Women
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ | ಇದು ಭಾರತದಲ್ಲಿ ಮಹಿಳೆಯರಿಗೆ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ನೀಡಲಾಗುವ ಗೌರವ. ಕಾನೂನು ಕೂಡ ಮಹಿಳೆಯರಿಗೆ ಆಸರೆಯಾಗಿದೆ. ಆದರೆ, ವಾಸ್ತವದಲ್ಲಿ ಪುರುಷಪ್ರಧಾನವಾಗಿರುವ ಈ ಸಮಾಜದಲ್ಲಿ ಮಹಿಳೆಯರಿಗೆ ಸಮಸ್ಯೆಗಳ ಮಹಾಪೂರವೇ ಇದೆ. ಅದರ ನಡುವೆಯೂ ನಾರಿಯರು ಬದಲಾಗುತ್ತಿದ್ದಾರೆ. ಸ್ವತಂತ್ರರಾಗುತ್ತಿದ್ದಾರೆ, ಸ್ವತಂತ್ರ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ದೈಹಿಕವಾಗಿ ಬಿಟ್ಟರೆ ಇವತ್ತು ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದು ಬಾರಿ ಬಾರಿ ಋಜುವಾತಾಗುತ್ತಿದೆ. ಆಕೆ ಅಡುಗೆ ಮನೆಗೆ ಈಗ ಸೀಮಿತವಾಗಿಲ್ಲ. ಬಹಳ್ಟು ಮಹಿಳಾ ಉದ್ದಿಮೆದಾರರು ಹೊರಹೊಮ್ಮುತ್ತಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಗೆ ಮಹಿಳೆಯರೂ ಪಾಲ್ಗೊಳ್ಳುವುದು ಇವತ್ತಿನ ದಿನದ ಬಹಳ ಅಗತ್ಯತೆ ಆಗಿದೆ.
ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
Pune Woman lost Rs 99 lakh to scammers: ದುಷ್ಕರ್ಮಿಗಳ ನಕಲಿ ದಾಖಲೆಗಳ ಸುಳಿಗೆ ಸಿಲುಕಿದ ಪುಣೆಯ ಮಹಿಳೆಯೊಬ್ಬರು 99 ಲಕ್ಷ ರೂ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. 62 ವರ್ಷದ ನಿವೃತ್ತ ಐಎಎಸ್ ಅಧಿಕಾರಿಯಾದ ಈ ಮಹಿಳೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ಅರೆಸ್ಟ್ ವಾರಂಟ್, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಖದೀಮರು ಮಹಿಳೆಯ ಬ್ಯಾಂಕ್ ಅಕೌಂಟ್ಗಳಿಂದ ಎಲ್ಲಾ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
- Vijaya Sarathy SN
- Updated on: Nov 12, 2025
- 2:04 pm
Inspiring: ನೆಲ ಒರೆಸುವ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಉನ್ನತ ಪದವಿಗೆ ಏರಿದ ಮಹಿಳೆಯ ಕಥೆ; ಇದು ಪ್ರತೀಕ್ಷಾ ಫಲ
Inspiring story of Pratiksha Tondwalkar: ಆಗದು ಎಂದು ಕೈಕಟ್ಟಿ ಕೂತರೆ ಸಾಗದು ಕೆಲಸವು ಮುಂದೆ ಎನ್ನುವ ಹಾಡು ಕೇಳಿರಬಹುದು. ಈ ಪ್ರಪಂಚದಲ್ಲಿ ಎಂಥ ಸಂಕಷ್ಟದಲ್ಲೂ ಬದುಕಿ ತೋರಿಸಿ ಅನೇಕ ಮಹಾನುಭಾವರಿದ್ದಾರೆ, ಜನಸಾಮಾನ್ಯರಿದ್ದಾರೆ. ಅಂಥವರಲ್ಲಿ ಪ್ರತೀಕ್ಷಾ ತೋಂಡವಾಳ್ಕರ್ ಒಬ್ಬರು. ಕಚೇರಿಯ ಪಾಯಿಖಾನೆ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ ಇವರು ಈಗ ಅದೇ ಸಂಸ್ಥೆಯಲ್ಲಿ ಎಜಿಎಂ ಆಗಿ ನಿವೃತ್ತಿಯಂಚಿನಲ್ಲಿದ್ದಾರೆ.
- Vijaya Sarathy SN
- Updated on: May 8, 2025
- 6:21 pm
PM Mudra Scheme: ಮಹಿಳೆಯರಿಗೆ ವರದಾನವಾಗುತ್ತಿರುವ ಪಿಎಂ ಮುದ್ರಾ ಯೋಜನೆ
PM Mudra Scheme benefiting women: ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ಸರ್ಕಾರವು ಅಡಮಾನರಹಿತ ಸಾಲದ ವ್ಯವಸ್ಥೆ ಮಾಡುತ್ತದೆ. ಸಣ್ಣ ಉದ್ದಿಮೆಗಳಲ್ಲಿ ಮಹಿಳೆಯರೇ ಹೆಚ್ಚಾಗಿರುವುದರಿಂದ ಮುದ್ರಾ ಯೋಜನೆ ಮಹಿಳೆಯರಿಗೆ ವರದಾನವಾಗುತ್ತಿದೆ. ಮಹಿಳೆಗೆ ಆದಾಯ ಹೆಚ್ಚಿದರೆ ಅದರಿಂದ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ವ್ಯಯಿಸುವುದು ಹೆಚ್ಚಾಗುತ್ತದೆ. ಇದರಿಂದ ಆರ್ಥಿಕತೆಗೆ ಪ್ರಯೋಜನಗಳುಂಟು ಎನ್ನಲಾಗುತ್ತದೆ.
- Vijaya Sarathy SN
- Updated on: Apr 14, 2025
- 3:48 pm
ಗರ್ಭಿಣಿಯರು ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್ಗಳಲ್ಲಿ ಇವುಗಳನ್ನು ಮಾಡಿಸಬಾರದು
ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಗರ್ಭಿಣಿ ಆಗುವುದಕ್ಕಿಂತ ಮೊದಲು ಮಾಡುತ್ತಿರುವ ಕೆಲಸಗಳನ್ನು ಗರ್ಭಿಣಿ ಆದ ಬಳಿಕವೂ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದರಿಂದ ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಈ ಅಭ್ಯಾಸ ಮುಂದುವರಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಈ ರೀತಿ ಹೇಳುವುದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
- Preethi Bhat Gunavante
- Updated on: Apr 12, 2025
- 11:59 am
ಯುಪಿಐ ಇನ್ಸೆಂಟಿವ್ ಸ್ಕೀಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
Central govt initiatives: 2,000 ರೂ ಒಳಗಿನ ಯುಪಿಐ ಹಣ ಪಾವತಿಗೆ ವರ್ತಕರು ಪ್ರೋತ್ಸಾಹಕ ಧನ ಪಡೆಯಲಿದ್ದಾರೆ. ಇದು ಗ್ರಾಹಕರಿಂದ ಸಣ್ಣ ವರ್ತಕರಿಗೆ ಮಾಡಲಾಗುವ ಯುಪಿಐ ಪೇಮೆಂಟ್ಗೆ ಅನ್ವಯ ಆಗುತ್ತದೆ. ಈ ಉಪಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹಾಗೆಯೇ, ಮಹಿಳಾ ಸ್ನೇಹಿ ಪಂಚಾಯಿತಿಗಳ ನಿರ್ಮಾಣಕ್ಕೂ ಸರ್ಕಾರ ಯೋಜನೆ ಆರಂಭಿಸಿದೆ.
- Vijaya Sarathy SN
- Updated on: Mar 19, 2025
- 6:16 pm
ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
Women to benefit from reforms in family pension policies: ಮಹಿಳೆಯರಿಗೆ ಸಂಕಷ್ಟ ಸಂದರ್ಭಗಳಲ್ಲಿ ಬಲ ಸಿಗುವ ರೀತಿಯಲ್ಲಿ ಸರ್ಕಾರ ಪೆನ್ಷನ್ ಸ್ಕೀಮ್, ಮ್ಯಾಟರ್ನಿಟಿ ಲೀವ್ ಇತ್ಯಾದಿ ನೀತಿಗಳಲ್ಲಿ ಮಾರ್ಪಾಡು ತಂದಿದೆ. ವಿಚ್ಛೇದಿತ ಮಹಿಳೆಯರು ತಮ್ಮ ತಂದೆ ಅಥವಾ ತಾಯಿಯ ಪಿಂಚಣಿ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ. ವಿಧವೆಯರು ಮರುವಿವಾಹವಾದರೂ ತಮ್ಮ ಮೃತ ಪತಿಯ ಪಿಂಚಣಿ ಪಡೆಯಲು ಅವಕಾಶ ನೀಡಲಾಗಿದೆ.
- Vijaya Sarathy SN
- Updated on: Mar 19, 2025
- 11:47 am
ಮಹಿಳಾ ದಿನಾಚರಣೆ ವಿಶೇಷ: ಚಿಕ್ಕಬಳ್ಳಾಪುರದ ಸ್ವಚ್ಛ ವಾಹಿನಿ ರಥಕ್ಕೆ ಮಹಿಳಾ ಸಾರಥಿ
ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೇನಹಳ್ಳಿ ಗ್ರಾಮದ ನಂದಿನಿ ಎಂಬುವರು ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹನದ ಚಾಲಕಿಯಾಗಿದ್ದಾರೆ. ನಂದಾದೀಪ ಸ್ವಸಹಾಯ ಸಂಘದ ಸಹಾಯದಿಂದ ಚಾಲನಾ ತರಬೇತಿ ಪಡೆದ ಅವರು, ಪುರುಷರಿಗಿಂತ ಕಡಿಮೆಯಿಲ್ಲದೆ ವಾಹನ ಚಾಲನೆ ಮಾಡುತ್ತಿದ್ದಾರೆ. ಅವರ ದುಡಿಮೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ.
- Bheemappa Patil
- Updated on: Mar 8, 2025
- 2:55 pm
Womens Car: ಜಾಗ್ವಾರ್- ಆಡಿ ಅಲ್ಲ: ಈ ಕಾರುಗಳು ಮಹಿಳೆಯರ ಮೊದಲ ಆಯ್ಕೆಯಂತೆ
Womens Car: ಭಾರತದ ಬೆಳೆಯುತ್ತಿರುವ ಕಾರು ಮಾರುಕಟ್ಟೆಯಲ್ಲಿ, ಕಾರು ಖರೀದಿದಾರರಲ್ಲಿ ಮಹಿಳೆಯರ ಪಾಲು ವೇಗವಾಗಿ ಹೆಚ್ಚುತ್ತಿದೆ ಎಂದು ಆಟೋಮೊಬೈಲ್ ಉದ್ಯಮ ತಜ್ಞರು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಕಾರುಗಳನ್ನು ಖರೀದಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ವಾಹನ ಮಾರಾಟದ ದತ್ತಾಂಶಗಳು ತೋರಿಸುತ್ತವೆ.
- Preethi Bhat Gunavante
- Updated on: Mar 8, 2025
- 10:42 am
Akka Cafe: ಕರ್ನಾಟಕ ಬಜೆಟ್: ಅಕ್ಕ ಕ್ಯಾಂಟೀನ್, ಅಕ್ಕ ಸಹಕಾರಿ ಸಂಘಗಳ ಸ್ಥಾಪನೆ
Karnataka Budget 2025-26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಗೃಹ ಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗಳಿಗೆ 28,608 ಕೋಟಿ ರೂ ಹಾಗೂ 10,100 ಕೋಟಿ ರೂ ನೀಡಿದ್ದಾರೆ. ರಾಜ್ಯಾದ್ಯಂತ ಅಕ್ಕ ಕೆಫೆ ಮತ್ತು ಅಕ್ಕ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅಕ್ಕ ಕೆಫೆ ಸ್ಥಾಪನೆಯಾಗಲಿದೆ.
- Vijaya Sarathy SN
- Updated on: Mar 7, 2025
- 11:23 am
ನಮೋ ಆ್ಯಪ್ ಮೂಲಕ ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳುವ ಸುವರ್ಣಾವಕಾಶ
ಮೈಲಿಗಲ್ಲುಗಳನ್ನು ಸಾಧಿಸಿದ, ನಾವೀನ್ಯತೆಗಳನ್ನು ಮುನ್ನಡೆಸಿದ ಅಥವಾ ಅರ್ಥಪೂರ್ಣ ಪರಿಣಾಮವನ್ನು ಬೀರಿದ ಮಹಿಳೆಯರು ಈಗ ಈ ವೇದಿಕೆಯ ಮೂಲಕ ತಮ್ಮ ಕಥೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಒಂದು ಅನನ್ಯ ಅವಕಾಶವನ್ನು ಹೊಂದಿದ್ದಾರೆ. ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾವು ಜೀವನದ ಎಲ್ಲಾ ಹಂತಗಳ ಮಹಿಳೆಯರ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸಾಧನೆಗಳನ್ನು ಆಚರಿಸುತ್ತೇವೆ. ವಿಶೇಷ ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೂರ್ತಿದಾಯಕ ಉಪಕ್ರಮವನ್ನು ಘೋಷಿಸಿದರು. ಅವರು ತಮ್ಮ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಅಸಾಧಾರಣ ಮಹಿಳೆಯರಿಗೆ ಒಂದು ದಿನಕ್ಕಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಡಿಪಾಗಿಡಲಿದ್ದಾರೆ.
- Sushma Chakre
- Updated on: Mar 3, 2025
- 10:08 pm