AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವಿ ಗಂಡನಿಗೆ ಕನ್ನಡಕ ಇಲ್ಲದೇ ಓದಲು ಬರಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲ್ಲ ಎಂದ ಯುವತಿ

ಜತೆಗೆ ವಂಚನೆಯ ಆರೋಪ ಒಡ್ಡಿ ಯುವಕ ಮತ್ತು ಯುವಕನ ಕುಟುಂಬದ ಮೇಲೆ ಪ್ರಕರಣವನ್ನೂ ದಾಖಲಿಸಿದಳು. ಅಲ್ಲದೇ ಈಗಾಗಲೇ ವರದಕ್ಷಿಣೆ ಎಂದು ಒಂದು ದ್ವಿಚಕ್ರ ವಾಹನ ಮತ್ತು ಹಣವನ್ನೂ ಯುವಕನ ಮನೆಯವರು ತೆಗೆದುಕೊಂಡಿದ್ದರಂತೆ. ಅದನ್ನೂ ಮರಳಿ ನೀಡುವಂತೆ ಯುವತಿ ಆಗ್ರಹಿಸಿದ್ದಾಳೆ.

ಭಾವಿ ಗಂಡನಿಗೆ ಕನ್ನಡಕ ಇಲ್ಲದೇ ಓದಲು ಬರಲ್ಲ ಎಂದು ಹಸೆಮಣೆಯಲ್ಲೇ ಮದುವೆಯಾಗಲ್ಲ ಎಂದ ಯುವತಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 26, 2021 | 7:14 PM

Share

ಭಾವಿ ಪತಿ ಬಳಿ ಕನ್ನಡಕ ಇಲ್ಲದೇ ಓದಲು ಸಾಧ್ಯವಿಲ್ಲ ಎಂದು ತಿಳಿದ ವಧು ಮದುವೆ ಮಂಟಪದಲ್ಲೇ ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆ ಮುರಿದುಕೊಂಡಿದ್ದೊಂದೇ ಅಲ್ಲದೇ, ಮದುಮಗ ಮತ್ತು ಆತನ ಕುಟುಂಬದ ಮೇಲೂ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಉತ್ತರ ಪ್ರದೇಶದ ಜಮ್ಲಾಪುರದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ.

ಅದು ಮದುವೆಯ ದಿನ. ಮದುವೆಯ ಶಾಸ್ತ್ರಗಳು ಸರಾಗವಾಗಿ ಯಾವುದೇ ಅಡ್ಡಿಯಿಲ್ಲದೇ ನಡೆಯುತ್ತಿದ್ದವು. ವರ ಚೆನ್ನಾಗಿ ತಯಾರಿಯೇ ಕುಳಿತಿದ್ದ. ಆದರೆ ಆತ ಕನ್ನಡಕ ಧರಿಸಿದ್ದ. ವಧುವಿಗೆ ಮತ್ತು ಆಕೆಯ ಖಾಸಾ ಸಂಬಂಧಿ ಮಹಿಳೆಯೋಬ್ಬಳಿಗೆ ಏನನ್ನಿಸಿತೋ ಏನೋ. ಕನ್ನಡಕ ಧರಿಸಿ ಕುಳಿತ ಆತನ ಕಣ್ಣಿನಮೇಲೆ ಅನುಮಾನ ಶುರುವಾಯಿತು. ಹಸೆ ಮಂಟಪದಲ್ಲೇ ತನ್ನ ಭಾವಿ ಪತಿಯ ಬಳಿ ಕನ್ನಡಕ ತೆಗೆದು ಸುದ್ದಿ ಪತ್ರಿಕೆಯೊಂದನ್ನು ಓದಲು ವಧು ಕೇಳಿದಳು. ಈ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ತಾಳಿ ಕಟ್ಟಿಸಿಕೊಳ್ಳುತ್ತೇನೆ ಎಂದುಬಿಟ್ಟಳು.

ಆದರೆ ವರನ ಬಳಿ ಕನ್ನಡಕ ಇಲ್ಲದೇ ಓದಲು ಸಾಧ್ಯವಿರಲಿಲ್ಲ. ಆತ ಕನ್ನಡಕ ಇಲ್ಲದೇ ಓದಲು ಬರುವುದಿಲ್ಲ ಎಂದು ಒಪ್ಪಿಕೊಂಡ. ಇದೇ ಕಾರಣ ಒಡ್ಡಿದ ಯುವತಿ ನಿನ್ನ ಜತೆ ಮದುವೆ ಆಗಲಾರೆ ಎಂದು ಮದುವೆ ಆಗಲು ನಿರಾಕರಿಸಿದಳು. ಜತೆಗೆ ವಂಚನೆಯ ಆರೋಪ ಒಡ್ಡಿ ಯುವಕ ಮತ್ತು ಯುವಕನ ಕುಟುಂಬದ ಮೇಲೆ ಪ್ರಕರಣವನ್ನೂ ದಾಖಲಿಸಿದಳು. ಅಲ್ಲದೇ ಈಗಾಗಲೇ ವರದಕ್ಷಿಣೆ ಎಂದು ಒಂದು ದ್ವಿಚಕ್ರ ವಾಹನ ಮತ್ತು ಹಣವನ್ನೂ ಯುವಕನ ಮನೆಯವರು ತೆಗೆದುಕೊಂಡಿದ್ದರಂತೆ. ಅದನ್ನೂ ಮರಳಿ ನೀಡುವಂತೆ ಯುವತಿ ಆಗ್ರಹಿಸಿದ್ದಾಳೆ.

ಯುವಕನ ಮನೆಯವರ ಮೇಲೆ ಯುವತಿಯ ದೂರಿನ ಆಧಾರದಲ್ಲಿ ಎಪ್​ಐಆರ್ ದಾಖಲಾಗಿದೆ. ಆದರೆ ಪೊಲೀಸರು ಪರಸ್ಪರ ಒಪ್ಪಂದದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಿದ್ದರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 

ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

(UP bride rejects marry after know grooms did not read without glass)

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ