AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ

Singapore : ‘ನನ್ನ ತಾಯಿಯ ಪೀಳಿಗೆಯವರಲ್ಲಿ ಇವರೇ ಮೊದಲ ವಿದೇಶ ಪ್ರಯಾಣ ಮಾಡಿದವರು. ಅಷ್ಟೇ ಅಲ್ಲ ಈ ಹಳ್ಳಿಯಿಂದ ವಿದೇಶ ಪ್ರಯಾಣ ಮಾಡಿದ ಎರಡನೇ ಮಹಿಳೆ ಕೂಡ ಇವರೇ.’ ವೈರಲ್ ಆದ ಈ ಲಿಂಕ್​ಡಿನ್​ ಪೋಸ್ಟ್​ ಓದಿ

ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ
ದತ್ತಾತ್ರೇಯ ತನ್ನ ತಾಯಿಯೊಂದಿಗೆ ಸಿಂಗಪೂರ್​ ಪ್ರವಾಸದಲ್ಲಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 27, 2023 | 6:22 PM

Viral News : ಮಕ್ಕಳಿಗಾಗಿ ತಂದೆತಾಯಿಯರು ತಮ್ಮ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಡುತ್ತಾರೆ. ಆದರೆ ಅದೆಷ್ಟು ಜನ ಮಕ್ಕಳು ತಮ್ಮ ತಂದೆತಾಯಿಗಳ ಸುಖ ಸಂತೋಷ ಆಸೆಗಳ ಬಗ್ಗೆ ಯೋಚಿಸುತ್ತಾರೆ ಮತ್ತು ಅವರ ಬದುಕಿನಲ್ಲಿ ಕಾಣದ್ದನ್ನು ಕಾಣಿಸುವ ಅವಕಾಶದ ಕಲ್ಪಿಸಿಕೊಡುತ್ತಾರೆ? ದತ್ತಾತ್ರೇಯ ಜೆ ಎನ್ನುವವರೊಬ್ಬರು ಲಿಂಕ್​ಡಿನ್​ನಲ್ಲಿ ಮಾಡಿದ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ.

ದತ್ತಾತ್ರೇಯ ಸಿಂಗಪೂರ್​ನಲ್ಲಿ ವಾಸಿಸುತ್ತಾರೆ. ತನ್ನ ತಾಯಿಗೆ ಸಿಂಗಪೂರ್​ಗೆ ಕರೆತರುವ ಮೂಲಕ ಮೊದಲ ವಿದೇಶ​ ಪ್ರವಾಸ ಮಾಡಿಸಬೇಕು ಎನ್ನುವ ಅವರ ಕನಸು ನನಸಾಗಿದೆ. ಈ ವಿಷಯವನ್ನು ಇವರು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ತನ್ನ ಜೀವನಕ್ಕಾಗಿ ಇಡೀ ಬದುಕನ್ನೇ ತೇಯ್ದಿದ್ದಾರೆ. ಹಳ್ಳಿಯಲ್ಲಿರುವ ಈಕೆ ಆಕಾಶದಲ್ಲಿ ಹಾರಾಡುವ ವಿಮಾನವನ್ನು ದೂರದಿಂದ ಮಾತ್ರ ನೋಡಿದ್ದರು. ಅದನ್ನು ಹತ್ತಿರದಿಂದ ತೋರಿಸಿ, ಆ ಮೂಲಕ ವಿದೇಶ ಪ್ರಯಾಣ ಮಾಡಿಸಬೇಕು ಎನ್ನುವ ಇರಾದೆ ನನಗೆ ಮೊದಲಿನಿಂದಲೂ ಇತ್ತು. ಅದು ಸಾಧ್ಯವಾಯಿತು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ತಾಯಿಯ ಪೀಳಿಗೆಯವರಲ್ಲಿ ಇವರೇ ಮೊದಲ ವಿದೇಶ ಪ್ರಯಾಣ ಮಾಡಿದವರು. ಅಷ್ಟೇ ಅಲ್ಲ ಈ ಹಳ್ಳಿಯಿಂದ ವಿದೇಶ ಪ್ರಯಾಣ ಮಾಡಿದ ಎರಡನೇ ಮಹಿಳೆ ಕೂಡ ಇವರೇ. ನನ್ನ ತಾಯಿಯೇನೋ ವಿದೇಶ ಪ್ರಯಾಣ ಮಾಡಿದರು. ಆದರೆ ನನ್ನ ತಂದೆಯೂ ವಿದೇಶ ಪ್ರಯಾಣ ಮಾಡಬೇಕು. ವಿದೇಶದಲ್ಲಿ ವಾಸಿಸುವ ಭಾರತೀಯರಲ್ಲಿ ನನ್ನದೊಂದು ವಿನಂತಿ. ನಿಮ್ಮ ಹೆತ್ತವರನ್ನು ನೀವಿರುವ ದೇಶ ಅಥವಾ ಪ್ರಪಂಚದ ಸುಂದರ ಜಾಗಗಳಿಗೆ ಕರೆದೊಯ್ಯಿರಿ. ನಿಜವಾಗಲೂ ಅವರು ಅದೆಷ್ಟು ಸಂತೋಷಗೊಳ್ಳುತ್ತಾರೆ ಎನ್ನುವುದನ್ನು ಅನುಭವಿಸಿ ನೋಡಿದರೆ ಗೊತ್ತಾಗುತ್ತದೆ’ ಎಂದಿದ್ದಾರೆ ದತ್ತಾತ್ರೇಯ.

ಇದನ್ನೂ ಓದಿ : ಕಾಫಿ ಡೇಟ್​ ವಿಥ್​ ಕ್ಯಾಟ್​! ನ್ಯೂಯಾರ್ಕ್​ನಲ್ಲಿ ನಡೆದ ಹೀಗೊಂದು ಮುದ್ದಾದ ಪ್ರಸಂಗ

ಈತನಕ ಈ ಪೋಸ್ಟ್ ಅನ್ನು 3 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ. ನಿಜಕ್ಕೂ ನೀವು ನನಗೆ ಪರಿಚಿತರಲ್ಲ. ಆದರೆ ನಿಮ್ಮ ತಾಯಿಯ ಮೇಲೆ ನೀವು ಇಟ್ಟಿರುವ ಪ್ರೀತಿ, ಗೌರವ ನನ್ನನ್ನು ವಿನಮ್ರನನ್ನಾಗಿಸಿದೆ ಎಂದು ಹೇಳಿದ್ದಾರೆ ಒಬ್ಬರು. ಪ್ರತೀ ಮಗ ಅಥವಾ ಮಗಳು ಮಾಡಬಹುದಾದ ಕರ್ತವ್ಯಗಳಲ್ಲಿ ಇದು ಅತ್ಯುತ್ತಮವಾದದ್ದು ಎಂದಿದ್ದಾರೆ ಮತ್ತೊಬ್ಬರು. ದೇವರು ನಿಮ್ಮ ಕುಟುಂಬವನ್ನು ಸುಖಿಯಾಗಿ ಇಟ್ಟಿರಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ