್ಲಾದೇಶದ ಆಟಗಾರರತ್ತ ಬೊಟ್ಟು ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ದೂರನ್ನು ಆಲಿಸಲು ಬಂದರು. ಕೂಡಲೇ ಅಂಪೈರ್ ಕೂಡ ಕೊಹ್ಲಿ ಬಳಿಗೆ ಬಂದು ಸಮಸ್ಯೆಯನ್ನು ಆಲಿಸಿದರು. ಅಂಪೈರ್ ಬಳಿ ಏನನ್ನೋ ಮಾತನಾಡಿ ಅಲ್ಲಿಂದ ಪೆವಿಲಿಯನ್‌ಗೆ ಮರಳಿದರು. ಒಟ್ಟಾರೆಯಾಗಿ, ಬಾಂಗ್ಲಾದೇಶ ಸರಣಿಯು ಕೊಹ್ಲಿಗೆ ಅತ್ಯಂತ ಕಳಪೆ ರೀತಿಯಲ್ಲಿ ಕೊನೆಗೊಂಡಿತು, ಅಲ್ಲಿ ಅವರು 4 ಇನ್ನಿಂಗ್ಸ್‌ಗಳಲ್ಲಿ ಕೇವಲ 45 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sun, 25 December 22

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ