AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೀಂ ಇಂಡಿಯಾದಲ್ಲಿ ರೋಹಿತ್ ಶಿಷ್ಯನಿಗೆ ಸಿಕ್ಕ ಅವಕಾಶ ಕೊಹ್ಲಿ ಶಿಷ್ಯನಿಗ್ಯಾಕಿಲ್ಲ? ಕನ್ನಡಿಗನಿಗೆ ಅನ್ಯಾಯ ಮಾಡ್ತಿದ್ಯಾ ಬಿಸಿಸಿಐ?

IND vs ENG: ಕರ್ನಾಟಕ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ಈ ಯುವ ಬ್ಯಾಟ್ಸ್‌ಮನ್‌ನ ಹೆಸರು ಕೂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವವರ ಪಟ್ಟಿಯಲ್ಲಿ ಕೇಳಿಬಂದಿತ್ತು. ಶಾ ಜೊತೆಗೆ ಪಾಡಿಕ್ಕಲ್ ಅವರನ್ನು ಕಳುಹಿಸುವಂತೆ ತಂಡದ ಆಡಳಿತ ಮಂಡಳಿ ಒತ್ತಾಯಿಸಿದೆ ಎಂದು ಹೇಳಲಾಗಿತ್ತು.

IND vs ENG: ಟೀಂ ಇಂಡಿಯಾದಲ್ಲಿ ರೋಹಿತ್ ಶಿಷ್ಯನಿಗೆ ಸಿಕ್ಕ ಅವಕಾಶ ಕೊಹ್ಲಿ ಶಿಷ್ಯನಿಗ್ಯಾಕಿಲ್ಲ? ಕನ್ನಡಿಗನಿಗೆ ಅನ್ಯಾಯ ಮಾಡ್ತಿದ್ಯಾ ಬಿಸಿಸಿಐ?
ಕೊಹ್ಲಿ- ರೋಹಿತ್
TV9 Web
| Updated By: ಪೃಥ್ವಿಶಂಕರ|

Updated on: Jul 27, 2021 | 3:03 PM

Share

ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಮೂವರು ಆಟಗಾರರು ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲು ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಸೇರಿಕೊಳ್ಳಲು ಕಳುಹಿಸಲಾಗುತ್ತಿದೆ. ಅಲ್ಲದೆ, ಅವರೊಂದಿಗೆ ಸ್ಟ್ಯಾಂಡ್‌ಬೈ ಆಗಿ ಬಂದ ಅಭಿಮನ್ಯು ಈಶ್ವರನ್ ಕೂಡ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜುಲೈ 26 ರಂದು ಬಿಸಿಸಿಐ ಈ ಮಾಹಿತಿಯನ್ನು ನೀಡಿತು. ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಆರಂಭಿಕರಾದ ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಗಾಯಗೊಂಡಿದ್ದಾರೆ. ಈ ಪ್ರವಾಸದಲ್ಲಿ ಭಾರತ ಐದು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದ್ದು, ಈ ಸರಣಿಯು ಆಗಸ್ಟ್ 4 ರಿಂದ ಪ್ರಾರಂಭವಾಗಲಿದೆ. ಅಂದಹಾಗೆ, ಗಾಯಗೊಂಡ ಮೂವರು ಆಟಗಾರರ ಬದಲಿಗೆ, ಇನ್ನೊಬ್ಬ ಯುವ ಆಟಗಾರನ ಹೆಸರು ಕೂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವವರಲ್ಲಿ ಕೇಳಿಬಂದಿತ್ತು. ಆದರೆ ಆ ಆಟಗಾರನನ್ನು ಆಯ್ಕೆ ಮಾಡಲಿಲ್ಲ. ಈ ಆಟಗಾರನ ಹೆಸರು ದೇವದತ್ ಪಡಿಕ್ಕಲ್.

ಕರ್ನಾಟಕ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ಈ ಯುವ ಬ್ಯಾಟ್ಸ್‌ಮನ್‌ನ ಹೆಸರು ಕೂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವವರ ಪಟ್ಟಿಯಲ್ಲಿ ಕೇಳಿಬಂದಿತ್ತು. ಶಾ ಜೊತೆಗೆ ಪಾಡಿಕ್ಕಲ್ ಅವರನ್ನು ಕಳುಹಿಸುವಂತೆ ತಂಡದ ಆಡಳಿತ ಮಂಡಳಿ ಒತ್ತಾಯಿಸಿದೆ ಎಂದು ಹೇಳಲಾಗಿದೆ. ಆದರೆ ಸೆಲೆಕ್ಟರ್‌ಗಳು ಎಡಗೈ ಬ್ಯಾಟ್ಸ್‌ಮನ್ ದೇವದುತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಿಲ್ಲ. ಅವರು ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ನ ಇನ್ನೂ ಒಂದು ಋತುವನ್ನು ಆಡಬೇಕು ಎಂಬುದು ಮಂಡಳಿಯ ಅಭಿಪ್ರಾಯವಾಗಿದೆ. ಪ್ರಸ್ತುತ, ಕೆಂಪು ಚೆಂಡು ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಸರಾಸರಿ 34ರಷ್ಟಿದೆ.

ಪಡಿಕ್ಕಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮವಾಗಿ ಪಡಿಕ್ಕಲ್ ಆಡುತ್ತಿದ್ದಾರೆ. ಹಾಗೆಯೇ ಸೂರ್ಯಕುಮಾರ್ ಯಾದವ್ ಕೂಡ ಐಪಿಎಲ್‌ನಲ್ಲಿ ಆಡುತ್ತಿದ್ದು, ಸೂರ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಟೆಸ್ಟ್ನಗೆ ಅವರ ಆಯ್ಕೆಯ ಬಗ್ಗೆ ಅನೇಕ ಜನರ ಅಪಸ್ವರ ಎತ್ತಿದ್ದಾರೆ. ಆದರೆ, ಕಳೆದ ರಣಜಿ ಋತುವಿನಲ್ಲಿ ಸೂರ್ಯ ಮುಂಬೈ ಪರ ಸರಾಸರಿ 56 ರನ್ ಗಳಿಸಿದ್ದಾರೆ ಎನ್ನಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಆಯ್ಕೆ ಮಾಡಲಾಗಿದೆ.

ಜಯಂತ್ ಯಾದವ್ ಅವರ ಹೆಸರೂ ತಿಳಿದಿತ್ತು ಪಡಿಕ್ಕಲ್ ಅವರಲ್ಲದೆ, ವಾಷಿಂಗ್ಟನ್ ಸುಂದರ್ ಬದಲಿಗೆ ಆಫ್ ಸ್ಪಿನ್ನರ್ ಜಯಂತ್ ಯಾದವ್ ಇಂಗ್ಲೆಂಡ್‌ಗೆ ಹೋಗುವ ಸುದ್ದಿ ಇತ್ತು. ಆದರೆ ಇದೀಗ ಅವರು ಅಗತ್ಯವಿಲ್ಲ ಎಂದು ಹೇಳಲಾಗುತ್ತದೆ. ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ರೂಪದಲ್ಲಿ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಹೊಂದಿದೆ. ಶಾ ಮತ್ತು ಸೂರ್ಯ ಇಬ್ಬರೂ ನೇರವಾಗಿ ಕೊಲಂಬೊದಿಂದ ಲಂಡನ್‌ಗೆ ಪ್ರಯಾಣಿಸಲಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದಾರೆ.

ಟೀಂ ಇಂಡಿಯಾ ಹೀಗಿದೆ ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಾಹ್ , ವೃದ್ಧಿಮಾನ್ ಸಹಾ, ಅಭಿಮನ್ಯು ಈಶ್ವರನ್, ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್.