AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದೈತ್ಯಾಕಾರದ ಕಾಳಿಂಗ ಸರ್ಪವನ್ನು ಸಲೀಸಾಗಿ ಕೈಯಲ್ಲೇ ಹಿಡಿದ ಉರಗ ತಜ್ಞ, ಎದೆ ನಡುಕ ಹುಟ್ಟಿಸುವ ದೃಶ್ಯ

ಹಾವುಗಳೆಂದರೆ ಎಲ್ಲರಿಗೂ ಕೂಡ ಭಯವೇ. ಈ ವಿಷಕಾರಿ ಹಾವುಗಳಿಂದ ಕ್ಷಣದಲ್ಲಿಯೇ ಪಾರಾಗಿ ಬದುಕಿ ಉಳಿದ ಘಟನೆಗಳು ವೈರಲ್ ಆಗುತ್ತಲೆ ಇರುತ್ತವೆ. ಆದರೆ, ಯಾವುದೇ ಭಯ ಆತಂಕವಿಲ್ಲದೇ ಹಾವುಗಳನ್ನು ಸಲೀಸಾಗಿ ಹಿಡಿಯುವ ಉರಗ ಪ್ರೇಮಿಗಳಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಖ್ಯಾತ ಉರಗ ತಜ್ಞ ಆಕಾಶ್ ಜಾಧವ್ ಅವರು ದೈತ್ಯಾಕಾರದ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರ ಎದೆ ಝಲ್ ಎಂದಿದೆ.

Viral Video: ದೈತ್ಯಾಕಾರದ ಕಾಳಿಂಗ ಸರ್ಪವನ್ನು ಸಲೀಸಾಗಿ ಕೈಯಲ್ಲೇ ಹಿಡಿದ ಉರಗ ತಜ್ಞ, ಎದೆ ನಡುಕ  ಹುಟ್ಟಿಸುವ ದೃಶ್ಯ
ಕಾಳಿಂಗ ಸರ್ಪImage Credit source: instagram
ಸಾಯಿನಂದಾ
| Edited By: |

Updated on: Feb 20, 2024 | 7:38 PM

Share

ಉರಗ ಲೋಕದ ರಾಜನಾಗಿರುವ ಈ ಕಾಳಿಂಗ ಸರ್ಪಗಳ ಗತ್ತು, ಗಾಂಭೀರ್ಯಕ್ಕೆ ಬೇರೆ ಯಾವ ಹಾವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಕಾಳಿಂಗ ಸರ್ಪಗಳು ಆಕಾರ ಹಾಗೂ ಬಣ್ಣದಿಂದಲೇ ಎಲ್ಲರನ್ನು ಬೆಚ್ಚಿ ಬೀಳಿಸುತ್ತವೆ. ಅವುಗಳ ತಂಟೆಗೆ ಹೋಗದೇ ಇದ್ದರೆ ನಿರುಪದ್ರವಿಯಾಗಿ ಉಳಿಯುವ ಈ ವಿಷಕಾರಿ ಹಾವು, ತಂಟೆಗೆ ಯಾರಾದರೂ ಬಂದರೆ ಕಚ್ಚದೆ ಬಿಡುವುದೇ ಇಲ್ಲ. ಮಲೆನಾಡಿನ ಪ್ರದೇಶಗಳಲ್ಲಿ ಈ ದೈತ್ಯಾಕಾರದ ಕಾಳಿಂಗ ಸರ್ಪ ಕಾಣಸಿಗುತ್ತದೆ. ಈ ವಿಷಪೂರಿತ ಕಾಳಿಂಗ ಸರ್ಪವು ಕೆಲವೊಮ್ಮೆ ಬುಸುಗುಟ್ಟಿ ತನ್ನ ಮುಂದೆ ಇರುವ ಶತ್ರುವನ್ನು ಓಡಿಸಲು ಸಾಧ್ಯವಾಗದಿದ್ದಾಗ ಮಾತ್ರ ಕಚ್ಚಿ ಬಿಡುತ್ತದೆ.

ಕೇವಲ ಒಂದೂವರೆ ಚಮಚದಷ್ಟು ವಿಷಯನ್ನು ಶತ್ರುವಿನ ದೇಹದೊಳಕ್ಕೆ ಇಂಜೆಕ್ಟ್ ಮಾಡುತ್ತದೆ. ಈ ಹಾವಿನ ವಿಷವು ಹೆಚ್ಚಿನ ಡೋಸೇಜ್ ನಲ್ಲಿ ಒಳ ಸೇರಿದರೆ ಕೇವಲ ಮೂವತ್ತೇ ನಿಮಿಷದಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಹೀಗಾಗಿ ಈ ವಿಷಕಾರಿ ಹಾವನ್ನು ಯಾರು ಕೂಡ ಹಿಡಿಯಲು ಧೈರ್ಯ ಮಾಡುವುದಿಲ್ಲ. ಮನುಷ್ಯನ ಮೇಲೆ ದಾಳಿ ಮಾಡಿದರೆ ನಿಮಿಷಾರ್ಧದಲ್ಲೇ ಉಸಿರು ನಿಲ್ಲುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಉರಗ ಪ್ರೇಮಿ ಆಕಾಶ್ ಜಾಧವ್ ಅವರು ದೈತ್ಯಾಕಾರದ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ನೋಡುಗರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಇದನ್ನೂ ಓದಿ: ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉರಗ ತಜ್ಞರಾದ ಆಕಾಶ್ ಜಾಧವ್ ಅವರು ಎರಡು ಪಟ್ಟು ದೊಡ್ಡದಾಗಿರುವ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತುತ್ತಿರುವುದನ್ನು ಕಾಣಬಹುದು. ಯಾವುದೇ ರೀತಿಯ ಸುರಕ್ಷತಾ ಸಾಧನಗಳಿಲ್ಲದೆ ಸಂಪೂರ್ಣವಾಗಿ ಬರಿಗೈಯಲ್ಲಿ ಹಿಡಿದಿದ್ದಾರೆ.

ಈ ವಿಡಿಯೋವು ಅತೀ ಹೆಚ್ಚು ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪ್ರಾಣದ ಭಯವಿಲ್ಲದೆ ದೈತ್ಯಾಕಾರದ ಕಾಳಿಂಗ ಸರ್ಪದ ಜೊತೆಗೆ ಸರಸ ಆಡುತ್ತಿರುವ ಉರಗ ತಜ್ಞರಾದ ಆಕಾಶ್ ಜಾಧವ್ ರವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ‘ ವಿಷಕಾರಿ ವನ್ಯಜೀವಿಗಳೊಂದಿಗೆ ಈ ರೀತಿಯಾಗಿ ನಡೆದುಕೊಂಡರೆ ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡಿದ್ದಂತೆ ಆಗುತ್ತದೆ. ದಯವಿಟ್ಟು ಈ ರೀತಿ ಮಾಡಬೇಡಿ’ ಎಂದು ಆತಂಕವನ್ನು ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ