AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಸ್ಟಂಟ್​ ಇಮ್ಯೂನಿಟಿ.. ಕೊರೊನಾದಿಂದ ಗಂಭೀರ ಸ್ಥಿತಿಗೆ ಹೋದವರನ್ನೂ ಗುಣಪಡಿಸಬಲ್ಲ ಹೊಸ ಔಷಧಿ !

ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನಿಂದ ಬಚಾವಾಗುವಂತೆ ಮಾಡಲು ಹೊಸ ಬಗೆಯ ಔಷಧಿ ಅಭಿವೃದ್ಧಿಪಡಿಸುವುದಕ್ಕೆ ಬ್ರಿಟನ್​ ವಿಜ್ಞಾನಿಗಳು ಸಿದ್ಧರಾಗಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಕೊರೊನಾ ಸೋಂಕಿಗೆ ತುತ್ತಾಗಿ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ

ಇನ್​ಸ್ಟಂಟ್​ ಇಮ್ಯೂನಿಟಿ.. ಕೊರೊನಾದಿಂದ ಗಂಭೀರ ಸ್ಥಿತಿಗೆ ಹೋದವರನ್ನೂ ಗುಣಪಡಿಸಬಲ್ಲ ಹೊಸ ಔಷಧಿ !
ಪ್ರಾತಿನಿಧಿಕ ಚಿತ್ರ
Skanda
| Updated By: Lakshmi Hegde|

Updated on: Dec 26, 2020 | 1:29 PM

Share

ಕೊರೊನಾ ವೈರಾಣುವನ್ನು ಮಣಿಸಲು ಬೇರೆ ಬೇರೆ ಸಂಸ್ಥೆಗಳು ಲಸಿಕೆ ತಯಾರಿಸುವುದರಲ್ಲಿ ನಿರತವಾಗಿದ್ದರೆ ಬ್ರಿಟನ್​ ವಿಜ್ಞಾನಿಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನಿಂದ ಬಚಾವಾಗುವಂತೆ ಮಾಡಲು ಹೊಸ ಬಗೆಯ ಔಷಧಿ ಅಭಿವೃದ್ಧಿಪಡಿಸುವುದಕ್ಕೆ ಸಿದ್ಧರಾಗಿದ್ದಾರೆ.

ಈ ಮೂಲಕ ಆಸ್ಪತ್ರೆಯಲ್ಲಿರುವ ಕೊವಿಡ್​ ಸೋಂಕಿತರು, ಗಂಭೀರ ಸ್ಥಿತಿಗೆ ತಲುಪಿದವರನ್ನೂ  ಕಡಿಮೆ ಅವಧಿಯಲ್ಲಿ ಗುಣಪಡಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಕೊವಿಡ್​ ಇನ್​ಸ್ಟಂಟ್ ಇಮ್ಯೂನಿಟಿ ಎಂದು ಕರೆಯಲಾಗುತ್ತಿದ್ದು ಈ ಪ್ರಯೋಗ ಯಶಸ್ವಿಯಾದರೆ ಕೊರೊನಾ ಸೋಂಕಿಗೆ ತುತ್ತಾಗಿ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಇರುವಾಗ ಇದೇತಕೆ? ಕೊವಿಡ್ ಲಸಿಕೆಯು ಕೊರೊನಾ ವೈರಾಣು ದೇಹದೊಳಗೆ ಪ್ರವೇಶಿಸಿ ತೊಂದರೆ ನೀಡುವುದರಿಂದ ತಡೆಗಟ್ಟುತ್ತದೆ. ಅಂದರೆ ಇದೊಂದು ಬಗೆಯ ಮುನ್ನೆಚ್ಚರಿಕಾ ಕ್ರಮ. ಆದರೆ, ಸೋಂಕಿಗೆ ತುತ್ತಾದ ನಂತರ ಲಸಿಕೆಯನ್ನು ನೀಡಿ ಗುಣಪಡಿಸುವುದು ಕಷ್ಟ.

ಹೀಗಾಗಿ ಸೋಂಕಿಗೆ ತುತ್ತಾದವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಇನ್​ಸ್ಟಂಟ್ ಇಮ್ಯೂನಿಟಿ ಸಹಕಾರಿ ಆಗಲಿದೆ ಎಂಬುದು ತಜ್ಞರ ಅಭಿಮತ. ಈ ಔಷಧಿಯನ್ನು ನೀಡುವ ಮೂಲಕ ಕೊರೊನಾ ಸೋಂಕಿನಿಂದ ಅಪಾಯ ಮಟ್ಟಕ್ಕೆ ತಲುಪುವುದನ್ನು ತಪ್ಪಿಸಬಹುದು. ಲಸಿಕೆ ನೀಡಲು ಸಮಯ ಮೀರಿದ್ದರೂ ಅಂಥವರ ಮೇಲೆ ಇದನ್ನು ಪ್ರಯೋಗಿಸಿ ಗುಣಪಡಿಸಬಹುದು. ಆದ್ದರಿಂದ ಬ್ರಿಟನ್​ ವಿಜ್ಞಾನಿಗಳ ಈ ಪ್ರಯೋಗ ಯಶಸ್ವಿಯಾದರೆ ವಿಶ್ವದಲ್ಲಿ ಕೊರೊನಾದಿಂದಾಗುವ ಸಾವನ್ನು ತಪ್ಪಿಸುವುದು ಸಾಧ್ಯ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಲಂಡನ್​ನಲ್ಲಿ ಸ್ವಾಸರಿ-ಕೊರೊನಿಲ್​ ಕಿಟ್​ ಅನಧಿಕೃತ ಮಾರಾಟ; ಪ್ರಯೋಜನವಿಲ್ಲದ ಮಾತ್ರೆಗಳು ಎಂದ ಲ್ಯಾಬ್​ ವರದಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ