AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ರಾತ್ರಿ ಆಕಾಶದಲ್ಲಿ ಘಟಿಸಲಿದೆ ವಿಸ್ಮಯ; ಭೂಮಿಗೆ ಸಮೀಪದಲ್ಲಿ ಹಾದು ಹೋಗಲಿದೆ ಅಪಾಯಕಾರಿ ಕ್ಷುದ್ರಗ್ರಹ

ಈ ಕ್ಷುದ್ರಗ್ರಹವು ಭೂಮಿ ಮತ್ತು ಚಂದ್ರನ ನಡುವಿರುವ ಅಂತರದ ಒಂಬತ್ತು ಪಟ್ಟು ದೂರದಲ್ಲಿ ಭೂಮಿಯನ್ನು ಹಾದುಹೋಗಲಿದೆ ಎನ್ನುವುದು ತಜ್ಞರ ಅಂದಾಜು. ಅದು ಅತೀ ವೇಗದಲ್ಲಿ ಅಂದರೆ ಪ್ರತೀ ಗಂಟೆಗೆ 94,208 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲಿದೆ.

ನಾಳೆ ರಾತ್ರಿ ಆಕಾಶದಲ್ಲಿ ಘಟಿಸಲಿದೆ ವಿಸ್ಮಯ; ಭೂಮಿಗೆ ಸಮೀಪದಲ್ಲಿ ಹಾದು ಹೋಗಲಿದೆ ಅಪಾಯಕಾರಿ ಕ್ಷುದ್ರಗ್ರಹ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Aug 20, 2021 | 7:27 PM

ಕ್ಷುದ್ರಗ್ರಹಗಳ ಬಗೆಗೆ ಮನುಷ್ಯನಿಗಿರುವ ಕುತೂಹಲ ಇಂದು ನಿನ್ನೆಯದಲ್ಲ. ಜಗತ್ತಿನಾದ್ಯಂತ ಖಗೋಳಶಾಸ್ತ್ರಜ್ಞರು ಸದಾ ಕ್ಷುದ್ರಗ್ರಹಗಳ (Asteroid) ಬಗ್ಗೆ ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಆದರೂ ಅದರ ಬಗ್ಗೆ ಸಂಪೂರ್ಣ ತಿಳಿದು ಮುಗಿಯಿತು ಎಂದೇನಿಲ್ಲ. ಹೀಗಾಗಿ ಪ್ರತಿಬಾರಿಯೂ ಕ್ಷುದ್ರಗ್ರಹ ಭೂಮಿಯನ್ನು ಸಮೀಪಿಸುತ್ತಿದೆ ಎಂದಾದಾಗ ಒಂದಿಲ್ಲೊಂದು ಕಳವಳ ಮೂಡುತ್ತದೆ. ಇದೀಗ ಸರಿಸುಮಾರು 4,500 ಅಡಿ ವ್ಯಾಸವುಳ್ಳ ಕ್ಷುದ್ರಗ್ರಹವೊಂದು ಭೂಮಿಗೆ ಹತ್ತಿರಾಗುತ್ತಿರುವುದು ಖಗೋಳ ಶಾಸ್ತ್ರಜ್ಞರ ಕಣ್ಣಿಗೆ ಬಿದ್ದಿದ್ದು ಅದು ನಾಳೆ (ಆಗಸ್ಟ್ 21) ರಾತ್ರಿ ಭೂಮಿಗೆ ಹತ್ತಿರವಾಗಲಿದೆ ಎಂದು ಸದ್ಯದ ಲೆಕ್ಕಾಚಾರಗಳು ತಿಳಿಸಿವೆ. ಕ್ಷುದ್ರಗ್ರಹ 2016 ಎಜೆ 1933 ಭೂಮಿಗೆ ಸಮೀಪಿಸುತ್ತಿದ್ದು, ಅದನ್ನು ನಾಸಾ (NASA) ಅಪಾಯಕಾರಿ ಎಂದು ವರ್ಗೀಕರಿಸಿದೆ.

ಈ ಕ್ಷುದ್ರಗ್ರಹವು ಭೂಮಿ ಮತ್ತು ಚಂದ್ರನ ನಡುವಿರುವ ಅಂತರದ ಒಂಬತ್ತು ಪಟ್ಟು ದೂರದಲ್ಲಿ ಭೂಮಿಯನ್ನು ಹಾದುಹೋಗಲಿದೆ ಎನ್ನುವುದು ತಜ್ಞರ ಅಂದಾಜು. ಅದು ಅತೀ ವೇಗದಲ್ಲಿ ಅಂದರೆ ಪ್ರತೀ ಗಂಟೆಗೆ 94,208 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲಿದ್ದು, ಈ ದೈತ್ಯ ಕಾಯವನ್ನು ಭೂಮಿಯಿಂದ ಟೆಲಿಸ್ಕೋಪ್​ ಸಹಾಯದಲ್ಲಿ ವೀಕ್ಷಿಸಬಹುದು ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

ಈ ಕ್ಷುದ್ರಗ್ರಹವನ್ನು ಸಂಭವನೀಯ ಅಪಾಯಕಾರಿ ಎಂದು ವರ್ಗೀಕರಿಸಲಾಗಿದ್ದು, ಇದೇ ಕ್ಷುದ್ರಗ್ರಹ ಮುಂದೆ 2063 ರಲ್ಲಿ ಭೂಮಿಯ ಸಮೀಪಕ್ಕೆ ಮತ್ತೆ ಬರಲಿದೆ. ಆದರೆ, ಈ ಬಾರಿ ಸದರಿ ಆಕಾಶ ಕಾಯದಿಂದ ಭೂಮಿಗೆ ಯಾವುದೇ ರೀತಿಯ ಹಾನಿ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ. ನಾಸಾ ಇದರ ಕಕ್ಷೆಯನ್ನು ಊಹಿಸಿದ್ದು ಈ ಬಾರಿ ನಮ್ಮ ಗ್ರಹಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂದಿದೆ.

ಕ್ಷುದ್ರಗ್ರಹವು ಪ್ರತಿ 5.9 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಪರಿಭ್ರಮಿಸುತ್ತದೆ. ಈ ಬಾರಿ ಇದು ಭೂಮಿಯ ಕಕ್ಷೆಗೆ ತುಲನಾತ್ಮಕವಾಗಿ ಹತ್ತಿರದಲ್ಲಿದ್ದು ಸಮೀಪ ಬಂದಂತಾಗಿ ನಂತರ ಗುರುವಿನ ಕಕ್ಷೆಯನ್ನು ಮೀರಿ ಚಲಿಸಲಿದೆ. ಆಗಸ್ಟ್ 21ಕ್ಕೆ ಭೂಮಿಯತ್ತ ಬರಲಿರುವ ಈ ಕ್ಷುದ್ರಗ್ರಹ ಕಡೇಪಕ್ಷ ಮುಂದಿನ 65 ವರ್ಷಗಳವರೆಗೆ ಭೂಮಿಗೆ ಇಷ್ಟು ಹತ್ತಿರದಲ್ಲಿ ಸುಳಿಯುವುದಿಲ್ಲ ಎನ್ನುವುದು ತಜ್ಞರ ಅಂದಾಜು.

ಕ್ಷುದ್ರಗ್ರಹಗಳು ಯಾವುವು? ಕ್ಷುದ್ರಗ್ರಹಗಳು ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯಿಂದ ಉಳಿದಿರುವ ಕಲ್ಲಿನ ತುಣುಕುಗಳಾಗಿವೆ. ಕ್ಷುದ್ರಗ್ರಹದ ಚಲನೆಯನ್ನು ಪತ್ತೆಹಚ್ಚುವ ನಾಸಾ ಜಾಯಿಂಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪ್ರಕಾರ, ಒಂದು ಕ್ಷುದ್ರಗ್ರಹವನ್ನು ಭೂಮಿಯ ಸಮೀಪವಿರುವ ವಸ್ತುವೆಂದು ಪರಿಗಣಿಸಬೇಕಾದರೆ ಅದರ ಅಂತರ ಭೂಮಿ ಮತ್ತು ಸೂರ್ಯನ ನಡುವಿನ ದೂರಕ್ಕಿಂತ 1.3ಪಟ್ಟು ಕಡಿಮೆ ದೂರದಲ್ಲಿರಬೇಕು. ನಾಸಾ ಭೂಮಿಯ ಸಮೀಪದ 26,000 ಕ್ಷುದ್ರಗ್ರಹಗಳನ್ನು ಪತ್ತೆ ಮಾಡಿದ್ದು ಇವುಗಳಲ್ಲಿ 1,000 ಕ್ಕಿಂತಲೂ ಹೆಚ್ಚಿನವು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಶನಿ ಗ್ರಹದಂತೆ ಕಂಡ ಚಂದ್ರ! ಅಚ್ಚರಿಯ ವಿದ್ಯಮಾನದ ಈ ಚಿತ್ರವನ್ನು ನೋಡಿ 

Viral Video: ಆಕಾಶದ ಬಣ್ಣ ಬದಲು! ವಿಸ್ಮಯ ವಿದ್ಯಮಾನಕ್ಕೆ ಕಾರಣ ಉಲ್ಕಾಪಾತವೋ ಅಥವಾ ಅನ್ಯಗ್ರಹ ಜೀವಿಗಳೋ?

(Asteroid speeding at 94k kmph to approach Earth on Aug 21 Nasa classifies it as potentially hazardous element)

ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ