AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ನಾವು ಹಲವು ಬಾರಿ ಮುಗ್ಗರಿಸಿದ್ದೇವೆ! ಟೆಸ್ಟ್ ಸರಣಿ ಸೋಲಿನ ಬಳಿಕೆ ಕೊಹ್ಲಿ ಹೇಳಿದ್ದೇನು ಗೊತ್ತಾ?

Virat Kohli: ಈ ಸರಣಿಯಲ್ಲಿ ಅತ್ಯಂತ ಕಠಿಣ ಪೈಪೋಟಿ ತೋರಿದವು. ಮೊದಲ ಪಂದ್ಯ ಉತ್ತಮವಾಗಿತ್ತು, ಆದರೆ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತವಾಗಿ ಆಡಿತು ಮತ್ತು ಅದನ್ನು ಮುಂದಕ್ಕೆ ತೆಗೆದುಕೊಂಡು ಇಲ್ಲಿ ಗೆಲುವು ದಾಖಲಿಸಿತು.

IND vs SA: ನಾವು ಹಲವು ಬಾರಿ ಮುಗ್ಗರಿಸಿದ್ದೇವೆ! ಟೆಸ್ಟ್ ಸರಣಿ ಸೋಲಿನ ಬಳಿಕೆ ಕೊಹ್ಲಿ ಹೇಳಿದ್ದೇನು ಗೊತ್ತಾ?
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Jan 14, 2022 | 8:15 PM

Share

ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ವರ್ಷ ಕಳೆದರೂ ಟೀಂ ಇಂಡಿಯಾದ ಚಿತ್ರಣ ಮತ್ತು ಅದೃಷ್ಟ ಬದಲಾಗಿಲ್ಲ. 2018ರಲ್ಲಿ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ತಂಡ, 2021-22ರಲ್ಲಿ ಅದೇ ಸ್ಥಿತಿಯೊಂದಿಗೆ ದೇಶಕ್ಕೆ ಮರಳುತ್ತಿದೆ. ಸೆಂಚುರಿಯನ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಆರಂಭವಾದ ಭಾರತ ತಂಡ ಮುಂದಿನ ಎರಡು ಟೆಸ್ಟ್‌ಗಳಲ್ಲಿ ಸೋಲು ಕಂಡಿದ್ದು, ಮತ್ತೆ ಸರಣಿ ಗೆಲ್ಲುವ ಅವಕಾಶ ಕೈ ತಪ್ಪಿದೆ. ಕೇಪ್ ಟೌನ್ ಟೆಸ್ಟ್‌ನ ನಾಲ್ಕನೇ ದಿನದಂದು ದಕ್ಷಿಣ ಆಫ್ರಿಕಾವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಪಂದ್ಯ ಮತ್ತು ಸರಣಿಯನ್ನು ಗೆದ್ದುಕೊಂಡಿತು. ಸರಣಿ ಗೆಲುವಿನ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ಟೀಂ ಇಂಡಿಯಾ ಏಕೆ ಸೋಲು ಕಂಡಿತು ಎಂಬುದರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಕೇಪ್ ಟೌನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 223 ರನ್ ಗಳಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡವು ಕೇವಲ 198 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅದರಲ್ಲಿ 100 ರನ್‌ಗಳು ರಿಷಬ್ ಪಂತ್ ಅವರಿಂದಲೇ ಬಂದವು, ಆದರೆ 28 ರನ್ ಹೆಚ್ಚುವರಿಯಾಗಿ ಬಂದವು. ಈ ಮೂಲಕ ಭಾರತ ದಕ್ಷಿಣ ಆಫ್ರಿಕಾಕ್ಕೆ ಕೇವಲ 212 ರನ್​ಗಳ ಗುರಿ ನೀಡಿದ್ದು, ಅದನ್ನು ಆಫ್ರಿಕಾ ತಂಡ ಸುಲಭವಾಗಿ ಆ ಗುರಿ ತಲುಪಿತು. ಈ ಸಂಪೂರ್ಣ ಸರಣಿಯಲ್ಲಿ ಭಾರತ ತಂಡವು ಒಮ್ಮೆ ಮಾತ್ರ 300 ಪ್ಲಸ್ ಗಡಿ ದಾಟಲು ಸಾಧ್ಯವಾಯಿತು. ನಿಸ್ಸಂಶಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ಸೋಲಿನ ಜವಾಬ್ದಾರಿಯನ್ನು ತಂಡದ ಬ್ಯಾಟಿಂಗ್‌ ವಿಭಾಗ ಹೊರಬೇಕಾಗುತ್ತದೆ ಮತ್ತು ನಾಯಕ ಕೊಹ್ಲಿ ಇದನ್ನು ಪ್ರಮುಖ ಕಾರಣವೆಂದು ಸ್ಪಷ್ಟವಾಗಿ ಪರಿಗಣಿಸಿದ್ದಾರೆ.

ದಕ್ಷಿಣ ಆಫ್ರಿಕಾ ಭರ್ಜರಿ ಪುನರಾಗಮನ ಟೀಂ ಇಂಡಿಯಾ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ತಪ್ಪುಗಳ ಬಗ್ಗೆ ಮಾತನಾಡಿದರು. ಟೆಸ್ಟ್ ಕ್ರಿಕೆಟ್‌ಗೆ ಇದೊಂದು ಉತ್ತಮ ದೃಶ್ಯವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ. ಈ ಸರಣಿಯಲ್ಲಿ ಅತ್ಯಂತ ಕಠಿಣ ಪೈಪೋಟಿ ತೋರಿದವು. ಮೊದಲ ಪಂದ್ಯ ಉತ್ತಮವಾಗಿತ್ತು, ಆದರೆ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತವಾಗಿ ಆಡಿತು ಮತ್ತು ಅದನ್ನು ಮುಂದಕ್ಕೆ ತೆಗೆದುಕೊಂಡು ಇಲ್ಲಿ ಗೆಲುವು ದಾಖಲಿಸಿತು. ಅವರು ನಿರ್ಣಾಯಕ ಸಮಯದಲ್ಲಿ ಹೆಚ್ಚು ಉತ್ತಮವೆಂದು ಸಾಬೀತುಪಡಿಸಿದರು ಎಂದಿದ್ದಾರೆ.

ಪದೇ ಪದೇ ಬ್ಯಾಟಿಂಗ್ ಕುಸಿತ ಸೋಲಿಗೆ ಕಾರಣ ತಂಡದ ಸೋಲಿಗೆ ತಂಡದ ಬ್ಯಾಟಿಂಗ್ ಪ್ರಮುಖ ಕಾರಣ ಎಂದು ಆರೋಪಿಸಿದ ನಾಯಕ ಕೊಹ್ಲಿ, “ನಾವು ಹಲವು ಬಾರಿ (ಬ್ಯಾಟಿಂಗ್‌ನಲ್ಲಿ) ಮುಗ್ಗರಿಸಿದ್ದೇವೆ ಮತ್ತು ಇದರಿಂದಾಗಿ ನಾವು ಪ್ರಮುಖ ಅವಕಾಶಗಳನ್ನು ಕಳೆದುಕೊಂಡಿದ್ದೇವೆ. ಅಲ್ಲದೆ ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿದ್ದೇವೆ. ಆದರೆ ನಮ್ಮ ಬ್ಯಾಟಿಂಗ್ ವಿಭಾಗವನ್ನೂ ಸಹ ನೇರ ಹೊಣೆ ಮಾಡಲು ಸಾಧ್ಯವಿಲ್ಲ. ದಕ್ಷಿಣ ಆಫ್ರಿಕಾದ ಬೌಲಿಂಗ್ ಉತ್ತಮವಾಗಿತ್ತು ಮತ್ತು ಅವರು ತಮ್ಮ ಎತ್ತರದ ಪ್ರಯೋಜನವನ್ನು ಪಡೆದರು. ನಮ್ಮ ಬೌಲರ್‌ಗಳು ಸಹ ಉತ್ತಮವಾಗಿ ಬೌಲಿಂಗ್ ಮಾಡಿದರು, ಆದರೆ ದಕ್ಷಿಣ ಆಫ್ರಿಕಾದವರು ಹೆಚ್ಚು ಸಮಯದವರೆಗೆ ಒತ್ತಡವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು ಎಂದರು.

ರಾಹುಲ್ ಮಾತ್ರ 200ಕ್ಕೂ ಹೆಚ್ಚು ರನ್ ಗಳಿಸಿದರು ಭಾರತದ ಪರ ಈ ಸರಣಿಯಲ್ಲಿ ಕೆಎಲ್ ರಾಹುಲ್ ಅತ್ಯಧಿಕ 226 ರನ್ ಗಳಿಸಿದರು. ರಾಹುಲ್ ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು 200 ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಕೀಗನ್ ಪೀಟರ್ಸನ್, ನಾಯಕ ಡೀನ್ ಎಲ್ಗರ್ ಮತ್ತು ಟೆಂಬಾ ಬವುಮಾ ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ 200 ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು ಇದು ಸೋಲು ಮತ್ತು ಗೆಲುವಿನ ನಡುವೆ ದೊಡ್ಡ ವ್ಯತ್ಯಾಸವನ್ನು ಸಾಬೀತುಪಡಿಸಿತು.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್