AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯಕುಮಾರ್​ನನ್ನು ಡಿವಿಲಿಯರ್ಸ್​ಗೆ ಹೋಲಿಸಿದ ಪಾಂಟಿಂಗ್; ಲೇವಡಿ ಮಾಡಿದ ಪಾಕ್ ಕ್ರಿಕೆಟರ್

ಆಧುನಿಕ ಕಾಲದಲ್ಲಿ ಯಾವುದೇ ಆಟಗಾರ ಡಿವಿಲಿಯರ್ಸ್​ರಂತೆ ಬ್ಯಾಟ್ ಬೀಸುವುದನ್ನು ನಾನು ನೋಡಿಲ್ಲ. ಡಿವಿಲಿಯರ್ಸ್​ಗೆ ಹೋಲಿಕೆ ಮಾಡಬೇಕಾದರೆ ತಂಡದಲ್ಲಿ ನಿಮ್ಮ ಪ್ರಭಾವ ಹೇಗಿರಬೇಕೆಂದರೆ, ನಿಮ್ಮನ್ನು ಬೇಗನೆ ಔಟ್ ಮಾಡದಿದ್ದರೆ ನಮಗೆ ಗೆಲುವಿಲ್ಲ ಎಂಬುದನ್ನು ಎದುರಾಳಿ ತಂಡ ತಿಳಿದಿರಬೇಕು.

ಸೂರ್ಯಕುಮಾರ್​ನನ್ನು ಡಿವಿಲಿಯರ್ಸ್​ಗೆ ಹೋಲಿಸಿದ ಪಾಂಟಿಂಗ್; ಲೇವಡಿ ಮಾಡಿದ ಪಾಕ್ ಕ್ರಿಕೆಟರ್
Image Credit source: Hindustan Times
TV9 Web
| Edited By: |

Updated on: Aug 17, 2022 | 3:56 PM

Share

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಇತ್ತೀಚೆಗೆ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಹೊಗಳಿದ್ದರು. ಸೂರ್ಯಕುಮಾರ್ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್‌ನಂತೆ (AB de Villiers) ಬ್ಯಾಟ್ ಬೀಸುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಹೇಳಿಕೆ ನೀಡಿದ್ದರು. ಆದರೆ ಪಾಂಟಿಂಗ್ ಹೊಗಳಿಕೆಯನ್ನು ತಡೆದುಕೊಳ್ಳಲಾಗದ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, ಆಸೀಸ್ ಮಾಜಿ ನಾಯಕನ ಕಾಲೆಳೆದಿದ್ದಾರೆ. ಸೂರ್ಯಕುಮಾರ್ ಪ್ರಸ್ತುತ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಏಷ್ಯಾಕಪ್ ಆಗಸ್ಟ್ 27 ರಿಂದ ಆರಂಭವಾಗುತ್ತಿದ್ದು, ಸೂರ್ಯ ಕುಮಾರ್ ಯಾದವ್ ಯಾವ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಪಾಂಟಿಂಗ್, ಸೂರ್ಯ ಕುಮಾರ್​ ಅವರನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್‌ಗೆ ಹೋಲಿಸಿದ್ದರು.

ಡಿವಿಲಿಯರ್ಸ್‌ಗೆ ಸರಿಸಾಟಿ ಯಾರೂ ಇಲ್ಲ

ಇದನ್ನೂ ಓದಿ
Image
CWG 2022 Indian Medal Winners: 6ನೇ ಸ್ಥಾನದಲ್ಲಿ ಭಾರತ, ವೇಟ್​ಲಿಫ್ಟರ್​ಗಳ ಪಾರುಪತ್ಯ; ಇದು ಪದಕ ವಿಜೇತರ ಸಂಪೂರ್ಣ ಪಟ್ಟಿ
Image
ICC T20 Rankings: ಕೆರಿಬಿಯನ್​ ನಾಡಲ್ಲಿ ಸೂರ್ಯ ಸ್ಫೋಟ, ಟಿ20 ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನ! ನಲುಗಿದ ಬಾಬರ್ ಸಿಂಹಾಸನ
Image
IND vs WI: ಇತಿಹಾಸ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ; ಟಿ20 ಮಾದರಿಯಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ

ಸೂರ್ಯಕುಮಾರ್ ಯಾದವ್​ರನ್ನು ಡಿವಿಲಿಯರ್ಸ್ ಜೊತೆಗೆ ಪಾಂಟಿಂಗ್ ಮಾಡಿದ ಹೋಲಿಕೆಯನ್ನು ಇಷ್ಟಪಡದ ಪಾಕ್ ಕ್ರಿಕೆಟರ್ ಸಲ್ಮಾನ್ ಬಟ್, ವಿಶ್ವ ಕ್ರಿಕೆಟ್‌ನಲ್ಲಿ ಡಿವಿಲಿಯರ್ಸ್‌ಗೆ ಸರಿಸಾಟಿ ಯಾರೂ ಇಲ್ಲ ಎಂದು ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಡಿವಿಲಿಯರ್ಸ್‌ಗೆ ಹೋಲಿಸುವ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ಕಾಯಬೇಕಿತ್ತು ಎಂದು ಬಟ್ ಹೇಳಿಕೊಂಡಿದ್ದಾರೆ.

ಸಲ್ಮಾನ್, ಸೂರ್ಯಕುಮಾರ್​ನನ್ನು ಡಿವಿಲಿಯರ್ಸ್‌ಗೆ ಹೋಲಿಸಿದ್ದು ಸ್ವಲ್ಪ ಅತಿಯಾಯಿತು ಎಂದೆನಿಸುತ್ತದೆ. ಸೂರ್ಯಕುಮಾರ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ್ದಾರೆ. ಅವರು ಪ್ರತಿಭಾವಂತರಾಗಿದ್ದು, ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಎಬಿ ಡಿವಿಲಿಯರ್ಸ್ ಜೊತೆ ಅವರ ಹೋಲಿಕೆ ಎಷ್ಟರ ಮಟ್ಟಿಗೆ ಸರಿ. ಪಾಂಟಿಂಗ್ ಸ್ವಲ್ಪ ಸಮಯ ಕಾಯಬೇಕಾಗಿತ್ತು. ಅಲ್ಲದೆ ಸೂರ್ಯಕುಮಾರ್ ಇನ್ನೂ ದೊಡ್ಡ ಟೂರ್ನಿ ಆಡಬೇಕಿದೆ. ಡಿವಿಲಿಯರ್ಸ್ ಅವರಂತೆ ಯಾರೂ ಆಡಿಲ್ಲ ಎಂಬುದು ಸತ್ಯ ಎಂದಿದ್ದಾರೆ. ಜೊತೆಗೆ ಪಾಂಟಿಂಗ್, ಸೂರ್ಯನನ್ನು ಡಿವಿಲಿಯರ್ಸ್​ಗೆ ಹೋಲಿಸುವ ಬದಲು ವಿವಿಯನ್ ರಿಚರ್ಡ್ಸ್‌ಗೆ ಹೋಲಿಸಬಹುದಿತ್ತು ಎಂದು ಸಲ್ಮಾನ್ ಬಟ್ ಪಾಂಟಿಂಗ್ ಕಾಲೆಳೆದಿದ್ದಾರೆ.

ಆಧುನಿಕ ಕಾಲದಲ್ಲಿ ಯಾವುದೇ ಆಟಗಾರ ಡಿವಿಲಿಯರ್ಸ್​ರಂತೆ ಬ್ಯಾಟ್ ಬೀಸುವುದನ್ನು ನಾನು ನೋಡಿಲ್ಲ. ಡಿವಿಲಿಯರ್ಸ್​ಗೆ ಹೋಲಿಕೆ ಮಾಡಬೇಕಾದರೆ ತಂಡದಲ್ಲಿ ನಿಮ್ಮ ಪ್ರಭಾವ ಹೇಗಿರಬೇಕೆಂದರೆ, ನಿಮ್ಮನ್ನು ಬೇಗನೆ ಔಟ್ ಮಾಡದಿದ್ದರೆ ನಮಗೆ ಗೆಲುವಿಲ್ಲ ಎಂಬುದನ್ನು ಎದುರಾಳಿ ತಂಡ ತಿಳಿದಿರಬೇಕು. ಅಥವಾ ನೀವು ಪಂದ್ಯದ ದಿಕ್ಕನನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಹೀಗಾಗಿ ಇತ್ತೀಚಿನ ಇತಿಹಾಸದಲ್ಲಿ ಡಿವಿಲಿಯರ್ಸ್​ ತರ ಯಾರೂ ಆಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬಟ್ ಹೇಳಿಕೊಂಡಿದ್ದಾರೆ.

ಪಾಂಟಿಂಗ್ ಹೇಳಿದ್ದೇನು?

ಆಸ್ಟ್ರೇಲಿಯಾಕ್ಕೆ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಪಾಂಟಿಂಗ್, ಐಸಿಸಿ ವಿಮರ್ಶೆಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ್ದರು. ಸೂರ್ಯ ಮೈದಾನದಲ್ಲಿ 360 ಡಿಗ್ರಿ ಕ್ರಿಕೆಟ್ ಆಡುತ್ತಾನೆ. ಸೂರ್ಯನ ಆಟ ಎಬಿ ಡಿವಿಲಿಯರ್ಸ್ ಆಟವನ್ನು ಹೋಲುತ್ತದೆ. ಸೂರ್ಯನ ಲ್ಯಾಪ್ ಶಾಟ್‌, ಲೇಟ್ ಕಟರ್, ಕೀಪರ್‌ ತಲೆಯ ಮೇಲೆ ಹೊಡೆಯುವುದು, ಸ್ವಿಪ್ ಶಾಟ್​ಗಳು, ಡಿವಿಯರ್ಸ್​ರನ್ನು ನೆನಪಿಸುತ್ತವೆ ಎಂದಿದ್ದರು.

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ