AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತಿದ್ದು ಯಾರಿಂದ ಅಂತ ಎಲ್ಲರಿಗೂ ಗೊತ್ತು: ಪಂದ್ಯದ ಬಳಿಕ ಅಯ್ಯರ್ ಹೇಳಿದ್ದೇನು?

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿವೆ. ಮೊದಲ ಮ್ಯಾಚ್ ಮಳೆಗೆ ಆಹುತಿಯಾದರೆ, ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಈ ಜಯದೊಂದಿಗೆ ಆಂಗ್ಲರ ಪಡೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು ಮೂರನೇ ಪಂದ್ಯವು ಜುಲೈ 7 ರಂದು ನಡೆಯಲಿದೆ.

ಸೋತಿದ್ದು ಯಾರಿಂದ ಅಂತ ಎಲ್ಲರಿಗೂ ಗೊತ್ತು: ಪಂದ್ಯದ ಬಳಿಕ ಅಯ್ಯರ್ ಹೇಳಿದ್ದೇನು?
Shreyas Iyer
ಝಾಹಿರ್ ಯೂಸುಫ್
|

Updated on: Jul 05, 2026 | 8:05 AM

Share

ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 190 ರನ್ ಕಲೆಹಾಕಿತು. ಈ ಗುರಿಯನ್ನು ಇಂಗ್ಲೆಂಡ್ 19 ಓವರ್​ಗಳಲ್ಲಿ ಚೇಸ್ ಮಾಡಿ 4 ವಿಕೆಟ್​ಗಳ ಜಯ ಸಾಧಿಸಿದೆ. ಈ ಸೋಲಿನ ಬಳಿಕ ಶ್ರೇಯಸ್ ಅಯ್ಯರ್, ಕಾಮೆಂಟೇಟರ್ ನಾಸಿರ್ ಹುಸೇನ್ ಅವರೊಂದಿಗೆ ನಡೆಸಿದ ಚಿಟ್​ ಚಾಟ್​ನ ಮುಖ್ಯಾಂಶಗಳು ಇಲ್ಲಿವೆ.

ಪ್ರಶ್ನೆ (ನಾಸಿರ್ ಹುಸೇನ್): ಶ್ರೇಯಸ್, ನಿಮ್ಮ ಕೈಯಲ್ಲಿದ್ದ ಪಂದ್ಯ ಹಠಾತ್ ಆಗಿ ಎಲ್ಲಿ ಕೈತಪ್ಪಿ ಹೋಯಿತು ಎಂದು ನಿಮಗನಿಸುತ್ತಿದೆಯೇ?

ಉತ್ತರ (ಶ್ರೇಯಸ್ ಅಯ್ಯರ್): ನಮ್ಮ ಪಂದ್ಯ ಎಲ್ಲಿ ಕೈತಪ್ಪಿತು ಎಂದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತು. ಆದರೆ ನಾನು ಯಾವುದೇ ಒಬ್ಬ ನಿರ್ದಿಷ್ಟ ಆಟಗಾರನನ್ನು ದೂಷಿಸಲು ಇಷ್ಟಪಡುವುದಿಲ್ಲ. 15 ಓವರ್‌ಗಳವರೆಗೆ ನಾವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೆವು. ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದೆವು. ಆದರೆ ಹಠಾತ್ ಆಗಿ ಪಂದ್ಯದ ಗತಿ ಅವರ ಕಡೆಗೆ ತಿರುಗಿತು. ಅಲ್ಲಿಂದ ಮುಂದೆ ಅವರಿಗೆ ಗೆಲುವು ಸುಲಭವಾಯಿತು.

ಪ್ರಶ್ನೆ: ನೀವು ಆ ಆಟಗಾರನ ಹೆಸರನ್ನು ಹೇಳದೆ ಇರಬಹುದು, ಆದರೆ ನಾನು ಹೇಳಲೇಬೇಕು. ರವಿ ಬಿಷ್ಣೋಯ್ ಎಸೆದ ಆ 17ನೇ ಓವರ್! ನಾನು ಹಳೆಯ ದಾಖಲೆಗಳನ್ನು ನೋಡಿದೆ, ಅವರು ಈ ಹಿಂದೆ ಕೇವಲ ಮೂರು ನೋ-ಬಾಲ್‌ಗಳನ್ನು ಮಾತ್ರ ಎಸೆದಿದ್ದರು. ಈ ಪಂದ್ಯದಲ್ಲಿ ಅವರು ಬ್ಯಾಕ್ ಟು ಬ್ಯಾಕ್ ನೋ-ಬಾಲ್ ಎಸೆದಿದ್ದು ನಿಮಗೆ ಎಷ್ಟು ಆಘಾತ ತಂದಿತು?

ಉತ್ತರ: ಮೊದಲ ನೋ-ಬಾಲ್ ಬಿದ್ದಾಗ, ಅವರು ಮುಂದಿನ ಎಸೆತದಲ್ಲಿ ಕಂಬ್ಯಾಕ್ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅದೇ 17ನೇ ಓವರ್‌ನಲ್ಲಿ ಸತತವಾಗಿ ನೋ-ಬಾಲ್‌ಗಳನ್ನು ಎಸೆದದ್ದು ನಮಗೆ ದೊಡ್ಡ ಹಿನ್ನಡೆಯಾಯಿತು. ಇದು ಖಂಡಿತವಾಗಿಯೂ ನಮಗೆ ಬೇಸರ ತಂದಿದೆ. ಆದರೆ ಅವರು ಈ ತಪ್ಪಿನಿಂದ ಖಂಡಿತವಾಗಿಯೂ ಕಲಿಯಲಿದ್ದಾರೆ.

ಪ್ರಶ್ನೆ: ಟೀಮ್ ಇಂಡಿಯಾ 190 ರನ್ ಗಳಿಸಿದಾಗ ನಿಮ್ಮ ಆಲೋಚನೆ ಏನಿತ್ತು?

ಉತ್ತರ: ಈ ಪಿಚ್‌ನಲ್ಲಿ ಅನಿಶ್ಚಿತ ಬೌನ್ಸ್ ಇತ್ತು. ಹಾಗಾಗಿ 190 ರನ್ ಎಂಬುದು ನಿಜಕ್ಕೂ ಒಂದು ಅತ್ಯುತ್ತಮ ಮತ್ತು ಸವಾಲಿನ ಮೊತ್ತವಾಗಿತ್ತು. ಕೊನೆಯ ಓವರ್‌ನಲ್ಲಿ ತಿಲಕ್ ವರ್ಮಾ ಗಳಿಸಿದ ಆ ಪ್ರಮುಖ 20 ರನ್‌ಗಳು ನಮ್ಮ ರನ್ ವೇಗವನ್ನು ಹೆಚ್ಚಿಸಿದವು. ನಾನು ಮೊದಲೇ ಹೇಳಿದಂತೆ, ಬೌಲಿಂಗ್ ಆರಂಭಿಸಿದ ಮೊದಲ 15 ಓವರ್‌ಗಳವರೆಗೆ ನಾವು ಪಂದ್ಯದಲ್ಲಿ ಹಿಡಿತ ಸಾಧಿಸಿದ್ದೆವು. ಆದರೆ ನಂತರ ಇಂಗ್ಲೆಂಡ್‌ನ ಜೇಕಬ್ ಬೆಥೆಲ್ ಅದ್ಭುತವಾಗಿ ಆಡಿದರು. ಅವರ ಶಾಂತ ಸ್ವಭಾವ ಮತ್ತು ಇನ್ನಿಂಗ್ಸ್ ಕಟ್ಟಿದ ರೀತಿ ನಿಜಕ್ಕೂ ಪ್ರಶಂಸನೀಯ.

ಪ್ರಶ್ನೆ: 13ನೇ ಓವರ್ ಅವಧಿಯಲ್ಲಿ ಸ್ಯಾಮ್ ಕರನ್ ಬೌಲಿಂಗ್‌ಗೆ ಬಂದಾಗ ನಿಮ್ಮ ರನ್ ವೇಗ ಕೊಂಚ ಕಡಿಮೆಯಾಯಿತು. ಆ ಸಮಯದಲ್ಲಿ ನೀವು ಬೇರೆ ಏನಾದರೂ ಮಾಡಲು ಸಾಧ್ಯವಿತ್ತೇ?

ಉತ್ತರ: ಇಂಗ್ಲೆಂಡ್ ಬೌಲರ್‌ಗಳು ಮೈದಾನದ ಗಾತ್ರ ಮತ್ತು ಪಿಚ್‌ನ ಸ್ವರೂಪವನ್ನು ಮೊದಲೇ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಸ್ಯಾಮ್ ಕರನ್ ನಿಖರವಾದ ಜಾಗದಲ್ಲಿ ಬೌಲಿಂಗ್ ಮಾಡಿದರು. ನಮ್ಮ ಎಡಗೈ ಬ್ಯಾಟರ್‌ಗಳಿಗೆ ಲೆಗ್ ಸೈಡ್‌ನಲ್ಲಿ ಆಡಲು ಯಾವುದೇ ಅವಕಾಶ ನೀಡಲಿಲ್ಲ. ಆಫ್-ಸ್ಟಂಪ್‌ನ ಹೊರಗಡೆ ಬೌಲಿಂಗ್ ಮಾಡುವ ಅವರ ಯೋಜನೆ ತುಂಬಾ ಯಶಸ್ವಿಯಾಯಿತು.

ಪ್ರಶ್ನೆ: ಇಂದು ಭಾರತೀಯ ಕ್ರಿಕೆಟ್‌ಗೆ ಒಂದು ಐತಿಹಾಸಿಕ ದಿನ. ಯುವ ಆಟಗಾರ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಿದ್ದಾರೆ. ಒಬ್ಬ ನಾಯಕನಾಗಿ ಅವರ ಇಂದಿನ ಪ್ರದರ್ಶನವನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ವೈಭವ್ ಯಾವುದೇ ನಿರ್ಭೀತಿಯ  ಮನೋಭಾವವನ್ನು ಹೊಂದಿದ್ದಾರೆ. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಶೈಲಿಯಿಂದ ನಾವೂ ಕಲಿಯುವುದು ಸಾಕಷ್ಟಿದೆ. ಅವರು ಕಳೆದ ಕೆಲವು ತಿಂಗಳು ಹಾಗೂ ವರ್ಷಗಳಿಂದ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಹಾಗಾಗಿ ಅವರು ಪಂದ್ಯದ ವೇಳೆ ಆತಂಕಕ್ಕೆ ಒಳಗಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇಂತಹ ದೊಡ್ಡ ವೇದಿಕೆಯಲ್ಲಿ ಅವರು ಹೆಜ್ಜೆ ಇಟ್ಟ ರೀತಿ ಮತ್ತು ಆಡಿದ ಶೈಲಿ ನೋಡಲು ತುಂಬಾ ಸಂತೋಷ ತಂದಿದೆ.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್!

ಪ್ರಶ್ನೆ: ಭಾರತ ತಂಡವು ಸತತವಾಗಿ 3 ಪಂದ್ಯಗಳನ್ನು ಸೋತಿರುವುದು ತುಂಬಾ ಅಪರೂಪ. ಇಲ್ಲಿಂದ ನೀವು ಮತ್ತೆ ಗೆಲುವಿನ ಹಾದಿಗೆ ಮರಳಬಹುದು ಎಂಬ ನಂಬಿಕೆ ಇದೆಯೇ?

ಉತ್ತರ: ಖಂಡಿತವಾಗಿಯೂ ಇದೆ. ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ನಾವು ಪ್ರಸ್ತುತ ಅತ್ಯಂತ ಕೆಳಮಟ್ಟದಲ್ಲಿದ್ದೇವೆ ಎಂಬುದು ಗೊತ್ತು. ಆದರೆ ಇಲ್ಲಿಂದ ನಮಗೆ ಮುಂದಿರುವ ಏಕೈಕ ದಾರಿ ಎಂದರೆ ಗೆಲುವಿನತ್ತ ಮುನ್ನಡೆಯುವುದು ಮಾತ್ರ. ನಾವು ಮತ್ತಷ್ಟು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎನ್ನುವ ಮೂಲಕ ಶ್ರೇಯಸ್ ಅಯ್ಯರ್ ಮಾತು ಮುಗಿಸಿದರು.

Follow Us
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
‘ಏನಾದ್ರು ಆಗ್ಲಿ, ನಾನು ಕ್ಷಮೆ ಕೇಳಲ್ಲ’: ಸೋನು ಗೌಡ ದಿಟ್ಟ ಮಾತು
‘ಏನಾದ್ರು ಆಗ್ಲಿ, ನಾನು ಕ್ಷಮೆ ಕೇಳಲ್ಲ’: ಸೋನು ಗೌಡ ದಿಟ್ಟ ಮಾತು
‘ಪ್ಯಾಟೆ ಮಂದಿ..’ ರಿಯಾಲಿಟಿ ಶೋ ಸ್ಪರ್ಧಿ ಪದ್ದು ನಿಧನ: ನಡೆದಿದ್ದೇನು?
‘ಪ್ಯಾಟೆ ಮಂದಿ..’ ರಿಯಾಲಿಟಿ ಶೋ ಸ್ಪರ್ಧಿ ಪದ್ದು ನಿಧನ: ನಡೆದಿದ್ದೇನು?
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!