AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಗಾಲ್ಫ್​​ ಲೀಗ್‌ನ ಮೂರನೇ ಆವೃತ್ತಿಗೆ ತೆರೆ

Delhi Golf Club League: ಗಾಲ್ಫ್ ಒಲಂಪಿಕ್ ಕ್ರೀಡೆಯಾಗಿದ್ದು, ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು ವೇದಿಕೆ ನಿರ್ಮಿಸಿದ್ದೇವೆ. ಇದಕ್ಕಾಗಿ ಸರಳ ಮಾದರಿಯನ್ನು ಮತ್ತು ಸಮತಟ್ಟಾದ ಮೈದಾನವನ್ನು ರೂಪಿಸಿದ್ದೇವೆ.

ದೆಹಲಿ ಗಾಲ್ಫ್​​ ಲೀಗ್‌ನ ಮೂರನೇ ಆವೃತ್ತಿಗೆ ತೆರೆ
Delhi Golf Club League
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 04, 2023 | 10:14 PM

ದೆಹಲಿಯ ಲಾಯ್ಡ್ ಗಾಲ್ಫ್ ಕ್ಲಬ್ ಲೀಗ್‌ನ ಮೂರನೇ ಆವೃತ್ತಿಗೆ ತೆರೆ ಬಿದ್ದಿದೆ. ಅಕ್ಟೋಬರ್ 12 ರಿಂದ ಶುರುವಾಗಿದ್ದ ಈ ಲೀಗ್​ನಲ್ಲಿ ಒಟ್ಟು 462 ಗಾಲ್ಫ್ ​ಪಟುಗಳು ಭಾಗವಹಿಸಿದ್ದರು. ದೆಹಲಿಯ ಪಾರ್-72 ನಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ 3 ವಾರಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಈ ಬಾರಿ ಹಲವು ಯುವ ಪ್ರತಿಭೆಗಳು ಕಾಣಿಸಿಕೊಂಡಿದ್ದು ವಿಶೇಷ.

ಈ ಯುವ ಗಾಲ್ಫ್​ ಪಟುಗಳಿಗೆ ಭಾರತದ ಖ್ಯಾತ ಗಾಲ್ಫರ್​ಗಳಾದ ನೋನಿತಾ ಲಾಲ್ ಖುರೇಷಿ, ಅಮಿತ್ ಲೂತ್ರಾ, ಗೌರವ್ ಘೀ, ವಿವೇಕ್ ಭಂಡಾರಿ, ಚಿರಾಗ್ ಕುಮಾರ್ ಮತ್ತು ಅಮನದೀಪ್ ಜೋಹಾಲ್ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. ಅಲ್ಲದೆ ಇವರೊಂದಿಗೆ ಈ ಲೀಗ್​ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ/ಗಾಲ್ಫ್ ಆಟಗಾರ ಕಪಿಲ್ ದೇವ್ ಕೂಡ ಕಾಣಿಸಿಕೊಂಡಿದ್ದರು.

ಇನ್ನು ದೆಹಲಿ ಗಾಲ್ಫ್​ ಕ್ಲಬ್​ನ ಈ ಪ್ರಯತ್ನಕ್ಕೆ ಟಿವಿ9 ನೆಟ್​ವರ್ಕ್​ ಕೂಡ ಕೈ ಜೋಡಿಸಿದ್ದು ವಿಶೇಷ. ಟಿವಿ9 ನೆಟ್‌ವರ್ಕ್ ಅಲ್ಲದೆ ಲಾಯ್ಡ್, ರಾಡಿಕೊ ಮತ್ತು ಮರ್ಸಿಡಿಸ್-ಬೆನ್ಜ್ ಸೇರಿದಂತೆ ಹಲವಾರು ಕಂಪೆನಿಗಳು ಗಾಲ್ಫ್ ಕ್ಲಬ್ ಲೀಗ್‌ನ ಮೂರನೇ ಆವೃತ್ತಿಯ ಪ್ರಾಯೋಜಕತ್ವವಹಿಸಿಕೊಂಡಿತ್ತು.

ಪಂದ್ಯಾವಳಿ ಸಮಿತಿ ಅಧ್ಯಕ್ಷ ಕಮೋಡೋರ್ ಶರತ್ ಮೋಹನ್ ಸಮ್ಮತ್ ಮಾತನಾಡಿ, ಗಾಲ್ಫ್ ಒಲಂಪಿಕ್ ಕ್ರೀಡೆಯಾಗಿದ್ದು, ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಗುರುತಿಸಲು ವೇದಿಕೆ ನಿರ್ಮಿಸಿದ್ದೇವೆ. ಇದಕ್ಕಾಗಿ ಸರಳ ಮಾದರಿಯನ್ನು ಮತ್ತು ಸಮತಟ್ಟಾದ ಮೈದಾನವನ್ನು ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಲೀಗ್‌ನಲ್ಲಿ, ಹಿರಿಯ ಸದಸ್ಯರು ಜೂನಿಯರ್ ಗಾಲ್ಫ್ ಆಟಗಾರರೊಂದಿಗೆ ಆಡಿದ್ದಾರೆ. ಇದರಿಂದ ಯುವ ಪ್ರತಿಭೆಗಳು ಮತ್ತಷ್ಟು ಕ್ಲಬ್‌ನೊಳಗಿನ ಗಾಲ್ಫ್ ಪರಿಸರ ವ್ಯವಸ್ಥೆಯೊಂದಿಗೆ ಬೆರೆಯಲು ಸಾಧ್ಯವಾಗಲಿದೆ ಎಂದು ಶರತ್ ಮೋಹನ್ ಸಮ್ಮತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ ಗಾಲ್ಫ್ ಕ್ಲಬ್‌ನ ಏಕೈಕ ಉದ್ದೇಶವು ಭಾರತೀಯ ಗಾಲ್ಫ್ ಅನ್ನು ಉತ್ತೇಜಿಸುವುದು. ಇದರ ಜೊತೆಗೆ ಪ್ರತಿಭೆಯನ್ನು ಉತ್ತೇಜಿಸುವ ಮತ್ತು ಸೌಹಾರ್ದತೆಯನ್ನು ಬೆಳೆಸುವುದಾಗಿದೆ. ಇದರ ಯಶಸ್ವಿಗೆ ಈ ವರ್ಷ ದೊರೆತ ಅದ್ಭುತ ಪ್ರತಿಕ್ರಿಯೆಯೇ ಸಾಕ್ಷಿ ಎಂದು ದೆಹಲಿ ಗಾಲ್ಫ್ ಕ್ಲಬ್​ನ ನಾಯಕ ರಾಜ್ ಖನ್ನಾ ತಿಳಿಸಿದ್ದಾರೆ.

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ