AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಿಜಾಬ್ ಧರಿಸದೆ ಟಿಕ್‌ ಟಾಕ್‌ನಲ್ಲಿ ಲೈವ್‌ ಬಂದ ಮುಸ್ಲಿಂ ಯುವತಿ, ಹಿಗ್ಗಾಮುಗ್ಗಾ ಥಳಿಸಿದ ಪೋಷಕರು

ಸೋಷಿಯಲ್‌ ಮೀಡಿಯಾದ ಇನ್ಫುಯೆನ್ಸರ್‌ ಒಬ್ಬಳು ತನ್ನ ಫಾಲೋವರ್ಸ್‌  ಜೊತೆಗೆ ಚಿಟ್‌ಚಾಟ್‌ ಮಾಡಲೆಂದು ಟಿಕ್‌ ಟಾಕ್‌ನಲ್ಲಿ ಲೈವ್‌ ಬಂದಿದ್ದಾಳೆ. ತಲೆಗೆ ಹಿಜಾಬ್‌ ಮತ್ತು ಎದೆಗೆ ಶಾಲು ಧರಿಸದೆ ತುಂಡುಡುಗೆಯನ್ನು ತೊಟ್ಟು ವಿಡಿಯೋ ಮಾಡುತ್ತಿದ್ದ ಈ ಯುವತಿಯ ಅವತಾರವನ್ನು ಕಂಡು ಕೋಪಗೊಂಡ ಪೋಷಕರು ಲೈವ್‌ ಅಲ್ಲಿಯೇ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. 

Viral Video: ಹಿಜಾಬ್ ಧರಿಸದೆ ಟಿಕ್‌ ಟಾಕ್‌ನಲ್ಲಿ ಲೈವ್‌ ಬಂದ ಮುಸ್ಲಿಂ ಯುವತಿ, ಹಿಗ್ಗಾಮುಗ್ಗಾ ಥಳಿಸಿದ ಪೋಷಕರು
ಮಾಲಾಶ್ರೀ ಅಂಚನ್​
| Edited By: |

Updated on: May 17, 2024 | 12:09 PM

Share

ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಹಿಜಾಬ್‌ ಧರಿಸುವುದು ಕಡ್ಡಾಯ.  ಒಂದು ವೇಳೆ ಧಾರ್ಮಿಕ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಅವರೇನಾದರೂ  ಹಿಜಾಬ್‌ ಧರಿಸದೆ ಹೋದರೆ  ಸಮಾಜದ ಕೆಂಗಣ್ಣಿಗೆ ಕೂಡಾ ಗುರಿಯಾಗುವುದುಂಟು. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು,  ಮುಸ್ಲಿಂ ಇನ್ಫುಯೆನ್ಸರ್‌ ವಿಡಿಯೋ ಮಾಡುವಾಗ ಹಿಜಾಬ್‌ ಧರಿಸಿಲ್ಲವೆಂದು ಕೋಪಗೊಂಡ ಪೋಷಕರು ಆಕೆಗೆ ಮನ ಬಂದಂತೆ ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪೋಷಕರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ವಿಡಿಯೋವನ್ನು @OliLondonTv ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಟಿಕ್‌ ಟಾಕ್‌ ಲೈವ್‌ ಸ್ಟ್ರೀಮ್‌ ಅಲ್ಲಿ ತಲೆಗೆ ಹಿಬಾಜ್‌ ಧರಿಸದ ಕಾರಣ, ತನ್ನ ಹೆತ್ತವರಿಂದ ಥಳಿಸಲ್ಪಟ್ಟ ಮುಸ್ಲಿಂ ಇನ್ಫುಯೆನ್ಸರ್”‌ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಟಿಕ್‌ ಟಾಕ್‌ ಲೈವ್‌ ಅಲ್ಲಿ ಇನ್ಫುಯೆನ್ಸರ್‌ ತನ್ನ ಫಾಲೋವರ್ಸ್‌ ಜೊತೆಗೆ ಚಿಟ್‌ ಚಾಟ್‌ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ವಿಡಿಯೋ ಮಾಡುವಾಗ ಆಕೆ ತುಂಡುಡುಗೆಯನ್ನು ಧರಿಸಿದ್ದಳು. ಮುಸ್ಲಿಂ ಯುವತಿಯಾಗಿ  ತುಂಡುಡುಗೆ ಧರಿಸಿದ್ದು ಮಾತ್ರವಲ್ಲದೆ ಎದೆಗೆ ಶಾಲು, ತಲೆಗೆ ಹಿಜಾಬ್‌ ಧರಿಸಿದರೆ ಇರುವುದನ್ನು ಕಂಡ ಆಕೆಯ ಪೋಷಕರು ಕೋಪಗೊಂಡು ಲೈವ್‌ ಅಲ್ಲಿಯೇ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ: ತ್ರಿವಳಿ ತಲಾಖ್​​ನಿಂದ ನೊಂದು ಹಿಂದೂ ಯುವಕನೊಂದಿಗೆ ಮದುವೆಯಾದ ಮುಸ್ಲಿಂ ಮಹಿಳೆ

ಮೇ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಪೋಷಕರ ಈ ಅತಿರೇಕದ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ