AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು

IPL 2021: ವಿರಾಟ್ ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೇ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ.

IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು
ವಿರಾಟ್ ಕೊಹ್ಲಿ, ನಾಗ್
ಪೃಥ್ವಿಶಂಕರ
| Edited By: |

Updated on: Apr 22, 2021 | 8:22 AM

Share

ಈ ಬಾರಿ ಐಪಿಎಲ್​ನ ಮೊದಲ ಮೂರು ಪಂದ್ಯಗಳಿಗಾಗಿ ಚೆನ್ನೈನಲ್ಲಿ ಬೀಡುಬಿಟ್ಟಿದ್ದ ಆರ್​ಸಿಬಿ ಆಟಗಾರರು ನಾಲ್ಕನೇ ಪಂದ್ಯಕ್ಕಾಗಿ ಫ್ಲೈಟ್​ ಹತ್ತಿ ಮುಂಬೈಗೆ ಪ್ರಯಾಣಿಸಿದ್ದಾರೆ. ಫ್ಲೈಟ್​​ನಲ್ಲಿ ಆರ್​ಸಿಬಿ ಆಟಗಾರರು, ಫುಲ್ ಜೋಷ್​ನಲ್ಲಿದ್ದರು. ಅದ್ರಲ್ಲೂ ಮಿಸ್ಟರ್ ನ್ಯಾಗ್ಸ್ ಎಂಟರ್​ಟೈನ್ಮೆಂಟ್, ಕೊಹ್ಲಿ ಹುಡುಗರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಚೆನ್ನೈನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆರ್​ಸಿಬಿ, ಐಪಿಎಲ್​ನಲ್ಲಿ ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆದಿದೆ. ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಕೊಹ್ಲಿ ಹುಡುಗರು, ಈಗ ಮುಂಬೈಗೆ ಪ್ರಯಾಣಿಸಿದ್ದಾರೆ. ವಾಂಖೆಡೆಯಲ್ಲಿ ಆರ್​ಸಿಬಿ ರಾಜಸ್ಥಾನ್ ಮತ್ತು ಚೆನ್ನೈ ವಿರುದ್ಧ ಪಂದ್ಯಗಳನ್ನಾಡಲಿದೆ.

ಸಾಕು ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದ ನ್ಯಾಗ್ಸ್! ಫ್ಲೈಟ್​​ನಲ್ಲಿ ಮಿಸ್ಟರ್ ನ್ಯಾಗ್ಸ್, ಹೇಗಿದ್ರೂ ನಾವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ಇಲ್ಲಿಗೆ ಟೂರ್ನಿಯನ್ನ ಮುಗಿಸಿ, ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದಿದ್ದ. ನ್ಯಾಗ್ಸ್ ಆಡಿದ ಈ ಮಾತಿಗೆ ಟೀಮ್ ಡೈರೆಕ್ಟರ್ ಮೈಕ್ ಹಸನ್, ನೀನ್ ಬೇಕಾದ್ರೆ ಹೋಗು. ನಾವು ಮುಂಬೈಗೆ ಹೋಗುತ್ತೇವೆ ಎಂದಿದ್ದಾರೆ.

ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ ಮುಂದುವರೆದು ಆಟಗಾರರನ್ನ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ಮೈಕ್, ಇಲ್ಲಿವರೆಗೆ ನಾನು ನೀಡಿದ ಎಲ್ಲಾ ಪ್ಲ್ಯಾನ್​ಗಳು ವರ್ಕ್ ಆಗಿದೆ. ನಾವು ಬೆಂಗಳೂರಿಗೆ ಹೋಗೋಣ. ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ. ಇದಕ್ಕೆ ಪ್ರತಿಕ್ರಿಯಿಸಿದ ಮೈಕ್ ಹಸನ್ ಯಾಕೇ ನೀನು ಹೋಗ್ಬೇಕಾ? ನಾನು ಟೀಮ್ ಜೊತೆ ಮುಂಬೈಗೆ ಹೋಗುತ್ತೇನೆ ಎಂದರು. ಮೈಕ್ ಹಸನ್ ಒಪ್ಪದಿದ್ದಾಗ, ನ್ಯಾಗ್ಸ್ ವಿರಾಟ್ ಬೆನ್ನಿಂದೆ ಬಿದ್ದಿದ್ದಾನೆ. ವಿರಾಟ್ ಈ ರೀತಿ ಪದೇಪದೇ ಆಗೋದಿಲ್ಲ. ಹೇಗಿದ್ರೂ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಬೆಂಗಳೂರಿಗೆ ಹೋಗಿ ಬಿಡೋಣ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ವಿರಾಟ್ ನಾವು ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್​ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೆ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ ಎಂದಿದ್ದಾರೆ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ. ಅಷ್ಟೇ ಅಲ್ಲ.. ನ್ಯಾಗ್ಸ್ ಬಳಿ ಬಂದು, ಯಾರಾದ್ರೂ ಈತನನ್ನ ಎತ್ತಿ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿರಾಟ್, ನಾನು ಹೇಳಿದ ಮಾತುಗಳನ್ನ ಕಟ್ ಮಾಡ್ಬೇಡಿ. ಹಾಗೇ ಇಡಿ ಎಂದಿದ್ದಾರೆ. ಇನ್ನು ಫ್ಲೈಟ್​​ನಲ್ಲಿ ನ್ಯಾಗ್ಸ್​​ ಹಾವಳಿ ಜೋರಾಗ್ತಿದ್ದಂತೆ, ಆರ್​ಸಿಬಿ ಆಟಗಾರರು ನ್ಯಾಗ್ಸ್​​ನನ್ನು ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ್ದಾರೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್