AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ.

Dog Saves Owner: ವಿಷಕಾರಿ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ನಾಯಿ, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ
ನಾಯಿ
ನಯನಾ ರಾಜೀವ್
|

Updated on: Mar 12, 2023 | 8:30 AM

Share

ಈ ಪ್ರಪಂಚದಲ್ಲಿ ನಂಬಿಕೆಗೆ ಅರ್ಹವಾದ ಪ್ರಾಣಿ ಎಂದರೆ ಅದು ನಾಯಿ. ಈ ಶ್ವಾನಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವುದರ ಜತೆಗೆ ಜೊತೆಗೆ ಬುದ್ದಿವಂತಿಕೆಯನ್ನೂ ಹೊಂದಿರುತ್ತವೆ ಹಾಗೂ ಇವುಗಳು ಬೇಗ ಒಡೆಯನ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ. ತಮ್ಮ ಮಾಲಿಕನನ್ನು ಒಪ್ಪಿಕೊಂಡ ಬಳಿಕ ಇವು ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ತೋರುತ್ತಿರುತ್ತವೆ. ನೀವು ಒಂದೇ ಒಂದು ಹೊತ್ತು ಊಟ ಹಾಕಿದರೆ ಸಾಕು, ಅಪಾರ ಪ್ರೀತಿಯನ್ನು ನೀಡುತ್ತವೆ. ಮನೆಗೆ ಕಳ್ಳ ಅಥವಾ ಅಪರಿಚಿತರು ಯಾರೇ ಬಂದರೂ ಅವರನ್ನು ತಡೆಯುತ್ತಾ ಮನೆಯ ಕಾವಲುಗಾರನಾಗಿ ಇರುತ್ತದೆ.

ಹಾಗೆಯೇ ಇತ್ತೀಚೆಗಷ್ಟೇ ನಾಯಿಯೊಂದು ವಿಷಕಾರಿ ಹಾವಿನಿಂದ ತನ್ನ ಮಾಲೀಕನನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯ ಸಂಪೂರ್ಣ ವಿವರ ಹೀಗಿದೆ.

ದಕ್ಷಿಣ ಆಫ್ರಿಕಾದ ನಾಯಿಯೊಂದು ಹಾಸಿಗೆಯ ಕೆಳಗೆ ಅಡಗಿರುವ ಅಪಾಯಕಾರಿ ಮಾಂಬಾ ಹಾವಿನಿಂದ ತನ್ನ ಮಾಲೀಕರನ್ನು ರಕ್ಷಿಸುವ ಮೂಲಕ ತನ್ನ ಶೌರ್ಯವನ್ನು ಮೆರೆದಿದೆ.

ಮಾಲೀಕರು ಹಾಸಿಗೆಯ ಬಳಿ ಬಂದಾಗಲೆಲ್ಲಾ ನಾಯಿ ಜೋರಾಗಿ ಬೊಗುಳುತ್ತಿತ್ತು. ನಾಯಿ ಪ್ರತಿ ಬಾರಿ ಬೊಗಳುವುದು ಏಕೆ ಎಂದು ಹಾಸಿಗೆಯ ಕೆಳಗೆ ನೋಡಿದಾಗ ವಿಷಪೂರಿತ ಹಾವು ಕಾಣಿಸಿತು. ದಕ್ಷಿಣ ಆಫ್ರಿಕಾದ ಹಾವು ಹಿಡಿಯುವ ನಿಕ್ ಇವಾನ್ಸ್ ಈ ಭಯಾನಕ ಕಥೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಹಾವು ಹಿಡಿದ ಕಥೆಯನ್ನೂ ಅವರು ಹಂಚಿಕೊಂಡಿರುವುದು ಗಮನಾರ್ಹ.

ಈ ಘಟನೆ ವೈರಲ್ ಆದಾಗ, ನೆಟ್ಟಿಗರು ನಾಯಿಯ ಮೇಲೆ ಮಾಲೀಕ ಇಟ್ಟಿರುವ ನಂಬಿಕೆ ಹಾಗೂ ಮಾಲೀಕನ ಮೇಲೆ ನಾಯಿ ಇಟ್ಟಿರುವ ಕಾಳಜಿ ಪ್ರಶಂಸೆಗೆ ಪಾತ್ರವಾದದ್ದು ಎಂದಿದ್ದಾರೆ, ನಾಯಿಯ ಸಮಯ ಪ್ರಜ್ಞೆಯನ್ನು ಶ್ಲಾಘಿಸಲಾಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್