AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನೇಜರ್​​ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್​​​​ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್​​ನಲ್ಲಿ ಹಂಚಿಕೊಂಡ ಯುವತಿ

ಆಫೀಸ್​​​ನಲ್ಲಿ ಬಾಸ್, ಮ್ಯಾನೇಜರ್​​​​ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರದಲ್ಲಿರಬೇಕು ಎನ್ನುವುದು ಇದಕ್ಕೆ ನೋಡಿ. ಯಾರ ಜೊತೆಗೂ ಕಚೇರಿಯಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳ ಬಗ್ಗೆ ಹಂಚಿಕೊಳ್ಳಬಾರದು. ಹಂಚಿಕೊಂಡರೆ ಈ ರೀತಿ ಫಜೀತಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಯುವತಿಯೊಬ್ಬಳು ಮ್ಯಾನೇಜರ್ ವೈಯಕ್ತಿಕವಾಗಿ ತನಗೆ ಮೆಸೇಜ್​​​ ಮಾಡಿದ ಸ್ಕ್ರೀನ್‌ಶಾಟ್ ಅನ್ನು ಗೆಳತಿಗೆ ಕಳುಹಿಸುವ ಬದಲು ಕಚೇರಿಯ ಗ್ರೂಪ್​​​ಗೆ ಕಳುಹಿಸಿ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮ್ಯಾನೇಜರ್​​ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್​​​​ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್​​ನಲ್ಲಿ ಹಂಚಿಕೊಂಡ ಯುವತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 05, 2025 | 1:56 PM

Share

ಸ್ನೇಹಿತರ ಜೊತೆಗೆ ಆಫೀಸ್​​ ವಿಚಾರಗಳನ್ನು ಹಂಚಿಕೊಳ್ಳುವಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಇಲ್ಲವೆಂದರೆ ಅವಮಾನ ಆಗುವುದು ಖಂಡಿತ, ಅದರಲ್ಲೂ ವಾಟ್ಸಪ್​​ನಲ್ಲಿ ಇನ್ನು ಎಚ್ಚರವಾಗಿ ಸಂದೇಶಗಳನ್ನು ಪಾಸ್​ ಮಾಡಬೇಕು. ಇಲ್ಲೊಂದು ಇಂತಹದೇ ಘಟನೆಯ ಬಗ್ಗೆ ಯುವತಿಯೊಬ್ಬಳು (Employee) ಹಂಚಿಕೊಂಡಿದ್ದಾಳೆ. ತಾನು ಮಾಡಿದ ತಪ್ಪಿಗೆ ದೊಡ್ಡ ಮಟ್ಟದ ಅವಮಾನವನ್ನು ಆಫೀಸ್​​ ಸ್ನೇಹಿತರ ಮುಂದೆ ಅನುಭವಿಸಿದ್ದಾಳೆ. ಮ್ಯಾನೇಜರ್​​​​​ ತನ್ನ ಜೊತೆಗೆ ವೈಯಕ್ತಿಕವಾಗಿ ಮಾತನಾಡಿರುವ ಸ್ಕ್ರೀನ್‌ಶಾಟ್ ಅನ್ನು ಸ್ನೇಹಿತೆಗೆ ಕಳುಹಿಸುವ ಬದಲು, ಮ್ಯಾನೇಜರ್, ಎಚ್​​ಆರ್​​ ಇರುವ ಗ್ರೂಪ್​​​​​​ನಲ್ಲಿ ಹಂಚಿಕೊಂಡಿದ್ದಾಳೆ. ಇದೀಗ ದೊಡ್ಡ ಫಜೀತಿ ಆಗಿದ್ದು, ಎಲ್ಲರ ಮುಂದೆ ಮ್ಯಾನೇಜರ್ ಮರ್ಯಾದೆಯನ್ನು ತೆಗೆದಂತಾಗಿದೆ. ಈ ಬಗ್ಗೆ ಆಕೆಯ ಮ್ಯಾನೇಜರ್​​ ಮೌನವಾಗಿದ್ದರೂ, ಎಚ್​​ಆರ್​​ ಆಕೆಗೆ ಮೇಲ್​​ ಮೂಲಕ ಈ ಬಗ್ಗೆ ಉತ್ತರಿಸುವಂತೆ ಕೇಳಿಕೊಂಡಿದ್ದಾರಂತೆ.

ಈ ಬಗ್ಗೆ ವಿಡಿಯೋವೊಂದನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ತನ್ನ ಸ್ನೇಹಿತೆಯೊಬ್ಬಳು ತನ್ನ ಹೊಸ ಮ್ಯಾನೇಜರ್ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾಳೆ, ಅವಳು ಅವನು ಆಗಾಗ್ಗೆ ಬಳಸುವ ಒಂದು ಪದದ ಅರ್ಥವನ್ನು ಕೂಡ ನನ್ನ ಬಳಿ ಕೇಳುತ್ತಿದ್ದಳು. ನಾನು ಪ್ರತಿಯೊಂದನ್ನು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸುತ್ತಿದ್ದಿದೆ. ಆದರೆ ನಾನು ಅದನ್ನು ಅವಳಿಗೆ ಕಳುಹಿಸುವ ಬದಲು ಅದನ್ನು ಗ್ರೂಪ್​​ನಲ್ಲಿ ಹಾಕಿದ್ದಾನೆ. ಆ ಗ್ರೂಪ್​​​ನಲ್ಲಿ ಸ್ನೇಹಿತರು, ಬಾಸ್​​​, ಮ್ಯಾನೇಜರ್​​​, ಎಚ್​​ಆರ್​ ಕೂಡ ಇದ್ದರು. ಎಲ್ಲ ಮುಂದೆ ಮುಜುಗರ ಆಗಿರುವುದು ಖಂಡಿತ ಎಂದು ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ
Image
ಶ್ವಾನಗಳ ಗುಂಪಲ್ಲಿ ಬೆಳೆದು, ನಾಯಿಯಂತೆ ಬೊಗಳುತ್ತಿರುವ ಹುಡುಗ
Image
ಗೊಂಬೆಯಂತಿರುವ ನೇಪಾಳದ 'ಚಾಯ್ ವಾಲಿ' ಸುಂದರಿ
Image
ಚೀನಾದಲ್ಲಿ ಸಸ್ಯಾಹಾರಿಗಳ ಪರಿಸ್ಥಿತಿ ವಿವರಿಸಿದ ಭಾರತೀಯ
Image
ಕೆಲಸ ಕಳೆದುಕೊಂಡ ಬೆಂಗಳೂರಿನ ಇಂಜಿನಿಯರ್ ಕಥೆಯಿದು

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by @boldandposted

ತನ್ನ ತಪ್ಪಿನ ಅರಿವಾದ ನಂತರ ತನಗೆ ಹೇಗನಿಸಿತು ಎಂಬ ಬಗ್ಗೆ ವಿವರಿಸಿದ್ದಾಳೆ. ನಾನು ನನ್ನ ಫೋನ್, ನನ್ನ ಕೆಲಸ, ನನ್ನ ಆತ್ಮ ಎಲ್ಲವನ್ನೂ ಕಸದ ಬುಟ್ಟಿಗೆ ಎಸೆಯಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆರಂಭದಲ್ಲಿ ತನ್ನ ಮ್ಯಾನೇಜರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, HR ನಿಂದ ಮೀಟಿಂಗ್​​​ಗೆ ಬರುವಂತೆ ಮೇಲ್​​ ಒಂದು ಬಂದಿತ್ತು. ಈ ಮೀಟಿಂಗ್​​​ನಲ್ಲಿ ಜಾಗರೂಕರಾಗಿರಿ ಎಂದು ಹೇಳಲಾಗಿತ್ತು, ಹೊರತು ನನ್ನ ಈ ತಪ್ಪನ್ನು ಖಂಡಿಸಲಿಲ್ಲ. ಆದರೆ ಮ್ಯಾನೇಜರ್ ಆಕೆಯ ಜೊತೆ ಅತಿಯಾಗಿ ಅಸಭ್ಯವಾಗಿ ವರ್ತಿಸಲು ಮತ್ತು ಆಕೆಯ ಹೆಸರನ್ನು ಹೇಳದೆಯೇ ಕೀಳಾಗಿ ಮಾತನಾಡಲು ಪ್ರಾರಂಭಿಸಿದಾಗ ಕಚೇರಿಯಲ್ಲಿ ಆಕೆಯ ಪರಿಸ್ಥಿತಿ ತುಂಬಾ ಕೆಟ್ಟಾಗಿತ್ತು ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: 400 ಕಿ.ಮೀ ದೂರದಿಂದ ಮೋದಿಯನ್ನು ನೋಡಲು ಬಂದ ಭಾರತೀಯನಿಗೆ ಪ್ರಧಾನಿ ಕೈಕುಲುಕುವ ಭಾಗ್ಯ, ಹೇಗಿತ್ತು ನೋಡಿ ಆ ಕ್ಷಣ

ಸಾಮಾಜಿಕ ಜಾಲತಾಣದಲ್ಲಿ ಕೂಡ ಅನೇಕರು ಕಮೆಂಟ್​ ಮಾಡಿದ್ದಾರೆ. ಒಬ್ಬ ಬಳಕೆದಾರ ಸ್ಕ್ರೀನ್‌ಶಾಟ್ ಹಂಚಿಕೊಂಡ ತಕ್ಷಣ ಯಾಕೆ ಏಕೆ ಅಳಿಸಲಿಲ್ಲ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಯುವತಿ ಆ ಆಯ್ಕೆ ನನಗೆ ಇರಲಿಲ್ಲ ಎಂದು ಹೇಳಿದ್ದಾಳೆ. ಮತ್ತೊಬ್ಬ ಬಳಕೆದಾರ ನೀವು ಮ್ಯಾನೇಜರ್​​ ಬಗ್ಗೆ ಮಾತನಾಡಿರಿವುದೇ ತಪ್ಪು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
ರಾಮಲಿಂಗಾರೆಡ್ಡಿ ನನಗೆ ತುಂಬಾ ಆತ್ಮೀಯರು, ಸಮಸ್ಯೆ ಬಗೆಹರಿಸುತ್ತೇನೆ: ಸಿಎಂ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
‘ನಂಗೆ ನೀನು ಅಂದ್ರೆ ತುಂಬಾ ಇಷ್ಟ’; ಮನದಾಳದ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು!
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ:ಯಾರಿಗೆ ಯಾವ ಖಾತೆ?
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ದರ್ಶನ್ ತಂಡದ ನೊಟೀಸ್​​ ಬಗ್ಗೆ ‘ಬಾಸ್’ ಸಿನಿಮಾ ತಂಡ ಮಾತು
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!